Subscribe to Updates

    Get the latest creative news from FooBar about art, design and business.

    What's Hot

    ದೇರಳಕಟ್ಟೆಯ ವಿದ್ಯಾರತ್ನ ಶಾಲೆಯಲ್ಲಿ ನಾಡು ನುಡಿ ವೈಭವದ ‘ರತ್ನೋತ್ಸವ 2025’

    December 25, 2025

    ‘ಚಿತ್ರಕಾರ್’ ಕಲಾಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 31

    December 25, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಹರಿಕಥಾ ಸ್ಪರ್ಧೆ-2025’ | ಡಿಸೆಂಬರ್ 27

    December 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನೃತ್ಯೋಪಾಸನ ಕಲಾ ಅಕಾಡೆಮಿಯಿಂದ ಮಾಸ್ಟರ್ ಶಮಂತಕರೊಂದಿಗೆ ಸಂವಾದ
    Bharathanatya

    ನೃತ್ಯೋಪಾಸನ ಕಲಾ ಅಕಾಡೆಮಿಯಿಂದ ಮಾಸ್ಟರ್ ಶಮಂತಕರೊಂದಿಗೆ ಸಂವಾದ

    December 25, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಪುತ್ತೂರು : ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಇದರ ‘ನೃತ್ಯ ತರಂಗಿಣಿ’ ಸರಣಿ ಕಾರ್ಯಕ್ರಮದ ಅಂಗವಾಗಿ ಮಾಸ್ಟರ್ ಶಮಂತಕ ಜೊತೆಗಿನ ಮುಕ್ತ ಸಂವಾದ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2025ರಂದು ಬರೆಕೆರೆ ವೆಂಕಟರಮಣ ಸಭಾಭವನದಲ್ಲಿ ನಡೆಯಿತು.

    ಡ್ಯಾನ್ಸ್ ಫೆಡರೇಶನ್ ಆಫ್ ಇಂಡಿಯಾದ ಯುವಕಲಾ ಪ್ರಶಸ್ತಿ ಪುರಸ್ಕೃತ ಭರತನಾಟ್ಯ ಬಾಲ ಕಲಾವಿದ ಮಾಸ್ಟರ್ ಶಮಂತಕ ಹಾಗೂ ಅವರ ತಾಯಿ ವಿದುಷಿ ಸವಿತಾ ಹೆಗಡೆ ಇವರೊಂದಿಗೆ ಸಂವಾದ ಏರ್ಪಟ್ಟಿತು. ವಿದುಷಿ ಸವಿತಾ ಹೆಗಡೆಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ನೃತ್ಯೋಪಾಸನಾ ಕಲಾ ಅಕಾಡೆಮಿ ಅಧ್ಯಕ್ಷ ಮಂಜುನಾಥ ಪಿ.ಎಸ್. ಹಾಗೂ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಉಪಸ್ಥಿತರಿದ್ದರು.

    ಮಾಸ್ಟರ್ ಶಮಂತಕನ ನೃತ್ಯಾಭ್ಯಾಸ ಆರಂಭದ ಕುರಿತು ವಿದುಷಿ ಸವಿತಾ ಹೆಗಡೆ ತಿಳಿಸಿದರು. ಅದರಂತೆಯೇ ವಿದ್ಯಾರ್ಥಿಗಳಲ್ಲಿ ಇರಬೇಕಾದ ಆಸಕ್ತಿ, ಪ್ರತಿನಿತ್ಯದ ಅಭ್ಯಾಸ, ಹಾಗೆಯೇ ನೃತ್ಯದಲ್ಲಿ ಅಡವುಗಳ ಹಾಗೂ ವ್ಯಾಯಾಮ ಕ್ರಿಯೆಗಳ ಪ್ರಾಮುಖ್ಯತೆಯ ಕುರಿತು ವಿವರಿಸಿದರು. ಮಕ್ಕಳ ಆಸಕ್ತಿಯ ವಿಷಯದಲ್ಲಿ ಪೋಷಕರು ನೀಡಬೇಕಾದ ಪೋತ್ಸಾಹದ ಬಗೆಗೆ ವಿವರಣೆ ನೀಡಿದರು. ಅಂತೆಯೇ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರ ಪ್ರಶ್ನೆಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿವರಣೆ ನೀಡಿದರು. ಹಾಗೆಯೇ ಮಾಸ್ಟರ್ ಶಮಂತಕ ವಿದ್ಯಾರ್ಥಿಗಳಲ್ಲಿದ್ದ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದರು. ಕಲಾ ಅಕಾಡೆಮಿ ವಿದ್ಯಾರ್ಥಿನಿ ಅಂಕಿತ ಬಿ. ಪ್ರಾರ್ಥಿಸಿದರು. ಇನ್ನೋರ್ವ ವಿದ್ಯಾರ್ಥಿನಿ ವಿದುಷಿ ಶ್ರೇಯ ನಿರೂಪಿಸಿದರು.

    baikady bharatanatyam Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಜರ್ನಿ ಥಿಯೇಟರ್ ಗ್ರೂಪ್ ವತಿಯಿಂದ ‘ಸಾಹೇಬರು ಬರುತ್ತಾರೆ’ ನಾಟಕ ಪ್ರದರ್ಶನ
    Next Article ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಹರಿಕಥಾ ಸ್ಪರ್ಧೆ-2025’ | ಡಿಸೆಂಬರ್ 27
    roovari

    Add Comment Cancel Reply


    Related Posts

    ದೇರಳಕಟ್ಟೆಯ ವಿದ್ಯಾರತ್ನ ಶಾಲೆಯಲ್ಲಿ ನಾಡು ನುಡಿ ವೈಭವದ ‘ರತ್ನೋತ್ಸವ 2025’

    December 25, 2025

    ‘ಚಿತ್ರಕಾರ್’ ಕಲಾಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಡಿಸೆಂಬರ್ 31

    December 25, 2025

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಹರಿಕಥಾ ಸ್ಪರ್ಧೆ-2025’ | ಡಿಸೆಂಬರ್ 27

    December 25, 2025

    ಜರ್ನಿ ಥಿಯೇಟರ್ ಗ್ರೂಪ್ ವತಿಯಿಂದ ‘ಸಾಹೇಬರು ಬರುತ್ತಾರೆ’ ನಾಟಕ ಪ್ರದರ್ಶನ

    December 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.