Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಡೊಂಬಿವಲಿಯಲ್ಲಿ ಅನಿತಾ ಪಿ. ತಾಕೊಡೆಯವರ ಕೃತಿ ಲೋಕಾರ್ಪಣೆ – ‘ನಿವಾಳಿಸಿಬಿಟ್ಟ ಕೋಳಿ’ ಹಾಗೂ ‘ಲೋಕಲ್ ಟ್ರೈನ್’
    Book Release

    ಡೊಂಬಿವಲಿಯಲ್ಲಿ ಅನಿತಾ ಪಿ. ತಾಕೊಡೆಯವರ ಕೃತಿ ಲೋಕಾರ್ಪಣೆ – ‘ನಿವಾಳಿಸಿಬಿಟ್ಟ ಕೋಳಿ’ ಹಾಗೂ ‘ಲೋಕಲ್ ಟ್ರೈನ್’

    June 27, 2023Updated:August 19, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮುಂಬಯಿ : ಡೊಂಬಿವಲಿ ಪೂರ್ವದ ಮಂಜುನಾಥ ಸಭಾಗೃಹದಲ್ಲಿ ದಿನಾಂಕ :18-06-2023ರಂದು ನಡೆದ ಅನಿತಾ ಪಿ. ತಾಕೊಡೆಯವರ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಭಾಧ್ಯಕ್ಷತೆಯನ್ನು ವಹಿಸಿದ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿಯವರು “ನಮ್ಮ ಮುಖ್ಯ ಉದ್ದೇಶವೇ ಕನ್ನಡವನ್ನು ಉಳಿಸಿ ಬೆಳೆಸುವುದು. ಕನ್ನಡವು ನಿಂತ ನೀರಾಗಬಾರದು ಅದು ನದಿಯಂತೆ ಹರಿಯುತ್ತಿರಬೇಕು. ಇದರ ಸಲುವಾಗಿ ಕನ್ನಡ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಂಘದ ಮುಖಾಂತರ ಸಹಕರಿಸುತ್ತಿದ್ದೇವೆ. ಇಂದಿನ ಕಾರ್ಯಕ್ರಮಕ್ಕೆ ಕನ್ನಡದ ಅಭಿಮಾನಿಗಳ ಬಳಗವೇ ಬಂದಿದೆ. ರಾಜಕಾರಣಿಗಳ ಹಿಂದೆ ಜನ ಹೋಗುವುದನ್ನು ನೋಡಿದ್ದೇನೆ. ಕವಿಗಳಿಗೆ ಇಷ್ಟು ದೊಡ್ಡ ಅಭಿಮಾನಿ ಬಳಗವಿದೆಯೆಂದು ಇವತ್ತೇ ಗೊತ್ತಾಗಿದ್ದು. ಅನಿತಾ ತಾಕೊಡೆಯವರು ನಮ್ಮ ಡೊಂಬಿವಲಿಯ ಹೆಮ್ಮೆ. ಸಣ್ಣ ವಯಸ್ಸಿನಲ್ಲಿಯೇ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರ ಸಾಹಿತ್ಯ ಕೈಂಕರ್ಯಕ್ಕೆ ಕರ್ನಾಟಕ ಸಂಘದ ಬೆಂಬಲ ಯಾವತ್ತಿಗೂ ಇದೆ” ಎನ್ನುತ್ತ ಸಂಘದ ಕಾರ್ಯಚಟುವಟಿಕೆಗಳಲ್ಲಿ ಸಹಕಾರ ನೀಡುತ್ತ ಬಂದವರನ್ನು ಸ್ಮರಿಸಿದರು.

    ಸಂಘದ ಕಾರ್ಯಾಧ್ಯಕ್ಷರಾದ ಸುಕುಮಾರ್ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, “ಕೆಲವು ಸಮಯದ ಅಂತರದಲ್ಲಿ ನಾವು ಈ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮುಂಬೈಯ ಹೆಚ್ಚಿನ ಸಾಹಿತಿಗಳು ಇಂದು ಡೊಂಬಿವಲಿಗೆ ಬಂದಿದ್ದಾರೆ. ಇನ್ನು ಮುಂದೆಯೂ ಇದೇ ಸಹಕಾರ ಸಿಗಲಿ” ಎಂದರು.

    ‘ನಿವಾಳಿಸಿಬಿಟ್ಟ ಕೋಳಿ’ ಕಥಾಸಂಕಲನವನ್ನು ಬಿಡುಗಡೆಗೊಳಿಸಿದ ಕರ್ನಾಟಕ ಮಲ್ಲ ದಿನಪತ್ರಿಕೆಯ ಉಪಸಂಪಾದಕರಾದ ಶ್ರೀನಿವಾಸ ಜೋಕಟ್ಟೆಯವರು “ಡೊಂಬಿವಲಿ ಕರ್ನಾಟಕ ಸಂಘಕ್ಕೆ ಸಾಹಿತ್ಯಿಕವಾದ ಒಂದು ವಿಶೇಷ ಪರಂಪರೆಯಿದೆ. ಅನಿತಾರ ಸಾಹಿತ್ಯಿಕ ಬೆಳವಣಿಗೆಯನ್ನು ಆರಂಭದಿಂದಲೂ ಕಾಣುತ್ತ ಬಂದಿದ್ದೇನೆ. ಮುಂಬೈಯ ಕನ್ನಡ ಸಾಹಿತ್ಯವನ್ನು ಚುರುಕುಗೊಳಿಸುವಲ್ಲಿ, ಕರ್ನಾಟಕದಲ್ಲೂ ಗುರುತಿಸುವಲ್ಲಿ ಅನಿತಾ ತಾಕೊಡೆಯವರ ಸಾಮರ್ಥ್ಯವನ್ನು ನಾವು ಗಮನಿಸಬೇಕು. ಈ ಕಥಾ ಸಂಕಲನದಲ್ಲಿ ಅವರು ಕಂಡು ಅನುಭವಿಸಿದ, ಜೀವನಾನುಭವಗಳಲ್ಲಿ ದಕ್ಕಿದಂಥ ವಸ್ತುಗಳನ್ನು ಕಥೆಯಾಗಿಸಿದ್ದಾರೆ” ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

    ‘ಲೋಕಲ್ ಟ್ರೈನ್’ ಅಂಕಣ ಬರಹಗಳ ಸಂಕಲನವನ್ನು ಲೋಕಾರ್ಪಣೆಗೊಳಿಸಿದ ಕತೆಗಾರ ವಸಂತ ಕಲಕೋಟಿಯವರು ಮಾತನಾಡಿ “ಈ ಕೃತಿಯ ವಿಶೇಷವೇನೆಂದರೆ ಅನಿತಾ ಅವರು ತಾವು ನೋಡಿದ ವ್ಯಕ್ತಿಗಳನ್ನು, ಘಟನೆಗಳನ್ನು ಪ್ರಾಮಾಣಿಕವಾಗಿ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಅವರ ಭಾಷೆ ಬಹಳ ಸೊಗಸಾಗಿದೆ ಯಾರೂ ಓದಿ ಅರ್ಥಮಾಡಿಕೊಳ್ಳಬಹುದು” ಎಂದು ಪ್ರಶಂಸಿಸಿದರು.
    ಸಾಹಿತಿ, ನಾಟಕಕಾರ ಸಾದಯ ಅವರು, “ಈ ಕಥಾ ಸಂಕಲನದಲ್ಲಿ ಪ್ರೀತಿ ಪ್ರೇಮ ಆಕರ್ಷಣೆ, ವಾತ್ಸಲ್ಯ, ಸಂಬಂಧ ಹೀಗೆ ಹಲವು ಭಾವಗಳನ್ನು ನಾವು ಕಾಣಬಹುದು. ಇಲ್ಲಿನ ಹೆಚ್ಚಿನ ಕತೆಗಳು ಭಾವನೆಗಳಿಗೆ ಸಂಬಂಧಪಟ್ಟವುಗಳಾಗಿದ್ದು ಕೆಲವು ಒಮ್ಮೆಲೆ ತಿರುವನ್ನು ಪಡೆದುಕೊಳ್ಳುತ್ತವೆ” ಎಂದು ಕಥಾ ಸಂಕಲನದಲ್ಲಿರುವ ವಿಶೇಷತೆಯನ್ನು ಪರಿಚಯಿಸಿದರು.

    ಕಂಠದಾನ ಕಲಾವಿದೆ ನಳಿನಾ ಪ್ರಸಾದ್ ಅವರು, “ಈ ಲೋಕಲ್ ಟ್ರೈನ್ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಆಪ್ತವೆನಿಸುತ್ತದೆ. ಮುಂಬೈಯ ಸಮಸ್ತ ಜೀವನಕ್ರಮ, ಅದರ ಭಾಗವಾದಂಥ ಸಾಮಾನ್ಯರ ಬದುಕನ್ನು, ವೈವಿಧ್ಯಮಯ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಅನಿತಾ ಅವರ ಅಂಕಣಬರಹಗಳು ವಿಶೇಷವಾಗಿದೆ. ಇಲ್ಲಿ ಲೇಖಕಿ ಸ್ವತಃ ನಿರೂಪಕಿಯಾಗಿ ನಿಂತು ನಿರ್ವಹಿಸಿರುವುದು ಲೇಖನಗಳಿಗೆ ತಾಜಾತನವನ್ನೂ, ಲವಲವಿಕೆಯನ್ನೂ ನೀಡುತ್ತದೆ. ಈ ಪ್ರಬಂಧಗಳಲ್ಲಿ ಲಘುದಾಟಿಯಲ್ಲೇ ಜೀವನ ವ್ಯಾಪಾರದ ಸೂಕ್ಷ್ಮಗಳನ್ನು ಹಿಡಿಯುವ ಚಾಕಚಕ್ಯತೆಯನ್ನು ಗಮನಿಸಬಹುದಾಗಿದೆ” ಎಂದು ಕೃತಿಯ ಸಾರವನ್ನು ಸೊಗಸಾಗಿ ಪೇಕ್ಷಕರ ಮುಂದೆ ತೆರೆದಿಟ್ಟರು.

    ಕೃತಿಕರ್ತೆ ಲೇಖಕಿ ಅನಿತಾ ಪಿ. ತಾಕೊಡೆಯವರು ತಮ್ಮ ಮನದಾಳದ ಮಾತುಗಳನ್ನಾಡುತ್ತ, “ಆರಂಭದಿಂದಲೂ ನನ್ನ ಸಾಹಿತ್ಯಿಕ ಚಟುವಟಿಕೆಗಳಿಗೆ ಡೊಂಬಿವಲಿ ಕರ್ನಾಟಕ ಸಂಘದಿಂದ ಪ್ರೇರಣೆ ಸಿಕ್ಕಿದೆ. ನನ್ನೆರಡು ಕೃತಿಗಳು ನಾನಿರುವ ಪರಿಸರದಲ್ಲಿ ಲೋಕಾರ್ಪಣೆಯಾಗಬೇಕೆಂಬ ನನ್ನ ಇಚ್ಛೆಯನ್ನು ಇದೇ ಸಂಘ ನಿರೀಕ್ಷೆಗೂ ಮೀರಿ ಅದ್ದೂರಿಯಾಗಿ ನೆರವೇರಿಸಿದೆ. ಇಂದಿನ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ದೂರದಿಂದ ಸಹೃದಯ ಬಾಂಧವರು ಪ್ರೀತಿಯಿಂದ ಡೊಂಬಿವಲಿಗೆ ಬಂದಿದ್ದಾರೆ. ಮುಂಬೈಯಲ್ಲಿ ನಾನು ಸಂಪಾದಿಸಿದ್ದು ತುಳು ಕನ್ನಡಿಗರ ಪ್ರೀತಿ. ಅದುವೇ ನನ್ನ ಜೀವನದ ಆಸ್ತಿ” ಎನ್ನುತ್ತ, ತನ್ನ ಅಭಿವೃದ್ಧಿ ಬಯಸಿ ಸಹಕಾರ ನೀಡಿ ಪ್ರೋತ್ಸಾಹಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

    ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಡೊಂಬಿವಲಿ ವತಿಯಿಂದ ಅನಿತಾ ಪಿ. ತಾಕೊಡೆ ದಂಪತಿಯನ್ನು ಶಾಲು ಹೊದಿಸಿ, ಸ್ಮರಣಿಕೆ ಪುಷ್ಪಗುಚ್ಛಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿ ಗಣ್ಯರೆಲ್ಲರನ್ನೂ ಸನ್ಮಾನಿಸಲಾಯಿತು. ಕೃತಿ ಬಿಡುಗಡೆ ಕಾರ್ಯಕ್ರಮವನ್ನು ವಾಚನಾಲಯ ವಿಭಾಗದ ಕಾರ್ಯದರ್ಶಿ ವಸಂತ ಸುವರ್ಣ ಅವರು ನಿರೂಪಿಸಿ ವಂದಿಸಿದರು. ತುಂಬಿದ ಸಭಾಂಗಣದಲ್ಲಿ ಮುಂಬೈಯ ಗಣ್ಯ ಸಾಹಿತಿಗಳು, ಕಲಾವಿದರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಂಬಯಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಡೊಂಬಿವಲಿ ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಜಯಕೀರ್ತಿ ಹೆಚ್. ಇವರ ‘ಮುಕ್ತ ಜಿನದತ್ತ’ ಕಾದಂಬರಿ ಲೋಕಾರ್ಪಣೆ
    Next Article ಮಂಗಳೂರಿನ ಸಂಘನಿಕೇತನದಲ್ಲಿ ‘ಆನ್ವೀಕ್ಷಿಕೀ‘ ಪುಸ್ತಕ ಬಿಡುಗಡೆ | ಜೂನ್ 28ರಂದು
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    ರಾಜ್ಯ ಮಟ್ಟದ ಸಂಶೋಧನಾ ಕಮ್ಮಟ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ | ಮೇ 27

    May 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.