ಉಡುಪಿ : ರಾಗ ಧನ ಉಡುಪಿ ಸಂಸ್ಥೆಯ ವಾರ್ಷಿಕ ಮಹಾಸಭೆ ಮತ್ತು ರಾಗರತ್ನಮಾಲಿಕೆ- 38 ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 22 ಜೂನ್ 2025 ಭಾನುವಾರದಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಕಾರ್ಯದರ್ಶಿ ಉಮಾಶಂಕರಿ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಪ್ರೊ. ಸದಾಶಿವರಾವ್ ಆಯವ್ಯಯ ಲೆಕ್ಕ ಪತ್ರಗಳನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು. ಅಧ್ಯಕ್ಷ ಡಾ.ಶ್ರೀಕಿರಣ್ ಹೆಬ್ಬಾರ್ ಸಂಸ್ಥೆಯ ಆಶೋತ್ತರಗಳನ್ನು ಪ್ರಸ್ತುತ ಪಡಿಸಿದರು. ಕುಮಾರಿ ಸಿಯಾ ಪ್ರಭು ಮತ್ತು ಮಾಸ್ಟರ್ ತೀಕ್ಷಣ್ ಶೆಟ್ಟಿ ಪ್ರಾರ್ಥಿಸಿದರು. ವಿದುಷಿ ಸರೋಜಾ ಆಚಾರ್ಯ ವಂದಿಸಿದರು. ಶ್ರೀ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ರಾಗರತ್ನಮಾಲಿಕೆ- 38 ಶಾಸ್ತ್ರೀಯ ಸಂಗೀತ ಕಛೇರಿಯನ್ನು ವಿದ್ವಾನ್ ವಿವೇಕ್ ಸದಾಶಿವಂ ಚೆನೈ ಇವರು ನಡೆಸಿಕೊಟ್ಟರು.