Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಗುರು ಶಿಷ್ಯ ಪ್ರಶಿಷ್ಯರ ಸಮಾಗಮ 
    Bharathanatya

    ಗುರು ಶಿಷ್ಯ ಪ್ರಶಿಷ್ಯರ ಸಮಾಗಮ 

    July 22, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಸಾಧಿಸಿದರೆ ಏನನ್ನು ಗಳಿಸಬಹುದು ಎಂಬುದಕ್ಕೆ ಸಾಕ್ಷಿ 75ರ ಹರೆಯದ ನೃತ್ಯ ಕಲಾವಿದೆ ಗುರು ಡಾ. ವಸುಂಧರಾ ದೊರೆಸ್ವಾಮಿ ಇವರು. ಯುವ ನೃತ್ಯ ಕಲಾವಿದೆಯರು ನಾಚಿಕೊಳ್ಳುವಂತೆ ತನ್ನ ಅಂಗಸೌಷ್ಟವ, ಅಭಿನಯ, ಅಡವುಗಳ ಪಕ್ವತೆ, ಅಂಗ ಶುದ್ಧತೆ ಇವುಗಳಿಗೆ ಪೂರಕವಾಗಿ ಹೊಸ ಹೊಸ ಆವಿಷ್ಕಾರವನ್ನು ಮಾಡಿ ‘ವಸುಂಧರಾ ಶೈಲಿ’ ಎಂಬುದನ್ನು ಕಲಾ ಪ್ರಪಂಚಕ್ಕೆ ನೀಡಿದ ಗುರು ಡಾ. ವಸುಂಧರಾ ದೊರೆಸ್ವಾಮಿ ನಿಜಕ್ಕೂ ಶ್ಲಾಘನೀಯರು.
    ಅವರು ಇತ್ತೀಚೆಗೆ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಮಂಗಳೂರು ಇದರ ನಿರ್ದೇಶಕಿ ಹಾಗೂ ಗುರುಗಳ ಶಿಷ್ಯೆ ವಿದುಷಿ ಭ್ರಮರಿ ಶಿವಪ್ರಕಾಶ ಇವರು ಏರ್ಪಡಿಸಿದ ಆರು ದಿನಗಳ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಫಲಾನುಭವಿಗಳಾದ ತನ್ನ ಪ್ರಶಿಷ್ಯರುಗಳಲ್ಲಿ ಹೊಸತನವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಡಾ. ವಸುಂಧರಾ ಅವರು  ಮಂಗಳೂರಿನ ಪ್ರಶಿಷ್ಯರೊಂದಿಗೆ ಉಡುಪಿ, ಬೆಂಗಳೂರು ಹಾಗೂ ಕೋಲ್ಕತ್ತಾದ ಶಿಷ್ಯ-ಪ್ರಶಿಷ್ಯರೂ ಈ ಕಾರ್ಯಾಗಾರದಲ್ಲಿ ಭಾಗಿಯಾದರು.
    ಪ್ರತೀದಿನವೂ ಆರಂಭದಲ್ಲಿ ನೃತ್ಯಕ್ಕೆ ಬೇಕಾದ ಉಪಯುಕ್ತ ಯೋಗಾಭ್ಯಾಸದಿಂದ ಆರಂಭಿಸಿ ನೃತ್ಯಬಂಧಗಳನ್ನು ಹೇಳಿಕೊಡುವಲ್ಲಿ ಡಾ. ವಸುಂಧರಾ ದೊರೆಸ್ವಾಮಿ ಯಶಸ್ವಿಯಾದರು. ಮೊದಲನೆಯ ದಿನ ಉತ್ತುಕಾಡು ವೆಂಕಟಸುಬ್ಬ ಅಯ್ಯರ್ ಇವರ ಗಂಭೀರ ನಾಟಿ ರಾಗದ ಖಂಡ ಛಾಪು ತಾಳದ ಶ್ರೀ ವಿಘ್ನರಾಜಮ್ ಭಜೆ ಎಂಬ ಕೃತಿಗೆ ನೃತ್ಯವನ್ನು ಸಂಯೋಜಿಸಲಾಯಿತು. ಈ ನೃತ್ಯದಲ್ಲಿ ಗಣಪತಿಯ ಅನೇಕ ಭಂಗಿಗಳು ಹಾಗೂ ಅಡವುಗಳ ಜೋಡಣೆಯೂ ಪೂರಕವಾಗಿ ಹೊಂದಾಣಿಕೆ ಇದ್ದು ಬರಿಯ ಪುಷ್ಪಾಂಜಲಿಯಂತಿರದೆ ಹೊಸತನದಿಂದ ಮೂಡಿಬಂದಿತು.
    ಎರಡನೆಯ ದಿನ ನೃತ್ಯಾಂಜಲಿ ಎಂಬ ಹೊಸ ಕಲ್ಪನೆಯ ನೃತ್ಯ. ಸಾಮಾನ್ಯವಾಗಿ ಚತುರಶ್ರ ಅಲಾರಿಪು ಎಂಬುದು ಅಭಿನಯವಿಲ್ಲದೆಯೇ ಅಡವುಗಳ ಜೋಡಣೆ ಇರುವ ನೃತ್ಯ ಬಂಧ. ಆದರೆ ಇಲ್ಲಿಯ ಅಲರಿಪುವಿನಲ್ಲಿ ಐಗಿರಿ ನಂದಿನಿ ಎಂಬ ಶ್ಲೋಕವನ್ನು ಅಲ್ಲಲ್ಲಿ ಜೋಡಿಸಿ, ಈ ಶ್ಲೋಕಕ್ಕೆ ಅಭಿನಯವು ಸೇರಿ ನೃತ್ಯ ಬಂಧವಾಗಿ ಮಾರ್ಪಟ್ಟಿತು.
    ಮೂರನೆಯ ದಿನ ಶ್ರೀರಾಮಚಂದ್ರ ಕೃಪಾಳು ಭಜಮನ ಎಂಬ ತುಳಸೀದಾಸರ ಕೀರ್ತನೆಗೆ ಅಭಿನಯವನ್ನು ಹೇಳಿಕೊಡಲಾಯಿತು. ಇದು ಸಂಪೂರ್ಣ ರಾಮಾಯಣಕ್ಕೆ ಸಾಕ್ಷಿಯಾಯಿತು.
    ಗುರು ಡಾ. ವಸುಂಧರಾ ದೊರೆಸ್ವಾಮಿ ಕಾರ್ಯಾಗಾರದ ಉದ್ದಕ್ಕೂ ಎಲ್ಲಿಯೂ ವಿಶ್ರಮಿಸದೆ ವಿದ್ಯಾರ್ಥಿಗಳಿಗೆ ಪಾಠವನ್ನು ಮನವರಿಕೆ ಮಾಡಿಸಲು ಶ್ರಮಿಸಿದರು. ನರ್ತಿಸಿ ಆಯಾಸಗೊಂಡ ವಿದ್ಯಾರ್ಥಿಗಳು ಗುರುಗಳ ಉತ್ಸಾಹವನ್ನು ಕಂಡು ಎಲ್ಲಿಯೂ ವಿರಮಿಸದೆ ಕಾರ್ಯಾಗಾರದ ಯಶಸ್ವಿಗೆ ಪಾತ್ರರಾದರು.
    ವಿದುಷಿ ಭ್ರಮರಿಯವರು ಈ ಎಲ್ಲ ನೃತ್ಯಬಂಧಗಳ ಹುಟ್ಟು- ಬೆಳವಣಿಗೆ- ವಿಕಾಸ ಹಾಗೂ ಅರ್ಥ ಕಲ್ಪನೆಗಳ ವಿವರಗಳನ್ನು ವಿದ್ಯಾರ್ಥಿಗಳಿಗೆ ನೀಡಿದರೆ, ವಿದುಷಿ ಶ್ರೀಸನ್ನಿಧಿಯವರು ಈ ನೃತ್ಯಬಂಧಗಳ ಹಾಡುಗಾರಿಕೆಯ ಪರಿಚಯವನ್ನು ಮಾಡಿಸಿ ಕಾರ್ಯಾಗಾರವನ್ನು ಅರ್ಥಪೂರ್ಣವಾಗಿಸಿದರು.
    ವಿದ್ವಾನ್ ಚಂದ್ರಶೇಖರ ನಾವಡ, ಸುರತ್ಕಲ್

    Share. Facebook Twitter Pinterest LinkedIn Tumblr WhatsApp Email
    Previous Articleಉದ್ಘಾಟನೆಗೊಂಡ ‘ಸಿರಿಬಾಗಿಲು ಯಕ್ಷವೈಭವ’
    Next Article ‘ಇಂಗ್ಲಿಷ್ ಪೆನ್’ ಪ್ರಶಸ್ತಿಗೆ ‘ಹಸೀನಾ ಆ್ಯಂಡ್ ಅದರ್ ಸ್ಟೋರೀಸ್’ ಕೃತಿ ಆಯ್ಕೆ
    roovari

    Add Comment Cancel Reply


    Related Posts

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ನೃತ್ಯ ಭಾನು’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ | ಮೇ 09

    May 6, 2025

    ಮಂಗಳೂರಿನ ಪುರಭವನದಲ್ಲಿ ಕುಮಾರಿ ಕಿಯಾರಾ ಆ್ಯಶ್ಲಿನ್ ಪಿಂಟೋ ಇವರ ಶಾಸ್ತ್ರೀಯ ನೃತ್ಯ ರಂಗಪ್ರವೇಶ | ಮೇ 04

    May 1, 2025

    ಸುಳ್ಯದ ಕನಕ ಕಲಾ ಗ್ರಾಮದಲ್ಲಿ ಯಶಸ್ವಿಯಾಗಿ ನಡೆದ ವಿಶ್ವ ನೃತ್ಯ ದಿನ ಆಚರಣೆ

    May 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.