Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಧನಕೇರಿಯಲ್ಲಿ ‘ಆನಂದಕಂದರ ಐತಿಹಾಸಿಕ ಕಾದಂಬರಿ’ಗಳ ಒಂದು ಅವಲೋಕನ
    Literature

    ಸಾಧನಕೇರಿಯಲ್ಲಿ ‘ಆನಂದಕಂದರ ಐತಿಹಾಸಿಕ ಕಾದಂಬರಿ’ಗಳ ಒಂದು ಅವಲೋಕನ

    December 24, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ದಿನಾಂಕ 22 ಡಿಸೆಂಬರ್ 2025ರಂದು ಸಾಧನಕೇರಿಯ ‘ಚೈತ್ರ’ದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ಆನಂದಕಂದರ ಐತಿಹಾಸಿಕ ಕಾದಂಬರಿಗಳು’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಖ್ಯಾತ ವಿಮರ್ಶಕ, ಚಿಂತಕ ಡಾ. ಶ್ಯಾಮಸುಂದರ ಬಿದರಕುಂದಿಯವರು “ಆನಂದಕಂದರ (ದಿ. ಡಾ. ಬೆಟಗೇರಿ ಕೃಷ್ಣಶರ್ಮರ) ಐತಿಹಾಸಿಕ ಕಾದಂಬರಿ ತ್ರಿವಳಿಗಳು ವಿಜಯನಗರ ಸಾಮ್ರಾಜ್ಯದ 14ನೇ ಶತಮಾನದ ಮೂರು ತಲೆಮಾರಿನ ಕಥಾನಕವನ್ನು ನಮ್ಮಿಂದಿನ ರಾಜಕೀಯ-ಧಾರ್ಮಿಕ ಆಗುಹೋಗುಗಳನ್ನೇ ನೆನಪಿಸುವುದರ ಜೊತೆಗೆ ನಮ್ಮಿಂದಿನ ಇತಿಹಾಸದ ಪಾಠಗಳನ್ನು ಕಲಿಸುವಂತಿವೆ. ಕೃಷ್ಣಶರ್ಮರ ಸಮಕಾಲೀನ ಇತಿಹಾಸ ಪ್ರಜ್ಞೆಯಿಂದ ಒಡಮೂಡಿದ ಮಲ್ಲಿಕಾರ್ಜುನ, ರಾಜಯೋಗಿ ಮತ್ತು ಅಶಾಂತಿ ಪರ್ವ ಈ ಮೂರು ಐತಿಹಾಸಿಕ ಕಾದಂಬರಿಗಳು ಅಸಾಧಾರಣ ಜ್ಞಾನವನ್ನು, ಸೂಕ್ಷ್ಮ ಸಂವೇದನೆಗಳನ್ನು ಓದುಗರಲ್ಲಿ ಹುಟ್ಟಿಸುತ್ತವೆ. ಇವುಗಳನ್ನು ಪುನ: ಪ್ರಕಟಿಸುವ ಮೂಲಕ ಓದುಗರಲ್ಲಿ ಸದಭಿರುಚಿಯನ್ನು ಬೆಳೆಸಬೇಕಾಗಿದೆ” ಎಂದು ಸೂಚಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ನೋರ್ವ ಹಿರಿಯ ಚಿಂತಕ ಪ್ರೊ. ಹರ್ಷ ಡಂಬಳ ಅವರು ಮಾತನಾಡಿ “ನಿಜವಾಗಿಯೂ ಕವಿಭೂಷಣರಾಗಿದ್ದ, ಮೃದು ಮಾತಿನ, ಬಹುಮುಖ ಪ್ರತಿಭೆಯ, ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಬಲ್ಲವರಾಗಿದ್ದ ಡಾ. ಬೆಟಗೇರಿ ಕೃಷ್ಣಶರ್ಮಗೆ ಸಿಗಬೇಕಾದ ಸೂಕ್ತ ಗೌರವವು ಕೊನೆಗೂ ಸಿಗಲೇ ಇಲ್ಲವೆಂಬುದು ಅತ್ಯಂತ ಖೇದಕರ ಸಂಗತಿಯಾಗಿದೆ. ಪತ್ರಿಕೋದ್ಯಮದಲ್ಲಿ ಸತತ 23 ವರ್ಷ ಕಾಲ ದುಡಿದ ಅವರ ಅಗಾಧ ಸೇವೆ ಸ್ಮರಣೀಯವಾಗಿದ್ದು, ಸದ್ದಿಲ್ಲದ ಸತತ ದುಡಿಮೆಯ ಈ ಹಿರಿಯರಿತ್ತ 54 ಕೃತಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ” ಎಂದು ಸ್ಮರಿಸಿಕೊಂಡರು.

    ಅನ್ವೇಷಣಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆಯವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಾಜೀವ ಪಾಟೀಲಕುಲಕರ್ಣಿ ವಂದಿಸಿ, ಅನಿಲ ಕಾಖಂಡಿಕಿ ಕಾರ್ಯಕ್ರಮ ನಿರೂಪಿಸಿದರು. ಗಣ್ಯರಾದ ಡಾ. ಆನಂದ ಪಾಟೀಲ, ಹಿರಿಯ ಚಿತ್ರಕಲಾವಿದ ಎಮ್.ಆರ್. ಬಾಳಿಕಾಯಿ, ಪ್ರೊ. ಶಿವಾನಂದ ಶೆಟ್ಟರ, ಡಾ. ಮೋಹನ ಸುಂಕದ, ಕಲಾವಿದ ಅನಂತ ದೇಶಪಾಂಡೆ, ಸಾಹಿತಿ ಶ್ರೀನಿವಾಸ ವಾಡಪ್ಪಿ, ಎಸ್.ಎಮ್. ದೇಶಪಾಂಡೆ, ಜಿ.ಆರ್. ಭಟ್ಟ, ಪರಮೇಶ್ವರ ಎಮ್.ಎಸ್., ಎಸ್.ಬಿ. ದ್ವಾರಪಾಲಕ, ಕುಮಾರಸ್ವಾಮಿ ಪುರಾಣಿಕಮಠ, ಎಸ್.ಎಸ್. ಬಂಗಾರಿಮಠ, ಅನಂತ ಸಿದ್ಧೇಶ್ವರ, ಆನಂದ ಕುಲಕರ್ಣಿ, ಸರೋಜಾ ಕುಲಕರ್ಣಿ, ಸುಮಂಗಲಾ ಶೆಟ್ಟರ, ಸೀಮಾ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಬೀದಿನಾಟಕದ ಮೂಲಕ ಆರೋಗ್ಯ ಶಿಕ್ಷಣ
    Next Article ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ‘ಅಖಿಲ ಕರ್ನಾಟಕ ಐದನೆಯ ಕವಿಕಾವ್ಯ ಸಮ್ಮೇಳನ’
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಶ್ರೀಮತಿ ಜಲಜಾ ಶೇಖರ್ ಆಯ್ಕೆ

    January 13, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಹೂ ದಂಡಿ’

    January 13, 2026

    ‘ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜನವರಿ 25

    January 13, 2026

    ಮಂಗಳೂರಿನ ಪುರಭವನದಲ್ಲಿ ‘ಸ್ವರ ಸಂಕ್ರಾಂತಿ’ ಹಿಂದೂಸ್ಥಾನಿ ಸಂಗೀತ ಕಛೇರಿ | ಜನವರಿ 14

    January 13, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.