Subscribe to Updates

    Get the latest creative news from FooBar about art, design and business.

    What's Hot

    ನಾಟಕ ವಿಮರ್ಶೆ | ಭಾವನಾತ್ಮಕ ಸಂಬಂಧ ನಾಟಕ ‘ಗೋಕುಲ ನಿರ್ಗಮನ’

    November 25, 2025

    ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ‘ಕಪ್ಪು ಹಲ್ಲಿನ ಕಥೆ’ ಎರಡನೇ ಆವೃತ್ತಿ ಬಿಡುಗಡೆ

    November 25, 2025

    ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ‘ನಾಟಕೋತ್ಸವ’ | ನವೆಂಬರ್ 26, 27, 28

    November 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ದಶಕ ಸಮರ್ಪಣಂ’ ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವ ಸಂಭ್ರಮಾಚರಣೆ
    Felicitation

    ‘ದಶಕ ಸಮರ್ಪಣಂ’ ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವ ಸಂಭ್ರಮಾಚರಣೆ

    November 25, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಆರೋಹಣಂ ಸಂಗೀತ ಶಾಲೆಯ ದಶಮಾನೋತ್ಸವದ ಅಂಗವಾಗಿ ದಿನಾಂಕ 22 ಮತ್ತು 23 ನವೆಂಬರ್ 2025ರಂದು ಎರಡು ದಿನಗಳ ಸಂಗೀತ ಮಹೋತ್ಸವ ‘ದಶಕ ಸಮರ್ಪಣಂ’ ಕಾರ್ಯಕ್ರಮವು ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.

    ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ್ ಕಟೀಲ್ “ಆಧುನಿಕ ಜಗತ್ತಿನ ಜಂಜಾಟದಲ್ಲಿ ಎಲ್ಲರೂ ಒತ್ತಡದಿಂದಲೇ ಬದುಕುತ್ತಿದ್ದಾರೆ. ಒತ್ತಡ ನಿವಾರಣೆಗಾಗಿ ಅನೇಕ ರೀತಿಯ ಔಷಧ, ಕೌನ್ಸೆಲಿಂಗ್ ಮೊರೆ ಹೋಗುತ್ತಾರೆ. ಆದರೆ ಒಂದಷ್ಟು ಹೊತ್ತು ಸಂಗೀತ ಕೇಳಿದರೆ ತಂನಿಂತಾನೆ ಒತ್ತಡ ನಿವಾರಣೆಯಾಗಲಿದೆ. ಒತ್ತಡ ನಿವಾರಣೆಗೆ ಸಂಗೀತವೇ ಉತ್ತಮ ಕೌನ್ಸೆಲಿಂಗ್. ಡಾ. ಆನಿಶ್ ವಿ. ಭಟ್ ರವರು ಸ್ಥಾಪಿಸಿದ ಮಂಗಳೂರಿನ ಆರೋಹಣಂ ಸಂಗೀತ ಶಾಲೆಯು ಇಂದು ಹತ್ತು ವರ್ಷಗಳನ್ನು ಪೂರೈಸಿದೆ. ಈ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ಸಂಸ್ಥೆ ನೀಡುತ್ತಿದೆ. ಅಲ್ಲದೆ ಹತ್ತಾರು ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸುವುದರ ಮೂಲಕ ಸಂಗೀತ ಪ್ರೇಮಿಗಳಿಗೂ ಸಂಗೀತ ಕೇಳುವ ಅವಕಾಶವನ್ನು ಕಲ್ಪಿಸುತ್ತಿದ್ದಾರೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಸಂಸ್ಥೆಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪ್ರಸಿದ್ಧ ಕಲಾವಿದರಾಗಿ ಬೆಳೆದು ಬರಲಿ” ಎಂದು ಶುಭ ಹಾರೈಸಿದರು.

    ಸಂಗೀತ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಅವರವರ ಅರ್ಹತೆಗೆ ಅನುಗುಣವಾಗಿ ಹಾಡುವ ಅವಕಾಶ, ಇತರ ಕಲಾವಿದರಿಗೆ ಪಕ್ಕವಾದ್ಯಕ್ಕೆ ವೇದಿಕೆ, 10 ಮಂದಿ ಸಾಧಕರಿಗೆ ನಗದಿನೊಂದಿಗೆ ಸನ್ಮಾನ ಎಲ್ಲವೂ ಅತ್ಯಂತ ವ್ಯವಸ್ಥಿತವಾಗಿಯೂ, ಅರ್ಥಪೂರ್ಣವಾಗಿಯೂ ನಡೆಯಿತು. ಕೊನೆಗೆ ನಡೆದ ಡಾ. ಅನೀಶ್ ವಿ. ಭಟ್ ಅವರ ಗುರುಗಳಾದ ಡಾ. ಸೂರ್ಯಪ್ರಕಾಶ್ ಇವರ ಗಾಯನ ಕಛೇರಿಯು ಸಾಂಪ್ರದಾಯಿಕತೆ ,ವಿದ್ವತ್ ಜೊತೆಗೆ ರಂಜನೀಯವಾಗಿ ಮೂಡಿ ಬಂತು. ಆರೋಹಣ ಸಂಗೀತ ಶಾಲೆಯ ಅಧ್ಯಕ್ಷರಾದ ಬಿ. ಗಣೇಶ್ ನಾಯಕ್, ಉಪಾಧ್ಯಕ್ಷ ಮಂಜುನಾಥ ಭಟ್, ಆರೋಹಣ ಸಂಗೀತ ಶಾಲೆಯ ಗುರುಗಳಾದ ಡಾ. ಅನೀಶ್ ವಿ. ಭಟ್ ಮತ್ತು ಹವ್ಯಶ್ರೀ ಕೆ.ಟಿ., ಬಲೆಕ್ಕಳ ವೆಂಕಟೇಶ್ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    baikady felicitation Music roovari
    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಗಾನ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಇವರಿಗೆ ಪ್ರಶಸ್ತಿ ಪ್ರದಾನ
    Next Article ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಉದ್ಘಾಟನೆಗೊಂಡ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’
    roovari

    Add Comment Cancel Reply


    Related Posts

    ನಾಟಕ ವಿಮರ್ಶೆ | ಭಾವನಾತ್ಮಕ ಸಂಬಂಧ ನಾಟಕ ‘ಗೋಕುಲ ನಿರ್ಗಮನ’

    November 25, 2025

    ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ‘ಕಪ್ಪು ಹಲ್ಲಿನ ಕಥೆ’ ಎರಡನೇ ಆವೃತ್ತಿ ಬಿಡುಗಡೆ

    November 25, 2025

    ಕಾರ್ಕಳದ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ‘ನಾಟಕೋತ್ಸವ’ | ನವೆಂಬರ್ 26, 27, 28

    November 25, 2025

    ಕ.ಸಾ.ಪ. ಸುರತ್ಕಲ್ ಹೋಬಳಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೀತಾ ಸುರತ್ಕಲ್ ಆಯ್ಕೆ  

    November 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.