Subscribe to Updates

    Get the latest creative news from FooBar about art, design and business.

    What's Hot

    ಸರಿಗಮ ಭಾರತಿ ಸಭಾಂಗಣದಲ್ಲಿ ಸಂಗೀತ ಮತ್ತು ಭರತನಾಟ್ಯದೊಂದಿಗೆ ಸಂಪನ್ನಗೊಂಡ ವಿಜಯದಶಮಿ ಉತ್ಸವ

    October 3, 2025

    ಮೋಹನ ಕಲ್ಲೂರಾಯ ಇವರಿಂದ ನಾರಾವಿಯಲ್ಲಿ ಹರಿಕಥೆ

    October 3, 2025

    ಜನಾರ್ದನ್ ಕೊಡವೂರು ಇವರಿಗೆ ‘ಮಹರ್ಷಿ ವಾಲ್ಮೀಕಿ ಸಮ್ಮಾನ್ – 2025’

    October 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವೈದ್ಯರ ರಾಜ್ಯ ಸಮ್ಮೇಳನದಲ್ಲಿ ಕೊಡಗಿನ ಸಂಸ್ಕೃತಿ ಸಿರಿ ಟ್ರಸ್ಟಿನಿಂದ ನೃತ್ಯ
    Cultural

    ವೈದ್ಯರ ರಾಜ್ಯ ಸಮ್ಮೇಳನದಲ್ಲಿ ಕೊಡಗಿನ ಸಂಸ್ಕೃತಿ ಸಿರಿ ಟ್ರಸ್ಟಿನಿಂದ ನೃತ್ಯ

    September 26, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಡ್ಯ : ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆದ 42ನೇ ಓಟೋರಿನೋಲಾರಿಂಗೋಲಜಿನ್ಸ್ ಆಫ್ ಇಂಡಿಯಾ ರಾಜ್ಯ ಸಮ್ಮೇಳನದಲ್ಲಿ ಕೊಡಗಿನ ಸಂಸ್ಕೃತಿ ಸಿರಿ ಟ್ರಸ್ಟಿನಿಂದ ದಿನಾಂಕ 19 ಸೆಪ್ಟೆಂಬರ್ 2025ರಂದು ಮಂಡ್ಯದ ಅಮರಾವತಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕೊಡವ ಸಂಸ್ಕೃತಿಯ ನೃತ್ಯ ಆಕರ್ಷಿಸಿತು.

    ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನರಿ ಮಂಗಲ, ಉಮ್ಮತ್ತಾಟ್, ಗೆಜ್ಜೆ ತಂಡ್, ಪುತ್ತರಿ, ಉರ್ ಟಿ ಕೊಟ್ಸ್ ಆಟ್ ಹಾಗೂ ಕೊಡವ ವಾಲಗ ಕಾರ್ಯಕ್ರಮ ಅಗತ್ಯ ಮಾಹಿತಿಯೊಂದಿಗೆ ನಡೆಯಿತು. ಕೊಡವ ಸಾಂಪ್ರದಾಯಿಕ ಸೀರೆ, ಬಿಳಿ ಮತ್ತು ಕಪ್ಪು ಕುಪ್ಯಾಧಾರಿಗಳು ಉತ್ತಮ ನೃತ್ಯ ಪ್ರದರ್ಶನ ನೀಡಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ವೈದ್ಯರುಗಳ ಪ್ರಸಂಸೆಗೆ ಪಾತ್ರರಾದರು. ಕೊಡಗಿನ ನಟಿ, ನಿರ್ಮಾಪಕಿ, ಕವಿಯತ್ರಿ ಹಾಗೂ ಸಂಸ್ಕೃತಿ ಸಿರಿ ಟ್ರಸ್ಟ್ ನ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್ ಅವರು ನೃತ್ಯರೂಪಕದ ನೇತೃತ್ವ ವಹಿಸಿ ಕೊಡವ ಸಂಸ್ಕೃತಿ ಮತ್ತು ನೃತ್ಯ ಬಗೆಯ ವಿವರ ನೀಡಿದರು.

    ಈ ಕಾರ್ಯಕ್ರಮದಲ್ಲಿ ಟ್ರಸ್ಟಿನ ಉಪಾಧ್ಯಕ್ಷೆ ಕೋಲೆಯಂಡ ನಿಶಾ ಮೋಹನ್, ಗೌರವ ಕಾರ್ಯದರ್ಶಿ ಕೇಚಂಡ ಸುನೀತಾ ಗಣೇಶ್, ಖಜಾಂಚಿ ಕೂಡಂಡ ದೀಪ ಕಾವೇರಪ್ಪ ಸೇರಿದಂತೆ 17 ಮಂದಿಯ ತಂಡ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು. ಕೊಡಗಿನ ವೈದ್ಯಕೀಯ ನೃತ್ಯ ತಂಡದಿಂದ ನಡೆದ ಭರತನಾಟ್ಯ, ಕಥಕ್ ನೃತ್ಯ ಮತ್ತು ಗಾಯನ ಕಾರ್ಯಕ್ರಮ ಕೂಡ ಗಮನ ನೆಳೆಯಿತು. ಕೊಡಗಿನ ಸಂಸ್ಕೃತಿಯನ್ನು ರಾಜ್ಯ ಸಮ್ಮೇಳನದಲ್ಲಿ ಪ್ರದರ್ಶಿಸಿ ಯಶಸ್ವಿಯಾದ ಬಗ್ಗೆ ಹಿರಿಯ ವೈದ್ಯ ಡಾ. ಕೋಲೆಯಂಡ ಮೋಹನ್ ಅಪ್ಪಾಜಿ, ಹರಿಣಿ ವಿಜಯ್, ಈರಮಂಡ ವಿಜಯ್ ಉತ್ತಯ್ಯ ಹಾಗೂ ಡಾ. ವಿಕ್ರಂ ಶೆಟ್ಟಿ ಅವರುಗಳು ಹರ್ಷ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ನಡೆಯುವ ವೈದ್ಯರ ಅಂತರಾಷ್ಟ್ರೀಯ ಮಟ್ಟದ ನಮ್ಮೇಳನಕ್ಕೆ ಸಂಸ್ಕೃತಿ ಸಿರಿ ಟ್ರಸ್ಟಿನ ನೃತ್ಯ ತಂಡ ಆಯ್ಕೆಯಾಗಿರುವ ಕುರಿತು ಹೇಳಿದರು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ವೈದ್ಯರುಗಳಾದ ಡಾ. ಹನುಮಾನ್ ಪ್ರಸಾದ್, ಡಾ. ರವಿ ಡಿ., ಡಾ. ನರಸಿಂಹಯ್ಯ ಸ್ವಾಮಿ, ಡಾ. ರಾಮಲಿಂಗ ಗೌಡ ಎನ್., ಡಾ. ಶ್ರೀಕಾಂತ್ ಸೇರಿದಂತೆ ಸಾವಿರಕ್ಕೂ ಅಧಿಕ ವೈದ್ಯರು ಪಾಲ್ಗೊಂಡಿದ್ದರು.

    baikady Cultural dance folk Music roovari
    Share. Facebook Twitter Pinterest LinkedIn Tumblr WhatsApp Email
    Previous Articleಹುಬ್ಬಳ್ಳಿಯಲ್ಲಿ ‘ಹಿಂದೂಸ್ತಾನಿ ಶಾಸ್ತ್ರೀಯ ಗಾಯನ’ | ಸೆಪ್ಟೆಂಬರ್ 27
    Next Article ಭಾವ ಹೃದಯ ತಲುಪುವಲ್ಲಿ ಯಶಸ್ವಿಯಾದ ಮಡಿಕೇರಿ ದಸರಾ ‘ಬಹುಭಾಷಾ ಕವಿಗೋಷ್ಠಿ’
    roovari

    Add Comment Cancel Reply


    Related Posts

    ಸರಿಗಮ ಭಾರತಿ ಸಭಾಂಗಣದಲ್ಲಿ ಸಂಗೀತ ಮತ್ತು ಭರತನಾಟ್ಯದೊಂದಿಗೆ ಸಂಪನ್ನಗೊಂಡ ವಿಜಯದಶಮಿ ಉತ್ಸವ

    October 3, 2025

    ಮೋಹನ ಕಲ್ಲೂರಾಯ ಇವರಿಂದ ನಾರಾವಿಯಲ್ಲಿ ಹರಿಕಥೆ

    October 3, 2025

    ಜನಾರ್ದನ್ ಕೊಡವೂರು ಇವರಿಗೆ ‘ಮಹರ್ಷಿ ವಾಲ್ಮೀಕಿ ಸಮ್ಮಾನ್ – 2025’

    October 3, 2025

    ಬಿ.ಸಿ. ರಾಮಚಂದ್ರ ಶರ್ಮ ಜನ್ಮ ಶತಮಾನೋತ್ಸವ ಕಾವ್ಯ ಪ್ರಶಸ್ತಿ ಪ್ರಕಟ

    October 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.