Subscribe to Updates

    Get the latest creative news from FooBar about art, design and business.

    What's Hot

    ಅಭಿನಯ ಭಾರತಿ ವತಿಯಿಂದ ದತ್ತಿ ಉಪನ್ಯಾಸ | ಅಕ್ಟೋಬರ್ 11

    October 9, 2025

    ಸಾಲಿಗ್ರಾಮದಲ್ಲಿ ಕಾವ್ಯ ಸಿಂಧು ಕಡಲತಡಿಯಲ್ಲಿ ಕವಿ ಸಮ್ಮಿಲನ

    October 9, 2025

    ರವೀಂದ್ರ ಕಲಾಕ್ಷೇತ್ರದಲ್ಲಿ ‘ರಾಷ್ಟ್ರೀಯ ನೃತ್ಯ ಉತ್ಸವ’ | ಅಕ್ಟೋಬರ್ 12

    October 9, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡದ ಸವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಕೀರ್ತಿ ನೆನಪು’ | ಅಕ್ಟೋಬರ್ 13
    Literature

    ಧಾರವಾಡದ ಸವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಕೀರ್ತಿ ನೆನಪು’ | ಅಕ್ಟೋಬರ್ 13

    October 9, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ‘ಕನ್ನಡದ ಕೀರ್ತಿ’ ಕೀರ್ತಿನಾಥ ಕುರ್ತಕೋಟಿಯವರ 97ನೆ ಜನ್ಮದಿನವನ್ನು ಮನೋಹರ ಗ್ರಂಥಮಾಲೆ ಹಾಗೂ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಸಂಯುಕ್ತವಾಗಿ ‘ಕೀರ್ತಿ ನೆನಪು’ ಕಾರ್ಯಕ್ರಮವನ್ನು ದಿನಾಂಕ 13 ಅಕ್ಟೋಬರ್ 2025 ಸೋಮವಾರದಂದು ಬೆಳಗ್ಗೆ 11-00 ಗಂಟೆಗೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಸವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡಿವೆ.

    ಇತ್ತೀಚೆಗೆ ಬಿಡುಗಡೆ ಆದ ಅವರ ‘ವಾಗರ್ಥ’ ಕೃತಿ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ಸುಮಾರು ಐದು ದಶಕಗಳ ಕಾಲ ಕುರ್ತಕೋಟಿಯವರು ಬೇಂದ್ರೆ ಸಾಹಿತ್ಯ ಕುರಿತು ಪ್ರಕಟಿಸಿದ ಕೃತಿಗಳು ಹಾಗೂ ಲೇಖನಗಳ ಸಂಗ್ರಹ ಇದಾಗಿದೆ. ಅವರ ವಿಮರ್ಶಾ ಲೇಖನಗಳು ಸಂಸ್ಕೃತ, ಕನ್ನಡ, ಇಂಗ್ಲೀಷ್ ಈ ಭಾಷೆಯ ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಕೂಡಿರುತ್ತವೆ. ಕನ್ನಡ ವಿಮರ್ಶಾ ಪ್ರಕಾರಕ್ಕೆ ಅಸ್ತಿಭಾರ ಹಾಕಿದವರು ಕುರ್ತಕೋಟಿಯವರು. ಇಂದು ನಾಡಿನಲ್ಲಿ ಕುರ್ತಕೋಟಿ ವಿಮರ್ಶಾ ಪರಂಪರೆಯೆ ಇದೆ. ಅದನ್ನು ಕುರ್ತಕೋಟಿ ಕ್ರಿಟಿಸಿಜಮ್ ಸ್ಕೂಲ್ ಎಂದೆ ವಿಮರ್ಶಕರು ಉಲ್ಲೇಖಿಸುತ್ತಾರೆ. ಬೇಂದ್ರೆಯವರ ಕಾವ್ಯ ಅರ್ಥವಾಗಬೇಕಾದರೆ ಕೀರ್ತಿ ಅವರ ವಿಮರ್ಶಾ ಬರಹಗಳನ್ನು ಓದಲೇಬೇಕು.

    ಬೇಂದ್ರೆ ಕಾವ್ಯ ಜಗತ್ತು ಕಂಡ ಶ್ರೇಷ್ಠ ಕವಿ. ಈ ಶ್ರೇಷ್ಠ ಕವಿಯ ಕಾವ್ಯದ ಶ್ರೇಷ್ಠ ವಿಮರ್ಶಾ ಕೃತಿ ‘ವಾಗರ್ಥ’ ಕುರಿತು ಸಂವಾದ ‘ಕೀರ್ತಿ ನೆನಪು’. ಸಂವಾದದಲ್ಲಿ ಡಾ. ಶ್ರೀರಾಮ್ ಭಟ್, ಡಾ. ಶ್ಯಾಮಸುಂದರ ಬಿದರಕುಂದಿ, ಡಾ. ವಿನಾಯಕ ನಾಯಕ ಹಾಗೂ ಡಾ. ಕೃಷ್ಣ ಕಟ್ಟಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎರಡೂ ಸಂಸ್ಥೆಗಳು ಆಸಕ್ತರನ್ನೂ ಗೌರವ ಪೂರ್ವಕವಾಗಿ ಸ್ವಾಗತಿಸುತ್ತವೆ.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಬೋಳೂರು ಮಾತಾ ಅಮೃತಾನಂದಮಯಿ ಮಠದಲ್ಲಿ ‘ಅಮೃತೋತ್ಸವ – 2025’ | ಅಕ್ಟೋಬರ್ 11
    Next Article ಪ್ರಸಿದ್ಧ ಆಕಾಶವಾಣಿ ಕಲಾವಿದೆ ಹಾಗೂ ಗಾಯಕರಾದ ಶ್ರೀಮತಿ ಅನುರಾಧ ಧಾರೇಶ್ವರ ನಿಧನ
    roovari

    Add Comment Cancel Reply


    Related Posts

    ಅಭಿನಯ ಭಾರತಿ ವತಿಯಿಂದ ದತ್ತಿ ಉಪನ್ಯಾಸ | ಅಕ್ಟೋಬರ್ 11

    October 9, 2025

    ಸಾಲಿಗ್ರಾಮದಲ್ಲಿ ಕಾವ್ಯ ಸಿಂಧು ಕಡಲತಡಿಯಲ್ಲಿ ಕವಿ ಸಮ್ಮಿಲನ

    October 9, 2025

    ರವೀಂದ್ರ ಕಲಾಕ್ಷೇತ್ರದಲ್ಲಿ ‘ರಾಷ್ಟ್ರೀಯ ನೃತ್ಯ ಉತ್ಸವ’ | ಅಕ್ಟೋಬರ್ 12

    October 9, 2025

    ಯಕ್ಷ ದೀಕ್ಷಾ ಪ್ರದಾನ ಹಾಗೂ ಯಕ್ಷರಂಜಿನಿ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

    October 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.