Subscribe to Updates

    Get the latest creative news from FooBar about art, design and business.

    What's Hot

    ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

    May 28, 2025

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಏರ್ಯ ಬೀಡಿನಲ್ಲಿ “ಏರ್ಯ ಸಾಹಿತ್ಯ ಸಂಭ್ರಮ”
    Kannada

    ಏರ್ಯ ಬೀಡಿನಲ್ಲಿ “ಏರ್ಯ ಸಾಹಿತ್ಯ ಸಂಭ್ರಮ”

    April 5, 20231 Comment1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    05 ಏಪ್ರಿಲ್ 2023, ಬಂಟ್ವಾಳ: ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಡಾ. ಬಿ.ಎ.ವಿವೇಕ ರೈ ಅವರು ದಿನಾಂಕ 02-04-2023ರಂದು ರವಿವಾರ ಬಿ.ಸಿ.ರೋಡು ಬಳಿಯ ಏರ್ಯ ಬೀಡಿನಲ್ಲಿ ಏರ್ಯ ಆಳ್ವ ಫೌಂಡೇಶನ್ ಆಶ್ರಯದಲ್ಲಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ “ಏರ್ಯ ಸಾಹಿತ್ಯ ಸಂಭ್ರಮ”ವನ್ನು ಉದ್ಘಾಟಿಸಿ, “ಜನಪದ, ಸಾಹಿತ್ಯ, ಸಂಘಟನೆ ಹೀಗೆ ಸರ್ವ ಕ್ಷೇತ್ರದಲ್ಲೂ ತೊಡಗಿಕೊಂಡ ಸಾಹಿತಿ ಏರ್ಯ ಅವರು ಮಾನವತಾವಾದದ ಇಡೀ ರೂಪವಾಗಿದ್ದು, ಸಾಹಿತ್ಯ ಕೃಷಿಯನ್ನು ತನ್ನ ಬದುಕಿನ ಜೀವಧಾತುವಾಗಿ ಬಳಸಿಕೊಂಡಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸುವ ಸುಸಂದರ್ಭವಿದ್ದು, ಆ ವೇಳೆ ಏರ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರುವ ಕೆಲಸವಾಗಬೇಕು” ಎಂದು ಹೇಳಿದರು.

    ಭೋಜನ ಪೂರ್ವದಲ್ಲಿ ಹಿರಿಯರಾದ ಡಾ. ತಾಳ್ತಜೆ ವಸಂತ ಕುಮಾರ್ ಇವರಿಂದ ಕೃತಿ “ಸ್ನೇಹ ತಂತು”, “ರಾಮಶ್ವಮೇಧದ ರಸತರಂಗಗಳು” ಕೃತಿ ಡಾ. ನಾ. ದಾಮೋದರ ಶೆಟ್ಟಿಯವರಿಂದ, “ಮುಳಿಯ ತಿಮ್ಮಪ್ಪಯ್ಯ ಹಾಗೂ ಪಾತ್ರಗಳು ಚಿತ್ರಿಸಿದ ಸೇಡಿಯಾಪು” ಕೃತಿಯನ್ನು ಪ್ರೊ. ಪಿ. ಕೃಷ್ಣಮೂರ್ತಿ, “ಮೊದಲ ಮಳೆ” ಕೃತಿಯು ಡಾ. ಯು. ಮಹೇಶ್ವರಿ ಇವರಿಂದ ಕೃತಿ ವಿಶ್ಲೇಷಣೆ ನಡೆಯಿತು.

    ಅಪರಾಹ್ನ ಮತ್ತೆ ನಾಲ್ಕು ಕೃತಿಗಳ ವಿಶ್ಲೇಷಣೆ ನಡೆಯಿತು. ಕೃತಿ “ಹಿಂದಣ ಹೆಜ್ಜೆ” ಡಾ. ತುಕಾರಾಂ ಪೂಜಾರಿ, “ಸಂಚಯ” ಕೃತಿಯ ವಿಶ್ಲೇಷಣೆ ಡಾ. ಸತ್ಯನಾರಾಯಣ ಮಲ್ಲಿಪಟ್ಟಣ, “ನೂರರ ನೆನಪು” ಕೃತಿಯನ್ನು ಡಾ. ಆರ್. ನರಸಿಂಹಮೂರ್ತಿ ಮತ್ತು “ಮಂಗಳ ತಿಮರು” ಕೃತಿಯನ್ನು ಡಾ. ಅರುಣಕುಮಾ‌ರ್ ಎಸ್.ಆರ್. ವಿಶ್ಲೇಷಿಸಿದರು. ಈ ಕೃತಿ ವಿಶ್ಲೇಷಣಾ ಕಾರ್ಯಕ್ರಮದ ಮಧ್ಯೆ ಕಿಶೋರ್ ಪೆರ್ಲ ಇವರ ಕಂಠ ಸಿರಿಯಿಂದ ಹೊಮ್ಮಿದ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡವರನ್ನು ರಂಜಿಸಿತು.

    ಏರ್ಯರ ಪತ್ನಿ ಆನಂದಿ ಆಳ್ವ ಅವರು ಡಾ. ವಿವೇಕ ರೈ ಅವರನ್ನು ಗೌರವಿಸಿದರು. ಏರ್ಯರ ಪುತ್ರಿ ಸುಖದ ಬಾಲಕೃಷ್ಣ ಹೆಗ್ಡೆ ಮತ್ತು ಮೊಮ್ಮಗಳು ಭಕ್ತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಅಳಿಯ ಬಾಲಕೃಷ್ಣ ಹೆಗ್ಡೆ ಸ್ವಾಗತಿಸಿದರು. ನಿವೃತ್ತ ಪ್ರಾಧ್ಯಾಪಕ ಮಹಾಬಲೇಶ್ವರ ಹೆಬ್ಬಾರ್ ಹಾಗೂ ಕೇಶವ ಎಚ್. ಕಾರ್ಯಕ್ರಮ ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಭುವನೇಶ್ವರಿ ಹೆಗಡೆ ಅವರಿಗೆ ಟಿ. ಸುನಂದಮ್ಮ ಪ್ರಶಸ್ತಿ ಪ್ರದಾನ ಹಾಗೂ “ಟಿ. ಸುನಂದಮ್ಮ ಸಾಹಿತ್ಯ ಸಂಪುಟ-3”, “ಟಿ. ಸುನಂದಮ್ಮ ನಾನು ಕಂಡಂತೆ” ಪುಸ್ತಕಗಳ ಲೋಕಾರ್ಪಣೆ
    Next Article ಸನಾತನ ನಾಟ್ಯಾಲಯ, ಮಂಗಳೂರು – ನಲ್ವತ್ತರ ಸಂಭ್ರಮದಲ್ಲಿ ಹಾರಿಕಾ ಮಂಜುನಾಥ್
    roovari

    1 Comment

    1. Hosabettu Laxman BANGERA on April 6, 2023 10:15 am

      SUBHAVAAGALI.

      Reply

    Add Comment Cancel Reply


    Related Posts

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಡಾ. ಪ್ರಜ್ಞಾ ಮತ್ತಿಹಳ್ಳಿ ಇವರ ‘ಬೆಳದಿಂಗಳ ಸೋನೆಮಳೆ’ ಕವನ ಸಂಕಲನ ಆಯ್ಕೆ

    May 28, 2025

    ಕುಂದಾಪುರದಲ್ಲಿ ‘ಅರಿವಿನ ಬೆಳಕು’ ಉಪನ್ಯಾಸ ಮಾಲೆ-5 ಮತ್ತು ಕೃತಿ ಲೋಕಾರ್ಪಣೆ | ಮೇ 29

    May 28, 2025

    ಕಾವೇರಿ ಕಾಲೇಜಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಹಾಗೂ ದತ್ತಿನಿಧಿ ಕಾರ್ಯಕ್ರಮ | ಮೇ 31

    May 28, 2025

    ಉತ್ತರ ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಪ್ರಕಟ

    May 28, 2025

    1 Comment

    1. Hosabettu Laxman BANGERA on April 6, 2023 10:15 am

      SUBHAVAAGALI.

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.