ಮಧೂರು : ಉಳಿಯ ದನ್ವಂತರಿ ಯಕ್ಷಗಾನ ಕಲಾಸಂಘ ಮಧೂರು ಇದರ ವಾರದ ಕೂಟ ಉಳಿಯ ಮನೆಯ ಸುಧಾ ಮಂದಿರದಲ್ಲಿ ದಿನಾಂಕ 11 ಜನವರಿ 2025 ಭಾನುವಾರದಂದು ‘ಭೀಷ್ಮ ವಿಜಯ’ ಎಂಬ ಪ್ರಸಂಗದ ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ತಲ್ಪನಾಜೆ ವೆಂಕಟ್ರಮಣ ಭಟ್ ಮತ್ತು ಶ್ರೀ ರವಿಶಂಕರ ಮಧೂರು ಹಾಗೂ ಮದ್ದಳೆಯಲ್ಲಿ ಶ್ರೀ ಉದಯ ಕಂಬಾರು ಇವರುಗಳು ಸಹಕರಿಸಿದರು. ಮುಮ್ಮೇಳದಲ್ಲಿ ಭೀಷ್ಮ 1 : ಬ್ರಹ್ಮಶ್ರೀ ಉಳಿಯತಾಯ ವಿಷ್ಣು ಆಸ್ರ, ಭೀಷ್ಮ 2 : ಶ್ರೀ ಬಹಾಬಲ ನಾಯ್ಕ್, ಅಂಬೆ : ಶ್ರೀ ನರಸಿಂಹ ಬಲ್ಲಾಳ್, ಸಾಲ್ವ ರಾಜ : ಶ್ರೀ ಮಯೂರ ಆಸ್ರ ಉಳಿಯ, ಪರಶುರಾಮ : ಶ್ರೀಮತಿ ರಕ್ಷಾ ರಾಮ್ ಕಿಶೋರ ಆಸ್ರ, ವಿಪ್ರರು : ಶ್ರೀಮತಿ ಧನ್ಯಮುರಳಿ ಕೃಷ್ಣ ಆಸ್ರ ಇವರುಗಳು ಸಹಕರಿಸಿದರು.

