Subscribe to Updates

    Get the latest creative news from FooBar about art, design and business.

    What's Hot

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    ಪುತ್ತೂರಿನ ‘ಬಹುವಚನಂ’ ಸಭಾಂಗಣದಲ್ಲಿ ಅದ್ಭುತವಾಗಿ ಸಂಪನ್ನಗೊಂಡ ಸಂಗೀತ ಕಛೇರಿ

    May 23, 2025

    ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 24

    May 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ರಂಗಭೂಮಿ ಮತ್ತು ಮುದ್ರೆ’ – ವಿಶೇಷ ಉಪನ್ಯಾಸ ಕಾರ್ಯಕ್ರಮ
    Drama

    ‘ರಂಗಭೂಮಿ ಮತ್ತು ಮುದ್ರೆ’ – ವಿಶೇಷ ಉಪನ್ಯಾಸ ಕಾರ್ಯಕ್ರಮ

    June 30, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ರಥಬೀದಿ ಗೆಳೆಯರು ಉಡುಪಿ ಇದರ ರಥಬೀದಿ ಮಾತುಕತೆ ಸರಣಿ ಕಾರ್ಯಕ್ರಮದ ಅಂಗವಾಗಿ ‘ರಂಗಭೂಮಿ ಮತ್ತು ಮುದ್ರೆ’ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಕವಿ, ನಾಟಕಗಾರ, ರಂಗನಿರ್ದೇಶಕ, ರಂಗವಿನ್ಯಾಸಕ ಮತ್ತು ರಂಗಾಭಿನಯ ವಿನ್ಯಾಸ ಹಾಗೂ ನಿರ್ದೇಶನದ ಅಧ್ಯಾಪಕರಾದ ರಘುನಂದನ ಇವರಿಂದ ದಿನಾಂಕ : 01-07-2023ರ ಸಂಜೆ 4.30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ.

    ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾದ ಉದ್ಯಾವರ ನಾಗೇಶ್ ಕುಮಾರ್ ಹಾಗೂ ಕಾರ್ಯದರ್ಶಿಯಾದ ಸುಬ್ರಹ್ಮಣ್ಯ ಜೋಶಿಯವರು ಆತ್ಮೀಯ ಸ್ವಾಗತ ಬಯಸಿದ್ದಾರೆ.

    ಉಪನ್ಯಾಸಕರ ಬಗ್ಗೆ :
    ಕವಿ, ನಾಟಕಕಾರ, ರಂಗನಿರ್ದೇಶಕ, ರಂಗವಿನ್ಯಾಸಕ ಮತ್ತು ರಂಗಾಭಿನಯ ವಿನ್ಯಾಸ ಹಾಗೂ ನಿರ್ದೇಶನದ ಅಧ್ಯಾಪಕ
    ಶ್ರೀ ರಘುನಂದನ ಇವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಪದವಿ ಮುಗಿಸಿ, ಹೊಸದೆಹಲಿಯ ರಾಷ್ಟ್ರೀಯ ನಾಟ್ಯವಿದ್ಯಾಲಯದಲ್ಲಿ ಡಿಪ್ಲೊಮಾ ಮತ್ತು ಅಲ್ಲಿಯೇ ರಂಗನಿರ್ದೇಶನದ ವಿಶೇಷ ಅಧ್ಯಯನ ನಡೆಸಿದ್ದಾರೆ. ಅನೇಕ ಪ್ರತಿಷ್ಟಿತ ರಂಗ ಶಿಕ್ಷಣ ಕೇಂದ್ರ, ನಾಟಕ ಶಾಲೆ, ಸಂಸ್ಕೃತಿ ಶಾಲೆ, ನಾಟ್ಯ ವಿದ್ಯಾಲಯ, ನಾಟ್ಯ ಅಕಾಡಮಿಗಳಲ್ಲಿ ಅತಿಥಿ ಪ್ರಾಧ್ಯಾಪಕರಾಗಿ, ರಂಗನಿರ್ದೇಶಕರಾಗಿ, ಅಭಿನಯ ಪ್ರಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇವರಿಗಿದೆ.

    ರಂಗವಿನ್ಯಾಸ ಮತ್ತು ನಿರ್ದೇಶನ: ಭಾಸ, ಶೂದ್ರಕ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪಿ. ಲಂಕೇಶ್, ಶ್ರೀರಂಗ, ಜಿ.ಬಿ. ಜೋಷಿ, ಶಿವರಾಮ ಕಾರಂತ, ಪಂಪ ಮಹಾಕವಿ ಮತ್ತು ಜಿ.ಪಿ. ರಾಜರತ್ನಂ ಹೀಗೆ ಹಲವಾರು ಪ್ರಸಿದ್ಧ ಕವಿಗಳು ಮತ್ತು ಸಾಹಿತಿಗಳ ಬರಹಗಳು, ನಾಟಕಗಳು ಮತ್ತು ತಾನೇ ಬರೆದ ಪೂರ್ಣಪ್ರಮಾಣದ ನಾಟಕ ಮತ್ತು ಬೀದಿ ನಾಟಕಗಳಿಗೂ ರಂಗ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಇವರು ಬರೆದಿರುವ ನಾಟಕ ಕೃತಿಗಳು – ಎತ್ತ ಹಾರಿದೆ ಹಂಸ…, ಸತ್ತವರ ಕಥೆಯಲ್ಲ ಹಾಗೂ ಶಿವಬಿಕ್ಖು.

    ಅನುವಾದ ಮತ್ತು ರೂಪಾಂತರ ಕಾರ್ಯದಲ್ಲೂ ಕೃಷಿ ಮಾಡಿದ ಇವರು ದೀಪಾವಳಿ ವಿಶೇಷ ಸಂಚಿಕೆ ಹಾಗೂ ಪ್ರಸಿದ್ಧ ವಾರ್ತಾ ಪತ್ರಿಕೆಗಳಲ್ಲಿ ಇವರ ವೈವಿಧ್ಯಮಯ ಬರಹಗಳನ್ನು ನಾವು ಕಾಣಬಹುದು. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ರಂಗಭೂಮಿ ಕುರಿತ ಅಧ್ಯಯನ ಮತ್ತು ಬರೆವಣಿಗೆಗಾಗಿ ಕೊಡಮಾಡುವ ಸೀನಿಯರ್ ಫೆಲೊಷಿಪ್, ಪುತಿನ ಕಾವ್ಯನಾಟಕ ಪುರಸ್ಕಾರ ಮತ್ತು ಬಿ.ವಿ. ಕಾರಂತ ಫೆಲೋಷಿಪ್‌ನ ಮೊತ್ತಮೊದಲ ವಿಜೇತರು ಇವರಗಿದ್ದಾರೆ. ಇವು ಇವರ ಅನನ್ಯ ಪ್ರತಿಭೆಗೆ ಸಂದ ಗೌರವಗಳು.

    Share. Facebook Twitter Pinterest LinkedIn Tumblr WhatsApp Email
    Previous Articleಇಂದೋರಿನ ಹೋಳ್ಕರ್ ಸಂಗೀತ ಸಮ್ಮೇಳನಕ್ಕೆ ಕುಮಾರಿ ವಾಣಿ ಹಂಚಿನಮನಿ ಆಯ್ಕೆ
    Next Article ಮುಂಬೈಯಲ್ಲಿ ‘ನವ ಯಕ್ಷ ಸಂಭ್ರಮ’ | ಜುಲೈ 1ರಿಂದ 9
    roovari

    Add Comment Cancel Reply


    Related Posts

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 24

    May 23, 2025

    ಬೆಂಗಳೂರಿನ ರಂಗಶಂಕರದಲ್ಲಿ ‘ಶಿವೋಹಂ’ ನಾಟಕ ಪ್ರದರ್ಶನ | ಮೇ 31

    May 23, 2025

    ಕರ್ನಾಟಕ ನಾಟಕ ಅಕಾಡೆಮಿಯಿಂದ ತಿಂಗಳ ನಾಟಕ ಸಂಭ್ರಮ

    May 21, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.