Subscribe to Updates

    Get the latest creative news from FooBar about art, design and business.

    What's Hot

    ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ | ನವೆಂಬರ್ 21

    November 18, 2025

    ಮಂಗಳೂರಿನಲ್ಲಿ ‘ಬಾಲ ಭಜನಾ ವೈಭವ’ | ಕೊನೆಯ ದಿನಾಂಕ ನವೆಂಬರ್ 20

    November 18, 2025

    ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ

    November 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯಿಂದ ಎರಡು ಹೊಸ ಕೃತಿಗಳ ಲೋಕಾರ್ಪಣೆ
    Book Release

    ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯಿಂದ ಎರಡು ಹೊಸ ಕೃತಿಗಳ ಲೋಕಾರ್ಪಣೆ

    November 18, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಬೆಂಗಳೂರಿನ ಮಲ್ಲೇಶ್ವರದ ಆಶಾ ರಘು ಇವರ ನಿವಾಸದಲ್ಲಿ ದಿನಾಂಕ 13 ನವೆಂಬರ್ 2025ರಂದು ಉಪಾಸನ ಬುಕ್ಸ್ ಪ್ರಕಾಶನ ಸಂಸ್ಥೆಯ ಎರಡು ಹೊಸ ಕೃತಿಗಳನ್ನು ಲೋಕಾರ್ಪಣೆಗೊಂಡವು.

    ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಭಗವಾನ್ ಕೆ. ನಾರಾಯಣ್ “ವಿವಾದಗಳನ್ನೆಲ್ಲಾ ಬದಿಗಿಟ್ಟು, ಸಕಾರಾತ್ಮಕವಾದ ವಿಚಾರಗಳನ್ನಷ್ಟೇ ಉಳ್ಳಂತೆ ನಾಡಿನ ಪ್ರಖ್ಯಾತ ಲೇಖಕರು ಭೈರಪ್ಪನವರಿಗಾಗಿ ಬರೆದ ನುಡಿನಮನದ ಲೇಖನಗಳನ್ನು ಆಶಾ ರಘು ಇವರು ಸಂಪಾದಿಸಿರುವ ‘ಭೈರಪ್ಪನವರೆಡೆಗೆ ಭಾವತಂತು’ ಕೃತಿಯು ಒಳಗೊಂಡಿದೆ. ಇದು ನಿಜಕ್ಕೂ ಬಹಳ ಅರ್ಥಪೂರ್ಣವಾದ ಭಾವನಮನವಾಗಿದೆ” ಎಂದು ಅಭಿಪ್ರಾಯಪಟ್ಟರು.

    ಮಾಸ್ಟರ್ ಪ್ರಣವ್ ಭಾರದ್ವಾಜ್ ರಚನೆಯ ‘ಅಂಗದ’ ಎಂಬ ಪೌರಾಣಿಕ ಕಾದಂಬರಿಯ ಕುರಿತು ಮಾತನಾಡುತ್ತಾ, “ಹದಿನೈದರ ಪೋರ ಪ್ರಣವ್ ಭಾರದ್ವಾಜ್ ನ ಸಾಧನೆ ಶ್ಲಾಘನೀಯವಾದುದು. ಅಂಗದನಂತಹ ಪಾತ್ರವನ್ನು ನಿರ್ವಹಿಸಿರುವ ರೀತಿಯಲ್ಲಿ ಲೇಖಕನು ಬೆಳೆದುಬಂದಿರುವ ಸಂಸ್ಕಾರ ಎಂತಹುದೆಂದು ಅರಿವಾಗುತ್ತದೆ” ಎಂದರು.

    ಎರಡು ಕೃತಿಗಳ ಕುರಿತು ಪರಿಚಯಿಸಿದ ಲೇಖಕಿ ಉಷಾರಾಣಿ ಟಿ.ಆರ್. ಇವರು, ಭೈರಪ್ಪನವರ ನುಡಿನಮನವು ಸಂಗ್ರಹಯೋಗ್ಯವಾಗಿದೆ ಹಾಗೂ ‘ಅಂಗದ’ ಕಾದಂಬರಿಯು ನವೀನವಾದ ಒಳನೋಟವನ್ನು ನೀಡುತ್ತದೆ ಎಂದರು. ಮುಖ್ಯ ಅತಿಥಿಯಾಗಿದ್ದ ಡಾ. ಪ್ರದೀಪ್ ಬೇಲೂರು ಇವರು “ಶ್ರೀರಾಮನು ತನ್ನ ತಂದೆ ವಾಲಿಯನ್ನು ಕೊಂದರೂ ಅಂಗದ ಧರ್ಮದ ಪಕ್ಷಪಾತಿಯಾಗಿ ಇರುವಂತಹವನು. ಅಂಗದನ ಪಾತ್ರವನ್ನೇ ಆಧರಿಸಿ ಇದುವರೆಗೂ ಯಾವುದೇ ಪ್ರತ್ಯೇಕ ಪುಸ್ತಕ ಬಂದಿಲ್ಲ. ಅಂಗದನ ಬಗೆಗೆ ತಿಳಿದುಕೊಳ್ಳಲು ಬಯಸುವವರು ಈ ಕಾದಂಬರಿಯನ್ನು ಓದಬಹುದು” ಎಂದರು. ಪ್ರಣವ್ ಭಾರದ್ವಾಜ್ ಕಾದಂಬರಿಯ ರಚನೆಯ ಹಿಂದಿನ ತನ್ನ ಅಧ್ಯಯನ, ತಯಾರಿಗಳ ಕುರಿತು ಹಂಚಿಕೊಂಡರೆ, ಸಾಹಿತಿ ಆಶಾ ರಘು ಅವರು ಉಪಸ್ಥಿತರಿದ್ದು, ‘ನನಗೆ ತಿಳಿದಂತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ಕಿರಿ ವಯಸ್ಸಿನ ಕಾದಂಬರಿಕಾರ ಎಂದರೆ ಪ್ರಣವ್ ಭಾರದ್ವಾಜ್ ಎನ್ನಿಸುತ್ತದೆ. ವಯಸ್ಸು ಚಿಕ್ಕದಾದರೂ ಪ್ರಬುದ್ಧವಾಗಿ ಬರೆದಿದ್ದಾನೆ’ ಎನ್ನುತ್ತಾ, ಎರಡೂ ಕೃತಿಗಳ ಪ್ರಕಟಣೆಗೆ ನೆರವಾದ ಎಲ್ಲ ಲೇಖಕರ ಸಹಕಾರವನ್ನು ಸ್ಮರಿಸಿದರು.

    baikady Book release Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಧಾರವಾಡದಲ್ಲಿ ‘ಶಾಂತಕವಿ ನಾಟಕೋತ್ಸವ-2025’ | ನವೆಂಬರ್ 22 ಮತ್ತು 23
    Next Article ಯಕ್ಷಗಾನ ಕಲಾರಂಗಕ್ಕೆ ಕಟೀಲು ದೇವಳದಿಂದ ‘ಶ್ರೀದುರ್ಗಾನುಗ್ರಹ ಪ್ರಶಸ್ತಿ’
    roovari

    Add Comment Cancel Reply


    Related Posts

    ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ | ನವೆಂಬರ್ 21

    November 18, 2025

    ಮಂಗಳೂರಿನಲ್ಲಿ ‘ಬಾಲ ಭಜನಾ ವೈಭವ’ | ಕೊನೆಯ ದಿನಾಂಕ ನವೆಂಬರ್ 20

    November 18, 2025

    ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ

    November 18, 2025

    ಹಾಸನದಲ್ಲಿ ‘ಕಪ್ಪು ಹಳ್ಳಿನ ಕತೆ’ ಕಾದಂಬರಿಯ ಎರಡನೇ ಆವೃತ್ತಿ ಬಿಡುಗಡೆ | ನವೆಂಬರ್ 22

    November 18, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.