ಮಿತ್ತಬೈಲು : ಶ್ರೀಮದ್ ಭಾಗವತ ಪುರಾಣದ ಪುರಾಣದ ಪ್ರವಚನಕಾರರು ವಿದ್ವಾನ್ ಬ್ರಹ್ಮಾವರ ರಾಮಕೃಷ್ಣ ಭಟ್ ಇವರಿಂದ ‘ಶ್ರೀಮದ್ ಭಾಗವತ ಪುರಾಣ’ ಪ್ರವಚನ ಕಾರ್ಯಕ್ರಮವನ್ನು ದಿನಾಂಕ 13ರಿಂದ 19 ಫೆಬ್ರವರಿ 2026ರವರೆಗೆ ಪ್ರತಿದಿನ ಸಂಜೆ 6-00 ಗಂಟೆಯಿಂದ 7-30ರ ತನಕ ಮಿತ್ತಬೈಲು ಶ್ರೀ ರಾಮ ಭಜನಾ ಮಂದಿರದಲ್ಲಿ ಆಯೋಜಿಸಲಾಗಿದೆ.
ದಿನಾಂಕ 13 ಫೆಬ್ರವರಿ 2026ರಂದು ಸಂಜೆ 4-30 ಗಂಟೆಗೆ ಪೊನ್ನೆಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ಮಹಿಳಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, 7-30 ಗಂಟೆಗೆ ಮಂಗಳೂರಿನ ಕುಮಾರಿ ಶ್ವೇತ ಕಾಮತ್ ಇವರಿಂದ ‘ಭಜನ್ ಸಂಧ್ಯಾ’ ನಡೆಯಲಿದೆ.
ದಿನಾಂಕ 14 ಫೆಬ್ರವರಿ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಶ್ರೀ ವೀರ ವೆಂಕಟೇಶ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 9-00 ಗಂಟೆಗೆ ಅಮೃತ ಮಿತ್ರ ಹವ್ಯಾಸಿ ಮಹಿಳೆಯರ ಬಳಗ ಸದಸ್ಯರು ಹಾಗೂ ಹವ್ಯಾಸಿ ಕಲಾವಿದರ ಕೂಡುವಿಕೆಯಿಂದ ‘ಶ್ರೀ ಕೃಷ್ಣಲೀಲೆ ಕಂಸವಧೆ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 15 ಫೆಬ್ರವರಿ 2026ರಂದು ಸಂಜೆ 4-30 ಗಂಟೆಗೆ ಸಚ್ಚೇರಿಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, 7-30 ಗಂಟೆಗೆ ಶ್ರೀಮತಿ ರಂಜನಾ ಆರ್. ಪ್ರಭು ಇವರಿಂದ ‘ಭಜನ್ ಸಂಧ್ಯಾ’ ನಡೆಯಲಿದೆ.
ದಿನಾಂಕ 16 ಫೆಬ್ರವರಿ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಕುಮಾರಿ ಗ್ರೀಷ್ಮಾ ಕಿಣಿ ಇವರಿಂದ ಭಜನಾ ಕಾರ್ಯಕ್ರಮ, 7-30 ಗಂಟೆಗೆ ಆಕಾಶವಾಣಿ ‘ಎ’ ಶ್ರೇಣಿ ಕಲಾವಿದೆ ಶ್ರೀಮತಿ ಮಂಜುಳಾ ಜಿ. ರಾವ್ ಇವರಿಂದ ಭಕ್ತ ಪ್ರಹ್ಲಾದ’ ಹರಿಕಥಾ ಕೀರ್ತನೆ,
ದಿನಾಂಕ 17 ಫೆಬ್ರವರಿ 2026ರಂದು ಸಂಜೆ 4-30 ಗಂಟೆಗೆ ಮಿತ್ತಬೈಲು ಶ್ರೀರಾಮ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, 7-30 ಗಂಟೆಗೆ ಮಂಗಳೂರಿನ ಸನಾತನ ನಾಟ್ಯಾಲಯದ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಬಳಗದಿಂದ ‘ಶ್ರೀ ಕೃಷ್ಣ ಲೀಲಾಮೃತ’ ನೃತ್ಯ ರೂಪಕ
ದಿನಾಂಕ 18 ಫೆಬ್ರವರಿ 2026ರಂದು ಸಂಜೆ 4-30 ಗಂಟೆಗೆ ಮೂಡುಬಿದಿರೆ ಶ್ರೀ ವೆಂಕಟರಮಣ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, 8-00 ಗಂಟೆಗೆ ಕಾರ್ಕಳದ ವಿದ್ವಾನ್ ಯೋಗೀಶ್ ಕಿಣಿ ಇವರಿಂದ ‘ಭಜನ್ ಸಂಧ್ಯಾ’ ನಡೆಯಲಿದೆ.
ದಿನಾಂಕ 19 ಫೆಬ್ರವರಿ 2026ರಂದು ಸಂಜೆ 4-30 ಗಂಟೆಗೆ ಕಾರ್ಕಳದ ಶ್ರೀ ವೆಂಕಟರಮಣ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, 8-00 ಗಂಟೆಗೆ ಮಂಗಳೂರಿನ ದಯಾಕರ್ ಭಟ್ ಮತ್ತು ಬಳಗದವರಿಂದ ‘ಅಭಂಗ ವಾಣಿ’ ಪ್ರಸ್ತುತಗೊಳ್ಳಲಿದೆ.

