ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ವತಿಯಿಂದ ಪಾಕ್ಷಿಕ ತಾಳಮದ್ದಳೆ ‘ಶರಸೇತು ಬಂಧ’ ಪ್ರಸಂಗದೊಂದಿಗೆ ದಿನಾಂಕ 30 ಜನವರಿ 2026ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ನಡೆಯಿತು.
ಹಿಮ್ಮೇಳದಲ್ಲಿ ಆನಂದ ಸವಣೂರು, ಅಚ್ಯುತ ಪಾಂಗಣ್ಣಾಯ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ (ಹನೂಮಂತ), ಭಾಸ್ಕರ ಬಾರ್ಯ ಮತ್ತು ವೇಣುಗೋಪಾಲ ಭಟ್ ಮಾಂಬಾಡಿ (ಅರ್ಜುನ), ಪ್ರೇಮಲತಾ ರಾವ್ (ಶ್ರೀ ರಾಮ), ಹರಿಣಾಕ್ಷಿ ಜೆ. ಶೆಟ್ಟಿ (ವೃದ್ಧ ವಿಪ್ರ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಹರೀಶ್ ಪುಣಚ ವಂದಿಸಿದರು. ಶ್ರೀಮತಿ ಪ್ರೇಮಲತಾ ರಾವ್ ಮತ್ತು ಶ್ರೀ ರಂಗನಾಥ ರಾವ್ ಪ್ರಾಯೋಜಿಸಿದರು.
