Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ | ಡಿಸೆಂಬರ್ 04

    December 3, 2025

    ಕುಂಜತ್ತೂರಿನಲ್ಲಿ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮ

    December 3, 2025

    ಫರಂಗಿಪೇಟೆಯಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ’ | ಡಿಸೆಂಬರ್ 07

    December 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುಂಜತ್ತೂರಿನಲ್ಲಿ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮ
    Competition

    ಕುಂಜತ್ತೂರಿನಲ್ಲಿ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮ

    December 3, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಮಂಗಳೂರಿನ ಕರಾವಳಿ ಲೇಖಕಿಯರ-ವಾಚಕಿಯರ ಸಂಘ ಮತ್ತು ಲಕ್ಷ್ಮೀ ಟೀಚರ್ ಕಣ್ಣಪ್ಪ ಮಾಸ್ಟರ್ ಮೆಮೋರಿಯಲ್ ಟ್ರಸ್ಟಿನ ಸಹಯೋಗದಲ್ಲಿ ಲಕ್ಷ್ಮೀ ರಾವ್ ಆರೂರು, ಶಾರದಾ ಭಟ್, ರಾಧಾಬಾಯಿ ನಾರಾಯಣ ಬಾಬು ಮತ್ತು ಶ್ರೀಕಲಾ ಉಡುಪ ದತ್ತಿನಿಧಿಯ ‘ಅಮ್ಮನೆಂಬ ವಿಸ್ಮಯ’ ಪರಿಕಲ್ಪನೆಯ ಕಾರ್ಯಕ್ರಮವು ದಿನಾಂಕ 29 ನವೆಂಬರ್ 2025ರಂದು ಕುಂಜತ್ತೂರಿನಲ್ಲಿ ನಡೆಯಿತು.

    ಸಂಘದ ಅಧ್ಯಕ್ಷೆ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮುಖ್ಯ ಅತಿಥಿ, ಲೇಖಕಿ ಕುಶಲಾಕ್ಷಿ ಕಣ್ವತೀರ್ಥ ಮಾತನಾಡಿ “ಬದಲಾದ ಕಾಲಘಟ್ಟದಲ್ಲಿ ಹೆತ್ತವರ ಅತಿಯಾದ ಕಾಳಜಿಯಿಂದ ಮತ್ತು ಆಧುನಿಕ ಸೌಕರ್ಯಗಳಿಂದ ಮಕ್ಕಳಲ್ಲಿ ಕಷ್ಟ ಸಹಿಸುವ ಶಕ್ತಿ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಅದೇ ಅಮ್ಮಂದಿರು ತಮ್ಮ ವೃದ್ಧಾಪ್ಯದಲ್ಲಿ ಆಶ್ರಮವಾಸಿಗಳಾಗುತ್ತಿದ್ದಾರೆ” ಎಂದರು.

    ದತ್ತಿನಿಧಿಯ ಅಂಗವಾಗಿ ಸಂಘದ ಸದಸ್ಯೆಯರಿಗೆ ‘ಅಮ್ಮ’ ಎನ್ನುವ ಶೀರ್ಷಿಕೆಯಡಿ ಏರ್ಪಡಿಸಿದ್ದ ಕವನ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು. ದೇವಿಕಾ ನಾಗೇಶ್ ಪ್ರಥಮ, ಶರ್ಮಿಳಾ ಉಡುಪ ದ್ವಿತೀಯ, ವಿಜಯಲಕ್ಷ್ಮೀ ಶಾನುಭಾಗ್ ಮತ್ತು ಡಾ. ಜ್ಯೋತಿ ಚೇಳ್ಯಾರು ತೃತೀಯ ಬಹುಮಾನವನ್ನು ಪಡೆದರು. ಡಾ. ದಿವ್ಯಶ್ರೀ ಡೆಂಬಳ, ರಘು ಇಡ್ಕಿದು ಮತ್ತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಇವರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.

    ಡಾ. ದಿವ್ಯಶ್ರೀ ಡೆಂಬಳ ತೀರ್ಪುಗಾರಿಕೆಯ ನೆಲೆಯಲ್ಲಿ ಸ್ಪರ್ಧೆಗೆ ಬಂದ ಕವನಗಳನ್ನು ವಿಶ್ಲೇಷಿಸಿದರು. ರಾಜೀವಿ, ರತ್ನಾವತಿ ಜೆ. ಬೈಕಾಡಿ ಮತ್ತು ತನಿಷ್ಕಾ ಹಾಡುಗಳೊಂದಿಗೆ ಸಹಕರಿಸಿದರು. ಹೇಮಾ ಪೈ ದತ್ತಿನಿಧಿಗಳ ಬಗ್ಗೆ ಪ್ರಸ್ತಾವಿಸಿದರು. ಸೌಮ್ಯಾ ಪ್ರವೀಣ್ ವಂದಿಸಿ, ಜಯಶೀಲಾ ಕುಂಬ್ಳೆ ಸ್ವಾಗತಿಸಿ, ನಳಿನಾಕ್ಷಿ ಉದಯರಾಜ್‌ ನಿರೂಪಿಸಿದರು.

    baikady competition Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಫರಂಗಿಪೇಟೆಯಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ’ | ಡಿಸೆಂಬರ್ 07
    Next Article ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ | ಡಿಸೆಂಬರ್ 04
    roovari

    Add Comment Cancel Reply


    Related Posts

    ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘ಕಾಲಜ್ಞಾನಿ ಕನಕ’ ನಾಟಕ ಪ್ರದರ್ಶನ | ಡಿಸೆಂಬರ್ 04

    December 3, 2025

    ಫರಂಗಿಪೇಟೆಯಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ’ | ಡಿಸೆಂಬರ್ 07

    December 3, 2025

    ಉಜಿರೆಯಲ್ಲಿ ಗಜಲ್ ಸಂಕಲನ ಬಿಡುಗಡೆ ಮತ್ತು ಗಜಲ್ ರಚನಾ ಕಾರ್ಯಾಗಾರ | ಡಿಸೆಂಬರ್ 06

    December 3, 2025

    ‘ಕಾವ್ಯಾಂ ವ್ಹಾಳೊ- 9’ ಕೊಂಕಣಿ ಕವಿಗೋಷ್ಟಿ | ಡಿಸೆಂಬರ್ 06

    December 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.