Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸ್ತ್ರೀ ನಾಟಕೋತ್ಸವ’ | ಜುಲೈ 06 ಮತ್ತು 07

    July 1, 2025

    ಶಕ್ತಿನಗರದ ಕಲಾಂಗಣದಲ್ಲಿ ‘ಅನುವಾದ ಕಾರ್ಯಾಗಾರ’

    July 1, 2025

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜುಲೈ 07ರಿಂದ 24

    July 1, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜುಲೈ 07ರಿಂದ 24
    Artist

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜುಲೈ 07ರಿಂದ 24

    July 1, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ (ರಿ.) ಪ್ರಸ್ತುತ ಪಡಿಸುವ ‘ಅಭಿನಯ ಕಾರ್ಯಾಗಾರ’ವು ದಿನಾಂಕ 07 ಜುಲೈ 2025ರಿಂದ 24 ಜುಲೈ 2025ರವರೆಗೆ ಪ್ರತಿದಿನ ಬೆಳಿಗ್ಗೆ 6-30ರಿಂದ 9-30 ಗಂಟೆ ತನಕ ಬೆಂಗಳೂರಿನ ಜೆ.ಪಿ. ನಗರದಲ್ಲಿ ನಡೆಯಲಿದೆ. ಕುಮಾರಿ ಶ್ವೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ಇವರುಗಳು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗಾಗಿ 8050157443 ಮತ್ತು 9448276776 ಸಂಖ್ಯೆಯನ್ನು ಸಂಪರ್ಕಿಸಿರಿ.

    ಶ್ವೇತಾ ಶ್ರೀನಿವಾಸ್ (ನಿರ್ದೇಶಕರು) :
    ಶ್ವೇತಾ ಶ್ರೀನಿವಾಸ್ ಅವರು ಕನ್ನಡ ರಂಗಭೂಮಿಯ ಒಬ್ಬ ಚಿರಪರಿಚಿತ ಪ್ರತಿಭಾನ್ವಿತ ನಟಿ. ಬಾಲ್ಯದಿಂದಲೂ ರಂಗಭೂಮಿಯ ಒಡನಾಟ ಹೊಂದಿರುವ ಇವರು, ನಟನೆಯ ಜೊತೆಗೆ ಸೃಜನಶೀಲ ವಸ್ತ್ರ ವಿನ್ಯಾಸ ಮತ್ತು ನೃತ್ಯ ಸಂಯೋಜನೆಗೆ ದೇಶಾದ್ಯಂತ ಹೆಸರಾದವರು. ಇದಕ್ಕಾಗಿ ಇವರು ಹಲವು ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ನೀನಾಸಂ ಪದವೀಧರರಾದ ಇವರು, 60ಕ್ಕೂ ಹೆಚ್ಚು ಪ್ರಮುಖ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದಲ್ಲದೇ ಅನೇಕ ಚಲನಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ.

    ಶ್ವೇತಾ ಶ್ರೀನಿವಾಸ್ ಅವರು ‘ಪಂಚರಂಗಿ’, ‘ದ್ಯಾವ್ರೆ’, ಬೆಂಕಿಪೊಟ್ಟಣ’, ‘ಕೃಷ್ಣಲೀಲಾ’, ‘ಡಿ.ಎನ್.ಎ. ‘ನೀರು ತಂದವರು’, ‘ನಾತಿಚರಾಮಿ, ‘ಗಂಗಾ’, ‘ತರ್ಕ’, ‘ಬ್ಯಾಚಲರ್ ಪಾರ್ಟಿ’, ‘ಬೇಲಿ ಹೂ’ ಮುಂತಾದ ಜನಮನಗೆದ್ದ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ಚಲನಚಿತ್ರಗಳಲ್ಲಿ ನಟಿಸಿ ಅಪಾರ ಮನ್ನಣೆಯನ್ನು ಗಳಿಸಿದ್ದಾರೆ. ಜೊತೆಗೆ ಶ್ವೇತ ಶ್ರೀನಿವಾಸ್ ಅವರು ಒಬ್ಬ ಸಮರ್ಥ ಯಕ್ಷಗಾನ ಪಟು ಆಗಿರುವುದಲ್ಲದೇ, ಗುರುಗಳಾದ ಉದಯಕುಮಾರ್ ಶೆಟ್ಟಿ, ಪಾರ್ವತಿದತ್ತ ಮತ್ತು ಮಧುಲಿತ ಮಹಾಪಾತ್ರ ಇವರುಗಳ ಮಾರ್ಗದರ್ಶನದಲ್ಲಿ ಒಡಿಸ್ಸಿ ಶಾಸ್ತ್ರೀಯ ನೃತ್ಯವನ್ನೂ ಅಭ್ಯಸಿಸಿದ್ದಾರೆ. ಸಧ್ಯ ಗುರು ಶ್ವೇತಾ ಕೃಷ್ಣ ಅವರ ಬಳಿ ಒಡಿಸ್ಸಿ ನೃತ್ಯಾಭ್ಯಾಸವನ್ನು ಮುಂದುವರೆಸಿದ್ದಾರೆ.

    ಹಿರಿಯ ರಂಗಕರ್ಮಿಗಳಾದ ಸಿ.ಜಿ.ಕೆ, ಕೆ.ವಿ. ಅಕ್ಷರ, ಅಭಿಲಾಷ್ ಪಿಳ್ಳೆ, ಮಾನವ್ ಕೌಲ್, ವೆಂಕಟರಮಣ ಐತಾಳ್, ಜಿ. ವೇಣು, ಇವರುಗಳ ಜೊತೆ ಕೆಲಸ ಮಾಡಿದ ಶ್ವೇತಾ ಇವರು ‘ಚಿತ್ರಪಟ’ ನಾಟಕದಲ್ಲಿನ ತಮ್ಮ ನಟನೆಗೆ ಮತ್ತು ವಸ್ತ್ರವಿನ್ಯಾಸಕ್ಕೆ ‘ಮೆಟಾ’ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದಲ್ಲದೇ ‘ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ’ ನಾಟಕಕ್ಕೆ ಅತ್ಯುತ್ತಮ ನಟಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರದು.

    ಇದರ ಜೊತೆಗೇ, ಶ್ವೇತಾ ಶ್ರೀನಿವಾಸ್ ಅವರು ಭಾರತ ಸರ್ಕಾರದ, ಆಯುಷ್ ಮತ್ತು ಯೋಗ ಅಲಾಯನ್ಸ್ ಮಂತ್ರಾಲಯದಿಂದ ಧೃಡೀಕರಿಸಲ್ಪಟ್ಟ ಪ್ರಮಾಣಪತ್ರವನ್ನು ಪಡೆದು ಈಗ, ವಿಶೇಷವಾಗಿ ನಟರಿಗೆ, ನೃತ್ಯಪಟುಗಳಿಗೆ ಮತ್ತು ಅನೇಕ ಪ್ರದರ್ಶನ ಕಲಾವಿದರಿಗಾಗಿಯೇ ವಿಶಿಷ್ಟವಾಗಿ ಸಿದ್ಧಪಡಿಸಿದ ಯೋಗ ವಿಧಾನವನ್ನು ಕಲಿಸುವುದರಲ್ಲಿ ನಿರತರಾಗಿದ್ದಾರೆ.

    ಪ್ರಸ್ತುತ 4 ವರ್ಷಗಳ ಹಿಂದೆ ಸ್ಥಾಪಿಸಿದ. ‘ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ’ಯ ಸಂಸ್ಥಾಪಕ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ, ಹಲವು ನಾಟಕಗಳನ್ನು ನಿರ್ದೇಶಿಸುತ್ತಾ, ಹೊಸ ಪೀಳಿಗೆಯ ಯುವಕ ಯುವತಿಯರಿಗೆ ರಂಗಭೂಮಿಯ ಸಮಗ್ರ ಪರಿಚಯವನ್ನು ನೀಡುತ್ತಾ ರಂಗತಂತ್ರಗಳನ್ನು ಕಲಿಸುವುದರಲ್ಲಿ ನಿರತರಾಗಿದ್ದಾರೆ.

    ಆಸಿಫ್ ಕ್ಷತ್ರಿಯ (ನಿರ್ದೇಶಕರು) :
    ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ವಿಶಿಷ್ಟ ಮಿಶ್ರಣದ ವ್ಯಕ್ತಿತ್ವ ಹೊಂದಿರುವ, ರಂಗಭೂಮಿ ಮತ್ತು ಚಲನಚಿತ್ರ ರಂಗದಲ್ಲಿ ಚಿರಪರಿಚಿತ ವ್ಯಕ್ತಿ ಆಸಿಫ್ ಕ್ಷತ್ರಿಯ, ದಕ್ಷಿಣ ಭಾರತದಲ್ಲಿ ದಶಕಗಳ ಹಿಂದೆಯೇ ಕಿರುಚಿತ್ರ ನಿರ್ಮಾಣ ಸಂಸ್ಕೃತಿಯನ್ನು ಹುಟ್ಟುಹಾಕಿದ ಇವರಿಗೆ ಚಿತ್ರರಂಗ ಮತ್ತು ರಂಗಭೂಮಿಯ ಒಡನಾಟ ಕಳೆದ 40 ವರ್ಷಗಳಿಂದಲೂ ಇದೆ. ಈ ಎರಡೂ ವಲಯಗಳಲ್ಲಿ ಆಸಿಫ್ ಕ್ಷತ್ರಿಯ ಅವರು ಒಬ್ಬ ಬರಹಗಾರರಾಗಿ, ಸಂವೇದನಾಶೀಲ ನಟರಾಗಿ ಹಾಗೂ ಸೃಜನಶೀಲ ನಿರ್ದೇಶಕರಾಗಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

    ಕಲಾ ದಿಗ್ಗಜರಾದ ಬಿ.ವಿ. ಕಾರಂತ, ಎಂ.ಎಸ್. ಸತ್ಯು. ಆರ್.ಎನ್. ಜಯಗೋಪಾಲ್, ಭಾರ್ಗವ, ಪೀಟರ್ ಬ್ರೂಕ್, ಇರ್ಶಾದ್ ಪಂಜತನ್, ಸಿ.ಜಿ.ಕೆ., ಗಿರೀಶ್ ಕಾರ್ನಾಡ್, ಅರುಂಧತಿ ನಾಗ್, ಪ್ರೋತಿಮಾ ಬೇಡಿ, ಸಿರಿಗಂಧ ಶ್ರೀನಿವಾಸಮೂರ್ತಿ, ಎಚ್.ಎಲ್. ನಾಗೇಗೌಡ, ಮುಂತಾದವರೊಡನೆ ಕೆಲಸ ಮಾಡಿದ ಆಸಿಫ್ ಅವರು ನಟನೆ ಮತ್ತು ನಿರ್ದೇಶನದ ಸೂತ್ರಗಳನ್ನು ಇಂತಹ ಅನೇಕ ದಿಗ್ಗಜರಿಂದ ಕಲಿತು, ತಮ್ಮ ನಾಟಕ ಮತ್ತು ಚಲನಚಿತ್ರಗಳಲ್ಲಿ ಅಳವಡಿಸಿಕೊಂಡು ಬಂದಿದ್ದಾರೆ.

    ಇವರು ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ತಮ್ಮನ್ನು ತಾವು ಸಂಪೂರ್ಣವಾಗಿ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅರ್ಪಿಸಿಕೊಂಡಿದ್ದಾರೆ. ಅನೇಕ ನಾಟಕಗಳು, ಕಿರುಚಿತ್ರಗಳು, ಚಲನಚಿತ್ರಗಳು, ವನ್ಯಜೀವಿ ಮತ್ತು ಜನಪದ ಸಂಸ್ಕೃತಿಯ ಸಾಕ್ಷ್ಯಚಿತ್ರಗಳು, ಕಾರ್ಪೋರೇಟ್ ಮತ್ತು ಜಾಹೀರಾತು ಚಿತ್ರಗಳನ್ನು ಮಾಡಿ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

    ಪ್ರಸ್ತುತ, 4 ವರ್ಷಗಳ ಹಿಂದೆ ಸ್ಥಾಪಿಸಿದ, ‘ರಂಗರಥ – ಭಾರತೀಯ ಪ್ರದರ್ಶನ ಕಲಾ ಸಂಸ್ಥೆ’ಯ ಸಂಸ್ಥಾಪಕ ನಿರ್ದೇಕರಾಗಿ ಮತ್ತು ವ್ಯವಸ್ಥಾಪಕ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಾ, ಹಲವು ನಾಟಕಗಳನ್ನು ಬರೆದು ನಿರ್ದೇಶಿಸುತ್ತಾ, ಹೊಸ ಪೀಳಿಗೆಯ ಯುವಕ ಯುವತಿಯರಿಗೆ ರಂಗಭೂಮಿ ಮತ್ತು ನಟನೆಯ ಪಾಠಗಳನ್ನು ಹೇಳಿಕೊಡುವುದರಲ್ಲಿ ನಿರತರಾಗಿದ್ದಾರೆ.

    artist baikady roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 08
    Next Article ಶಕ್ತಿನಗರದ ಕಲಾಂಗಣದಲ್ಲಿ ‘ಅನುವಾದ ಕಾರ್ಯಾಗಾರ’
    roovari

    Add Comment Cancel Reply


    Related Posts

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸ್ತ್ರೀ ನಾಟಕೋತ್ಸವ’ | ಜುಲೈ 06 ಮತ್ತು 07

    July 1, 2025

    ಶಕ್ತಿನಗರದ ಕಲಾಂಗಣದಲ್ಲಿ ‘ಅನುವಾದ ಕಾರ್ಯಾಗಾರ’

    July 1, 2025

    ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆ | ಕೊನೆಯ ದಿನಾಂಕ ಜುಲೈ 08

    July 1, 2025

    ಮಂಗಳೂರಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ‘ಸಾಹಿತ್ಯ ಕೃತಿ ಅವಲೋಕನ’ ಕಾರ್ಯಕ್ರಮ | ಜುಲೈ 05

    July 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.