Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉದಯೋನ್ಮುಖ ಕಲಾವಿದೆ ‘ಅಂತರ ಶ್ರೀರಾಮ್’ – ರಂಗೋಲ್ಲಾಸ | ಏಕವ್ಯಕ್ತಿ ನೃತ್ಯಪ್ರದರ್ಶನ ಮೇ 21ಕ್ಕೆ
    Bharathanatya

    ಉದಯೋನ್ಮುಖ ಕಲಾವಿದೆ ‘ಅಂತರ ಶ್ರೀರಾಮ್’ – ರಂಗೋಲ್ಲಾಸ | ಏಕವ್ಯಕ್ತಿ ನೃತ್ಯಪ್ರದರ್ಶನ ಮೇ 21ಕ್ಕೆ

    May 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ‘ರಮಣ ಮಹರ್ಷಿ ಕಲಿಕಾಕೇಂದ್ರ’ದಲ್ಲಿ ನೃತ್ಯಗುರುಗಳಾಗಿ ಹಾಗೂ ಕಾರ್ಯಕ್ರಮ ನಿರ್ವಾಹಕರಾಗಿರುವ ವಿದ್ವಾನ್ ಶ್ರೀ ಉಜ್ವಲ್ ಜಗದೀಶ್ ಬೆಂಗಳೂರಿನ ಪ್ರಖ್ಯಾತ ನೃತ್ಯಪಟು, ಯುವ ಆಚಾರ್ಯ, ನೃತ್ಯ ಸಂಯೋಜಕ ಹಾಗೂ ಉತ್ತಮ ಸಂಶೋಧಕರು. ಇವರ ನುರಿತ ಗರಡಿಯಲ್ಲಿ ರೂಹುಗೊಂಡಿರುವ ಕಲಾಶಿಲ್ಪ ಕು. ಅಂತರ ಶ್ರೀರಾಮ್ ಬಹುಮುಖ ಪ್ರತಿಭೆಯ ನೃತ್ಯಕಲಾವಿದೆ. ಸೃಜನಶೀಲ ಕಲಾಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಕು. ಅಂತರ, ಗುರು ಉಜ್ವಲ್ ಬಳಿ ಹಲವಾರು ವರ್ಷಗಳ ಬದ್ಧತೆಯ ನೃತ್ಯಾಭ್ಯಾಸ ಮಾಡಿದ ನಂತರ ಆತ್ಮವಿಶ್ವಾಸದಿಂದ ರಂಗಾರೋಹಣ ಮಾಡಿ ತನ್ನ ಏಕವ್ಯಕ್ತಿ ನೃತ್ಯಪ್ರದರ್ಶನ ನೀಡಲು ಸನ್ನದ್ಧಳಾಗಿದ್ದಾಳೆ . ಇದೇ ತಿಂಗಳ 21 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ‘ಅಂತರಂಗಪ್ರವೇಶ’ – ಪ್ರಪ್ರಥಮ ಏಕವ್ಯಕ್ತಿ ಭರತನಾಟ್ಯವನ್ನು ‘ವಿಶ್ವ ತಾಯಂದಿರ ದಿನ’ಕ್ಕಾಗಿ ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ಸಮರ್ಪಿಸಲಿದ್ದಾಳೆ. ಅವಳ ಕಲಾಸೊಬಗನ್ನು ಕಣ್ಮನ ತುಂಬಿಕೊಳ್ಳಲು ಎಲ್ಲರಿಗೂ ಆದರದ ಸ್ವಾಗತ.

    ಶ್ರೀಮತಿ ಉಮಾ ಶ್ರೀರಾಮ್ ಹಾಗೂ ಶ್ರೀರಾಮ್ ರವರ ಪ್ರೀತಿಯ ಪುತ್ರಿ ಅಂತರ ಬಾಲಪ್ರತಿಭೆ. ಮೂರನೆಯ ವಯಸ್ಸಿನಲ್ಲೇ ಹೆಜ್ಜೆ ಹಾಕಿದವಳು. ಮೊದಲು ರಂಗಾಭರಣ ಕಲಾಕೇಂದ್ರದಲ್ಲಿ ನೃತ್ಯ ಕಲಿಯಲಾರಂಭಿಸಿ ನಂತರ ಮಹರ್ಷಿ ಕಲಿಕಾ ಕೇಂದ್ರ ಸೇರ್ಪಡೆ. ನೃತ್ಯ-ಸಂಗೀತದ ತರಬೇತಿ ಒಟ್ಟೊಟ್ಟಿಗೆ. ಮೊದಲು ರೂಪಾ ಹೇಮಂತ್ ಅನಂತರ ರೇವತಿ ಶಂಕರ್ ಅವರ ಬಳಿ ತರಬೇತಿ ಹೊಂದಿ, ಪ್ರಸ್ತುತ ಗುರು ಉಜ್ವಲ್ ಜಗದೀಶ್ ಅವರ ಬಳಿ ನೃತ್ಯಶಿಕ್ಷಣ.  ಕರ್ನಾಟಕ ಪ್ರೌಢ ಶಿಕ್ಷಣ ಮಂಡಲಿ ನಡೆಸುವ ಭರತನಾಟ್ಯದ ಕಿರಿಯದರ್ಜೆಯ ಪರೀಕ್ಷೆ ಹಾಗೂ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ನಡೆಸುವ ಮಧ್ಯಮ ಪೂರ್ಣ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ಹಿರಿಯ ನೃತ್ಯಗುರುಗಳಾದ ಡಾ. ಅಂಬಿಕಾ ಕಮೇಶ್ವರ್, ಶ್ರೀಮತಿ ಉಮಾ ಸತ್ಯನಾರಾಯಣ್ ಹಾಗೂ ಶ್ರೀಮತಿ ಬ್ರಗಾ ಬೆಸಿಲ್ ರವರ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದ ಹೆಮ್ಮೆ ಅವಳದು.

    ಅಂತರ, ಈಗ ಡೆಫೊಡಿಲ್ಸ್ ಆಂಗ್ಲಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಎಲ್ಲಾ ಸಾಂಸ್ಕ್ರುತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಮುಂದು. ಆಟ ಮತ್ತು ಪಾಠ ಎರಡರಲ್ಲೂ ಮುಂದಿರುವ ಇವಳು 3ನೇ ತರಗತಿಯಿಂದ 6ನೇ ತರಗತಿಯವರಗೆ “ಆಲ್ ರೌಂಡರ್” ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ. ಈ ವರ್ಷ ಶಾಲೆಯ ಸಾಂಸ್ಕ್ರುತಿಕ ಚಟುವಟಿಕೆಗಳ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾಳೆ. ಸಾಫ್ ಸ್ಟೂಡಿಯೋನಲ್ಲಿ ಶ್ರೀ ಅರುಣ ರಾಜ್ ರವರಲ್ಲಿ ಏರೋಬಿಕ್ಸ್,ಜುಂಬಾ,  ಹಾಗೂ ಸಿನಿಮಾ ನೃತ್ಯವನ್ನು ಕಲಿಯುತ್ತಿದ್ದಾಳೆ. ತಾನೇ ಸ್ವತಃ ನೃತ್ಯ ತರಬೇತಿ ಹಾಗೂ ನೃತ್ಯ ಸಂಯೋಜನೆ ಮಾಡುವ ಕೌಶಲ್ಯವನ್ನೂ ಬೆಳೆಸಿಕೊಂಡಿರುವುದು ಅವಳ ಗರಿಮೆ.

    ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡಿರುವ ಇವಳಿಗೆ, ದುಬೈನ ‘ರೆಲಿಶ್ ದ ರಸ’ ಸಂಸ್ಥೆಯ ‘ನವರಸಾತ್ರಿ ಚಲ್ಲುಕಟ್ಟೋತ್ಸವ’ ದಲ್ಲಿ ಸ್ಟಾರ್ ಪರ್ಫಾರ್ಮರ್ ಬಿರುದು ಹಾಗೂ ಶ್ರೀಮತಿ ಕಮಲಾಬಾಯಿ ಶಾಲೆ ನಡೆಸಿದ ಭಾರತೀಯ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದ್ದು,  ನೃತ್ಯ ಸಂಯೋಜನೆಗೆ ‘ಭಾರತ ಕಲಾ ಪಲ್ಲವ’ ಎಂಬ ಬಿರುದು ಸಂದಿದೆ. ನೃತ್ಯ ಕಿಂಕಿಣಿ ಸಂಸ್ಥೆಯ ಆನ್ ಲೈನ್ ಸ್ಪರ್ಧೆಗಳಲ್ಲಿ ನೃತ್ಯ ಕಲಾ ಅಂಕುರ, ಕಲಾರತ್ನ ಶ್ರೇಷ್ಠ, ನೃತ್ಯ ಕಲಾಜ್ಯೋತಿ ಹಾಗೂ ಕಲಾ ಶ್ರೇಷ್ಠ ಪ್ರಶಸ್ತಿಗಳು ದೊರಕಿರುವುದು ಇವಳ ವೈಶಿಷ್ಟ್ಯ.

    ವೈ.ಕೆ. ಸಂಧ್ಯಾ ಶರ್ಮ
    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ ದ ಸ್ಥಾಪಕಿ -ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    Share. Facebook Twitter Pinterest LinkedIn Tumblr WhatsApp Email
    Previous Article‘ಭರತನಾಟ್ಯದಲ್ಲಿ ತಾಳ ಅವಧಾನ’ – ಉಪನ್ಯಾಸ ಪ್ರಾತ್ಯಕ್ಷಿಕೆ 
    Next Article ನಟನದಲ್ಲಿ ಮತ್ತೆ ‘ಕಣಿವೆಯ ಹಾಡು’ | ಮೇ 21ಕ್ಕೆ
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ತಾಭಿನಯ ಸಂವೃತಳ ರಮ್ಯ ನರ್ತನ

    May 22, 2025

    ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿಯ ನಲ್ವತ್ತರ ನಲಿವು 11ನೇ ಸರಣಿ ಕಾರ್ಯಕ್ರಮ

    May 16, 2025

    ಶ್ರೀ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ‘ನಲ್ವತ್ತರ ನಲಿವು -11’ | ಮೇ 13

    May 12, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.