Subscribe to Updates

    Get the latest creative news from FooBar about art, design and business.

    What's Hot

    ಸುರತ್ಕಲ್ಲಿನ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ‘ರಾಗ ಸುಧಾರಸ -2025’ | ಡಿಸೆಂಬರ್ 07   

    December 6, 2025

    ಮಡಿಕೇರಿಯ ಕೊಡಗು ಪತ್ರಿಕೆ ಭವನದಲ್ಲಿ ಹಿರಿಯರ ಕವಿಗೋಷ್ಠಿ | ಡಿಸೆಂಬರ್ 09

    December 6, 2025

    ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ನಾಟಕ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 30

    December 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಳಗಾವಿಯಲ್ಲಿ ಉದ್ಘಾಟನೆಗೊಂಡ ‘ಅಭಿಷೇಕ ಅಲಾಯ್ಸ್ ನಾಟಕೋತ್ಸವ’  
    Drama

    ಬೆಳಗಾವಿಯಲ್ಲಿ ಉದ್ಘಾಟನೆಗೊಂಡ ‘ಅಭಿಷೇಕ ಅಲಾಯ್ಸ್ ನಾಟಕೋತ್ಸವ’  

    December 6, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ರಂಗಸಂಪದ ಬೆಳಗಾವಿ ತಂಡದ ‘ಅಭಿಷೇಕ ಅಲಾಯ್ಸ್ ನಾಟಕೋತ್ಸವ’ದ ಉದ್ಘಾಟನೆ ಮತ್ತು ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆ – 2025 ದಿನಾಂಕ 05 ಡಿಸೆಂಬರ್ 2025ರಂದು ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಯಶಸ್ವೀಯಾಗಿ ನೆರೆದ ಮುನ್ನೂರಕ್ಕಿಂತ ಹೆಚ್ಚು ಆಸಕ್ತ ಪ್ರೇಕ್ಷಕರ ಸಮ್ಮುಖದಲ್ಲಿ ಜರುಗಿತು. ಧಾರವಾಡದಿಂದ ಆಗಮಿಸಿದ ನಿವೃತ್ತ ಆಕಾಶವಾಣಿ ಅಧಿಕಾರಿಗಳಾದ ಡಾ. ಶರಭೇಂದ್ರಸ್ವಾಮಿಯವರು ಶ್ರೀ ಎಸ್.ಎಮ್. ಕುಲಕರ್ಣಿ ಸರ ಇವರ ಅನುಪಸ್ಥಿತಿಯಲ್ಲಿ (ಅನಾರೋಗ್ಯದ ಕಾರಣ) ಅಧ್ಯಕ್ಷತೆ ವಹಿಸಿ ಕನ್ನಡ ರಂಗಭೂಮಿಯನ್ನು ಬೆಳಗಾವಿಯಲ್ಲಿ ಸತತವಾಗಿ 47 ವರ್ಷಗಳಿಂದ ಜೀವಂತವಾಗಿಟ್ಟ ರಂಗಸಂಪದ ತಂಡಕ್ಕೆ ಅಭಿನಂದನೆ ಸಲ್ಲಿಸದರು.

    ನಾಟಕೋತ್ಸವದ ಉದ್ಘಾಟನೆ ಮಾಡಿದ ಅಭಿಷೇಕ ಅಲಾಯ್ಸ್ ಮಾಲಿಕರು ಮತ್ತು ರಂಗಸಂಪದದ ಪೋಷಕರೂ ಆದ ಶ್ರೀ ಮಧ್ವಾಚಾರ್ಯ ಆಯಿ ಇವರು ಸಾಮಾಜಿಕ ಕಾರ್ಯಗಳಿಗೆ ತಮ್ಮ ಸಂಸ್ಥೆ ಯಾವತ್ತೂ ಸಹಾಯ ಮಾಡುತ್ತಿದೆ. ಅದರಲ್ಲೂ ರಂಗಸಂಪದದಂತಹ ಕಾರ್ಯನಿರತ ರಂಗತಂಡಕ್ಕೆ ಪ್ರಾಯೋಜಕತ್ವ ಮಾಡಲು ಅಭಿಮಾನವೆನಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಆಕಾಶವಾಣಿ ಉದ್ಘೋಷಕರು, ನಟ, ನಿರ್ದೇಶಕ, ಲೇಖಕ ಡಾ. ಶಶಿಧರ ನರೇಂದ್ರ ಇವರು ಆಧುನಿಕ ಕನ್ನಡ ರಂಗಭೂಮಿ ದಿನಾಚರಣೆಯ ಮಹತ್ವ ಮತ್ತು ಇತಿಹಾಸವನ್ನು ವಿವರಿಸಿದರು. 1877ರಲ್ಲಿ ಶಿಕ್ಷಕರಾಗಿದ್ದ ಶ್ರೀ ಬಾಳಾಚಾರ್ಯ ಸಕ್ಕರಿ ಇವರು ಹೇಗೆ ಆವಾಗಿನ ಸಂಪೂರ್ಣ ಮರಾಠಿಮಯವಾಗಿದ್ದ ಮುಂಬಯಿ ಪ್ರಾಂತದಲ್ಲಿ, ಗದಗನಲ್ಲಿ ನಾಟಕ ಕಂಪೆನಿ ಶುರುಮಾಡಿ, ಕನ್ನಡ ನಾಟಕ ಬರೆದು ನಟಿಸಿ ಪ್ರದರ್ಶನ ಪ್ರಾರಂಭಿಸಿದರು ಎಂದು ಮವಕಲುಕುವ ಹಾಗೆ ವಿವರಿಸಿದರು. ಹಾಗೆಯೇ ರಂಗಸಂಪದ ತಂಡ 1978ರಲ್ಲಿ ಹಲವಾರು ವಿರೋಧಗಳ ಮಧ್ಯೆ ಶ್ರೀ ಕೃಷ್ಣ ಉಪಾಧ್ಯಾ, ಶ್ರೀ ಶ್ರೀಪತಿ ಮಂಜನಬೈಲು ಮುಂತಾದವರ ಹೋರಾಟದ ಫಲವಾಗಿ ಪ್ರಾರಂಭವಾಗಿ ಸತತ 47 ವ್ರಷಗಳಿಂದ ಬೆಳಗಾವಿ ಮತ್ತು ಕರ್ನಾಟಕದಾದ್ಯಂತ ನಾಟಕ ಪ್ರದರ್ಶನ ಮಾಡುವಲ್ಲಿ ಯಶಸ್ವೀಯಾಗಿದೆ ಎಂದು ಅಭಿನಂದಿಸಿದರು.

    ಧಾರವಾಡದ ಮನೋಹರ ಗ್ರಂಥಾಲಯದ ಅಧ್ಯಕ್ಷ ಮತ್ತು ಸಕ್ಕರಿ ಬಾಳಾಚಾರ್ಯ ಟ್ರಸ್ಟಿನ ಖಜಾಂಚಿ ಶ್ರೀ ಸಮೀರ ಜೋಶಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶ್ರೀ ಸಕ್ಕರಿ ಬಾಳಾಚಾರ್ಯರವರ ಚಿತ್ರಪಟಕ್ಕೆ ಪುಷ್ಪ ಸಮರ್ಪಿಸಿ ವಂದನೆ ಸಲ್ಲಿಸಿಲಾಯಿತು. ನಂತರ ದೀಪ ಬೆಳಗಿ ಉದ್ಘಾಟನೆ ನಡೆಸಲಾಯಿತು. ಶ್ರೀ ಪ್ರಸಾದ ಕಾರಜೋಳ ಕಾರ್ಯದರ್ಶಿ ಸ್ವಾಗತಿಸಿದರು. ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಪ್ರಾಸ್ತಾವಿಕ ನುಡಿ ಹೇಳಿದರು. ಪದ್ಮಾ ಕುಲಕರ್ಣಿ ಆಧುನಿಕ ಕನ್ನಡ ರಂಗಭೂಮಿಯ ಹಿನ್ನೆಲೆ ವಿವರಿಸಿದರು. ಶೀತಲ ರಾಜಪುರೋಹಿತ ಅತಿಥಿಗಳನ್ನು ಪರಿಚಯಿಸಿದರು. ಯೋಗೇಶ ದೇಶಪಾಂಡೆ ಮತ್ತು ರಾಮಚಂದ್ರ ಕಟ್ಟಯವರು ಗೌರವಾರ್ಪಣೆ ಸಲ್ಲಿಸಿ, ಬಸವರಾಜ ಹುಣಶೀಕಟ್ಟಿ ವಂದಿಸಿ, ಅಶೋಕ ಕುಲಕರ್ಣಿ ನಿರೂಪಿಸಿದರು. ನಂತರ ನೀನಾಸಂ ತಂಡದ ‘ಹೃದಯದ ತೀರ್ಪು’ ನಾಟಕ ಪ್ರದರ್ಶನವಾಯಿತು.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಶಿರ್ವದಲ್ಲಿ ‘ಕಿಶೋರ ಯಕ್ಷಗಾನ ಸಂಭ್ರಮ – 2025’ ಉದ್ಘಾಟನೆ
    Next Article ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಬಾ ಪರೀಕ್ಷೆಗೆ’ ಕವನ ಸಂಕಲನ
    roovari

    Add Comment Cancel Reply


    Related Posts

    ಸುರತ್ಕಲ್ಲಿನ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ‘ರಾಗ ಸುಧಾರಸ -2025’ | ಡಿಸೆಂಬರ್ 07   

    December 6, 2025

    ಮಡಿಕೇರಿಯ ಕೊಡಗು ಪತ್ರಿಕೆ ಭವನದಲ್ಲಿ ಹಿರಿಯರ ಕವಿಗೋಷ್ಠಿ | ಡಿಸೆಂಬರ್ 09

    December 6, 2025

    ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ನಾಟಕ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 30

    December 6, 2025

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಬಾ ಪರೀಕ್ಷೆಗೆ’ ಕವನ ಸಂಕಲನ

    December 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.