ಬಾಗಲಕೋಟೆ : ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಪ್ರತಿವರ್ಷದಂತೆ ನೀಡುವ ‘ಗೌರವ ಪ್ರಶಸ್ತಿ’ಗೆ ಐವರನ್ನು ಹಾಗೂ ‘ವಾರ್ಷಿಕ ಪ್ರಶಸ್ತಿ’ಗೆ ಹತ್ತು ಜನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಕೆ.ಆರ್ು. ದುರ್ಗಾದಾಸ್ ತಿಳಿಸಿದ್ದಾರೆ.
ಕರ್ನಾಟಕ ಬಯಲಾಟ ಅಕಾಡೆಮಿಯಿಂದ ಕೊಡಮಾಡುವ ‘ಗೌರವ ಪ್ರಶಸ್ತಿ’ಗೆ ಬಳ್ಳಾರಿ ಜಿಲ್ಲೆಯ ಕೆ. ಈರಣ್ಣ (ಬಯಲಾಟ), ಕೊಪ್ಪಳ ಜಿಲ್ಲೆಯ ಹನಮಂತಪ್ಪ ಪೂಜಾರ (ಸಣ್ಣಾಟ), ಬೆಳಗಾವಿಯ ಕಾಡಪ್ಪ ಯಲ್ಲಪ್ಪ ಉಪ್ಪಾರ (ಸಣ್ಣಾಟ), ಹಾಸನ ಜಿಲ್ಲೆಯ ಆರ್.ಬಿ. ಪಟ್ಟೇಗೌಡ (ಮೂಡಲಪಾಯ), ಬೆಳಗಾವಿಯ ಸುಶೀಲಮ್ಮ ಹೆಗಡೆ (ದೊಡ್ಡಾಟ)ದಲ್ಲಿ ಭಾಜನರಾಗಿದ್ದಾರೆ. ‘ವಾರ್ಷಿಕ ಪ್ರಶಸ್ತಿ’ಗೆ ಮೈಸೂರು ಜಿಲ್ಲೆಯ ಎಚ್.ಸಿ. ಶಿವಬುದ್ದಿ (ಸೂತ್ರದ ಗೊಂಬೆಯಾಟ), ಮಂಡ್ಯ ಜಿಲ್ಲೆಯ ಜಯಪ್ರಕಾಶಗೌಡ (ಮೂಡಲಪಾಯ), ವಿಜಯನಗರ ಜಿಲ್ಲೆಯ ಹೊಳೆಯಾಚೆ ಕೊಟ್ರಪ್ಪ (ಬಯಲಾಟ), ಬಾಗಲಕೋಟೆ ಜಿಲ್ಲೆಯ ಶಿವಾಜಿ ಜಾಧವ (ಬಯಲಾಟ), ಚಿತ್ರದುರ್ಗ ಜಿಲ್ಲೆಯ ನಂದಗೋಪಾಲ (ಬಯಲಾಟ), ಧಾರವಾಡ ಜಿಲ್ಲೆಯ ಮಲ್ಲಪ್ಪ ಕರಿಮಲ್ಲಣ್ಣವರ (ದೊಡ್ಡಾಟ), ಬಳ್ಳಾರಿ ಜಿಲ್ಲೆಯ ಬಂಡ್ರಿ ಲಿಂಗಪ್ಪ (ಬಯಲಾಟ), ವಿಜಯನಗರ ಜಿಲ್ಲೆಯ ಚೂಟಿ ಚಿದಾನಂದ (ಬಯಲಾಟ). ದಾವಣಗೆರೆ ಜಿಲ್ಲೆಯ ಓದೋವೀರಪ್ಪ (ಬಯಲಾಟ), ವಿಜಯಪುರ ಜಿಲ್ಲೆಯ ಮಳೆಪ್ಪ ಬಸಪ್ಪ ಬಡಿಗೇರ (ಬಯಲಾಟ) ಆಯ್ಕೆಯಾಗಿದ್ದಾರೆ.
2025ನೇ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿಯ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವು ಫೆಬ್ರುವರಿ ಮೊದಲ ವಾರದಲ್ಲಿ ಧಾರವಾಡದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. 2025ನೇ ಸಾಲಿನ ಬಯಲಾಟ ಗೌರವ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಬಯಲಾಟ ಕಲಾಪ್ರಕಾರಗಳಿಗೆ ನೀಡಿರುವ ಅಮೂಲ್ಯವಾದ ಹಾಗೂ ಅನನ್ಯವಾದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗೌರವ ಪ್ರಶಸ್ತಿ ಪುರಸ್ಥತರಿಗೆ ತಲಾ ರೂ.ಐವತ್ತು ಸಾವಿರ ನಗದು, ಪ್ರಶಸ್ತಿ ಫಲಕ, ಶಾಲು ಹಾರ ಮತ್ತು ಪ್ರಶಸ್ತಿ ಪತ್ರ ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.ಇಪ್ಪತ್ತೈದು ಸಾವಿರ ನಗದು, ಪ್ರಶಸ್ತಿ ಫಲಕ, ಶಾಲು, ಹಾರ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
