Subscribe to Updates

    Get the latest creative news from FooBar about art, design and business.

    What's Hot

    ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಎಸ್. ಬಂಗಾರಪ್ಪ ಜನ್ಮ ದಿನೋತ್ಸವ | ಅಕ್ಟೋಬರ್ 26

    October 25, 2025

    ರಾಜ್ಯ ಸರ್ಕಾರಿ ನೌಕರರಿಗಾಗಿ ಜನಪದ, ಕನ್ನಡ ಗೀತೆಗಳ ಗುಂಪು ನೃತ್ಯ ಸ್ಪರ್ಧೆ

    October 25, 2025

    ಕಿಶೋರ್ ಡಿ. ಶೆಟ್ಟಿಯವರು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ

    October 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಯಕ್ಷನಂದನ’ ಆಂಗ್ಲ ಭಾಷಾ ಯಕ್ಷಗಾನ ತಂಡದ ವಾರ್ಷಿಕೋತ್ಸವ
    Felicitation

    ‘ಯಕ್ಷನಂದನ’ ಆಂಗ್ಲ ಭಾಷಾ ಯಕ್ಷಗಾನ ತಂಡದ ವಾರ್ಷಿಕೋತ್ಸವ

    July 4, 2024Updated:July 6, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಪುರಭವನದಲ್ಲಿ ‘ಯಕ್ಷನಂದನ’ ಪಿ.ವಿ. ಐತಾಳರ ಆಂಗ್ಲ ಭಾಷಾ ಯಕ್ಷಗಾನ ತಂಡದ 43ನೇ ವರ್ಷಾಚರಣೆಯು ದಿನಾಂಕ 02-07-2024ರಂದು ಜರಗಿತು.

    ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ಕುಂಬ್ಳೆ ಶ್ರೀಧರ ರಾವ್ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ “ಆಂಗ್ಲ ಭಾಷೆಯಲ್ಲಿ 43 ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಆಯೋಜಿಸಲು ಯಕ್ಷನಂದನ ಸಂಸ್ಥೆಯಿಂದ ಮಾತ್ರ ಸಾಧ್ಯ. ಪಿ.ವಿ. ಐತಾಳರ ಕನಸಾಗಿರುವ ಈ ಯಕ್ಷಗಾನ ಪ್ರದರ್ಶನ ಮುಂದಿನ ದಿನಗಳಲ್ಲಿ ನಿರಂತರವಾಗಿ ನಡೆಯಲಿ. ಯಕ್ಷನಂದನ ಭವಿಷ್ಯದಲ್ಲಿಯೂ ‘ನಂದನ’ವಾಗಿಯೇ ಇರಲಿ” ಎಂದು ಹೇಳಿದರು.

    ಎನ್.ಐ.ಟಿ.ಕೆ. ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ಎ. ಚಿತ್ತರಂಜನ್ ಹೆಗ್ಡೆ ಇವರು “ಸಂಗೀತ, ಸಾಹಿತ್ಯ, ನೃತ್ಯ, ಯಕ್ಷಗಾನಗಳೆಲ್ಲವೂ ನಮ್ಮ ಜೀವನಕ್ಕೆ ಆನಂದವನ್ನು ನೀಡುವಂತಹುದು. ಯಕ್ಷಗಾನದಂತಹಾ ಕಲೆಗಳು ನಮ್ಮಲ್ಲಿನ ಲವಲವಿಕೆಯನ್ನು ಉಜ್ವಲಗೊಳಿಸಿ, ಬದುಕಿಗೆ ಅರ್ಥ ತುಂಬುತ್ತವೆ. ಮಂಕುತಿಮ್ಮನ ಕಗ್ಗದಲ್ಲಿ ಉಲ್ಲೇಖಿಸಿರುವಂತೆ ಸಂಗೀತ ನೃತ್ಯಾದಿ ಪ್ರಕಾರಗಳು ಮಾನವನ ಬದುಕಿನ ಸಂಗಾತಿಗಳು. ಶಾಸಕರಾಗಿ, ನ್ಯಾಯವಾದಿಗಳಾಗಿ ಮೆರೆದ ಐತಾಳರು ಆಂಗ್ಲ ಭಾಷಾ ಯಕ್ಷಗಾನದ ಪ್ರಮುಖ ರೂವಾರಿ. ನಲವತ್ತಮೂರು ವರ್ಷಗಳ ಈ ಇಂಗ್ಲೀಷ್ ಯಾನ ಅಭೂತಪೂರ್ವವಾದುದು. ಅವರ ನಂತರವೂ ಅವರ ಮಕ್ಕಳು ಅದನ್ನು ಮುಂದುವರಿಸಿಕೊಂಡು ಯಕ್ಷಕ್ರಾಂತಿಯನ್ನುಂಟು ಮಾಡಿದ್ದಾರೆ. ಪಿ.ವಿ. ಐತಾಳ್ ಆಂಗ್ಲ ಭಾಷಾ ತಂಡ ಸುವರ್ಣ, ಶತಮಾನ ಉತ್ಸವಗಳನ್ನು ಕಾಣಲಿ” ಎಂದು ಅಧ್ಯಕ್ಷೀಯ ಪೀಠದಿಂದ ನುಡಿದರು.

    ಮುಖ್ಯ ಅತಿಥಿಯಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ರಾಜಮಣಿ ಎ. ಮತ್ತು ಶ್ರೀಧರ ಐತಾಳ್ ಇವರುಗಳು ಭಾಗವಹಿಸಿದ್ದರು. ‘ಯಕ್ಷನಂದನ’ದ ಸಂಚಾಲಕ ಸಂತೋಷ್ ಐತಾಳರು ಪ್ರಸ್ತಾವನೆಗೈದು ‘ಯಕ್ಷನಂದನ’ದ ಬೆಳವಣಿಗೆಗಳ ಬಗ್ಗೆ ತಿಳಿಸಿದರು. ಡಾ. ಸತ್ಯಮೂರ್ತಿ ಐತಾಳರು ಸ್ವಾಗತಿಸಿ, ಸುರೇಶ್ ಕುಮಾರ್ ಪಿ. ಇವರು ಪಿ.ವಿ. ಐತಾಳರಿಗೆ ನುಡಿನಮನ ಅರ್ಪಿಸಿದರು. ಅತಿಥಿಗಳೆಲ್ಲರೂ ಐತಾಳರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

    ಇದೇ ಸಂದರ್ಭದಲ್ಲಿ ಕುಮಾರಿಯರಾದ ಅನಘಾ ಐತಾಳ್, ವೈಷ್ಣವಿ ಐತಾಳ್ ಮತ್ತು ಪ್ರತೀಕ್ಷಾ ಬಿ.ವಿ.ಯವರಿಗೆ ಪಿ.ವಿ. ಐತಾಳರ ಸ್ಮರಣಾರ್ಥ ಪಿ.ವಿ. ಐತಾಳ ಮೆಮೋರಿಯಲ್ ವೆಂಕಟರತ್ನ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾನಿಧಿ ಸಹಕಾರವೂ ನಡೆಯಿತು. ಯಕ್ಷನಂದನದ ಕಲಾವಿದರಾಗಿದ್ದ ಎಂ.ಸಿ.ಎಫ್.ನ ನಿವೃತ್ತ ಉದ್ಯೋಗಿ ಪಿ. ಪುರುಷೋತ್ತಮ ರಾವ್ ಇವರನ್ನು ಗೌರವಿಸಲಾಯಿತು. ಯಕ್ಷನಂದನದ ಅಧ್ಯಕ್ಷರಾದ ಡಾ. ಪಿ. ಸತ್ಯಮೂರ್ತಿ ಐತಾಳ ಸ್ವಾಗತಿಸಿ, ಸಂಚಾಲಕರಾದ ಪಿ. ಸಂತೋಷ್ ಐತಾಳರು ಪ್ರಸ್ತಾಪಿಸಿ ಕಾರ್ಯಕ್ರಮ ನಿರೂಪಿಸಿದರು. ‘ಯಕ್ಷನಂದನ’ದ ಹಿರಿಯ ಬಣ್ಣದ ವೇಷಧಾರಿ ಪಿ. ನಾಗೇಶ ಕಾರಂತರು ಸಹಕರಿಸಿದವರಿಗೆ ಧನ್ಯವಾದವಿತ್ತರು. ಬಳಿಕ ನ್ಯಾಯವಾದಿಗಳಾದ ಪಿ. ಸಂತೋಷ್ ಐತಾಳರು ಬರೆದ ‘ಸೀತಾಪಹಾರ – ಜಟಾಯು ಮೋಕ್ಷ’ ಎಂಬ ಆಂಗ್ಲ ಭಾಷೆಯ ಯಕ್ಷಗಾನ ಬಯಲಾಟ ಪ್ರಸ್ತುತಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮುಂಗಾರು ಕವಿಗೋಷ್ಠಿಗೆ ಕವನಗಳ ಆಹ್ವಾನ
    Next Article ‘ಅನೇಕತೆಯಲ್ಲಿ ಏಕತೆಯನ್ನು ಸಾರಿದ’ ಸಂತ ಶ್ರೇಷ್ಠರು ಸಂತ ಶಿಶುನಾಳ ಶರೀಫರ ಜನ್ಮದಿನಾಚಾರಣೆ
    roovari

    Add Comment Cancel Reply


    Related Posts

    ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಉದ್ಘಾಟನೆಗೊಂಡ ‘ರಜತ ರಂಗ’ ಅಭಿಯಾನ

    October 24, 2025

    ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ನಿಧನ

    October 24, 2025

    ಮಂಗಳೂರು ತುಳು ಭವನದಲ್ಲಿ ಶ್ರದ್ಧಾಂಜಲಿ ಸಭೆ ಹಾಗೂ ನುಡಿ ನಮನ ಸಲ್ಲಿಕೆ | ಅಕ್ಟೋಬರ್ 25

    October 24, 2025

    ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಸಭಾಂಗಣದಲ್ಲಿ ‘ಭರತಮುನಿ ಜಯಂತ್ಯುತ್ಸವ’ | ಅಕ್ಟೋಬರ್ 26

    October 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.