Subscribe to Updates

    Get the latest creative news from FooBar about art, design and business.

    What's Hot

    ಗುರು ಶಿಷ್ಯ ಪರಂಪರೆಗೆ ಮಾದರಿಯಾದ ನೃತ್ಯ ಸಂಸ್ಥೆ ನಾಟ್ಯನಿಕೇತನ – ಡಾ. ಕೆ ಎಂ ಉಷಾ

    November 24, 2025

    ವಿಶೇಷ ಲೇಖನ | ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರ ಸಮೇತನಹಳ್ಳಿ ರಾಮ ರಾವ್

    November 24, 2025

    ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಆಡಿಟೋರಿಯಂನಲ್ಲಿ ಅರೆಭಾಷೆ ನಾಟಕ | ನವೆಂಬರ್ 27

    November 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗುರು ಶಿಷ್ಯ ಪರಂಪರೆಗೆ ಮಾದರಿಯಾದ ನೃತ್ಯ ಸಂಸ್ಥೆ ನಾಟ್ಯನಿಕೇತನ – ಡಾ. ಕೆ ಎಂ ಉಷಾ
    Bharathanatya

    ಗುರು ಶಿಷ್ಯ ಪರಂಪರೆಗೆ ಮಾದರಿಯಾದ ನೃತ್ಯ ಸಂಸ್ಥೆ ನಾಟ್ಯನಿಕೇತನ – ಡಾ. ಕೆ ಎಂ ಉಷಾ

    November 24, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನೃತ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಶ್ರೀಮಂತಿಕೆಯನ್ನು ತಂದು ಕೊಟ್ಟು, ಗುರು ಶಿಷ್ಯ ಪರಂಪರೆಗೆ ಮಾದರಿಯಾದ ನೃತ್ಯ ಸಂಸ್ಥೆ ನಾಟ್ಯನಿಕೇತನ ಕೊಲ್ಯ ಎಂದು ಯೂನಿವರ್ಸಿಟಿ ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ. ಕೆ ಎಂ ಉಷಾ ನುಡಿದರು. ಅವರು ನಾಟ್ಯನಿಕೇತನದ ಸಭಾಗೃಹ ಇಲ್ಲಿ ನಾಟ್ಯಮೋಹನ ನವತ್ಯುತ್ಸವ ನೃತ್ಯಸರಣಿ 23 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಪಂದನಲ್ಲೂರು ಶೈಲಿಯ ನೃತ್ಯ ಶೈಲಿಯನ್ನು ಕಳೆದ ಹಲವು ದಶಕಗಳಿಂದ ಬೋಧಿಸುತ್ತಾ ಇಂದು ದೇಶ ವಿದೇಶಗಳಲ್ಲಿ ಸಹಸ್ರಾರು ಶಿಷ್ಯವರ್ಗವನ್ನು ಹೊಂದಿರುವ ನಾಟ್ಯಕ್ಷೇತದ ಭೀಷ್ಮರೆಂದೇ ಪ್ರಸಿದ್ಧಿಯನ್ನು ಪಡೆದ ನಾಟ್ಯಾಚಾರ್ಯ ಉಳ್ಳಾಲ್ ಮೋಹನ ಕುಮಾರ್ ಅಭಿನಂದನೀಯರು ಎಂದರು.ಅದೇ ರೀತಿಯಲ್ಲಿ ತಂದೆಯವರ 90 ತುಂಬಿದ ಹರ್ಷದ ಪ್ರಾರಂಭಿಸಿದ ಈ ಕಾರ್ಯಕ್ರಮದ ರೂವಾರಿ ಸುಪುತ್ರಿ ರಾಜಶ್ರೀ ಉಳ್ಳಾಲ್ ರನ್ನು ಸಹ ಶ್ಲಾಘಿಸಲೇಬೇಕು ಎಂದರು. ಉಳ್ಳಾಲ್ ಮೋಹನ ಕುಮಾರ್ ಶಾಸ್ತ್ರೀಯ ಚೌಕಟ್ಟಿನಲ್ಲಿ ಭಾವಪೂರ್ಣ ಅಭಿನಯದ ಮೂಲಕ ನೃತ್ಯ ಪ್ರಸ್ತುತಿ ಮಾಡಿದ ಹಿರಿಯ ಶಿಷ್ಯೆ ಇಂಗ್ಲೆಂಡಿನ ವಿದುಷಿ ಚಿತ್ರಾಲೇಖಾ ಬೋಳಾರ್ ಮತ್ತು ಅವರ ಸುಪುತ್ರಿ ಆನಯ್ಯ ವಸುಧ ಆಶೀರ್ವದಿಸಿ ಅಭಿನಂದಿಸಿದರು. ಗುರುಗಳ ಅನುಗ್ರಹದಿಂದ ಇಂದು ನಾನು ದೂರದ ಇಂಗ್ಲೆಂಡ್ ನಲ್ಲಿ ನೃತ್ಯ ಕಲೆಯನ್ನು ಅಲ್ಲಿನ ಆಸಕ್ತರಿಗೆ ಹೇಳಿಕೊಡಲು ಸಾಧ್ಯವಾಯಿತು ಎಂದು ಕಲಾವಿದೆ ಚಿತ್ರಲೇಖಾ ಹೇಳಿದರು. ವಿದುಷಿ ರಾಜಶ್ರೀ ಉಳ್ಳಾಲ್ ವಂದಿಸಿದರು. ಗುರು ಶ್ರೀಧರ ಹೊಳ್ಳ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ | ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರ ಸಮೇತನಹಳ್ಳಿ ರಾಮ ರಾವ್
    roovari

    Add Comment Cancel Reply


    Related Posts

    ಮನರಂಜಿಸಿದ ‘ಕಲಾಭವ -04’ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಿ

    November 21, 2025

    ಮಂಗಳೂರಿನ ಪುರಭವನದಲ್ಲಿ ವಿದುಷಿ ಅಮೃತಾ ವಿ. ಇವರ ರಂಗಪ್ರವೇಶ | ನವೆಂಬರ್ 22

    November 20, 2025

    ಕೊಲ್ಯದ ನಾಟ್ಯನಿಕೇತನದ ನೃತ್ಯಾಂಗಣದಲ್ಲಿ ‘ನಾಟ್ಯಮೋಹನ ನವತ್ಯುತ್ಸಹ’ ನೃತ್ಯ ಸರಣಿ 23 | ನವೆಂಬರ್ 21

    November 20, 2025

    ಪುತ್ತೂರಿನಲ್ಲಿ ರಾಧೇಶ ತೋಳ್ಪಾಡಿಯವರಿಂದ ವಿಶೇಷ ಉಪನ್ಯಾಸ | ನವೆಂಬರ್ 23

    November 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.