ಉಡುಪಿ : ಉಡುಪಿ ಜಿಲ್ಲಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬ್ರಹ್ಮಾವರ ವಲಯದ ಕೆ.ಪಿ.ಎಸ್. ಕೊಕ್ಕರ್ಣೆ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ನಾಟಕ ಮೊದಲ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ದಿನಾಂಕ 10 ಸೆಪ್ಟೆಂಬರ್ 2025ರಂದು ನಡೆದ ಈ ಸ್ಪರ್ಧೆಯಲ್ಲಿ ರೋಹಿತ್ ಎಸ್. ಬೈಕಾಡಿ ಇವರ ನಿರ್ದೇಶನದಲ್ಲಿ ಅಭಿನಯಿಸಿದ ‘ಕ್ಯೂರಿ-US’ ನಾಟಕದ ರಚನೆ ವರದರಾಜ್ ಬಿರ್ತಿ ಮಾಡಿದ್ದು, ಸಂಗೀತ – ಶುಭಕರ್ ಪುತ್ತೂರು, ರಂಗಸಜ್ಜಿಕೆ – ಹರೀಶ್ ಮತ್ತು ಪ್ರಸಾಧನ – ಶ್ರೀಶ ತೆಕ್ಕಟ್ಟೆ ಇವರದು.