Subscribe to Updates

    Get the latest creative news from FooBar about art, design and business.

    What's Hot

    ಶುಕೀ ರಾವ್ ಹಾಗೂ ಶಿವಾನಿ ಕೇಂದ್ರ ಸರಕಾರದ ಶಿಷ್ಯವೇತನಕ್ಕೆ ಆಯ್ಕೆ

    June 3, 2025

    ವಿಶೇಷ ಲೇಖನ – ಗಾಯಕ ರತ್ನ ಡಾ. ಬಿ. ದೇವೇಂದ್ರಪ್ಪ

    June 3, 2025

    ಕೊಡಗು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ಪ್ರಕಟ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾರ್ಕಳದಲ್ಲಿ ಅರಿವು – ತಿಳಿವು ತಿಂಗಳ ಕಾರ್ಯಕ್ರಮ
    Literature

    ಕಾರ್ಕಳದಲ್ಲಿ ಅರಿವು – ತಿಳಿವು ತಿಂಗಳ ಕಾರ್ಯಕ್ರಮ

    March 29, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    29 ಮಾರ್ಚ್ 2023, ಕಾಂತಾವರ: ಅನುಭಾವದಿಂದಲೇ ಸಮಾಜಕ್ಕೆ ಬೆಳಕಾದ ಅಲಕ್ಷಿತ ವಚನಕಾರರು
    12ನೇ ಶತಮಾನದಲ್ಲಿ ಅಲಕ್ಷಿತ ವಚನಕಾರರೆಂದು ಗುರುತಿಸಲ್ಪಟ್ಟವರೆಲ್ಲರೂ ಅತ್ಯಂತ ಕೆಳಸ್ತರದಿಂದ ಬಂದವರಾಗಿದ್ದರು. ಇವರೆಲ್ಲ ನಿರಕ್ಷರಕುಕ್ಷಿಗಳಾಗಿದ್ದರೂ ತಮ್ಮ ಅನುಭವ ಅನುಭಾವದಿಂದಲೇ ಸಮಾಜಕ್ಕೆ ಬೆಳಕಾದರು. ದನಿ ಕಳೆದುಕೊಂಡ ತಳಸಮುದಾಯಗಳ ಜನರ ಸಾಮಾಜಿಕ ಮುಖವಾಣಿಯಾಗಿ ಕಾರ್ಯನಿರ್ವಹಿಸಿದ ಬಸವಣ್ಣನವರು ಆ ಸಮುದಾಯಗಳ ಆತ್ಮಸ್ವರೂಪ ಜಾಗೃತಿಗೆ ಶ್ರಮಿಸಿದರು. ಅದು ಒತ್ತಾಯದ ನೆಲೆಯಿಂದ ಆಗದೆ ಮನೋವಿಕಾಸದಿಂದಾಯಿತು ಎಂಬುದಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾಗಿರುವ ಡಾ. ಡಿ.ವಿ.ಪ್ರಕಾಶ್ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು. ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಇವರ ಜಂಟಿ ಸಹಯೋಗ ಹಾಗೂ ಕರ್ನಾಟಕ ಸರಕಾgದÀ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದೊಂದಿಗೆ ಕಾರ್ಕಳದ ಸುಂದರ ಪುರಾಣಿಕ ಸ್ಮಾರಕ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಅರಿವು – ತಿಳಿವು ತಿಂಗಳ ಕಾರ್ಯಕ್ರಮದಲ್ಲಿ ಅವರು “ಅಲಕ್ಷಿತ ವಚನಕಾರರ ವಚನಗಳಲ್ಲಿ ಸಾಮಾಜಿಕ ಕಳಕಳಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
    ಬಹುಸಂಖ್ಯಾತ ಉಪೇಕ್ಷಿತ ಜನಸಮುದಾಯ ಸಂಘಟಿತರಾಗಿ ರಾಜಧರ್ಮವನ್ನು ಪ್ರಶ್ನಿಸುವ ಧೈರ್ಯ ತೋರಿದ್ದರಿಂದ ರಾಜಸತ್ತೆಗೆ ಅಭ್ರದತೆ ಕಾಡಿತು . ಈ ಕಾರಣಕ್ಕಾಗಿ ಬಸವಣ್ಣ ರಾಜ ಮತ್ತು ಮೇಲ್ವರ್ಗದವರ ಕಿರುಕುಳಕ್ಕೆ ಭಾಜನರಾದರು. ಇದರಿಂದ ಅವರ ನಿರ್ಧಾರಗಳು ಸ್ಥಿರವಾದವೇ ಹೊರತು ದುರ್ಬಲವಾಗಲಿಲ್ಲ. ಹಾಗಾಗಿ ಅಸಂಘಟಿತ ವಲಯದ ಸಮುದಾಯಗಳ ನಮ್ರ ಒಗ್ಗೂಡುವಿಕೆಯೇ ವಚನ ಆಂದೋಲನದ ಯಶಸ್ಸಿಗೆ ಕಾರಣವಾಯಿತು ಎಂದರು.
    ಅತಿಥಿಗಳನ್ನು ಇದೇ ಸಂದರ್ಭದÀಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷರಾದ ಡಾ.ನಾ.ಮೊಗಸಲೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಲತಿ.ಜಿ.ಪೈಯವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಶ್ರುತಿ ಪ್ರಾರ್ಥಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ವಂದಿಸಿದರು.

    • ಸದಾನಂದ ನಾರಾವಿ

    Share. Facebook Twitter Pinterest LinkedIn Tumblr WhatsApp Email
    Previous ArticleINTACH and Art Kanara Trust hold multilingual poetry session in Mangaluru
    Next Article ಉಳ್ಳಾಲದಲ್ಲಿ ‘ಶಾರದಾಮೃತ’ ಸ್ಮರಣ ಸಂಚಿಕೆಯ ಅನಾವರಣ
    roovari

    Add Comment Cancel Reply


    Related Posts

    ಕೊಂಡೆವೂರಿನಲ್ಲಿ ತುಲುವೆರೆ ಕಲ ಸಂಘಟನೆಯ ಎರಡನೇ ‘ವರ್ಸೋಚ್ಚಯ’

    June 3, 2025

    ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾಭಾಸ್ತಿಯವರಿಗೆ ಗೃಹ ಸನ್ಮಾನ

    June 3, 2025

    ‘ವಿಭಾ’ ಸಾಹಿತ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

    June 3, 2025

    ಕ.ಸಾ.ಪ.ದ ಸಂಸ್ಥಾಪಕರಾದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಮತ್ತು ದತ್ತಿ ಪುರಸ್ಕಾರ

    June 3, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications