Subscribe to Updates

    Get the latest creative news from FooBar about art, design and business.

    What's Hot

    ಹೃಷೀಕೇಶದ ವಾನಪ್ರಸ್ಥ ಆಶ್ರಮದಲ್ಲಿ ‘ಬನ್ನಂಜೆ 90ರ ವಿಶ್ವನಮನ’ | ನವೆಂಬರ್ 5ರಿಂದ 11

    November 4, 2025

    ಕನ್ನಡ ಭವನದಲ್ಲಿ ‘ನಾಟ್ಯಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ’ | ನವೆಂಬರ್ 07ರಿಂದ 09

    November 4, 2025

    ಶ್ರೀ ಮಹಾಗಣಪತಿ ಮಾನಸ ಮಂದಿರದಲ್ಲಿ ‘ಯಕ್ಷಹಬ್ಬ ಹೇರಿಕುದ್ರು 2025’ | ನವೆಂಬರ್ 05ರಿಂದ 08

    November 4, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ನಾಟಕ ‘ನಕ್ಷತ್ರ ಯಾತ್ರಿಕರು’
    Drama

    ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದ ನಾಟಕ ‘ನಕ್ಷತ್ರ ಯಾತ್ರಿಕರು’

    November 4, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರ (ಹಳೆ ರೀಝ ಟಾಕೀಜ್)ದಲ್ಲಿ ದಿನಾಂಕ 02 ನವೆಂಬರ್ 2025 ರವಿವಾರದಂದು ಬೆಂಗಳೂರಿನ ರಂಗಶಂಕರ ಸಹಯೋಗದೊಂದಗೆ ಬೆಳಗಾವಿಯ ರಂಗಸಂಪದ ತಂಡದವರು ಅಭಿನಯಿಸಿರುವ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನಗೊಂಡಿತು.

    ನಕ್ಷತ್ರ ಯಾತ್ರಿಕರು ಇದೊಂದು ವಿಭಿನ್ನ ರೀತಿಯ ನಾಟಕ. ಹಲವಾರು ನಾಟಕಗಳಿಂದ ಪ್ರೇಕ್ಷಕರನ್ನು ನಕ್ಕು ಹಗುರಾಗಿಸಿದ ರಂಗ ಸಂಪದ ತಂಡ ‘ನಕ್ಷತ್ರ ಯಾತ್ರಿಕರು’ ನಾಟಕದಿಂದ ಅತ್ತು ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳುವಂತೆ ಮಾಡುತ್ತದೆ. ಹೊಟ್ಟೆಪಾಡಿಗಾಗಿ ಅಲಿಯುವ ಜನರ ದಾರುಣ ಜೀವನ ಚಿತ್ರಣವೇ ‘ನಕ್ಷತ್ರ ಯಾತ್ರಿಕರು’ ನಾಟಕದ ಮುಖ್ಯ ಕಥಾವಸ್ತು.

    ಕಾರ್ಮಿಕ ಕುಟುಂಬದ ಹೊಟ್ಟೆ ನೋವಿನಿಂದ ಬಳಲುತ್ತಿರುವ ಹೆಣ್ಣಿನ ಶರಣವ್ವನ ಪಾತ್ರವನ್ನು ಮಾಡಿದ ಉಜ್ವಲಾ ಪವಾರ ರಂಗದ ಮೇಲೆ ಬಂದೊಡನೆ ಇವರದ್ದು ಅಭಿನಯವೋ ನಿಜವಾಗಲೂ ನೋವನ್ನು ಅನುಭವಿಸುತ್ತಿರುವವರೋ ಎಂಬ ಸಂಶಯವನ್ನುಂಟು ಮಾಡುವಂಥ ಗಂಭೀರ ವಾತಾವರಣ ನಿರ್ಮಿಸಿ ಬಿಡುತ್ತಾರೆ. ಈ ಪಾತ್ರದ ಸಾವನ್ನು ಸೂಚ್ಯವಾಗಿ ಹೇಳಬಹುದಿತ್ತಾದರೂ ಅದೇಕೋ ನಿರ್ದೇಶಕರು ಬೆಳೆಸಿದಂತೆ ಅನ್ನಿಸುತ್ತದೆ.

    ಪಾತ್ರದಲ್ಲಿ ಕಾಣಿಸಿಕೊಂಡ ಸ್ನೇಹಾ ಕುಲಕರ್ಣಿಯವರ ಅಭಿನಯ ತುಂಬ ನೈಜದಿಂದ ಕೂಡಿದ್ದು, ಗಂಭೀರ ವಾತಾವರಣವನ್ನು ತಕ್ಕ ಮಟ್ಟಿಗೆ ತಿಳಿಗೊಳಿಸುತ್ತ ಹೋಗುತ್ತದೆ. ಬಾಲನಟ ವರದ ದೇಶಪಾಂಡೆ ಎಲ್ಲರ ಗಮನ ಸೆಳೆಯುತ್ತಾನೆ. ಕಲಾವಿದರಾದ ಅರವಿಂದ ಪಾಟೀಲ, ಪ್ರಸಾದ ಕಾರಜೋಳ, ವಿನಯ ಕುಲಕರ್ಣಿ, ನಿರ್ಮಲಾ ಬಟ್ಟಲ, ಆರೂಷ ಕುಲಕರ್ಣಿ, ಯೋಗೇಶ ದೇಶಪಾಂಡೆ, ಮಂಜುನಾಥ ಕಲಾಲ, ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕೊನೆಯವರೆಗೂ ಪ್ರೇಕ್ಷಕರನ್ನು ಸೆರೆಹಿಡಿಯುವಲ್ಲಿ ನಾಟಕ ಯಶಸ್ವಿಯಾಗಿದೆ.

    ನಾಟಕದ ರಚನೆ ಸಂಧ್ಯಾ ಎಸ್. ಇವರದಾಗಿದ್ದು, ಶ್ರೀಪತಿ ಮಂಜನಬೈಲು ಇವರ ಸಂಗೀತವಿದೆ. ಸವಿತಾ ಭೈರಪ್ಪ ಈ ನಾಟಕವನ್ನು ನಿರ್ದೇಶಿಸಿದ್ದಾರೆ. ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ನಾಟಕಕ್ಕೆ ಸಂಗೀತ ನಿರ್ದೇಶನ ನೀಡಿದ್ದಾರೆ. ಇಲ್ಲಿ ಸಂದರ್ಭಕ್ಕೆ ಬರುವ ಹಳೆಯ ಚಲನಚಿತ್ರ ಹಾಡುಗಳು ತಲೆದೂಗುವಂತೆ ಮಾಡುತ್ತವೆ. ನೆಳಲು ಬೆಳಕನ್ನು ಇವರೇ ನೀಡಿದ್ದಾರೆ.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ನಯನ ರಂಗಮಂದಿರದಲ್ಲಿ ನಾಟಕ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ | ನವೆಂಬರ್ 05
    Next Article ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಸಾಹಿತ್ಯ ಸಂಸ್ಕೃತಿ ಸಮಾವೇಶ 2025’ | ನವೆಂಬರ್ 08
    roovari

    Add Comment Cancel Reply


    Related Posts

    ಹೃಷೀಕೇಶದ ವಾನಪ್ರಸ್ಥ ಆಶ್ರಮದಲ್ಲಿ ‘ಬನ್ನಂಜೆ 90ರ ವಿಶ್ವನಮನ’ | ನವೆಂಬರ್ 5ರಿಂದ 11

    November 4, 2025

    ಕನ್ನಡ ಭವನದಲ್ಲಿ ‘ನಾಟ್ಯಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ’ | ನವೆಂಬರ್ 07ರಿಂದ 09

    November 4, 2025

    ಶ್ರೀ ಮಹಾಗಣಪತಿ ಮಾನಸ ಮಂದಿರದಲ್ಲಿ ‘ಯಕ್ಷಹಬ್ಬ ಹೇರಿಕುದ್ರು 2025’ | ನವೆಂಬರ್ 05ರಿಂದ 08

    November 4, 2025

    ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯಿಂದ ಲೋಕಾರ್ಪಣೆಗೊಂಡ 15 ಕೃತಿಗಳು

    November 4, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.