Subscribe to Updates

    Get the latest creative news from FooBar about art, design and business.

    What's Hot

    ಕಟೀಲಿನಲ್ಲಿ 21ನೇ ವರ್ಷದ ತಾಳಮದ್ದಲೆ ಸಪ್ತಾಹ ‘ಪಾಂಡವಾನಾಂ ಧನಂಜಯಃ’ ಆರಂಭ

    July 8, 2025

    ವಿಶೇಷ ಲೇಖನ – ಮೇಷ್ಟ್ರುಗಳ ಮೇಷ್ಟ್ರು ಪ್ರೋ. ಎಸ್. ಆರ್. ಮಳಗಿ

    July 8, 2025

    ಮಂಗಳೂರಿನ ಪುರಭವನದಲ್ಲಿ ಭರತಾಂಜಲಿಯ ಕಿಂಕಿಣಿ ತ್ರಿoಶತ್ ಸಂಭ್ರಮ

    July 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲೇಖಕಿ ಡಾ. ಅರುಣಾ ನಾಗರಾಜ್ ಅವರ ‘ಅರಿಷಡ್ವೈರಿಗಳ ಗೊಂದಲಾಪುರದಾಚೆ’ ಲೋಕಾರ್ಪಣೆ
    Book Release

    ಲೇಖಕಿ ಡಾ. ಅರುಣಾ ನಾಗರಾಜ್ ಅವರ ‘ಅರಿಷಡ್ವೈರಿಗಳ ಗೊಂದಲಾಪುರದಾಚೆ’ ಲೋಕಾರ್ಪಣೆ

    November 16, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಲೇಖಕಿ ಡಾ. ಅರುಣಾ ನಾಗರಾಜ್ ಅವರು ರಚಿಸಿರುವ ‘ಅರಿಷಡ್ವೈರಿಗಳ ಗೊಂದಲಾಪುರದಾಚೆ’ ಎಂಬ ಚಿಂತನ ಸಂಕಲನವು ದಿನಾಂಕ 04-11-2023ರಂದು ದೀಪಾ ಕಂಫರ್ಟ್ಸ್ ಇಲ್ಲಿನ ಶೆಹನಾಯಿ ಹಾಲ್‌ನಲ್ಲಿ ಬಿಡುಗಡೆಗೊಂಡಿತು. ಕೃತಿ ಬಿಡುಗಡೆಗೊಳಿಸಿದ ಬೆಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಿಕೆ ಡಾ. ಪ್ರಮಿಳಾ ಮಾಧವ್‌ ಮಾತನಾಡಿ, “ಈ ರೀತಿಯ ಕೃತಿಗಳು ಮತ್ತಷ್ಟು ಬೆಳಕಿಗೆ ಬರಬೇಕು” ಎಂದರು.

    ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಕೃಷ್ಣ ಶೇಟ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಆರ್‌.ಪಿ.ಎಲ್‌ ಇದರ ನಿವೃತ್ತ ಮಹಾ ಪ್ರಬಂಧಕಿ ವೀಣಾ ಟಿ. ಶೆಟ್ಟಿ ಅವರು “ಕೃತಿಯ ಶೀರ್ಷಿಕೆಯೇ ಅದರ ಅಂತರಾಳದ ಮಹತ್ವವನ್ನು ತಿಳಿಸುತ್ತದೆ” ಎಂದರು.

    ಪತ್ರಕರ್ತೆ ಡಾ. ಮಾಲತಿ ಶೆಟ್ಟಿ ಮಾಣೂರು ಪ್ರಸ್ತಾವಿಸಿದರು. ಕೆ.ಎಂ.ಸಿ ವೈದ್ಯೆ ಡಾ. ಪ್ರಿಯಾಂಕಾ ಅರುಣ್ ಶಿರಾಲಿ ಅವರು ಪ್ರಚಲಿತ ಸಮಾಜಕ್ಕೆ ಇಂತಹ ಕೃತಿಗಳ ಅವಶ್ಯಕತೆಯನ್ನು ತಿಳಿಸಿದರು. ವಕೀಲೆ ಪುಷ್ಪಲತಾ ಯು.ಕೆ., ಸಿ.ಎ ಕಿರಣ್ ಶೇಟ್, ಪ್ರಶಾಂತ್ ಶೇಟ್ ಮಾತನಾಡಿದರು. ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧೀಕ್ಷಕ ನಾಗರಾಜ್‌ ಶೇಟ್, ಮಂಜುನಾಥ್ ಶೇಟ್ ಎಂಟೆಕ್‌ ಸಹಕರಿಸಿ, ಸಿಂಧೂ ಮಂಜುನಾಥ್ ಬಿ.ಇ . ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕಲಾ ವಿಮರ್ಶೆ | ಭಾವ ವೈಭವದ ವ್ಯಂಗ್ಯ ಚಿತ್ರಗಳು “ಕುಂಚ ಕಂಡ ಕನ್ನಡ ಸಾಹಿತಿಗಳು”
    Next Article ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನಿಂದ ಗೋವಾ ಘಟಕ ಉದ್ಘಾಟನೆ
    roovari

    Add Comment Cancel Reply


    Related Posts

    ಬೆಂಗಳೂರಿನ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೃತಿ ಲೋಕಾರ್ಪಣೆ ಹಾಗೂ ಪ್ರಶಸ್ತಿ ಪ್ರದಾನ

    July 8, 2025

    ‘ಕಾಂತೆ ಕವಿತೆ’ ಮತ್ತು ‘ಮಾತು ಎಂಬ ವಿಸ್ಮಯ’ ಕೃತಿಗಳ ಅವಲೋಕನ.

    July 8, 2025

    ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ | ಜುಲೈ 12

    July 8, 2025

    ಮಡಿಕೇರಿಯ ಪತ್ರಿಕಾ ಭವನದಲ್ಲಿ ಮಳೆಗಾಲ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

    July 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.