ಪೆರಿಯ : ಬೇಕಲದ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ 5ನೇ ದೀಪಾವಳಿ ಸಂಗೀತೋತ್ಸವದಲ್ಲಿ ದಿನಾಂಕ 22 ಅಕ್ಟೋಬರ್ 2025ರಂದು ಕಾಂಚನಾ ಸಹೋದರಿಯರೆಂದೇ ಕರೆಸಿಕೊಳ್ಳುವ ಶ್ರುತಿರಂಜಿನಿ ಮತ್ತು ಶ್ರೀರಂಜನಿ ಪ್ರಸ್ತುತಪಡಿಸಿದ ಸಂಗೀತ ಕಛೇರಿ ವೈವಿಧ್ಯತೆಯಿಂದ ಗಮನ ಸೆಳೆಯಿತು.
ಏಕಕಾಲಕ್ಕೆ ಎರಡು ತಾಳ ಕಲಾಪಗಳನ್ನು ಪ್ರಸ್ತುತಪಡಿಸುವ ಅವಧಾನ ತಾಳ ಪಲ್ಲವಿಯ ಅಪರೂಪದ ಸಂಯೋಜನೆ ಬಹು ಸೊಬಗಾಗಿತ್ತು. ಸಿಂಧು ಭೈರವಿ ರಾಗದ ಆರು ಕೃತಿಗಳ ಸಂಯೋಜನೆ ಹೊಸತನವಾಗಿತ್ತು. ಕರ್ನಾಟಿಕ್ ಸಂಗೀತದ ಅತ್ಯಂತ ಜನಪ್ರಿಯ ಕೃತಿಯಾದ ಕೃಷ್ಣ ನೀ ಬೇಗನೇ ಬಾರೋ ಮತ್ತು ಯಮುನಾ ಕಲ್ಯಾಣಿ ರಾಗದ ಪ್ರಸಿದ್ಧ ಹಿಂದೂಸ್ತಾನಿ ಭಜನೆ ಶ್ರೀರಾಮಚಂದ್ರ ಕೃಪಾಲು ಸಂಯೋಜನೆಯು ಪ್ರೇಕ್ಷಕರಿಗೆ ಮರೆಯಲಾಗದ ಅನುಭವವಾಗಿತ್ತು. ಪಕ್ಕ ವಾದ್ಯದಲ್ಲಿ ವೈಭವ್ ರಮಣಿ ಪಿಟೀಲು, ಮೃದಂಗದಲ್ಲಿ ಕುಳಲ್ಮಂದನ್ ರಾಮಕೃಷ್ಣನ್ ರಾಮಕೃಷ್ಣನ್, ಘಟಂನಲ್ಲಿ ರೋಹಿತ್ ಪ್ರಸಾದ್, ಮೋರ್ಸಿಂಗ್ ನಲ್ಲಿ ಗೋಪಿ ನಾದಾಲಯ,ಅಭಿಜಿತ್ ಟಿ.ಪಿ., ಔಚಿತ್ಯ, ದ್ವಾರಂ ಲಕ್ಷ್ಮಿ ತಿರುಪತಿ, ಅರ್ಜುನ್ ಗಣೇಶ್, ಲಾವಣ್ಯ ರೂಪಕಲಾ, ಆಶಾ ಪುರವಂಕರ, ಮೇಘನಾ ಪಾಣಾಜೆ, ಧನ್ಯ ದಿನೇಶ್ ರುದ್ರಪಟ್ಟಣ, ಕೃತಿ ಭಟ್ ಚೆನ್ನಯ್ಯ ಮುಂತಾದವರು ದೀಪಾವಳಿ ಸಂಗೀತೋತ್ಸವದ ಮೂರನೇಯ ದಿನದಂದು ನಂದಿ ಮಂಟಪದಲ್ಲಿ ಸಂಗೀತಾರ್ಚನೆಯನ್ನು ನಡೆಸಿದರು. ಚಾರುಲತಾ ಚಂದ್ರಶೇಖರ್ ಅವರ ವೀಣಾ ಕಛೇರಿ ಹಾಗೂ ಶ್ರೀಧರ್ ಸಾಗರ್ ಅವರ ಸ್ಯಾಕ್ಸೋಫೋನ್ ಗೋಷ್ಠಿ ನಡೆಯಿತು. ನೀಲೇಶ್ವರಂ ಸಂತೋಷ್ ಮಾರಾರ್ ಮತ್ತು ನಂದಕುಮಾರ್ ಮಾರಾರ್ ಒಟ್ಟಾಗಿ ತಾಯಂಬಗೆಯನ್ನು ಪ್ರದರ್ಶಿಸಿದರು.