Subscribe to Updates

    Get the latest creative news from FooBar about art, design and business.

    What's Hot

    ತಿಂಗಳ ನಾಟಕ ಸಂಭ್ರಮದಲ್ಲಿ ‘ದಿ ಫೈಯರ್’ ನಾಟಕ ಪ್ರದರ್ಶನ | ಮೇ 17

    May 15, 2025

    ಸಾಹಿತಿ ರತ್ನ ಕುಮಾರ್ ಎಂ. ಇವರಿಗೆ ಕ.ಸಾ.ಪ.ದಿಂದ ಸನ್ಮಾನ

    May 15, 2025

    ಕಯ್ಯಾರರ ಕುರಿತ ಕವನವಾಚನಕ್ಕೆ ಆಹ್ವಾನ

    May 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವೀಣಾವಾದಿನಿಯಲ್ಲಿ ವಿದುಷಿ ಅಯನಾ ಪೆರ್ಲ ಅವರಿಂದ ವಿಶೇಷ ಭರತನಾಟ್ಯ ಪ್ರಸ್ತುತಿ
    Bharathanatya

    ವೀಣಾವಾದಿನಿಯಲ್ಲಿ ವಿದುಷಿ ಅಯನಾ ಪೆರ್ಲ ಅವರಿಂದ ವಿಶೇಷ ಭರತನಾಟ್ಯ ಪ್ರಸ್ತುತಿ

    December 12, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಬದಿಯಡ್ಕ (ಕಾಸರಗೋಡು): ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರ ವಿಶೇಷ ಭರತನಾಟ್ಯ ಪ್ರಸ್ತುತಿಯು ಸಂಗೀತ ಸಂಸ್ಥೆಯಾದ ‘ನಾರಾಯಣೀಯಂ’ನ ವೀಣಾವಾದಿನಿ ಸಂಗೀತ ವಿದ್ಯಾಪೀಠದ ಇಪ್ಪತ್ತೈದನೇ ವರ್ಷಾಚರಣೆಯ ಅಂಗವಾಗಿ ದಿನಾಂಕ 7 ಡಿಸೆಂಬರ್ 2024ರ ಶನಿವಾರದಂದು ತುಂಬಿದ ಸಭಾಗೃಹದಲ್ಲಿ ಪ್ರದರ್ಶಿಸಲ್ಪಟ್ಟಿತು.
    ಮೋಹನಕಲ್ಯಾಣಿ ರಾಗದ ಆದಿತಾಳದಲ್ಲಿರುವ ‘ಭುವನೇಶ್ವರಿಯ ನೆನೆ ಮಾನಸವೇ… ‘ ಎಂಬ ಹಾಡಿಗೆ ಅಯನಾ ಪೆರ್ಲ ಅವರು ಮನೋಜ್ಞವಾಗಿ ಅಭಿನಯಿಸಿದರು. ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಇದಕ್ಕೆ ನೃತ್ಯಸಂಯೋಜನೆ ಮಾಡಿದ್ದಾರೆ.
    ಅನಂತರ ಆಂಗಿಕ ಹಾಗೂ ಅಭಿನಯಕ್ಕೆ ವಿಪುಲ ಅವಕಾಶಗಳಿರುವ ಪದವರ್ಣವನ್ನು ತನ್ನ ಪ್ರಸ್ತುತಿಗೆ ಆಯ್ದುಕೊಂಡರು. ಭೈರವಿ ರಾಗದಲ್ಲಿರುವ ಇದು ಆದಿತಾಳದಲ್ಲಿ ನಿಬದ್ಧವಾಗಿದೆ. ಇದು ಪೆರಿಯಸಾಮಿ ತೂರನ್ ಇವರ ರಚನೆಯಾಗಿದ್ದು, ಪ್ರಸಿದ್ಧ ಕಲಾವಿದೆ ಜಾನಕಿ ರಂಗರಾಜನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿದುಷಿ ಅಯನಾ ಅವರು ಉತ್ತಮವಾದ ಆಂಗಿಕ, ಅಭಿನಯ ಹಾಗೂ ಸಾಂದರ್ಭಿಕ ನಡೆಗಳಿಂದ ಆಕರ್ಷಕ ಮತ್ತು ಅರ್ಥಪೂರ್ಣ ಅಭಿನಯ ನೀಡಿದರು.
    ಬಳಿಕ ಯಮನ್ ರಾಗದ ಆದಿತಾಳದಲ್ಲಿರುವ ಶ್ರೀಕೃಷ್ಣನ ಕುರಿತ ‘ಕಡೆಗೋಲ ತಾರೆನ್ನ ಚಿನ್ನವೇ’ ಪದ್ಯಕ್ಕೆ ಪ್ರೇಕ್ಷಕರ ಮನಸೂರೆಗೊಳ್ಳುವಂತೆ ಅಭಿನಯ ನೀಡಿದರು.
    ಕೊನೆಯಲ್ಲಿ ರಾಗಮಾಲಿಕೆ ತಾಳಮಾಲಿಕೆಯಲ್ಲಿರುವ ಡಿ. ವಿ. ಪ್ರಸನ್ನಕುಮಾರ್ ರಚನೆಯ ‘ತೋಡಯಮಂಗಲಂ’ ಹಾಡಿಗೆ ಅಯನಾ ತನ್ನ ಅಭಿನಯದ ಶ್ರೇಷ್ಠತೆಯನ್ನು ಎತ್ತಿ ತೋರಿಸಿದರು. ನೃತ್ಯಗುರು ಶ್ರೀಲತಾ ನಾಗರಾಜ್ ಇದಕ್ಕೆ ನೃತ್ಯಸಂಯೋಜನೆ ಮಾಡಿದ್ದಾರೆ.
    ರಾಷ್ಟ್ರೀಯ ಮಟ್ಟದ ನೃತ್ಯ ಕಲಾವಿದೆಯಾಗಿರುವ ಹಾಗೂ ದೂರದರ್ಶನದ ಅಂಗೀಕೃತ ನೃತ್ಯಪಟುವಾಗಿರುವ ವಿದುಷಿ ಅಯನಾ ಅವರ ಕಲಾಭಿಜ್ಞತೆ ನೆರೆದಿದ್ದ ಪ್ರೇಕ್ಷಕರ ಹೃದಯದಲ್ಲಿ ನಾಲ್ಕುಕಾಲ ನೆಲೆನಿಲ್ಲುವಂತೆ ಅಭಿನೀತವಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಲೋಕಾರ್ಪಣೆಗೊಂಡ ‘ವಚನ ಸಾಹಿತ್ಯ ಸಮ್ಮೇಳನ 2024-25’ರ ಲಾಂಛನ  
    Next Article ಕುಂದಾಪುರದ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ‘ಸುವರ್ಣ ಜೇಸೀಸ್ ನಾಟಕೋತ್ಸವ’ | ಡಿಸೆಂಬರ್ 22ರಿಂದ 26
    roovari

    Add Comment Cancel Reply


    Related Posts

    ಶ್ರೀ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ‘ನಲ್ವತ್ತರ ನಲಿವು -11’ | ಮೇ 13

    May 12, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ | ಮೇ 09

    May 6, 2025

    ಮಂಗಳೂರಿನ ಪುರಭವನದಲ್ಲಿ ಕುಮಾರಿ ಕಿಯಾರಾ ಆ್ಯಶ್ಲಿನ್ ಪಿಂಟೋ ಇವರ ಶಾಸ್ತ್ರೀಯ ನೃತ್ಯ ರಂಗಪ್ರವೇಶ | ಮೇ 04

    May 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.