Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗಸ್ಪಂದನದ ಸಾಂಸ್ಕೃತಿಕ ರಂಗದಿಬ್ಬಣದಲ್ಲಿ ನೃತ್ಯ, ಸಂಗೀತ ಸಿಂಚನ ಕಾರ್ಯಕ್ರಮ
    Bharathanatya

    ರಂಗಸ್ಪಂದನದ ಸಾಂಸ್ಕೃತಿಕ ರಂಗದಿಬ್ಬಣದಲ್ಲಿ ನೃತ್ಯ, ಸಂಗೀತ ಸಿಂಚನ ಕಾರ್ಯಕ್ರಮ

    June 26, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ರಂಗಸ್ಪಂದನ ಮಂಗಳೂರು ಮತ್ತು ಬೈಕಾಡಿ ಪ್ರತಿಷ್ಠಾನ ವತಿಯಿಂದ ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಸಭಾಂಗಣದಲ್ಲಿ ಸಾಂಸ್ಕೃತಿಕ ರಂಗ ದಿಬ್ಬಣ -3 ನೃತ್ಯ, ಸಂಗೀತ ಸಿಂಚನ ಕಾರ್ಯಕ್ರಮ ದಿನಾಂಕ 18-06-2023ರಂದು ಜರಗಿತು.

    ಸಂಗೀತ ಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ್ ಶ್ರೀ ಲಕ್ಷಣ ಅಮೀನ್‌ ಮಾತನಾಡಿ “ಇಂದಿನ ಯುವಜನತೆಗೆ ಸಾಂಸ್ಕೃತಿಕ ಕಲೆಯನ್ನು ಪಸರಿಸಲು ಸಾಂಸ್ಕೃತಿ ರಂಗ ದಿಬ್ಬಣ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಸಂಸ್ಥೆಗಳ ಆಶ್ರಯದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮಗಳು ಮೂಡಿಬರಲಿ” ಎಂದು ಹೇಳಿದರು.

    ಮನಪಾ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ಯ ಮಾತನಾಡಿ, “ವಿದ್ಯಾರ್ಥಿಗಳು ಶಿಕ್ಷಣದ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬೇಕು” ಎಂದರು.

    ಧಾರ್ಮಿಕ, ಸಾಂಸ್ಕೃತಿಕ ಚಿಂತಕರೂ, ಹಿರಿಯರೂ ಆದ ಶ್ರೀ ಮಾಧವ ಸುವರ್ಣ ಮಾತನಾಡುತ್ತಾ “ಜೀವನದ ಮೌಲ್ಯಗಳನ್ನು ತಲೆತಲಾಂತರಗಳಿಂದ ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪ ಇತ್ಯಾದಿ ಪ್ರಕಾರಗಳು ಜನಾಂಗ-ಜನಾಂಗ ನಿರ್ಮಾಣ ಮಾಡಿಕೊಳ್ಳಲು ನಮ್ಮ ಹಿರಿಯರು ಕಂಡುಕೊಂಡ ಮಾರ್ಗ. ಇಂಥಹಾ ಸುಸಂಸ್ಕೃತ ಮತ್ತು ಶ್ರೇಷ್ಠವಾದ ಪದ್ಧತಿಯನ್ನು ಅಳವಡಿಸಿದ ಕಾರಣ, ಅಂದಿನಿಂದ ಇಂದಿನವರೆಗೂ ಆ ಮೌಲ್ಯಗಳು ಉಳಿದುಕೊಂಡಿವೆ. ಪಂಚಭೂತಗಳನ್ನು ಪೂಜಿಸಿಕೊಂಡು ಬಂದ ನಮ್ಮ ಹಿರಿಯರು ಬಹಳ ಮುಗ್ಧರು ಹಾಗೂ ನಿಸ್ವಾರ್ಥಿಗಳಾಗಿದ್ದರು. ಆದ್ದರಿಂದಲೇ ನಮ್ಮ ಸಂಸ್ಕೃತಿ ಗಟ್ಟಿಯಾಗಿದೆ” ಎಂದು ಹೇಳಿದರು.

    ಬೈಕಾಡಿ ಪ್ರತಿಷ್ಠಾನದ ವತಿಯಿಂದ ನೀಡಿದ ಕಾರ್ಯಕ್ರಮದಲ್ಲಿ ರತ್ನಕಲಾಲಯದ ನಿರ್ದೇಶಕಿ ಅಕ್ಷತಾ ಬೈಕಾಡಿಯವರ ಮಾರ್ಗದರ್ಶನದಲ್ಲಿ ಪುಟಾಣಿಗಳು ನೀಡಿದ ಭಾರತಾಂಬೆ ಹಾಗೂ ಜನಪದ ನೃತ್ಯ ಹಾಗೂ ಸ್ವತಃ ಅಕ್ಷತಾ ಬೈಕಾಡಿಯವರೇ ಪ್ರಸ್ತುತ ಪಡಿಸಿದ ಶಾಸ್ತ್ರೀಯ ನೃತ್ಯ, ಟೀಂ ಉಪಾಸನದ ನಿರ್ದೇಶಕಿ ಪ್ರತೀಕ್ಷಾ ಪ್ರಭು ಇವರ ತಂಡ ನೀಡಿದ ಜನಪದ ನೃತ್ಯ, ಮಧುರ ಕಂಠದ ಕುಮಾರಿ ನಿರೀಕ್ಷಾ ರಾಜೇಶ್ವರಿ ಪ್ರಸ್ತುತ ಪಡಿಸಿದ ಭಕ್ತಿ ಭಾವಗೀತೆಗಳು ಹಾಗೂ ‘ಕಲಾಶ್ರೀ ಪುರಸ್ಕಾರ’ ಪಡೆದ ಶ್ರೀ ಗುರುಪ್ರಸಾದ್ ನೀಡಿದ ಬಬ್ಬಲ್ ಶೋ ಇವೆಲ್ಲವೂ ಅಮೋಘವಾಗಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆಯಿತು.

    ಕೆನರಾ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಮಾಧವ ಸುವರ್ಣ, ಬೈಕಾಡಿ ಪ್ರತಿಷ್ಠಾನದ ಅಧ್ಯಕ್ಷೆ ರತ್ನಾವತಿ ಜೆ. ಬೈಕಾಡಿ ಉಪಸ್ಥಿತರಿದ್ದರು. ರಂಗಸ್ಪಂದನ ಮಂಗಳೂರು ಸಂಚಾಲಕ ವಿ.ಜಿ. ಪಾಲ್ ಸ್ವಾಗತಿಸಿದರು. ರೇಖಾ ಬಿ. ಬೈಕಾಡಿ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಡಾ. ಅಜಕ್ಕಳ ಗಿರೀಶ ಭಟ್ ಮತ್ತು ಎಂ.ಆರ್. ದತ್ತಾತ್ರಿ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಘೋಷಣೆ
    Next Article ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿʼಗೆ ಶ್ರೀಮತಿಯರಾದ ಜಿ.ಎಸ್. ಸುಶೀಲಾದೇವಿ ಆರ್‌. ರಾವ್‌ ಹಾಗೂ ಶ್ರೀಮತಿ ಚಂಪಾವತಿ ಶಿವಣ್ಣ ಆಯ್ಕೆ
    roovari

    Add Comment Cancel Reply


    Related Posts

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಕೊಡಗು ಕಲಾವಿದರ ಸಂಘದಿಂದ ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜರಿಗೆ ಸನ್ಮಾನ

    May 24, 2025

    ಪುತ್ತೂರಿನ ‘ಬಹುವಚನಂ’ ಸಭಾಂಗಣದಲ್ಲಿ ಅದ್ಭುತವಾಗಿ ಸಂಪನ್ನಗೊಂಡ ಸಂಗೀತ ಕಛೇರಿ

    May 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.