Subscribe to Updates

    Get the latest creative news from FooBar about art, design and business.

    What's Hot

    ಶಕ್ತಿನಗರದ ಕಲಾಂಗಣನಲ್ಲಿ ಅಂತರ ರಾಷ್ಟ್ರೀಯ ಸಂಗೀತ ದಿನ ಮತ್ತು ತಿಂಗಳ ಸರಣಿ ಕಾರ್ಯಕ್ರಮ

    October 6, 2025

    2025ನೇ ಸಾಲಿನ ‘ಕೇಶವ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಆಯ್ಕೆ

    October 6, 2025

    ಧರ್ಮಸ್ಥಳದ ದೇಗುಲದಲ್ಲಿ ಹೂವಿನಕೋಲು ಅಭಿಯಾನ

    October 6, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್‌ ಪುರಸ್ಕಾರ’ ಪ್ರಕಟ
    Awards

    ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್‌ ಪುರಸ್ಕಾರ’ ಪ್ರಕಟ

    August 23, 2025Updated:August 25, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಇವರ ಸ್ಮರಣಾರ್ಥ ಕಥೆಕೂಟ ಸಂಸ್ಥೆಯು ಸ್ಥಾಪಿಸಿರುವ ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ’ಕ್ಕೆ 2024ನೇ ಸಾಲಿನಲ್ಲಿ ಅನುವಾದಕ ಪ್ರೊ. ಎಸ್.ಎನ್. ಶ್ರೀಧರ್ ಹಾಗೂ 2025ನೇ ಸಾಲಿನ ಪ್ರಶಸ್ತಿಗೆ ಅನುವಾದಕಿ ಭಾಷಾ ಸಂಶೋಧಕಿ ತಮಿಳ್ ಸೆಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ.

    ಪ್ರಶಸ್ತಿಯು ರೂ.10,000/- ನಗದು ಮತ್ತು ಫಲಕವನ್ನು ಒಳಗೊಂಡಿದೆ. ದಿನಾಂಕ 01 ನವೆಂಬರ್ 2025ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಸಾಹಿತಿಗಳಾದ ಗಿರೀಶ್ ರಾವ್ ಹತ್ತಾರ್ (ಜೋಗಿ), ಕಥೆಕೂಟದ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ, ಜಿ.ವಿ. ಅರುಣ ಇದ್ದರು.

    ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಸ್ಮರಣಾರ್ಥ ಇವರ ಹೆಸರಿನಲ್ಲಿ ‘ಕಥಕೂಟ’ ಸಂಸ್ಥೆಯು ಪ್ರಶಸ್ತಿ ಆರಂಭಿಸಿದ್ದು, ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಮತ್ತು ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸದಲ್ಲಿ ನಿರತರಾಗಿರುವ ಪ್ರತಿಭಾವಂತರಿಗೆ ಪ್ರತಿ ವರ್ಷ ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ’ ನೀಡಿ ಗೌರವಿಸಲು ನಿರ್ಧರಿಸಿದೆ.

    ಪ್ರೊಫೆಸರ್ ಎಸ್.ಎನ್. ಶ್ರೀಧರ್‌ : ಕುಮಾರವ್ಯಾಸ ಭಾರತವನ್ನು ಇಂಗ್ಲೀಷಿಗೆ ಅನುವಾದಿಸುವ ತಂಡದ ಮುಖ್ಯಸ್ಥರಾಗಿರುವ ಹಿರಿಯ ಭಾಷಾವಿಜ್ಞಾನಿ ಪ್ರೊಫೆಸ‌ರ್ ಎಸ್‌.ಎನ್‌. ಶ್ರೀಧರ್ ಇವರಿಗೆ 2024ನೇ ಸಾಲಿನ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ. ನ್ಯೂಯಾರ್ಕ್‌ನ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ಮತ್ತು ಭಾರತೀಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀಧರ್ ಅವರು, ಕುಮಾರವ್ಯಾಸ ಭಾರತದ ಇಂಗ್ಲೀಷ್ ಅನುವಾದ (The Kannada Mahabharata) ಯೋಜನೆಗೆ ಚಾಲನೆ ನೀಡಿದ್ದಾರೆ. ‘ಮಾಡರ್ನ್ ಕನ್ನಡ ಗ್ರಾಮರ್’, ‘ಇಂದಿನ ಕನ್ನಡ : ರಚನೆ ಮತ್ತು ಬಳಕೆ’ ಸೇರಿದಂತೆ 70ಕ್ಕೂ ಹೆಚ್ಚು ಪ್ರಕಟಿತ ಲೇಖನಗಳ ಮೂಲಕ ಕನ್ನಡ ಭಾಷಾವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

    ಡಾ. ತಮಿಳ್ ಸೆಲ್ವಿ : ಅನುವಾದಕಿ ಮತ್ತು ಭಾಷಾ ಸಂಶೋಧಕಿ ಡಾ. ತಮಿಳ್ ಸೆಲ್ವಿ ಇವರಿಗೆ 2025ನೇ ಸಾಲಿನ ಪುರಸ್ಕಾರ ಲಭಿಸಿದೆ. ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥರಾಗಿರುವ ಇವರು, ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಸೌಹಾರ್ದ ಸಂಬಂಧ ಬೆಳೆಸುವ ಕಾರ್ಯದಲ್ಲಿ ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. ‘ನಾನು ಅವನಲ್ಲ, ಅವಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಮತ್ತು ತಮಿಳುನಾಡು ಸರ್ಕಾರದ ‘ಶ್ರೇಷ್ಠ ಅನುವಾದಕಿ ಪ್ರಶಸ್ತಿ’ಯೂ ಅವರಿಗೆ ಸಂದಿವೆ. ‘ನೇಪಥ್ಯ’, ‘ಅಶೋಕ ಮಿತ್ರನ್ ಕಥೆಗಳು’ ಸೇರಿದಂತೆ ಹಲವು ಪ್ರಸಿದ್ಧ ಅನುವಾದ ಕೃತಿಗಳನ್ನು ರಚಿಸಿದ್ದಾರೆ.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಅತ್ತಾವರ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಕಲಾ ಮಂಟಪದಲ್ಲಿ ‘ಅಭಿನಂದನಾ ಕಾರ್ಯಕ್ರಮ’ | ಆಗಸ್ಟ್ 24
    Next Article ಸುಳ್ಯದ ಕನ್ನಡ ಭವನ ಸಭಾಂಗಣದಲ್ಲಿ ‘ಭೀಮರಾವ್ ವಾಷ್ಠರ್ ಉತ್ಸವ’ | ಆಗಸ್ಟ್ 24
    roovari

    Add Comment Cancel Reply


    Related Posts

    ಶಕ್ತಿನಗರದ ಕಲಾಂಗಣನಲ್ಲಿ ಅಂತರ ರಾಷ್ಟ್ರೀಯ ಸಂಗೀತ ದಿನ ಮತ್ತು ತಿಂಗಳ ಸರಣಿ ಕಾರ್ಯಕ್ರಮ

    October 6, 2025

    2025ನೇ ಸಾಲಿನ ‘ಕೇಶವ ಪ್ರಶಸ್ತಿ’ಗೆ ಹಿರಿಯ ಸಾಹಿತಿ ಡಾ. ರಮಾನಂದ ಬನಾರಿ ಆಯ್ಕೆ

    October 6, 2025

    ಧರ್ಮಸ್ಥಳದ ದೇಗುಲದಲ್ಲಿ ಹೂವಿನಕೋಲು ಅಭಿಯಾನ

    October 6, 2025

    ಅಕಾಡೆಮಿ ಸಭಾಂಗಣದಲ್ಲಿ ‘ಕಾವ್ಯಾಂ ವ್ಹಾಳೊ-7’ ಕೊಂಕಣಿ ಕವಿಗೋಷ್ಟಿ

    October 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.