Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎಚ್.ವಿ. ನಂಜುಂಡಯ್ಯ ಮತ್ತು ಕೀರ್ತಿನಾಥ ಕುರ್ತುಕೋಟಿಯವರ ಜನ್ಮದಿನೋತ್ಸವ

    October 14, 2025

    ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ‘ಬಾಲಪ್ರತಿಭಾ ಅನ್ವೇಷಣೆ 2025’ | ಅಕ್ಟೋಬರ್ 24, 25 ಮತ್ತು 26

    October 14, 2025

    ಮಂಗಳೂರಿನ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಭರತನಾಟ್ಯ ರಂಗಪ್ರವೇಶದ ನೃತ್ಯ ಪ್ರಸ್ತುತಿ

    October 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರು ನಟನದಲ್ಲಿ ರಂಗಚರ್ಚೆ | ಜುಲೈ 30ರಂದು 
    Drama

    ಮೈಸೂರು ನಟನದಲ್ಲಿ ರಂಗಚರ್ಚೆ | ಜುಲೈ 30ರಂದು 

    July 28, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರ ಕ್ರಿಯಾಶೀಲವಾಗಿದ್ದು ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ, ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ಸತತವಾಗಿ ಪ್ರಯತ್ನ ಶೀಲವಾಗಿದೆ.

    ತನ್ನ ಚಟುವಟಿಕೆಯ ಭಾಗವಾಗಿ ಕನ್ನಡ ಆಧುನಿಕ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ ರಂಗ ಸಂಘಟಕ, ಚಿಂತಕ ಕೆ.ವಿ. ಸುಬ್ಬಣ್ಣ ಅವರ ಸ್ಮರಣಾರ್ಥ ‘ಸುಬ್ಬಣ್ಣ ಸ್ಮರಣೆ’ ಕಾರ್ಯಕ್ರಮವನ್ನು ಪ್ರತಿವರ್ಷ ಜುಲೈ ತಿಂಗಳಲ್ಲಿ ನಡೆಸುತ್ತಾ ಬಂದಿದ್ದು, 20232ನೇ ಸಾಲಿನ ನಟನದ ಜುಲೈ ತಿಂಗಳ ಎಲ್ಲಾ ಕಾರ್ಯಕ್ರಮಗಳನ್ನು ಸುಬ್ಬಣ್ಣರ ಸ್ಮರಣೆಗೆ ಅರ್ಪಿಸಿದೆ. ಜುಲೈ 01ರಿಂದ ಆರಂಭವಾಗಿ ಪ್ರತಿ ವಾರಾಂತ್ಯಗಳಲ್ಲಿ ವಿವಿಧ ನಾಟಕಗಳ ಪ್ರದರ್ಶನ, ರಂಗ ಕಾರ್ಯಾಗಾರ ನಡೆದಿದ್ದು, 2023ರ ಸುಬ್ಬಣ್ಣ ಸ್ಮರಣೆಯ ಕಡೆಯ ಕಾರ್ಯಕ್ರಮವಾಗಿ ಜುಲೈ 30ರಂದು ಬೆಳಗ್ಗೆ 10ಕ್ಕೆ ಸರಿಯಾಗಿ ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ‘ರಂಗಶಿಕ್ಷಣ; ವರ್ತಮಾನ ಮತ್ತು ಭವಿಷ್ಯದ ಅವಕಾಶಗಳು’ ಎಂಬ ವಿಷಯದ ಕುರಿತು ರಂಗಚರ್ಚೆಯನ್ನು ಆಯೋಜನೆ ಮಾಡಲಾಗಿದೆ.

    ಈ ರಂಗಚರ್ಚೆಯಲ್ಲಿ ಹಿರಿಯ ರಂಗಕರ್ಮಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ರಾಜಪ್ಪ ದಳವಾಯಿ, ಬೆಂಗಳೂರಿನ ಪಿ.ಇ.ಎಸ್ ವಿಶ್ವವಿದ್ಯಾನಿಲಯದ ರಂಗಭೂಮಿ ವಿಭಾಗದ ಮುಖ್ಯಸ್ಥರಾದ ಡಾ.ಸುಷ್ಮಾ ಎಸ್ ವಿ, ಕಲಾವಿದರು ಹಾಗೂ ರಂಗ ಶಿಕ್ಷಕರೂ ಆದ ಶ್ರೀ ಸಂತೋಷ್ ಗುಡ್ಡಿಯಂಗಡಿ ಅವರು ವಿಷಯದ ಕುರಿತು ಮಾತನಾಡಲಿದ್ದು, ಪ್ರಖ್ಯಾತ ರಂಗತಜ್ಞರು, ರಂಗ ಶಿಕ್ಷಕರು ಮತ್ತು  ಹೆಗ್ಗೋಡಿನ ನೀನಾಸಂನ ರಂಗ ಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲರಾದ ಶ್ರೀ ಬಿ.ಆರ್.ವೆಂಕಟರಮಣ ಐತಾಳ ಅವರು ರಂಗಚರ್ಚೆಯನ್ನು ಸಮನ್ವಯಗೊಳಿಸಲಿದ್ದಾರೆ. ಈ ಚರ್ಚೆಯ ನಿರೂಪಣೆಯನ್ನು ರಂಗಕರ್ಮಿ ಶ್ರೀ ಎನ್.ಧನಂಜಯ ಅವರು ನಡೆಸಿಕೊಡಲಿದ್ದು, ನಟನ ರಂಗಶಾಲೆಯ ಪ್ರಾಂಶುಪಾಲರಾದ ಶ್ರೀ ಮೇಘ ಸಮೀರ ಅವರು ಪ್ರಾಸ್ತಾವಿಕ ಮಾತನಾಡಲಿದ್ದಾರೆ. ನಟನದ ನಿರ್ಮಾತೃ ಶ್ರೀ ಮಂಡ್ಯ ರಮೇಶ್ ಅವರು ಉಪಸ್ಥಿತರಿದ್ದು, ಇದೇ ಸಂದರ್ಭದಲ್ಲಿ ನಟನ ರಂಗಶಾಲೆಯ 2023-24ನೇ ಸಾಲಿನ ರಂಗಭೂಮಿ ಡಿಪ್ಲೊಮಾದ ಹೊಸ ವಿದ್ಯಾರ್ಥಿಗಳ ‘ರಂಗ ಸ್ವಾಗತ’ ಸಮಾರಂಭವೂ ನಡೆಯಲಿದೆ.

    ರಂಗಾಸಕ್ತರಿಗೆ ಆತ್ಮೀಯವಾದ ಸ್ವಾಗತ.

    Share. Facebook Twitter Pinterest LinkedIn Tumblr WhatsApp Email
    Previous Articleನೃತ್ಯ ವಿಮರ್ಶೆ | ರವೀಂದ್ರ ಕಲಾಕ್ಷೇತ್ರದಲ್ಲಿ ಭರವಸೆಯನ್ನು ಮೂಡಿಸಿದ ಶ್ರೀಮತಿ ಪ್ರಣತಿ ಎಸ್. ವಾಟಾಳ್ ರಂಗಪ್ರವೇಶ
    Next Article ವಾಡಿಯ ಸಭಾಂಗಣದಲ್ಲಿ ‘ಬಂಡ್ವಾಳ್ವಲ್ಲದ ಬಡಾಯಿ’ ಮತ್ತು ’ನಂಗ್ಯಾಕೋ ಡೌಟು’ ನಾಟಕ ಪ್ರದರ್ಶನ | ಜುಲೈ 29 ಮತ್ತು 30
    roovari

    Add Comment Cancel Reply


    Related Posts

    ಖ್ಯಾತ ರಂಗಭೂಮಿ ನಟ ರಾಜು ತಾಳಿಕೋಟೆ ನಿಧನ 

    October 13, 2025

    ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಗೆ ತಂಡಗಳ ಆಹ್ವಾನ | ನವಂಬರ್ 09

    October 13, 2025

    ಬೆಂಗಳೂರಿನ ಸಮುಚ್ಚಯ ರಂಗಮಂದಿರದಲ್ಲಿ ಮಾಸದ ನೆನಪು ಸರಣಿ ಕಾರ್ಯಕ್ರಮ -05 | ಅಕ್ಟೋಬರ್ 14

    October 13, 2025

    ನೀನಾಸಮ್ ತಿರುಗಾಟ – 2025ದಲ್ಲಿ ನಾಟಕ ಪ್ರದರ್ಶನ | ಅಕ್ಟೋಬರ್ 14 ಮತ್ತು 15

    October 11, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.