Subscribe to Updates

    Get the latest creative news from FooBar about art, design and business.

    What's Hot

    ಶಾಲೆಗಳಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ಪ್ರದರ್ಶನ

    October 27, 2025

    ಅನುಪಲ್ಲವಿಯಲ್ಲಿ ದೀಪಾವಳಿ ವಿಶೇಷ ಉದಯ ರಾಗ

    October 27, 2025

    ಯಡಾಡಿ ಮತ್ಯಾಡಿಯಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’

    October 27, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕವನ | ನಿಮಗರ್ಥವಾಗದು…..
    Literature

    ಕವನ | ನಿಮಗರ್ಥವಾಗದು…..

    October 27, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನೀವು ವರ್ಷಕ್ಕೊಮ್ಮೆ ಹಣತೆ ಹಚ್ಚಿ
    ಸಂಭ್ರಮಿಸುತ್ತೀರಿ
    ನಮ್ಮತ್ತ ನೋಡುವುದೂ ಇಲ್ಲ
    ಏಕೆಂದು ಹೇಳುವಿರಾ ?

    ನಮಗೆ ಹಣತೆ ಹಚ್ಚುವುದು
    ಮುಸ್ಸಂಜೆ ಮೋಂಬತ್ತಿ ಹಿಡಿಯುವುದು
    ನಿತ್ಯ ಕಾಯಕವಾಗಿದೆ
    ಏಕೆಂದು ಅರ್ಥವಾಗಿದೆಯೇ ?

    ನಮ್ಮ ಪ್ರಣತಿಯ ಬೆಳಕಿನಲಿ
    ಮಡುಗಟ್ಟಿದ ವೇದನೆಗಳಡಗಿವೆ
    ಬಲಿಪೀಠಗಳ ಛಾಯೆಯಿದೆ
    ಏಕಿರಬಹುದು ತಿಳಿಸುವಿರಾ ?

    ನಮ್ಮ ಹಣತೆಗಳು ಸಾಲುಗಟ್ಟುವುದಿಲ್ಲ
    ನೊಂದ ಹೃದಯಗಳು
    ಮೌನ ಸರಪಳಿಗಳಾಗುತ್ತವೆ
    ಏಕೆಂದು ಊಹಿಸಬಲ್ಲಿರಾ ?

    ದಮನಿತರ ಯಾತನೆಗಳ ಕೊಳ
    ನಮ್ಮ ಹಣತೆಗಳ ತೈಲ
    ಮನುಜ ಸೂಕ್ಷ್ಮತೆಯೇ ಬತ್ತಿಗಳು
    ಏಕಿರಬಹುದು ಯೋಚಿಸಬಲ್ಲಿರಾ ?

    ನಿಮ್ಮ ಹಣತೆಗಳಿಗೆ ಕಥನಗಳಿವೆ
    ನಮ್ಮ ದೀಪಗಳ ಅವಳಿಗೆ
    ವರ್ತಮಾನದ ದುರಂತಗಳಿವೆ
    ಕಾರಣ ಹೇಳಬಲ್ಲಿರಾ ?

    ಉರಿದ ಜೀವಗಳೇ ನಮ್ಮ ಹಣತೆ
    ಹರಿದ ನೆತ್ತರೇ ತೈಲ
    ನಿಮ್ಮ ಅಂಧಕಾರವ ನೀಗಿಸಲು
    ನಮ್ಮ ಬತ್ತಿಯ ಬೆಳಕು
    ಬೆಂದ ಹೆಣ್ಕುಲದ ಭಾವನೆಗಳು
    ಸರಪಳಿಯ ಕೊಂಡಿಗಳು
    ಸಂಕೋಲೆಗಳ ಕಿತ್ತೊಗೆಯಲು
    ಸಂವೇದನೆಯ ಹೆಗಲುಗಳು
    ಈಗಲಾದರೂ ಅರ್ಥವಾಯಿತೇ ?

    ಆಗದು ಬಿಡಿ,,, ನೀವು,,,
    ಅಂಧ ಯುಗದ ಸರದಾರರು
    ದೌರ್ಜನ್ಯಗಳ ಸೂತ್ರಧಾರರು
    ಸುಡುವ ಸಂಸ್ಕೃತಿಯ
    ವಾರಸುದಾರರು
    ಅಂಧಕಾರದ ಪಾಪಕೂಪಗಳ
    ಸಾಮ್ರಾಟರು
    ಹೇಗೆ ಅರ್ಥವಾದೀತು
    ನಮ್ಮ ನಾಡಿಮಿಡಿತ ಜೀವತುಡಿತ
    ಅರ್ಥವಾಗದು ಬಿಡಿ !

    ನಾ ದಿವಾಕರ

    baikady Literature poem roovari
    Share. Facebook Twitter Pinterest LinkedIn Tumblr WhatsApp Email
    Previous Articleಕೂಚಿಪುಡಿ ನಾಟ್ಯ ಪರಂಪರ ಹನ್ನೆರಡನೆಯ ನೃತ್ಯೋತ್ಸವ -2025 | ಅಕ್ಟೋಬರ್ 31
    Next Article ಉಡುಪಿಯಲ್ಲಿ ಯಕ್ಷಗಾನ ಕಲಾರಂಗ ವತಿಯಿಂದ ನೂತನ ಮನೆಯ ಉದ್ಘಾಟನೆ | ಅಕ್ಟೋಬರ್ 29
    roovari

    Add Comment Cancel Reply


    Related Posts

    ಶಾಲೆಗಳಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’ ಪ್ರದರ್ಶನ

    October 27, 2025

    ಅನುಪಲ್ಲವಿಯಲ್ಲಿ ದೀಪಾವಳಿ ವಿಶೇಷ ಉದಯ ರಾಗ

    October 27, 2025

    ಯಡಾಡಿ ಮತ್ಯಾಡಿಯಲ್ಲಿ ‘ಪ್ರಸಂಗ-ಪ್ರಯೋಗ-ಪ್ರಾತ್ಯಕ್ಷಿಕೆ’

    October 27, 2025

    ಎಸ್. ಡಿ. ಎಮ್. ಕಾನೂನು ಕಾಲೇಜಿನಲ್ಲಿ ದಿನೇಶ ಅಮ್ಮಣ್ಣಾಯರಿಗೆ ನುಡಿ ನಮನ

    October 27, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.