Subscribe to Updates

    Get the latest creative news from FooBar about art, design and business.

    What's Hot

    ಸರಿಗಮ ಭಾರತಿ ಸಭಾಂಗಣದಲ್ಲಿ ಸಂಗೀತ ಮತ್ತು ಭರತನಾಟ್ಯದೊಂದಿಗೆ ಸಂಪನ್ನಗೊಂಡ ವಿಜಯದಶಮಿ ಉತ್ಸವ

    October 3, 2025

    ಮೋಹನ ಕಲ್ಲೂರಾಯ ಇವರಿಂದ ನಾರಾವಿಯಲ್ಲಿ ಹರಿಕಥೆ

    October 3, 2025

    ಜನಾರ್ದನ್ ಕೊಡವೂರು ಇವರಿಗೆ ‘ಮಹರ್ಷಿ ವಾಲ್ಮೀಕಿ ಸಮ್ಮಾನ್ – 2025’

    October 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹೂವಿನಕೋಲು ಕಲಾಪ್ರಕಾರಕ್ಕೆ ಚಾಲನೆ
    Music

    ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹೂವಿನಕೋಲು ಕಲಾಪ್ರಕಾರಕ್ಕೆ ಚಾಲನೆ

    September 24, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಆನೆಗುಡ್ಡೆ : ಕೊಮೆ ತೆಕ್ಕಟ್ಟೆ ಯಶಸ್ವೀ ಕಲಾವೃಂದದ ಚಿಣ್ಣರಿಂದೊಡಗೂಡಿದ ಎರಡು ತಂಡ ದಿನಾಂಕ 22 ಸೆಪ್ಟೆಂಬರ್ 2025ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಶರನ್ನವರಾತ್ರಿ ಕಾರ್ಯಕ್ರಮದಲ್ಲಿ ‘ಕೃಷ್ಣಾರ್ಜುನ ಕಾಳಗ’ ಪ್ರಸಂಗದ ತುಣುಕೊಂದನ್ನು ಪ್ರಸ್ತುತ ಪಡಿಸುವ ಮೂಲಕ ಉದ್ಘಾಟನೆಗೊಂಡಿತು.

    ಈ ಕಾರ್ಯಕ್ರಮ ಉದ್ಘಾಟಿಸಿ, ಚಾಲನೆ ನೀಡಿದ ಆನೆಗುಡ್ಡೆ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯ “ಹೂವಿನಕೋಲು ಯಕ್ಷಗಾನ ಕಲಾ ಪ್ರಕಾರ ಮಕ್ಕಳ ಕಲಿಕೆಗೆ ದಾರಿಯಾಗುತ್ತದೆ. ಗತಕಾಲದಲ್ಲಿ ಪ್ರಸಿದ್ಧ ಕಲಾವಿದರು, ಗುರುಗಳು ಬಾಲಕರ ತಂಡದೊಂದಿಗೆ ಮನೆ ಮನೆಗೆ ತೆರಳಿ ಹೂವಿನಕೋಲು ಕಾರ್ಯಕ್ರಮವನ್ನು ನವರಾತ್ರಿಯ ಸಂದರ್ಭಗಳಲ್ಲಿ ಮಾಡುತ್ತಿದ್ದುದು ಈಗ ನೆನಪು ಮಾತ್ರ. ಅಂತಹ ಕಲಾ ಪ್ರಕಾರವನ್ನು ಉಳಿಸಬೇಕೆನ್ನುವ ನಿಟ್ಟಿನಲ್ಲಿ ಆಯ್ದ ಹಲವಾರು ಮನೆಗಳಿಗೆ ಬೇಟಿ ನೀಡಿ ಪೌರಾಣಿಕ ಪ್ರಸಂಗವನ್ನು ಪ್ರಸ್ತುತ ಪಡಿಸುವುದು ಒಳ್ಳೆಯ ಸಂಸ್ಕಾರ” ಎಂದು ಶುಭ ಹಾರೈಸಿದರು.

    ದಿನಾಂಕ 02 ಅಕ್ಟೋಬರ್ 2025ರ ತನಕ ನಿರಂತರ ಎರಡು ತಂಡಗಳು ಕುಂದಾಪುರ, ಉಡುಪಿ, ಬ್ರಹ್ಮಾವರ, ಮಂಗಳೂರು ವಿಭಾಗದಲ್ಲಿ ಅಲ್ಲಲ್ಲಿ ಹಲವಾರು ಮನೆಗಳಿಗೆ ಸಂಪರ್ಕ ಮಾಡಿ ನವರಾತ್ರಿಯನ್ನು ಆಚರಿಸುವವರಲ್ಲಿ ಕಲಾ ಪ್ರಕಾರದ ಪೌರಾಣಿಕ ಪ್ರಸಂಗವನ್ನು ನೀಡಿ, ಮನೆ ಮನೆಗಳಿಗೆ ಮಕ್ಕಳ ಮೂಲಕ ಹರಸುವ ಕಾರ್ಯ ಶ್ಲಾಘನೀಯ ಎಂದು ಅರ್ಚಕ ಶ್ರೀನಿಧಿ ಭಟ್ ಅಭಿಪ್ರಾಯಪಟ್ಟರು. ಸಂಸ್ಥೆಯ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ವ್ಯವಸ್ಥಾಪಕ ಮಂಡಳಿಯ ನಟೇಶ್ ಕಾರಂತ್, ಕಲಾವಿದರಾದ ಗಣಪತಿ ಭಟ್, ರಾಹುಲ್ ಕುಂದರ್ ಕೋಡಿ ಕನ್ಯಾಣ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದು ಕಾರ್ಯಕ್ರಮ ಸಂಪನ್ನಗೊಂಡಿತು.

    baikady Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರು ದಸರಾ ಉತ್ಸವದಲ್ಲಿ ಸುರಭಿಯಿಂದ ‘ಯಕ್ಷಗಾನ ವೈಭವ’ | ಸೆಪ್ಟೆಂಬರ್ 24 
    Next Article ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಮನಸೂರೆಗೊಂಡ ಕುಮಾರಿ ಪಂಚಮಿ ಭಟ್ ರವರ ‘ಭಕ್ತಿ ಸಂಗೀತ’
    roovari

    Add Comment Cancel Reply


    Related Posts

    ಸರಿಗಮ ಭಾರತಿ ಸಭಾಂಗಣದಲ್ಲಿ ಸಂಗೀತ ಮತ್ತು ಭರತನಾಟ್ಯದೊಂದಿಗೆ ಸಂಪನ್ನಗೊಂಡ ವಿಜಯದಶಮಿ ಉತ್ಸವ

    October 3, 2025

    ಮೋಹನ ಕಲ್ಲೂರಾಯ ಇವರಿಂದ ನಾರಾವಿಯಲ್ಲಿ ಹರಿಕಥೆ

    October 3, 2025

    ಜನಾರ್ದನ್ ಕೊಡವೂರು ಇವರಿಗೆ ‘ಮಹರ್ಷಿ ವಾಲ್ಮೀಕಿ ಸಮ್ಮಾನ್ – 2025’

    October 3, 2025

    ಬಿ.ಸಿ. ರಾಮಚಂದ್ರ ಶರ್ಮ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ ಪ್ರಕಟ

    October 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.