ಕಟೀಲು: ಮುಂಬೈ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಸ್ಟ್ ಇದರ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮ ದಿನಾಂಕ 28 ಹಾಗೂ 29 ಮೇ 2025ರಂದು ಕಟೀಲು ಸರಸ್ವತೀ ಸದನದಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಂಬೈನಲ್ಲಿ ಮಾತ್ರವಲ್ಲದೆ ಐದಾರು ರಾಜ್ಯಗಳಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಮಂದಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತ ಬಂದಿರುವ ಯಕ್ಷಗುರು ಕಟೀಲು ಸದಾನಂದ ಶೆಟ್ಟಿಯವರ ನೇತೃತ್ವದಲ್ಲಿ ಅವರ ಶಿಷ್ಯರಿಂದ ಯಕ್ಷಗಾನ ಪ್ರದರ್ಶನ ನಡೆಯಿತು.
ಮುಂಬೈ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಹಾಗೂ ಕಟೀಲು ಯಕ್ಷಕಲಾ ವೇದಿಕೆ ವಸಾಯಿಯ ಅರವತ್ತಕ್ಕೂ ಹೆಚ್ಚು ಬಾಲಕಲಾವಿದರಿಂದ ‘ಶ್ರೀಕೃಷ್ಣಲೀಲೆ ಕಂಸ ವಧೆ’ ಹಾಗೂ’ ಬ್ರೌಪದಿ ಪ್ರತಾಪ’ ಪ್ರಸಂಗಗಳು ಪ್ರದರ್ಶಿತವಾದವು. ಮುಂಬೈನಿಂದಲೇ ಬಂದಿದ್ದ ಇನ್ನೂರಷ್ಟು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜನಾರ್ದನ ದೇವಾಡಿಗ ಹಾಗೂ ದೇವೇಂದ್ರ ಬುನ್ನಾನ್ ಅವರಿಗೆ ‘ಯಕ್ಷಭ್ರಾಮರಿ ಪ್ರಶಸ್ತಿ’, ಮಾಸ್ಟರ್ ಶೌರ್ಯ ಶಿವಾನಂದ ಪೂಜಾರಿ, ವಂಶಿಕ್ ಸುರೇಶ್ ಪೂಜಾರಿ, ಕುಮಾರಿ ಆತ್ರಿ ಮೋಹನ್ ಶೆಟ್ಟಿ, ಶ್ರಾವಣಿ ಶೇಖರ್ ಪೂಜಾರಿ, ಶ್ಲೋಕಾ ಸತೀಶ ಶೆಟ್ಟಿ, ಮಾನ್ವಿ ಗಿರೀಶ್ ಶೆಟ್ಟಿ ಇವರಿಗೆ ‘ಭ್ರಮರ ಚೇತನ ಪುರಸ್ಕಾರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಟ್ರಸ್ಟ್ನ ಮಂಜುಳಾ ಶೇಖರ್ ಶೆಟ್ಟಿ, ವಿಲಾಸಿನಿ ಎಸ್. ಶೆಟ್ಟಿ, ಪೂರ್ಣಿಮಾ ಅನುಪ್ ಶೆಟ್ಟಿ, ಅನಂತ ಪದ್ಮನಾಭ ಆಸ್ರಣ್ಣ ಓ. ಪಿ. ಪೂಜಾರಿ, ಜಯರಾಮ ಡಿ. ಶೆಟ್ಟಿ, ಶೇಖರ ಬಿ. ಪೂಜಾರಿ, ಪಾಂಡು ಎಲ್. ಶೆಟ್ಟಿ, ಮೋಹನ್ ಗುಜರನ್ ಉಪಸ್ಥಿತರಿದ್ದರು. ಯಕ್ಷನೃತ್ಯ ಕಲಾನಿಲಯದಿಂದ ಈ ವರುಷ ಎಂಟುನೂರಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದೆ.