Subscribe to Updates

    Get the latest creative news from FooBar about art, design and business.

    What's Hot

    ಪರಿಚಯ | ಯಕ್ಷ ಪ್ರತಿಭೆಯ ಕಲಾವಲ್ಲರಿ – ಶ್ರುತಿ ಭಟ್ ಮಾರಣಕಟ್ಟೆ

    July 6, 2025

    ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಅವಿಭಜಿತ ದ. ಕ. ಜಿಲ್ಲಾ ಅಧ್ಯಕ್ಷರಾಗಿ ಕಲಾಶ್ರೀ ರಾಜಶ್ರೀ ಉಳ್ಳಾಲ್ ಆಯ್ಕೆ

    July 5, 2025

    ಶತಾವಧಾನಿ ಡಾ. ಆರ್. ಗಣೇಶ್ ಇವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

    July 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹೊಸಕೋಟೆಯಲ್ಲಿ ಜನಪದರು ಅಮೃತ ರಂಗ ಮಾಲೆಯ ಯಶಸ್ವಿ ಸಮಾರೋಪ
    Drama

    ಹೊಸಕೋಟೆಯಲ್ಲಿ ಜನಪದರು ಅಮೃತ ರಂಗ ಮಾಲೆಯ ಯಶಸ್ವಿ ಸಮಾರೋಪ

    October 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಹೊಸಕೋಟೆ : ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆ ತನ್ನ ಪ್ರತಿ ತಿಂಗಳ ಎರಡನೇ ಶನಿವಾರದ ಸರಣಿ ನಾಟಕ ಪ್ರದರ್ಶನ “ರಂಗಮಾಲೆ” – 75ರ ಅಮೃತ ಮಹೋತ್ಸವ ಸಮಾರಂಭದ ಮೂರು ದಿನಗಳ ರಂಗ ಸಂಭ್ರಮ – ಸೋಮವಾರ ದಿನಾಂಕ 16-10-2023ರಂದು ಸಮಾರೋಪಗೊಂಡಿತು.

    ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ@ ಪಾಪಣ್ಣ ಕಾಟಂ ನಲ್ಲೂರ ಇವರ  ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂ. ಪೂ ತಾಲ್ಲೂಕು ಜಿ. ಪಂ.ಕಾ.ನಿ ಅಭಿಯಂತರರಾದ ವಸಂತರವರು ಮಾತನಾಡಿ “ಕೇವಲ ಜನರ ಸಹಕಾರದಿಂದ ನಡೆಯುವ ಈ ರಂಗ ಕಾರ್ಯ ಬಲು ಅಪರೂಪ. ಜೊತೆಗೆ ಸಭಿಕರೆಲ್ಲರಿಗೂ ಉಚಿತ ದಾಸೋಹ ಮತ್ತು ಜಾಗೃತಿಗಳ ಮೇಳ ನಡೆಸುವ ‘ಜನಪದರು’ ತಂಡದ ಕಾರ್ಯ ಅಭಿನಂದನಾರ್ಹ” ಎಂದರು. ಇದೇ ಸಂದರ್ಭದಲ್ಲಿ ರಂಗ ಮಾಲೆ ಹಾಗೂ ರಂಗ ಮಂದಿರದ ನಿರ್ಮಾಣಕ್ಕೆ ಸಹಕಾರ ನೀಡಿದ ಮಹನೀಯರು, ಕಲಾವಿದರು, ತಂತ್ರಜ್ಞರು ಹಾಗೂ ದಾಸೋಹಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದೊಡ್ಡಬನಹಳ್ಳಿ ಗ್ರಾ.ಪಂ.ಅಧ್ಯಕ್ಷ ಅನಿಲ್ ಕುಮಾರ ಅತಿಥಿಯಾಗಿ ಭಾಗವಹಿಸಿದರು. ಪದಾಧಿಕಾರಿಗಳಾದ ಸಿದ್ದೇಶ್ವರ ನನಸು ಮನೆ. ಜಗದೀಶ್ ಕೆಂಗನಾಳ್, ಎಂ. ಸುರೇಶ, ಮುನಿರಾಜು, ಮಹೇಶ್, ಚಲಪತಿ ಇತರರು ಹಾಜರಿದ್ದರು.

    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾಜಪ್ಪ ಕೋಲಾರ ಇವರ ಸಂಗೀತ ಜನಮನ ರಂಜಿಸಿತು. ಬಳಿಕ ಶರಣ ಸಂಸ್ಕೃತಿ ನಾಟಕೋತ್ಸವ ಸಾಣೆಹಳ್ಳಿಯಲ್ಲಿ ರಾಜ್ಯ ಮಟ್ಟದ ದ್ವಿತೀಯ ಸ್ಥಾನ ಪಡೆದು ದೆಹಲಿಯಲ್ಲಿ ವಿಶೇಷ ಪ್ರದರ್ಶನ ಕಂಡ ಮುದೇನೂರು ಸಂಗಣ್ಣ ರಚನೆಯ “ಸೂಳೆ ಸಂಕವ್ವ ” ನಾಟಕ ರಾಮಕೃಷ್ಣ ಬೆಳ್ತೂರು ನಿರ್ದೇಶನದಲ್ಲಿ ಪ್ರದರ್ಶನಗೊಂಡು ಪ್ರೇಕ್ಷಕರ ಮನ ಸೂರೆ ಗೊಳಿಸಿತು.

    Share. Facebook Twitter Pinterest LinkedIn Tumblr WhatsApp Email
    Previous Articleಬ್ರಹ್ಮಾವರದಲ್ಲಿ ‘ನುಡಿ ಚಿತ್ತಾರ -2023’ ಕಥೆ ಹೇಳುವ ಹಾಗೂ ಛದ್ಮವೇಷ ಸ್ಪರ್ಧೆ | ನವೆಂಬರ್ 5ರಂದು
    Next Article ಉಡುಪಿಯ ಆನಂದ ರಾವ್ ಹಾಲ್ ಗ್ಯಾಲರಿಯಲ್ಲಿ ‘ಸಿಂಧೂರ’ ಚಿತ್ರಕಲಾ ಪ್ರದರ್ಶನ | ಅಕ್ಟೋಬರ್ 20ರಿಂದ 24
    roovari

    Add Comment Cancel Reply


    Related Posts

    ಸುಳ್ಯದ ರಂಗಮಯೂರಿ ಕಲಾಶಾಲೆಯಲ್ಲಿ ಕಲಿಕಾ ತರಬೇತಿ ಪ್ರಾರಂಭ

    July 5, 2025

    ಬೆಂಗಳೂರಿನ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ‘ಅನುಗ್ರಹ’ | ಜುಲೈ 06

    July 4, 2025

    ಹಿರಿಯ ನಟ ಲಕ್ಷ್ಮಣ ಕುಮಾರ್ ಮಲ್ಲೂರು ಇವರಿಗೆ ‘ರಂಗ ಭಾಸ್ಕರ ಪ್ರಶಸ್ತಿ’

    July 4, 2025

    ತೀರ್ಥಹಳ್ಳಿಯಲ್ಲಿ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ | ಜುಲೈ 13

    July 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.