ತಮಿಳುನಾಡು : ಭರತಾಂಜಲಿ (ರಿ.) ಕೊಟ್ಟಾರ ಇದರ ವತಿಯಿಂದ ವಿದುಷಿ ಪ್ರತಿಮಾ ಶ್ರೀಧರ್ ಮತ್ತು ವಿದುಷಿ ಪ್ರಕ್ಷಿಲ ಜೈನ್ ಇವರ ನಿರ್ದೇಶನದಲ್ಲಿ ಗುರು ಶ್ರೀಧರ ಹೊಳ್ಳ ಸಾರಥ್ಯದಲ್ಲಿ ಶಿವರಾತ್ರಿ ಮಹೋತ್ಸವ ಪ್ರಯುಕ್ತ ದಿನಾಂಕ 14 ಮತ್ತು 15 ಫೆಬ್ರುವರಿ 2026ರಂದು ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಾದ ಚಿದಂಬರ, ಶ್ರೀ ಪಿರಿವಾಯಿ ಮರುಂಡಿಶ್ವರರ್ ದೇವಸ್ಥಾನ, ನಾಗಪಟ್ಟಿನಂ ನಿಲಾಯದಾಕ್ಷಿ ಅಮ್ಮೈ ದೇವಸ್ಥಾನ, ಗೋರಕ್ ಸಿದ್ದರ್ ದೇವಸ್ಥಾನ, ತಿರುಮಯಿಜ್ಞಾನಂ ಬ್ರಹ್ಮಪುರಿಸ್ವರಂ ದೇವಸ್ಥಾನ ಮೊದಲಾದ ಕಡೆಗಳಲ್ಲಿ ಆಯೋಜಿಸಿದ ನಾಟ್ಯಾಂಜಲಿ ಉತ್ಸವದಲ್ಲಿ ಸಂಸ್ಥೆಯ ವಿದುಷಿ ಮಾನಸ ಹರೀಶ್, ವಿದುಷಿ ಅದಿತಿ, ವಿದುಷಿ ವಂದನಾ ರಾಣಿ, ಚಿನ್ಮಯಿ, ವರ್ಷಾ, ದ್ರುವಿ, ರಮ್ಯಶ್ರೀ, ಅನನ್ಯ ಕೆ ಭಟ್, ಹರಿಣಿ ವಿ ಮೊದಲಾದವರು ನೃತ್ಯ ಕಾರ್ಯಕ್ರಮ ನೀಡಿದರು.

