Subscribe to Updates

    Get the latest creative news from FooBar about art, design and business.

    What's Hot

    ಕೊಂಚಾಡಿ ಶಾಲೆಯಲ್ಲಿ 115ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಡಿಸೆಂಬರ್ 17

    December 16, 2025

    ಮೂಡುಬಿದಿರೆಯ ರಾಜ ಸಭಾಂಗಣದಲ್ಲಿ ‘ಎಕ್ಸಲೆಂಟ್ ಸಂಗೀತ ಸಂಜೆ’ | ಡಿಸೆಂಬರ್ 18

    December 16, 2025

    ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಇವರು ‘ವಡ್ಡರ್ಸೆ ಪ್ರಶಸ್ತಿ’ಗೆ ಆಯ್ಕೆ

    December 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉಜಿರೆಯ ಎಸ್‌.ಡಿ.ಎಂ. ಮಹಾವಿದ್ಯಾಲಯದಲ್ಲಿ ಗಜಲ್ ಸಂಕಲನ ಬಿಡುಗಡೆ ಮತ್ತು ಕಾರ್ಯಾಗಾರ
    Book Release

    ಉಜಿರೆಯ ಎಸ್‌.ಡಿ.ಎಂ. ಮಹಾವಿದ್ಯಾಲಯದಲ್ಲಿ ಗಜಲ್ ಸಂಕಲನ ಬಿಡುಗಡೆ ಮತ್ತು ಕಾರ್ಯಾಗಾರ

    December 15, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಜಿರೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಎಸ್‌.ಡಿ.ಎಂ. ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ವನಜಾ ಜೋಶಿಯವರ ‘ನಕ್ಕು ಬಿಡು ಬಾನಕ್ಕಿ’ ಗಜಲ್ ಸಂಕಲನದ ಬಿಡುಗಡೆ ಹಾಗೂ ಗಜಲ್ ರಚನಾ ಕಾರ್ಯಾಗಾರವು ದಿನಾಂಕ 06 ಡಿಸೆಂಬರ್ 2025ರಂದು ಉಜಿರೆಯ ಎಸ್‌.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಕರ್ಷಕವಾಗಿ ನೆರವೇರಿತು.

    ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ ಅವರು ಅಧ್ಯಕ್ಷತೆ ವಹಿಸಿದ್ದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಂತೋಷ್ ಆಲ್ಬರ್ಟ್ ಸಲ್ದಾನಾ ಉದ್ಘಾಟನೆ ನೆರವೇರಿಸಿದರು. ಎನ್‌.ವಿ. ಡಿಗ್ರಿ ಕಾಲೇಜು, ಕಲಬುರಗಿಯ ಗಜಲ್ ಕವಿ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಮಲ್ಲಿನಾಥ ಎಸ್. ತಳವಾರ ಇವರು ಗಜಲ್ ರಚನಾ ಕಾರ್ಯಾಗಾರ ನಡೆಸಿ ಗಜಲ್ ಸಾಹಿತ್ಯದ ವಿನ್ಯಾಸ, ಪರಂಪರೆ ಮತ್ತು ತಂತ್ರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಳವಾದ ತಿಳಿವಳಿಕೆ ನೀಡಿದರು. ಸಾಹಿತಿ ಸುಮನಾ ಆರ್. ಹೇರ್ಳೆ ಪುಸ್ತಕ ಪರಿಚಯ ನೀಡಿ, ಕೃತಿಯ ಭಾವನಾತ್ಮಕ ವ್ಯಾಪ್ತಿ ಮತ್ತು ಸಂಗತಿಯನ್ನೆತ್ತಿಹಿಡಿದರು. ಕೃತಿಕಾರರಾದ ವನಜಾ ಜೋಶಿ ತಮ್ಮ ಬರವಣಿಗೆಯ ಅನುಭವ ಹಂಚಿಕೊಂಡರು.

    ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಯದುಪತಿ ಗೌಡ ಸ್ವಾಗತ ಭಾಷಣ ಮಾಡಿದರು. ಕಾರ್ಯಕ್ರಮ ನಿರೂಪಣೆ ಅರುನಾ ಶ್ರೀನಿವಾಸ್ ಇವರಿಂದ ನಡೆಯಿತು. ಸಾಹಿತ್ಯಾಸಕ್ತರು, ಎಸ್‌.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಕಾರ್ಯಕ್ರಮ ಕೃತಜ್ಞತಾ ಸೂಚನೆಯೊಂದಿಗೆ ಸಮಾರೋಪಗೊಂಡಿತು.

    baikady Book release Literature roovari workshop
    Share. Facebook Twitter Pinterest LinkedIn Tumblr WhatsApp Email
    Previous Articleಕಾಂತಾವರ ಕನ್ನಡ ಸಂಘದ 2025ರ ಸಾಲಿನ ವಾರ್ಷಿಕ ಪ್ರಶಸ್ತಿಗಳ ಘೋಷಣೆ
    Next Article ಉದಯೋನ್ಮುಖ ಕಲಾವಿದೆ ಕುಮಾರಿ ಸ್ತುತಿ ಎಸ್. ಅಣ್ಣಿಗೇರಿ ಭರತನಾಟ್ಯಂ ರಂಗಪ್ರವೇಶ | ಡಿಸೆಂಬರ್ 21
    roovari

    Add Comment Cancel Reply


    Related Posts

    ಕೊಂಚಾಡಿ ಶಾಲೆಯಲ್ಲಿ 115ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಡಿಸೆಂಬರ್ 17

    December 16, 2025

    ಮೂಡುಬಿದಿರೆಯ ರಾಜ ಸಭಾಂಗಣದಲ್ಲಿ ‘ಎಕ್ಸಲೆಂಟ್ ಸಂಗೀತ ಸಂಜೆ’ | ಡಿಸೆಂಬರ್ 18

    December 16, 2025

    ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಇವರು ‘ವಡ್ಡರ್ಸೆ ಪ್ರಶಸ್ತಿ’ಗೆ ಆಯ್ಕೆ

    December 16, 2025

    ಆಕೃತಿ ಆಶಯ ಪ್ರಕಾಶನದ ‘ಕರಾವಳಿ ಕವನಗಳು’ ಪುಸ್ತಕ ಬಿಡುಗಡೆ ಸಮಾರಂಭ

    December 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.