Subscribe to Updates

    Get the latest creative news from FooBar about art, design and business.

    What's Hot

    ನಾಟಕ ವಿಮರ್ಶೆ – “ಲೀಕ್‌ ಔಟ್‌” ಎಂಬ ರಂಗ ಪ್ರಯೋಗ ಕಟ್ಟಿಕೊಂಡು ಯುದ್ಧಕ್ಕೆ ನಿಂತರೇ ಅಕ್ಷತಾ ಪಾಂಡವಪುರ…!

    September 19, 2025

    ಮಡಿಕೇರಿಯ ಗಾಂಧಿ ಭವನದಲ್ಲಿ ‘ಕಲಾ ಪ್ರತಿಭೋತ್ಸವ’ | ಅಕ್ಟೋಬರ್ 09 ಮತ್ತು 10

    September 19, 2025

    ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 | ಸೆಪ್ಟೆಂಬರ್ 22ರಿಂದ ಅಕ್ಟೋಬರ್ 01

    September 19, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಯಶಸ್ವಿ ಕಲಾವೃಂದದ ಹೂವಿನಕೋಲು ಅಭಿಯಾನ | 22 ಸೆಪ್ಟೆಂಬರ್
    Kannada

    ಯಶಸ್ವಿ ಕಲಾವೃಂದದ ಹೂವಿನಕೋಲು ಅಭಿಯಾನ | 22 ಸೆಪ್ಟೆಂಬರ್

    September 19, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ: ಹಲವಾರು ವರ್ಷಗಳ ಹಿಂದೆ ಕಲಾವಿದರು ಮಳೆಗಾಲದಲ್ಲಿ ತಮ್ಮ ಬದುಕಿಗಾಗಿ ಕಟ್ಟಿಕೊಂಡ ಕಾರ್ಯಕ್ರಮ ‘ಹೂವಿನಕೋಲು’ ನಶಿಸಿ ಹೋದ ಕಾಲಘಟ್ಟದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಸಂಸ್ಥೆ ಒಂದಷ್ಟು ಮಕ್ಕಳನ್ನು ಒಗ್ಗೂಡಿಕೊಂಡು ಆಯ್ದ ಕೆಲ ಮನೆಗಳಲ್ಲಿ ಮತ್ತೆ ಹಳೆಯ ಪ್ರಕಾರವನ್ನು ನೆನಪಿಸುವ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ಸು ಕಂಡಿದೆ. ಈ ವರ್ಷವೂ ಎರಡು ತಂಡವಾಗಿ ಮಾಡಿಕೊಂಡು ಕರಾವಳಿಯುದ್ದಕ್ಕೂ ತಿರುಗಾಟ ಮಾಡುವುದಕ್ಕೆ ಸನ್ನದ್ಧವಾಗಿದೆ. ಕಾರ್ಯದರ್ಶಿ ವೆಂಕಟೇಶ ವೈದ್ಯ ಹಾಗೂ ಸದಸ್ಯ ಗಣಪತಿ ಭಟ್ ಯಲ್ಲಾಪುರ ಇವರೀರ್ವರ ತಂಡ ಅಲ್ಲಲ್ಲಿ ಕೆಲ ಮನೆಗಳಲ್ಲಿ ಅಭಿಯಾನವನ್ನು ಕೈಗೊಳ್ಳಲಿದೆ. ಸೆಪ್ಟೆಂಬರ್ 22 ರಂದು ಬೆಳಿಗ್ಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾರ್ಯಕ್ರಮ ಉದ್ಘಾಟಿಸಿಕೊಂಡು ನವೆಂಬರ್ 2ರ ತನಕ ಕುಂದಾಪುರ, ಬ್ರಹ್ಮಾವರ, ಉಡುಪಿ, ಮಂಗಳೂರಿನಾದ್ಯಂತ ಹಲವಾರು ಕಡೆಗಳಲ್ಲಿ ಹೂವಿನಕೋಲು ಕಾರ್ಯಕ್ರಮ ನೆರವೇರಿಸಿಕೊಳ್ಳಲಿದೆ. ಪ್ರಾಚಾರ್ಯ ದೇವದಾಸ್ ರಾವ್, ರಾಹುಲ್ ಕುಂದರ್ ಕೋಡಿ, ಪೂಜಾ ಆಚಾರ್, ಪಂಚಮಿ ವೈದ್ಯ, ಹರ್ಷಿತಾ ಅಮೀನ್, ಪವನ್ ಆಚಾರ್, ಕಿಶನ್ ಪೂಜಾರಿ, ಪರಿಣಿತ ವೈದ್ಯ, ಆರಭಿ ಹಗಡೆ, ಪ್ರಣಮ್ಯ ಭಟ್, ಪೂರ್ವಿ ದೇವಾಡಿಗ, ಮನೋಮಯ್ ಕಾರಂತ್ ಇನ್ನೂ ಹಲವಾರು ಕಲಾವಿದರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ತಿಳಿಸಿದ್ದಾರೆ.

     

    baikady kannada roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಅಭಿನಯ ಭಾರತಿಯಿಂದ ನಾಟಕ ಪ್ರದರ್ಶನಕ್ಕೆ ಕಲಾವಿದರಿಗೆ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 30
    Next Article ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 | ಸೆಪ್ಟೆಂಬರ್ 22ರಿಂದ ಅಕ್ಟೋಬರ್ 01
    roovari

    Add Comment Cancel Reply


    Related Posts

    ನಾಟಕ ವಿಮರ್ಶೆ – “ಲೀಕ್‌ ಔಟ್‌” ಎಂಬ ರಂಗ ಪ್ರಯೋಗ ಕಟ್ಟಿಕೊಂಡು ಯುದ್ಧಕ್ಕೆ ನಿಂತರೇ ಅಕ್ಷತಾ ಪಾಂಡವಪುರ…!

    September 19, 2025

    ಮಡಿಕೇರಿಯ ಗಾಂಧಿ ಭವನದಲ್ಲಿ ‘ಕಲಾ ಪ್ರತಿಭೋತ್ಸವ’ | ಅಕ್ಟೋಬರ್ 09 ಮತ್ತು 10

    September 19, 2025

    ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2025 | ಸೆಪ್ಟೆಂಬರ್ 22ರಿಂದ ಅಕ್ಟೋಬರ್ 01

    September 19, 2025

    ಅಭಿನಯ ಭಾರತಿಯಿಂದ ನಾಟಕ ಪ್ರದರ್ಶನಕ್ಕೆ ಕಲಾವಿದರಿಗೆ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 30

    September 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.