Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ದೇವಳದ ರಾಜಾಂಗಣದಲ್ಲಿ ತುಳು ಬರಹಗಳ ಗುಚ್ಚ ‘ಕಡ್ಲೆ ಬಜಿಲ್’ ಲೋಕಾರ್ಪಣೆ

    January 22, 2026

    ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ ‘ದ ದಾಪರ್ ಎಕ್ಸ್ಪೋ’

    January 22, 2026

    ‘ಕಥಾಬಿಂದು ಸಾಹಿತ್ಯ ಸಂಭ್ರಮ’ದಲ್ಲಿ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ

    January 22, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಿನ್ನಿಗೋಳಿಯಲ್ಲಿ ‘ಆಜ್ ಆಮಿ ಕೊಂಕ್ಣಿ ಉಲೊವ್ಯಾಂ’ ಕಾರ್ಯಕ್ರಮ
    Dance

    ಕಿನ್ನಿಗೋಳಿಯಲ್ಲಿ ‘ಆಜ್ ಆಮಿ ಕೊಂಕ್ಣಿ ಉಲೊವ್ಯಾಂ’ ಕಾರ್ಯಕ್ರಮ

    January 19, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಿನ್ನಿಗೋಳಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಇಯಾನ್ ಕೇರ್ಸ್ ಫೌಂಡೇಶನ್ ಇವರ ಸಹಯೋಗದೊಂದಿಗೆ ದಿನಾಂಕ 15 ಜನವರಿ 2026ರಂದು ಕಿನ್ನಿಗೋಳಿಯಲ್ಲಿ ‘ಆಜ್ ಆಮಿ ಕೊಂಕ್ಣಿ ಉಲೊವ್ಯಾಂ’ ಎಂಬ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಹಮ್ಮಿಕೊಂಡಿತ್ತು.

    ಮೊದಲಿಗೆ ಮೂರುಕಾವೇರಿ ಜಂಕ್ಷನ್ನಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆರಂಭವಾದ ಭವ್ಯ ಮೆರವಣಿಗೆಯು ಹೆಚ್ಚಿನ ಮೆರುಗನ್ನು ನೀಡಿತು. ಕಿನ್ನಿಗೋಳಿ ಪರಿಸರದ ಹಿರಿಯರಾದ ಶ್ರೀಮತಿ ಕಾರ್ಮಿಣ್ ರೊಡ್ರಿಗಸ್ಯವರು ಅಕ್ಕಿ ಮುಡಿಯಿಂದ ಅಕ್ಕಿಯನ್ನು ಹೊರ ತೆಗೆಯುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ಇಯಾನ್ ಕೇರ್ಸ್ ಫೌಂಡೇಶನ್ನ ಸಂಸ್ಥಾಪಕರಾದ ಶ್ರೀ ಹೇಮಾಚಾರ್ಯರವರು ವೇದಿಕೆಯಲ್ಲಿದ್ದರು.

    ಮಕ್ಕಳಿಗೆ ಪ್ರಕೃತಿಯ ಒಡನಾಟ ಗಳಿಸುವುದಕ್ಕಾಗಿ ಕಾಡಿನ ಸುತ್ತಾಟವನ್ನು ಹಮ್ಮಿಕೊಂಡು ವಿಧ ವಿಧದ ಮರ-ಗಿಡಗಳು, ಹೂವು- ಬಳ್ಳಿಗಳು, ಔಷದೀಯ ಸಸ್ಯಗಳು, ಪ್ರಾಣಿ- ಪಕ್ಷಿಗಳು, ಕ್ರಿಮಿ-ಕೀಟಗಳು ಹಾಗೂ ಮನುಷ್ಯ ಸಂಬಂಧಗಳ ಬಗ್ಗೆ ಕೊಂಕಣಿ ಹೆಸರುಗಳನ್ನು ಮನವರಿಕೆ ಮಾಡಲಾಯಿತು. ತದನಂತರ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಂಡು ಬಹುಮಾನಗಳನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಕೊಂಕಣಿ ಕ್ರೈಸ್ತ, ಜಿ.ಎಸ್.ಬಿ., ಸಿದ್ಧಿ ಹಾಗೂ ಕುಡುಬಿ ಸಮುದಾಯದ ಸರಿಸುಮಾರು 200ಕ್ಕೂ ಮಿಗಿಲಾಗಿ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿದ್ಧಿ ಪಂಗಡದ ಧಮಾಮ್ ನೃತ್ಯ, ಕುಡುಬಿ ಪಂಗಡದ ಕೋಲಾಟ, ರೈಸಿಂಗ್ ಸ್ಟಾರ್ಸ್ ಕಿರೆಂ ಇವರ ಬ್ರಾಸ್ ಬ್ಯಾಂಡ್ ಹಾಗೂ ಬಾಲಕಿ ಆಲನಿ ಡಿಸೋಜಾರವರ ಹಾಡುಗಳು ಜನರನ್ನು ರಂಜಿಸಿದವು.

    ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಇವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ದಾಯ್ಜಿ ವರ್ಲ್ಡ್ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಗೌರವ ಅತಿಥಿಗಳಾಗಿ ಕಿರೆಂ ಚರ್ಚಿನ ಧರ್ಮಗುರುಗಳಾದ ವಂ. ಸ್ವಾ. ಒಸ್ವಾಲ್ಡ್ ಮೊಂತೇರೊ, ಕಿನ್ನಿಗೋಳಿ ಚರ್ಚಿನ ಧರ್ಮಗುರು ವಂ. ಸ್ವಾ. ಜೋಕಿಂ ಫೆರ್ನಾಂಡಿಸ್, ಶ್ರೀ ರಾಮ ಮಂದಿರ ಕಿನ್ನಿಗೋಳಿ ಇದರ ಅಧ್ಯಕ್ಷರಾದ ಶ್ರೀ ರಾಜೇಶ್ ನಾಯಕ್, ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ (ರಿ). ಇದರ ಕಾರ್ಯದರ್ಶಿ ಶ್ರೀ ಶೇಖರ ಗೌಡ, ಇಯಾನ್ ಕೇರ್ಸ್ ಫೌಂಡೇಶನ್ನ ಸಂಸ್ಥಾಪಕರಾದ ಶ್ರೀ ಹೇಮಾಚಾರ್ಯರವರು ವೇದಿಕೆಯಲ್ಲಿದ್ದರು. ಕುಮಾರಿ ಮೆಲ್ಡ್ರಿಡಾ ರೊಡ್ರಿಗಸ್ ರವರು ಕಾರ್ಯಕ್ರಮ ನಿರೂಪಿಸಿ, ಅಕಾಡೆಮಿ ಸದಸ್ಯರಾದ ದಯಾನಂದ್ ಮಡ್ಕೇಕರ್, ಸುನೀಲ್ ಸಿದ್ಧಿ, ರೊನಾಲ್ಡ್ ಕ್ರಾಸ್ತಾ ಹಾಗೂ ನವೀನ್ ಲೋಬೊ ಉಪಸ್ಥಿತರಿದ್ದರು.

    baikady dance exhibition felicitation konkani Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಕೊಡಗು ಜಿಲ್ಲಾ ಕ.ಸಾ.ಪ.ದ ದತ್ತಿನಿಧಿಯ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟ
    Next Article ಕರ್ನಾಟಕ ಲೇಖಕಿಯರ ಸಂಘದಿಂದ ವಚನಕಾರ್ತಿಯರ ಕುರಿತಾದ ಕಮ್ಮಟ
    roovari

    Add Comment Cancel Reply


    Related Posts

    ಕದ್ರಿ ದೇವಳದ ರಾಜಾಂಗಣದಲ್ಲಿ ತುಳು ಬರಹಗಳ ಗುಚ್ಚ ‘ಕಡ್ಲೆ ಬಜಿಲ್’ ಲೋಕಾರ್ಪಣೆ

    January 22, 2026

    ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಚಿತ್ರಕಲಾ ಪ್ರದರ್ಶನ ‘ದ ದಾಪರ್ ಎಕ್ಸ್ಪೋ’

    January 22, 2026

    ‘ಕಥಾಬಿಂದು ಸಾಹಿತ್ಯ ಸಂಭ್ರಮ’ದಲ್ಲಿ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ

    January 22, 2026

    ಪೂಚಂತೆ ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ – 2026

    January 22, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.