Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನ ಪರಂಕಿಲದಲ್ಲಿ ‘ವ್ಯಂಗ್ಯಚಿತ್ರ ರಚನಾ ಶಿಬಿರ’ | ಮೇ 21ಕ್ಕೆ
    Visual Arts

    ಕಾಸರಗೋಡಿನ ಪರಂಕಿಲದಲ್ಲಿ ‘ವ್ಯಂಗ್ಯಚಿತ್ರ ರಚನಾ ಶಿಬಿರ’ | ಮೇ 21ಕ್ಕೆ

    May 17, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕಾಸರಗೋಡಿನ ಮಂಗಲ್ಪಾಡಿಯ ಪರಂಕಿಲದ ಭಜನ ಮಂದಿರದಲ್ಲಿ ಕಲಾಕುಂಚ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ದಿನಾಂಕ 21-05-2023ರಂದು ‘ವ್ಯಂಗ್ಯಚಿತ್ರ ರಚನಾ ಶಿಬಿರ’ ನಡೆಯಲಿದೆ.

    ಖ್ಯಾತ ವ್ಯಂಗ್ಯಚಿತ್ರಗಾರ ವಿರಾಜ್ ಅಡೂರು ನಿರ್ದೇಶನದಲ್ಲಿ ನಡೆಯುವ ಈ ಶಿಬಿರದಲ್ಲಿ 5ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದು. ಶಿಬಿರಕ್ಕೆ ಸೇರಲಿಚ್ಚಿಸುವ ಶಿಬಿರಾರ್ಥಿಗಳು ಡ್ರಾಯಿಂಗ್ ಪುಸ್ತಕ, ಪೆನ್ಸಿಲ್, ಕ್ರೆಯಾನ್ಸ್ ರಬ್ಬರ್ ಗಳನ್ನು ತಾವೇ ತರಬೇಕು. ಶಿಬಿರವು ಬೆಳಿಗ್ಗೆ 9-30ರಿಂದ ಸಂಜೆ 4-00ರವರೆಗೆ ನಡೆಯಲಿರುವುದು.

    ಈ ಶಿಬಿರವು ಸಂಪೂರ್ಣ ಉಚಿತವಾಗಿದ್ದು ಶಿಬಿರಾರ್ಥಿಗಳಿಗೆ ಉಪಾಹಾರ ಹಾಗೂ ಭೋಜನದ ವ್ಯವಸ್ಥೆಯನ್ನು ಸಂಘಟಕರೇ ಆಯೋಜಿಸಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ 8281283091 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

    ಕಾಸರಗೋಡು ಗಡಿನಾಡಿನ ಸಾಹಿತ್ಯ ಚಟುವಟಿಕೆಯಲ್ಲಿ ಸದಾ ನಿರತರಾಗಿರುವ ಶ್ರೀ ವಿರಾಜ್ ಅಡೂರು ಇವರು ಕೃಷಿ, ಶಿಕ್ಷಣ, ವ್ಯಂಗ್ಯಚಿತ್ರ, ಸಾಹಿತ್ಯ ಸಾಮಾಜಿಕ ಸಂಘಟನೆ, ಪತ್ರಿಕೋದ್ಯಮ, ಶಿಬಿರ ಸಂಯೋಜನೆ ಶಿಬಿರದ ಸಂಪನ್ಮೂಲ ವ್ಯಕ್ತಿ ಹೀಗೆ ಕ್ರಿಯಶೀಲರಾಗಿರುವ ಇವರು ಪ್ರಜಾವಾಣಿ ಪತ್ರಿಕೆಯ ವರದಿಗಾರರು. ಚುಟುಕುಟುಕು ಇವರ ಸ್ವರಚಿತ ಕವನ ವಾಚನವು ಮಂಗಳೂರು ಆಕಾಶವಾಣಿಯಿಂದ ಅನೇಕ ಬಾರಿ ಪ್ರಸಾರವಾಗಿದೆ. ‘ಕೇರಳ ರಾಜ್ಯ ಮಾಧ್ವ ಬ್ರಾಹ್ಮಣ ಕಲಾವಿದ ಪ್ರಶಸ್ತಿ’, ‘ಪಾಶುಪತ ಸಾಹಿತ್ಯ ಪ್ರಶಸ್ತಿ’, ಕಾಸರಗೋಡು ಜಿಲ್ಲಾ ‘ಚುಟುಕು ಸಾಹಿತ್ಯ ಪ್ರಶಸ್ತಿ’ ಸಹಿತ ಅನೇಕ ಪ್ರಶಸ್ತಿಗಳು ಇವರ ಸಾಹಿತ್ಯ ಕೃಷಿಗೆ ಸಂದ ಗೌರವ.

    Share. Facebook Twitter Pinterest LinkedIn Tumblr WhatsApp Email
    Previous Articleಮನಸೂರೆ ಮಾಡಿದ “ದೂತ ಘಟೋತ್ಕಜ” ನಾಟಕ
    Next Article ಮನವು ಮಾತಾಡಿತು – ಕೃತಿ ಪರಿಚಯ | ಬಿ.ಎಂ. ರೋಹಿಣಿ
    roovari

    Add Comment Cancel Reply


    Related Posts

    ದೃಶ್ಯಕಲೆ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

    April 29, 2025

    ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ‘ಸಮರ್ಪಣಂ ಕಲೋತ್ಸವ 2025’ | ಏಪ್ರಿಲ್ 03

    March 27, 2025

    ಕಾಸರಗೋಡು ಕನ್ನಡ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆಗೆ ಆಹ್ವಾನ

    February 10, 2025

    30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಅದ್ಧೂರಿಯ ಚಾಲನೆ, ಮೇಳೈಸಿದ ವೈಭವ

    December 11, 2024

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.