ಮಡಿಕೇರಿ : ಸಮರ್ಥ ಕನ್ನಡಿಗರು ಸಂಸ್ಥೆ ವತಿಯಿಂದ ದಿನಾಂಕ 09 ನವೆಂಬರ್ 2025ರಂದು ಮಡಿಕೇರಿಯ ಓಂಕಾರ ಸದನದಲ್ಲಿ ‘ನಿಮ್ಮ ಪ್ರತಿಭೆ- ನಮ್ಮ ವೇದಿಕೆ ಹಿಮವನ ಸಾಂಸ್ಕೃತಿಕ ಸಂಗಮ’ ಎಂಬ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಗಳನ್ನು ಮಹಿಳೆಯರು ಹಾಗೂ ಮಕ್ಕಳಿಗಾಗಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮಿ ತಿಳಿಸಿದ್ದಾರೆ.
ಸ್ಪರ್ಧೆಗಳ ವಿವರಗಳು : ಛದ್ಮವೇಷ ಸ್ಪರ್ಧೆ : 1ರಿಂದ 3 ವರ್ಷದ ಮಕ್ಕಳಿಗೆ ಮತ್ತು 4ರಿಂದ 7 ವರ್ಷದ ಮಕ್ಕಳಿಗೆ ಪ್ರತ್ಯೇಕ ವಿಭಾಗದಲ್ಲಿ ಹೆಸರು ನೋಂದಣಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ : 99026 51146- ಬಿ.ಸಿ. ಶಾಂತಿ ಅಚ್ಚಯ್ಯ, 70228 84803 – ಕಡ್ಲೇರ ತುಳಸಿ ಮೋಹನ್.
ಸಮೂಹ ನೃತ್ಯ : 8ರಿಂದ 12 ವರ್ಷದ ಮಕ್ಕಳಿಗೆ – ನಿಯಮಗಳು – ತಂಡದಲ್ಲಿ ಕನಿಷ್ಠ 6 ಗರಿಷ್ಠ 10 ಮಕ್ಕಳು ಇರಬೇಕು. ಹಾಡು ಕನ್ನಡದ್ದೇ ಆಗಿರಬೇಕು. ಸಮಯ 4 ನಿಮಿಷ. ಹೆಸರು ನೋಂದಣಿಗಾಗಿ ಸಂಪರ್ಕಿಸಿ, 96631 19670- ಜಯಲಕ್ಷ್ಮಿ ಕೆ. 8762574584 – ಸೌಮ್ಯ ಭಟ್.
ಜಾನಪದ ನೃತ್ಯ : ಪ್ರೌಢಶಾಲಾ ಮಕ್ಕಳಿಗೆ – ಜಾನಪದ ಹಾಡು ಕಡ್ಡಾಯ, ಗುಂಪಿನಲ್ಲಿ ಕನಿಷ್ಠ 6 ಗರಿಷ್ಠ 8 ಮಕ್ಕಳು ಇರಬೇಕು. ಸಮಯ : 5 ನಿಮಿಷ, ಹೆಸರು ನೋಂದಣಿಗಾಗಿ ಸಂಪರ್ಕಿಸಿ, ಸರಿತಾ ಅಯ್ಯಪ್ಪ -9481483457, ಸವಿತಾ ರಾಖೇಶ್ -7975409495.
ಚಿತ್ರಕಲೆ : ಪದವಿ ಪೂರ್ವ ವಿದ್ಯಾರ್ಥಿಗಳಿಗೆ – ‘ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ’ ಎನ್ನುವ ಶೀರ್ಷಿಕೆಗೆ ಅನುಗುಣವಾಗಿ ಚಿತ್ರ ಬಿಡಿಸಬೇಕು. ಸಮಯ : 1 ಗಂಟೆ ನೀಡಲಾಗುವುದು. ಹೆಸರು ನೋಂದಣಿಗಾಗಿ, ಅನಿತಾ ಪ್ರತಾಪ್ : 8971680717, ನವಿತಾ ಅರುಣ್ -9480003811.
ಗಾಯನ ಸ್ಪರ್ಧೆ : ಪದವಿ ವಿದ್ಯಾರ್ಥಿಗಳಿಗೆ ಸಮೂಹ ಗಾಯನ ಸ್ಪರ್ಧೆ. ದೇಶಭಕ್ತಿ ಗೀತೆ ಅಥವಾ ನಾಡಗೀತೆ ಹಾಡಬೇಕು. ಕನ್ನಡ ಹಾಡೇ ಆಗಿರಬೇಕು. ಗುಂಪಿನಲ್ಲಿ ಕನಿಷ್ಠ 5 ಗರಿಷ್ಠ 10 ಮಂದಿ ಇರಬೇಕು. ಸಮಯ 4 ನಿಮಿಷ., ಹೆಸರು ನೋಂದಣಿಗಾಗಿ : ಸವಿತಾ ರಾಖೇಶ್ -7975409495, ಬಿ.ಸಿ. ಶಾಂತಿ – 99026 51146.
ಗಾಯನ ಸ್ಪರ್ಧೆ : ಮಹಿಳೆಯರಿಗೆ – ಯಾವುದೇ ಕನ್ನಡ ಹಾಡು ಹಾಡಬಹುದು. ಸಮಯ 4 ನಿಮಿಷ, ಸದಸ್ಯೆಯರ ಸಂಖ್ಯೆ ಕನಿಷ್ಠ 6 ಗರಿಷ್ಠ 10 ಹೆಸರು ನೋಂದಣಿಗಾಗಿ ಸಂಪರ್ಕಿಸಿ, ಸೌಮ್ಯ ಭಟ್ – 8762574584. ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ದಿನಾಂಕ 30 ಅಕ್ಟೋಬರ್ 2025 ಕೊನೆ ದಿನವಾಗಿರುತ್ತದೆ. ಸ್ಪರ್ಧೆಗಳ ಕುರಿತ ಹೆಚ್ಚಿನ ಮಾಹಿತಿಗಾಗಿ 96631 29670 ಸಂಪರ್ಕಿಸಬಹುದಾಗಿದೆ.