Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿಯ ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಸೈಯ್ಯದ ನಜೀರೊದ್ದಿನ ಮುತವಲ್ಲಿ ನಾಮ ನಿರ್ದೇಶನ

    August 11, 2025

    ಕಾಸರಗೋಡಿನಲ್ಲಿ “ಗುರುದಕ್ಷಿಣೆ” ಯಕ್ಷಗಾನ ತಾಳಮದ್ದಳೆ

    August 11, 2025

    ಕೊಡವೂರು ಶ್ರೀ ದೇವಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

    August 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿದುಷಿ ಅಯನಾ ಪೆರ್ಲರಿಂದ ಶ್ರೀಕೃಷ್ಣನ ಬಗೆಗಿನ ವಿಶೇಷ ಭರತನಾಟ್ಯ ಪ್ರಸ್ತುತಿ
    Article

    ವಿದುಷಿ ಅಯನಾ ಪೆರ್ಲರಿಂದ ಶ್ರೀಕೃಷ್ಣನ ಬಗೆಗಿನ ವಿಶೇಷ ಭರತನಾಟ್ಯ ಪ್ರಸ್ತುತಿ

    September 10, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಬೋಳೂರಿನಲ್ಲಿರುವ ಶ್ರೀ ಅಮೃತಾನಂದಮಯಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 26 ಆಗಸ್ಟ್ 2024ರಂದು ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರ ಶ್ರೀಕೃಷ್ಣನ ಕುರಿತ ವಿಶೇಷ ಭರತನಾಟ್ಯ ಕಾರ್ಯಕ್ರಮ ಜನಮನ ರಂಜಿಸಿತು.

    ‘ಶ್ರೀಕೃಷ್ಣ ಲೀಲಾತರಂಗಿಣಿ’ಯಿಂದ ಆಯ್ದ ‘ದಿವ್ಯ ಗೋವೃಂದಗಳು’ ಎಂಬ ಭಾಗವನ್ನು ತನ್ನ ನೃತ್ಯಪ್ರಸ್ತುತಿಗೆ ಅಯನಾ ಪೆರ್ಲ ಆಯ್ದುಕೊಂಡಿದ್ದರು. ಶ್ರೀಕೃಷ್ಣನಿಗೆ ಗೋವುಗಳೊಂದಿಗೆ ಇರುವ ಸಂಬಂಧ, ಒಡನಾಟ ಮತ್ತು ಆ ಮೂಲಕ ಗೋಪಿಕಾ ಸ್ತ್ರೀಯರ ಗೆಳೆತನ ಮೊದಲಾದ ಭಾಗವನ್ನು ವಿವಿಧ ನೃತ್ತಭಂಗಿ, ಲಾಸ್ಯಭರಿತ ನೃತ್ಯ ಹಾಗೂ ಭಾವಪೂರ್ಣ ಅಭಿನಯಗಳೊಂದಿಗೆ ಅಯನಾ ಪೆರ್ಲ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ರಾಗಮಾಲಿಕೆ, ತಾಳಮಾಲಿಕೆಯಲ್ಲಿರುವ ಈ ರಚನೆಗೆ ಖ್ಯಾತ ಅಭಿನೇತ್ರಿ ದೆಹಲಿಯ ವಿದುಷಿ ರಮಾ ವೈದ್ಯನಾಥನ್ ನೃತ್ಯಸಂಯೋಜನೆ ಮಾಡಿದ್ದಾರೆ.

    ಅನಂತರ ಅಯನಾ ಇವರು ದಾಸರ ಪದ ‘ಕಡೆಗೋಲ ತಾರೆನ್ನ ಚಿಣ್ಣವೇ’ ಎಂಬುದನ್ನು ಭಾವಪೂರ್ಣವಾಗಿ ಅಭಿನಯಿಸಿದರು. ಯಶೋದೆ ಮತ್ತು ಕೃಷ್ಣನ ನಡುವಿನ ಪ್ರೀತಿಯ ಆಟ – ಜಗಳ, ಆಕೆಯ ವಾತ್ಸಲ್ಯ ಮತ್ತು ಪ್ರೇಮಗಳು ತುಂಬಿ ತುಳುಕುವ ಈ ಹಾಡಿನ ಅಭಿನಯವು ಸುಂದರವಾಗಿ ಮೂಡಿ ಬಂತು. ವಿದ್ವಾನ್ ಪ್ರವೀಣ್ ಕುಮಾರ್ ಇದಕ್ಕೆ ನೃತ್ಯಸಂಯೋಜನೆ ಮಾಡಿದ್ದಾರೆ. ಒಟ್ಟಿನಲ್ಲಿ ಕೃಷ್ಣರೂಪಕಗಳಿಂದ ಜನ್ಮಾಷ್ಟಮಿಯು ಸರ್ವಂ ಕೃಷ್ಣಮಯವಾಗಿ ಪರಿಣಮಿಸಿತು.

    ಭಾವ, ಭಾಷೆ, ನೃತ್ತ, ನೃತ್ಯಗಳು ಒಟ್ಟಾಗಿ ತನ್ನ ಪ್ರಬುದ್ಧ ಅಭಿನಯದಿಂದ ಕಲಾಪ್ರಸ್ತುತಿ ನೀಡುತ್ತಿರುವ ವಿದುಷಿ ಅಯನಾ ಪೆರ್ಲ ಇವರು ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರದರ್ಶನ ನೀಡಿ ಹೆಸರಾಗಿದ್ದಾರೆ. ದೂರದರ್ಶನದ ಗ್ರೇಡೆಡ್ ಕಲಾವಿದೆಯಾಗಿರುವ ಇವರು ಕರಾವಳಿ ಪ್ರದೇಶದ ಹೆಮ್ಮೆಯ ಕಲಾವಿದೆಯಾಗಿ ಮೂಡಿ ನಿಂತಿದ್ದಾರೆ.

    ಅನೀಶ್ ಕೃಷ್ಣ ಹವ್ಯಾಸಿ ಬರಹಗಾರರು

    Share. Facebook Twitter Pinterest LinkedIn Tumblr WhatsApp Email
    Previous Articleಕಾತ್ಯಾಯಿನಿ ಕುಂಜಿಬೆಟ್ಟುಗೆ ‘ಎಂ.ಕೆ. ಇಂದಿರಾ ಪುಸ್ತಕ ಬಹುಮಾನ’
    Next Article ಶಿವಮೊಗ್ಗದ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ | ಸೆಪ್ಟೆಂಬರ್ 11
    roovari

    Comments are closed.

    Related Posts

    ಸಾಲಿಗ್ರಾಮದಲ್ಲಿ ಡಾ. ರಾಜ್ ಸವಿನೆನಪಿನ ‘ಸ್ವರಕಂಠೀರವ’ | ಆಗಸ್ಟ್ 15

    August 11, 2025

    ಕಾರ್ಕಳದಲ್ಲಿ ‘ಕ್ರಿಯೇಟಿವ್ ಪುಸ್ತಕ ಧಾರೆ 2025’ | ಆಗಸ್ಟ್ 13

    August 11, 2025

    ನೃತ್ಯ ವಿಮರ್ಶೆ | ಪುಷ್ಕರ ನೃತ್ಯ ನಿಕೇತನದ ವಿದ್ಯಾರ್ಥಿನಿ ಸಾನ್ವಿ ನವೀನ್ ಇವರ ಭರತನಾಟ್ಯ ರಂಗಪ್ರವೇಶ

    August 9, 2025

    ಲೇಖನ | ಲೇಖಕರ ಸೃಜನಶೀಲ ಆಟ ‘ಬರವಣಿಗೆಯ ತಾಲೀಮು’

    August 9, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.