Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವರಕವಿ ಅಂಬಿಕಾತನಯದತ್ತ (ಡಾ. ದ.ರಾ. ಬೇಂದ್ರೆ) ಇವರ ಪುಣ್ಯಸ್ಮರಣೆ | ಅಕ್ಟೋಬರ್ 26
    Literature

    ವರಕವಿ ಅಂಬಿಕಾತನಯದತ್ತ (ಡಾ. ದ.ರಾ. ಬೇಂದ್ರೆ) ಇವರ ಪುಣ್ಯಸ್ಮರಣೆ | ಅಕ್ಟೋಬರ್ 26

    October 25, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಧಾರವಾಡ : ಸಾವಿರದ ಸಹಸ್ರಮಾನದ ಕವಿ, ಗಾರುಡಿಗ ಡಾ. ದ.ರಾ. ಬೇಂದ್ರೆ ನಮ್ಮನ್ನಗಲಿ ಇದೇ 26 ಅಕ್ಟೋಬರ್ 2024ಕ್ಕೆ 43 ವರ್ಷಗಳಾದವು. ಮನೆ ಮನೆಗಳಲ್ಲಿ ಕಾವ್ಯ ನಂದಾದೀಪ ಬೆಳಗಿಸಿದ ಕವಿ ಅಂಬಿಕಾತನಯದತ್ತರು ನಮ್ಮನ್ನು ಅಗಲಿದ್ದು ದೀಪಾವಳಿಯ ನರಕ ಚತುರ್ದಶಿಯಂದು.
    1932ರಲ್ಲಿ ಬೇಂದ್ರೆಯವರ ‘ಗರಿ’ ಕವನ ಸಂಕಲನ ಪ್ರಕಟವಾಯಿತು. ‘ಗರಿ’ ಕವನ ಸಂಕಲನದೊಳಗಿನ ‘ನರಬಲಿ’ ಕವಿತೆ ಬ್ರಿಟಿಷ್ ಆಡಳಿತಗಾರರ ಕೆಂಗಣ್ಣಿಗೆ ಗುರಿಯಾಯಿತು. ಬ್ರಿಟಿಷ್ ಸರ್ಕಾರ ಅವರ ವಿಚಾರ ಮಾಡಿ ಕ್ಷಮೆ ಕೋರಲು ಕೇಳಿದರು. ಸ್ವಾಭಿಮಾನದ ಕವಿ ಕ್ಷಮೆ ಕೇಳಲು ಒಪ್ಪಲಿಲ್ಲ. ಅದಕ್ಕೆ ಬೇಂದ್ರೆಯವರಿಗೆ ಶಿಕ್ಷೆ ವಿಧಿಸಿ ಬೆಳಗಾವಿಯ ಹಿಂಡಲಗಿ ಜೈಲಿಗೆ ಕಳಿಸಲಾಯಿತು. ಅಲ್ಲಿ ಬೇಂದ್ರೆಯವರು ತಮ್ಮ ಗೆಳೆಯರಾದ ಜೋಗ ಅವರಿಗೆ ಸಮರ್ಥ ರಾಮದಾಸ ರಚಿಸಿದ ‘ದಾಸಬೋಧೆ’ಯನ್ನು ಓದಿ ಹೇಳುತ್ತಿದ್ದರು. ಆಗ ಉಳಿದ ಕೈದಿಗಳೂ ಸೇರುತ್ತಿದ್ದರು.
    ಬೇಂದ್ರೆಯವರ ಕಕ್ಕಂದಿರಾದ ಬಂಡೋಪಂತರ ಆರೋಗ್ಯ ಹಾಳಾದ ಕಾರಣ ಬೇಂದ್ರೆಯವರು ಜೈಲಿನಿಂದ ಹೊರಬಂದರು. ಧಾರವಾಡ ಹತ್ತಿರದ ‘ಮುಗದ’ ಎಂಬ ಹಳ್ಳಿಯಲ್ಲಿ ನಜರಬಂದಿಯಾಗಿ 9 ತಿಂಗಳುಗಳ ಕಾಲ ಇಡಲಾಯಿತು. ಅವರನ್ನು ಕೆರೆ ಮತ್ತು ದುರ್ಗಾದೇವಿ ಗುಡಿ ಹತ್ತಿರ ಇರುವ ಮನೆಯಲ್ಲಿ ಇಟ್ಟರು.
    ಅವರ ಕಾವ್ಯ ಸೃಷ್ಟಿಗೆ ಇವೆರಡೂ ಪೂರಕವಾಗಿದ್ದವು. ಅವರಿಗೆ ದುರ್ಗಾದೇವಿ ಕನಸಿನಲ್ಲಿ ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ’ ಎಂಬ ಸಾಲು ನೀಡಿದಳು. ಕಾವ್ಯದೇವತೆಯಿಂದ ಅದನ್ನು ಸ್ವೀಕಾರ ಮಾಡಿದ ಕವಿ ಹತ್ತು ನುಡಿಯ ‘ಭಾವಗೀತ’ ಎಂಬ ನಲ್ವತ್ತು ಸಾಲಿನ ಪದ್ಯ ಬರೆದರು. ಐತಿಹಾಸಿಕವಾಗಿ ಈ ಪದ್ಯ ಬಹಳ ಮಹತ್ವವಾದದ್ದು. ನವೋದಯ ಕಾಲಘಟ್ಟದಲ್ಲಿ ಮೂಡಿಬಂದ ಈ ಕವಿತೆ ‘ಭಾವಗೀತ’ ಎಂಬ ಕಾವ್ಯ ಪ್ರಕಾರದ ಸ್ವರೂಪ, ಸಿದ್ಧಾಂತ ಮತ್ತು ದರ್ಶನವನ್ನು ತಿಳಿಸುತ್ತದೆ.
    ಬೇಂದ್ರೆಯವರು ತಮ್ಮ ಗೆಳೆಯರ ಗುಂಪಿನ ಸದಸ್ಯರೊಂದಿಗೆ ಸಾಹಿತ್ಯದ ಮಾತುಕತೆಯನ್ನು ಮುಗದದ ದುರ್ಗಾದೇವಿ ಗುಡಿ ಹಾಗೂ ಕೆರೆಯ ದಂಡೆಯ ಮೇಲೆ ಮಾಡುತ್ತಿದ್ದರಂತೆ. ಪ್ರತಿದಿನ ಧಾರವಾಡದಿಂದ ನಾಲ್ಕಾರು ಗೆಳೆಯರು ಅವರ ಭೇಟಿಗೆ ಮುಗದ ಗ್ರಾಮಕ್ಕೆ ಹೋಗುತ್ತಿದ್ದರಂತೆ. ಅವರ ವಾಸ್ತವ್ಯವನ್ನು ಮುಗದದ ಜನರು ತಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡದ್ದನ್ನು ಇಂದಿಗೂ ಮೆಲಕು ಹಾಕುತ್ತಾರೆ.
    ಮುಗದಕ್ಕೂ ವರಕವಿ ಬೇಂದ್ರೆಯವರಿಗೂ ಒಂದು ಅವಿನಾಭಾವ ಸಂಬಂಧ. ಈ ಸಂಬಂಧ ಅವರಿರುವವರೆಗೂ ನಿರಂತರವಾಗಿತ್ತೆಂದು ಅವರ ಮಗ ವಾಮನ ಬೇಂದ್ರೆಯವರು ಮತ್ತು ಮುಗದದ ಹಿರಿಯರು ಹೇಳುತ್ತಿದ್ದರು.
    ಈ ನೆನಪಿಗಾಗಿ ದಿನಾಂಕ 26 ಅಕ್ಟೋಬರ್ 2024ರ ಶನಿವಾರ ಸಂಜೆ ಘಂಟೆ 05-00ರಿಂದ ಮುಗದದ ಕೆರೆ ಮತ್ತು ದುರ್ಗಾದೇವಿ ದೇವಸ್ಥಾನದ ಬಯಲಿನಲ್ಲಿ ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಸಕ್ರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಮುಗುದದ ಗ್ರಾಮ ಪಂಚಾಯತಿ ಹಾಗೂ ಗ್ರಾಮದ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ಭೃಂಗದ ಬೆನ್ನೇರಿ’ ಎಂಬ ಹೆಸರಿನ ವರಕವಿ ದ.ರಾ. ಬೇಂದ್ರೆ ಸಂಸ್ಮರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಇವರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ. ರಮಾಕಾಂತ ಜೋಶಿಯವರು ಉಪಸ್ಥಿತರಿರುತ್ತಾರೆ. ಅತಿಥಿಗಳಾಗಿ ಶ್ರೀ ಕಲ್ಲಪ್ಪ ಹಟ್ಟಿಯವರ, ಶ್ರೀಮತಿ ಗಿರಿಜಾ ಮುನವಳ್ಳಿ ಮತ್ತು ಶ್ರೀ ಎಸ್.ಎಸ್. ಪೀರಜಾದೆ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಗದ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀ ರವಿ ಕಸಮಳಗಿ ಇವರು ವಹಿಸುತ್ತಾರೆ.
    ಕಾರ್ಯಕ್ರಮದಲ್ಲಿ ಇಪ್ಪತ್ತು ಮಂದಿ ಗಣ್ಯರು ಬೇಂದ್ರೆಯವರ ಕವಿತೆಗಳನ್ನು ವಾಚಿಸುತ್ತಾರೆ ಮತ್ತು ಹಾಡುತ್ತಾರೆ. ಮುಗದದ ನವಭಾರತ ಕಾನ್ವೆಂಟ್ ಸ್ಕೂಲಿನ ಮಕ್ಕಳು ಬೇಂದ್ರೆಯವರ ಹಾಡಿನೊಂದಿಗೆ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಲಿದ್ದಾರೆ. ಕಾರ್ಯಕ್ರಮದ ಅಂತ್ಯದಲ್ಲಿ ಕವಿ ದ.ರಾ. ಬೇಂದ್ರೆಯವರ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಚಿತ್ರಕಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಾಶಿಬಿರಕ್ಕೆ ಅರ್ಜಿ ಆಹ್ವಾನ | ನವೆಂಬರ್ 15
    Next Article ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ‘ನಿರ್ಮಲ ಚಿತ್ತ ಲಹರಿ’ ಕವನ ಸಂಕಲನ ಬಿಡುಗಡೆ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.