Subscribe to Updates

    Get the latest creative news from FooBar about art, design and business.

    What's Hot

    ಶ್ರೀ ಗಣೇಶ ನೃತ್ಯಾಲಯದಲ್ಲಿ ‘ನೃತ್ಯೋಲ್ಲಾಸ’ ಮಾಸಿಕ ಭರತನಾಟ್ಯ ಕಾರ್ಯಕ್ರಮ

    August 26, 2025

    ಬಂಟ್ವಾಳದ ಏರ್ಯ ಬೀಡುವಿನಲ್ಲಿ ‘ಏರ್ಯ ಲಕ್ಷ್ಮೀನಾರಾಯಣ ಆಳ್ವ ಶತಮಾನೋತ್ಸವ ಸಮಾರಂಭ | ಆಗಸ್ಟ್ 28

    August 26, 2025

    ಕ.ಸಾ.ಪ.ದಿಂದ ಹಿರಿಯ ಸಾಹಿತಿ ಮುಳಿಯ ಗೋಪಾಲಕೃಷ್ಣ ಭಟ್ ಇವರಿಗೆ ಸನ್ಮಾನ | ಆಗಸ್ಟ್ 30

    August 26, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಮರ್ಶೆ – ಲಯಬದ್ಧವಾದ ಸಪ್ತ ವರ್ಣಗಳು 
    Article

    ವಿಮರ್ಶೆ – ಲಯಬದ್ಧವಾದ ಸಪ್ತ ವರ್ಣಗಳು 

    October 21, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ದಿನಾಂಕ16-10-24ರಂದು ಚಿತ್ರಕಲಾ ಪರಿಷತ್ತಿನಲ್ಲಿ ಏಳು ಕಲಾವಿದರಿಂದ ‘ಸಪ್ತ’ ಎನ್ನುವ ಹೆಸರಿನಲ್ಲಿ ಸಮೂಹ ಕಲಾಪ್ರದರ್ಶನ ಅನಾವರಣಗೊಂಡಿತು. ತುಂಬಾ ಆಪ್ತವೆನಿಸುವ ಕಲಾಕೃತಿಗಳು ಅವು ಆಗಿದ್ದವು. ಅಲ್ಲೊಂದು ಹದವಾದ ಸಂಗೀತವಿತ್ತು. ನಾವು ದಿನನಿತ್ಯ ನೋಡುವ, ಬಳಸುವ, ಆರಾಧಿಸುವ ವಿಷಯಗಳನ್ನು ಕಲಾವಿದರು ಆಯ್ದು ಕೊಂಡಾಗ ನೋಡುಗರಿಗೆ ಕಲಾಕೃತಿಗಳು ಹತ್ತಿರವಾಗುತ್ತವೆ. ಇಂತಹ ವಿಷಯಗಳನ್ನೇ ಮುಖ್ಯವಾಗಿಸಿಕೊಂಡು ಕಲಾ ಪ್ರದರ್ಶನ ಏರ್ಪಡಿಸಿದವರು ರಾಜ್ಯದ ವಿವಿಧ ಭಾಗದ ಕಲಾವಿದರು.
    ಇಲ್ಲಿ ಬೇಲೂರು, ಹಳೇಬೀಡು ಶೈಲಿಯ ಶಿಲ್ಪದಿಂದ ಸ್ಪೂರ್ತಿ ಪಡೆದಂತ ಕಲಾಕೃತಿಗಳು ಗದುಗಿನ ನವೀನ್ ಪತ್ತಾರ್ ಅವರದಾದರೆ, ಬೆಳಗಾವಿಯ ಸುಶೀಲ್ ತರ್ಬಾರ್, ತಿಮ್ಮಣ್ಣಗೌಡ ಪಾಟೀಲ್ ಮತ್ತು ದರ್ಶನ್ ಚೌಧರಿ ಅವರ ಚಿತ್ರಗಳು ನಿಸರ್ಗ ಮತ್ತು ಸಮುದ್ರ ತೀರದ ಅನುಭವಗಳನ್ನು ಕಟ್ಟಿಕೊಡುತ್ತದೆ. ವಿಜಯ ಧೊಂಗಡಿ ಅವರ ಚಿತ್ರಗಳು ನಮ್ಮ ಸಂಸ್ಕೃತಿ, ಸಂಸ್ಕಾರದ  ಪ್ರತೀಕವಾದ ದೊಡ್ಡ ತಿಲಕವಿಟ್ಟುಕೊಂಡ ಭಾರತೀ ನಾರಿಯರ ಚಿತ್ರಗಳನ್ನು ಪ್ರತಿಬಿಂಬಿಸುತ್ತಿವೆ. ತುಮಕೂರಿನ  ಬಿ. ಎನ್. ಹರಿಪ್ರಸಾದ್ ಅವರ ಚಿತ್ರಗಳು ಹಳ್ಳಿಯ ಜನಜೀವನ, ಹೂ ಮಾರುವ ಹೆಂಗಸು ಇತ್ಯಾದಿ ಚಿತ್ರಗಳು ನಿಮ್ಮನ್ನು ಹಿಡಿದ ನಿಲ್ಲಿಸುತ್ತವೆ.
    ಚೇತನ್ ಕುಮಾರ್ ಅವರ ಶಿಲ್ಪ ಕಲಾಕೃತಿಗಳು ಪ್ರದರ್ಶನದ ಸೊಗಸನ್ನು ಇನ್ನೂ ಹೆಚ್ಚಿಸಿದೆ. ಸ್ವಲ್ಪಹೊತ್ತು ಗ್ಯಾಲರಿಯಲ್ಲಿ ನಿಂತು ನೋಡುವಂತೆ ಹಾಗೂ ಕುಳಿತುಕೊಳ್ಳುವಂತೆ ಕಲಾಕೃತಿಗಳು ನಿಮ್ಮನ್ನು ಸೆಳೆಯುತ್ತವೆ. ಎಲ್ಲರ ಕಲಾಕೃತಿಗಳು ಅವರವರದದೇ ಆದ ಶೈಲಿಯಲ್ಲಿ ತೆರೆದುಕೊಂಡಿದೆ.
    ಆರ್ಟ್ ಹೌಸ್ ಗ್ಯಾಲರಿಯ ಮೇಲ್ವಿಚಾರಕರಾದ ಶ್ರೀಮತಿ ಜಯಂತಿ ಶೇಗಾರ್,  ಪಿಡಿಲಿಟೀಸ್ ಗ್ಯಾಲರಿಯ ಸಂಸ್ಥಾಪಕರಾದ ಶ್ರೀ ಅಚ್ಯುತ ಗೌಡರು ಮತ್ತು  ಕೇಂದ್ರ ಲಲಿತಕಲಾ ಅಕಾಡಮಿಯ ಮಾಜಿ ಅಧ್ಯಕ್ಷರಾದ ಶ್ರೀ ಚಿ. ಸು. ಕೃಷ್ಣಸೆಟ್ಟಿಯವರಿಂದ ಈ ಪ್ರದರ್ಶನ ಉದ್ಘಾಟನೆಗೊಂಡಿತು.
                                                                                                ಗಣಪತಿ ಎಸ್ ಹೆಗಡೆ 
                                                                                                  ಚಿತ್ರ ಕಲಾವಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಲ್ಪಾಡಿ ದಸರಾ ಉತ್ಸವದಲ್ಲಿ “ಕಲಾ ಕುಸುಮ” ವಿಶೇಷ ಕಾರ್ಯಕ್ರಮ
    Next Article ಶ್ರೀ ವಾಗೀಶ್ವರಿ ಯಕ್ಷಗಾನ ಕಲಾ ವರ್ಧಕ ಸಂಘದಿಂದ ಸನ್ಮಾನ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮ
    roovari

    Add Comment Cancel Reply


    Related Posts

    ಧ್ವನಿ ಫೌಂಡೇಷನ್ ವತಿಯಿಂದ ಮಕ್ಕಳಿಗಾಗಿ ವಾರಾಂತ್ಯ ತರಗತಿಗಳು

    August 25, 2025

    ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 5ನೇ ಕಾರ್ಯಕ್ರಮ

    August 25, 2025

    ಉಡುಪಿಯಲ್ಲಿ ಉದ್ಘಾಟನೆಗೊಂಡ ‘ಸಂಗಮ’ ಸಮೂಹ ಚಿತ್ರಕಲೆ ಪ್ರದರ್ಶನ

    August 25, 2025

    ವಿಶೇಷ ಲೇಖನ | ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ

    August 23, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.