Subscribe to Updates

    Get the latest creative news from FooBar about art, design and business.

    What's Hot

    ಸುರತ್ಕಲ್ ನಲ್ಲಿ ರಂಗು ರಂಗಿನ ರಂಗೋತ್ಸವ ಮತ್ತು ‘ರಂಗಚಾವಡಿ’ ಪ್ರಶಸ್ತಿ ಪ್ರದಾನ

    November 12, 2025

    ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ‘ಮಕ್ಕಳ ರಂಗ ಉತ್ಸವ’ | ನವೆಂಬರ್ 15

    November 12, 2025

    ಶ್ರೀ ಪೇಜಾವರ ಮಠದಲ್ಲಿ ಯಕ್ಷಗಾನ ತಾಳಮದ್ದಲೆ | ನವೆಂಬರ್ 15

    November 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಲೆನಾಡ ಬರಹಗಾರರ ವೇದಿಕೆಯಿಂದ ‘ಕಾಡಸುರಗಿ’ ಕೃತಿ ಬಿಡುಗಡೆ | ನವಂಬರ್‌ 15
    Book Release

    ಮಲೆನಾಡ ಬರಹಗಾರರ ವೇದಿಕೆಯಿಂದ ‘ಕಾಡಸುರಗಿ’ ಕೃತಿ ಬಿಡುಗಡೆ | ನವಂಬರ್‌ 15

    November 12, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಬೆಂಗಳೂರಿನಲ್ಲಿ ನೆಲೆ ನಿಂತಿರುವ ಮಲೆನಾಡ ಬರಹಗಾರರ ಸೃಜನಾತ್ಮಕ ಅಭಿವ್ಯಕ್ತಿಯ ವೇದಿಕೆಯಾಗಿ ʼಮಲೆನಾಡ ಬರಹಗಾರರ ವೇದಿಕೆʼ ರೂಪುಗೊಂಡಿದೆ. ಪುಸ್ತಕ ಪ್ರಕಟಣೆ, ವಿಚಾರ ಸಂಕಿರಣ, ಚಿಂತನಾ ಕಮ್ಮಟಗಳು, ಸಮ್ಮೇಳನಗಳು ಹೀಗೆ ವಿಭಿನ್ನ ಯೋಜನೆಗಳನ್ನು ಹೊಂದಿರುವ ಈ ವೇದಿಕೆಯ ಮೊದಲ ಪುಸ್ತಕವಾಗಿ ‘ಕಾಡಸುರಗಿ’ ಎಂಬ ನಲವತ್ತು ಮಲೆನಾಡು ಸಾಧಕರ ಜೀವನ ಸಾಧನೆಯನ್ನು ಪರಿಚಯಿಸುವ ಕೃತಿಯು ದಿನಾಂಕ 15 ನವಂಬರ್‌ 2025ರ ಶನಿವಾರ ಸಂಜೆ ಗಂಟೆ 5-30ಕ್ಕೆ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬಿಡುಗಡೆಯಾಗಲಿದೆ.

    ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರಾದ ಪದ್ಮಶ್ರೀ ಗಿರೀಶ್‌ ಕಾಸರವಳ್ಳಿಯವರು ಕೃತಿಯನ್ನು ಬಿಡುಗಡೆ ಮಾಡಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್‌, ಪ್ರಖ್ಯಾತ ಗಾಯಕಿ ನಾಡೋಜ ಡಾ. ಬಿ.ಕೆ. ಸುಮಿತ್ರ, ಜವಹರಲಾಲ್‌ ನೆಹರು ತಾರಾಲಯದ ನಿರ್ದೇಶಕರಾದ ಡಾ. ಬಿ.ಆರ್. ಗುರುಪ್ರಸಾದ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮಲೆನಾಡು ಬರಹಗಾರರ ವೇದಿಕೆ ಅಧ್ಯಕ್ಷರಾದ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

    ಒಟ್ಟು ಹದಿನೆಂಟು ಲೇಖಕರ ಲೇಖನಗಳ ಕೃತಿಯನ್ನು ಮಂಡಗದ್ದೆ ಶ್ರೀನಿವಾಸಯ್ಯ, ಎಚ್.ಸಿ. ಚಿದಾನಂದ ಹೆಗ್ಗಾರು, ಎಚ್.ಸಿ. ಜಯಪ್ರಕಾಶ್‌ ಮತ್ತು ಎನ್.ಎಸ್. ಶ್ರೀಧರ ಮೂರ್ತಿಯವರನ್ನುಳ್ಳ ಸಂಪಾದಕ ಮಂಡಳಿ ಸಂಪಾದಿಸಿದ್ದು, ಡಾ. ಬಿ.ಆರ್. ಗುರುಪ್ರಸಾದ್, ಡಾ. ಪ್ರಿಯಾಂಕ ಅರಮನೆ, ಡಾ. ಪ್ರಶಾಂತ ಶೀರೂರು, ಶುಭಶ್ರೀ ಭಟ್, ಡಾ. ಅರುಣಾ ಕೆ.ಆರ್., ಡಾ. ಅನಿತಾ ಹೆಗ್ಗೂಡು, ಕೆ.ಎಂ. ಜಯಕುಮಾರ್ ಕೆಸಗೋಡು, ರಮೇಶ್ ಬೇಗಾರ್, ಡಾ. ಶ್ರುತಿ ಎಸ್.ಡಿ., ಕಿಗ್ಗ ರಾಜಶೇಖರ ಎಸ್.ಜಿ., ಅಚ್ಚಿನಹಳ್ಳಿ ಸುಚೇತನ, ಡಾ. ಶ್ರುತಿ ತಲನೇರಿ, ಸವೀನ ಹಾರೋಗೊಳಿಗೆ, ಅಶ್ವಿತ್ ಪಡುವಳ್ಳಿ, ಪ್ರಣಿತ ತಿಮ್ಮಪ್ಪ ಗೌಡ ಇವರುಗಳು ಕೃತಿಯ ಲೇಖಕರಾಗಿರುತ್ತಾರೆ.

    baikady Bengaluru Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಮೈಸೂರಿನ ನಟನ ರಂಗಶಾಲೆಯಲ್ಲಿ ‘ಅಲೀಬಾಬಾ ಮತ್ತು 40 ಕಳ್ಳರು’ ನಾಟಕ ಪ್ರದರ್ಶನ | ನವೆಂಬರ್ 15 ಮತ್ತು 16
    Next Article ಮೂಡುಬಿದಿರೆಯಲ್ಲಿ ಕ.ಸಾ.ಪ.ದಿಂದ ‘ಸಂಸ್ಕೃತಿ ಚಿಂತನ ಸಮಾರಂಭ’ | ನವೆಂಬರ್ 16
    roovari

    Add Comment Cancel Reply


    Related Posts

    ಸುರತ್ಕಲ್ ನಲ್ಲಿ ರಂಗು ರಂಗಿನ ರಂಗೋತ್ಸವ ಮತ್ತು ‘ರಂಗಚಾವಡಿ’ ಪ್ರಶಸ್ತಿ ಪ್ರದಾನ

    November 12, 2025

    ತುಮಕೂರಿನ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ‘ಮಕ್ಕಳ ರಂಗ ಉತ್ಸವ’ | ನವೆಂಬರ್ 15

    November 12, 2025

    ಶ್ರೀ ಪೇಜಾವರ ಮಠದಲ್ಲಿ ಯಕ್ಷಗಾನ ತಾಳಮದ್ದಲೆ | ನವೆಂಬರ್ 15

    November 12, 2025

    ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ -2025 | ನವೆಂಬರ್ 15

    November 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.