Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಲೇಖನ – ಮನಸೆಳೆದ ‘ಕೃಷ್ಣ ಸಂಧಾನ’
    Article

    ಲೇಖನ – ಮನಸೆಳೆದ ‘ಕೃಷ್ಣ ಸಂಧಾನ’

    January 30, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕರಾವಳಿ ಕರ್ನಾಟಕದ ಮನೋಹರವಾದ ಕಲಾಪ್ರಕಾರ ಒಂದನ್ನು ನೋರವಾಗಿ ನೋಡಿ ಆಸ್ವಾದಿಸುವ ಸದವಕಾಶವು ಕಳೆದ 26 ಜನವರಿ 2025ರ ಭಾನುವಾರದಂದು ಒದಗಿ ಬಂದಿತು. ಮೈಸೂರು ಅಸೋಸಿಯೋಷನ್, ಮಾತಂಗ ಮತು ಕನ್ನಡ ವಿಭಾಗ, ಮಂಬಯಿ ವಿಶ್ವವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರು ಅಸೋಸಿಯೋಷನ್ ‘ಬಂಗಾರ
    ಹಬ್ಬ 2025’ರ ಅಂಗವಾಗಿ ನಡೆದ ‘ಕೃಷ್ಣ ಸಂಧಾನ’ವೆಂಬ ತಾಳಮದದ್ದಳೆಯ ಪ್ರಸಂಗವದು. ಅರ್ಥದಾರಿಗಳಾಗಿ ಕೃಷ್ಣನ ಭೂಮಿಕೆಯನ್ನು ಡಾ. ಎಂ. ಪ್ರಭಾಕರ್ ಜೋಶಿಯವರು ಮತ್ತು ಕೌರವನ ಭೂಮಿಕೆಯನ್ನು ಶ್ರೀ ಪ್ರಕಾಶ್ ಪಣಿಯೂರು ನಿರ್ವಸಿದರು. ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರ ಸಿರಿಕಂಠದಲ್ಲಿ ಭಾಗವತಿಕೆ ನೆರವೇರಿತು.


    ಉತ್ತರ ಕರ್ನಾಟಕದ ಕಲಬುರ್ಗಿಯಲ್ಲಿ ಹುಟ್ಟಿ ಬೆಳೆದ ನಾನು ಕರಾವಳಿ ಕರ್ನಾಟಕದ ಈ ಕಲಾ ಪ್ರಭೇಧಗಳ ಹೆಸರುಗಳನ್ನು ಕೇಳಿ ತಿಳಿದಿದ್ದೇನೇ ಹೊರತು ಪ್ರತ್ಯಕ್ಷವಾಗಿ ನೋಡಿ ಅವುಗಳ ಸಬಗನ್ನು ಆಸ್ವಾದಿಸಿರಲಿಲ್ಲ. ಭಾನುವಾರದ ಕಾರ್ಯಕ್ರಮವು ನನಗೆ ಹೊಸ ಜಗತ್ತೊಂದನ್ನು ಪರಿಚಯಿಸಿತು. ಯಾವ ಹೆಚ್ಚಿನ ರಂಗ ಸಜ್ಜಿಕೆಯಿಲ್ಲ, ವೇಷಭೂಷಣಗಳ
    ಅಬ್ಬರವಿಲ್ಲ, ಇಬ್ಬರೇ ಪಾತ್ರಧಾರಿಗಳ ನಡುವೆ ನಡೆದ ಈ ‘ಕೃಷ್ಣ ಸಂಧಾನ’ದ ಪ್ರಕರಣವು ಪ್ರೇಕ್ಷಕರನ್ನು ನಿಜಕ್ಕೂ ದ್ವಾಪರಯುಗದ ಹಸ್ತಿನಾವತಿಯ ಕುರುಸಭೆಗೆ ಕರೆದೊಯ್ದಿತಂದರೆ ಅದರ ಶಕ್ತಿ ಪ್ರಭಾವಗಳ ಅಂದಾಜಾದೀತು.

    ಇಂತಹ ಕಾರ್ಯಕ್ರಮಗಳ ಯಶಸ್ಸಿನ ಶ್ರೇಯಸ್ಸು ಮೊದಲಿಗೆ ಸಲ್ಲಬೇಕಾದದ್ದು ನಮ್ಮ ಮಹಾಭಾರತ ಕಥೆಗೆ. ಚಿಕ್ಕಂದಿನಿಂದಲೂ ಅದನ್ನು ಕೇಳುತ್ತಲೇ ಬೆಳೆದು, ವಿಧವಿಧವಾದ ಮಾಧ್ಯಮಗಳಲ್ಲಿ ಇಂದಿಗೂ ಅದಕ್ಕೆ ಮತ್ತೆ ಮತ್ತೆ ಮಖಾಮಖಿಯಾಗುತ್ತಿದ್ದು ಅದರ
    ಉಪಕಥೆಗಳನೆಲ್ಲ ವಿಶದವಾಗಿ ತಿಳಿದಿದ್ದರೂ ಕೂಡ ಭಾನುವಾರದ ‘ಕೃಷ್ಣ ಸಂಧಾನ’ದ ಪ್ರಸಂಗವು ಒಂದು ಹೊಚ್ಚಹೊಸ ಪ್ರಸ್ತುತಿಯೇನೋ ಎಂಬ ಭಾವವನ್ನು ಪ್ರೇಕ್ಷಕರಲ್ಲಿ ಹುಟ್ಟಿಸಿದ ಈ ಮಹಾಕಾವ್ಯದ ಮಹಿಮೆ ವರ್ಣನಾತೀತ. ಭಾರತೀಯರ ಭಾವಕೋಶಗಳಲ್ಲಿ ಈ ಮಹಾನ್ ಕೃತಿಗೆ ಅಂತಹ ಆತ್ಮೀಯ ಸ್ಥಾನವಿದೆ.

    ಭಾನುವಾರದ ಕಾರ್ಯಕ್ರಮದ ವೈಶಿಷ್ಯವೆಂದರೆ ಅದು ಮೂರು ತಾಸುಗಳವರಗೆ ನಡೆಯಿತೆಂದು ಕೇಳುತ್ತಿದ್ದವರಿಗೆ ಅನ್ನಿಸಲೇ ಇಲ್ಲ. ಮಂಗಳವನ್ನು ಹಾಡಿದಾಗ ಇಷ್ಟು ಸಮಯವಾಯಿತೇ ಎನ್ನುವ ಅಪನಂಬಿಕೆಯಿಂದ ಮತ್ತೆ ಮತ್ತೆ ಕೈಗಡಿಯಾರವನ್ನು
    ನೋಡಿಕೊಳ್ಳುವಂತಾಯಿತು. ಆ ಮಟ್ಟದ ಸಮ್ಮೋಹಕ ಶಕ್ತಿಯೂ ಅಂದಿನ ಪ್ರಸಂಗಕ್ಕಿತ್ತು.

    ದುರ್ಯೋಧನನಾಗಿ ಪ್ರಕಾಶ್ ಪಣಿಯೂರರು ಆ ಹಿಂದೆ ನಡೆದ ದೂರ್ವಾಸಾತಿಥ್ಯ, ದ್ರೌಪತಿ ವಸ್ತ್ರಾಪಹರಣ, ಚಿತ್ರಸೇನ ಗಂಧರ್ವನ ಪ್ರಸಂಗಗಳನ್ನು ಅತ್ಯಂತ ಸಂಯಮದಿಂದ ನಿರರ್ಗಳವಾಗಿ ಬಿಚ್ಚಿಡುತ್ತಾ ಹೋದರು. ಕೌರವನ ದೃಷ್ಟಿಯಿಂದ ಇವುಗಳನ್ನು ಖಚಿತವಾಗಿ ವಿವರಿಸುತ್ತಿರುವಾಗ ದುರ್ಯೋಧನನ ನಡವಳಿಕೆಗಳು ಸರಿಯಾಗಿಯೇ ಇದ್ದುವಲ್ಲ ಎನ್ನುವ
    ಸಮ್ಮತಿಯೇ ಮನಸ್ಸನ್ನು ಆವರಿಸಿಕೊಳ್ಳುತಿತ್ತು. ನಂತರದಲ್ಲಿ ಕೃಷ್ಣನ ಪಾತ್ರದ ಪ್ರಭಾಕರ
    ಜೋಶಿಯವರು ಅವುಗಳನ್ನು ಅಷ್ಟೇ ಸಂಯಮದಿಂದ ಖಂಡಿಸುವಾಗ ಹೌದಲ್ಲವೇ ಎಂಬಂತಾಗುತಿತ್ತು. ಅಸ್ಖಲಿತವಾದ, ದೋಷರಹಿತವಾದ, ಸರಳವಾದ, ಸುಂದರವಾದ, ಭಾಷಾಸೂತ್ರವನ್ನು ಇಬ್ಬರಿಂದಲೂ ಕೇಳುವಾಗ ಮೈ ನವಿರೇಳುತಿತ್ತು. ಇಷ್ಟೆಲ್ಲ ವಿವರವಾದ ಸಂಭಾಷಣೆಗಳನ್ನು ಎಲ್ಲಿಯೂ ಕಲಸಿಕೊಳ್ಳದಿರುವಂತೆ ಎಳೆಎಳೆಯಾಗಿ ಇಬ್ಬರೂ
    ಅರ್ಥಧಾರಿಗಳು ಮಂಡಿಸಿದರು. ಪುನರಾವರ್ತನೆಯ ಹೊರಯೇ ಇರಲಿಲ್ಲ. ಕೃಷ್ಣನ ಪಾತ್ರಕ್ಕೆ
    ಸಲ್ಲುವಂತೆ ಜೋಶಿಯವರು ಸಂಭಾಷಣೆಯ ಮಧ್ಯದಲ್ಲಿ ಉಚ್ಚರಿಸುತ್ತಿದ್ದ ಸಂಸ್ಕೃತದ ಶ್ಲೋಕಗಳು ಮತ್ತು
    ಉಪನಿಷದ್ವಾಕ್ಯಗಳು ಬಹಳ ಒಪ್ಪುವಂತಿದ್ದವು.


    ಸಂಗ್ರಾಮವಲ್ಲದೆ ಶಾಂತಿಯೇ ತನಗೆ ಬೇಕೆಂದಿದ್ದರೆ ಅದನ್ನು ಆಗಗೊಳಿಸುವುದು ಕೃಷ್ಣನ ಕೈಯಲ್ಲಿರಲಿಲ್ಲವೇ ಎನ್ನುವ ಪ್ರಶ್ನೆಯನ್ನು ಬಹಳ ಉಚಿತವಾದ ರೀತಿಯಲ್ಲಿ ಕೌರವನು ಪ್ರತೀ ಬಾರಿಯೂ ಬೇರೆ ಬೇರೆ ವಿಧಗಳಲ್ಲಿ ಕೇಳುತ್ತಾ
    ಯುದ್ಧವೇ ಕೃಷ್ಣನ ಮುಖ್ಯ ಇಂಗಿತ ಎನ್ನುವುದನ್ನು ಹೊರಗೆಡವಿದಾಗ ಇದಕ್ಕೆ ಕೃಷ್ಣನು ಯಾವ ಸಮರ್ಥನೆಯನ್ನು ಕೊಟ್ಟಿಯಾನೆನ್ನುವ ಕುತೂಹಲವು ಸಭಿಕರ ಮನಸ್ಸುಗಳಲ್ಲಿ ಮೂಡುತ್ತಿದ್ದಂತೆಯೇ ಪ್ರಭಾಕರ
    ಜೋಶಿಯವರು ಸಮ್ಮತದ ಹಾವಭಾವ ಮಿತಾಭಿನಯಗಳಿಂದ ಆ ಪ್ರಶ್ನೆಗಳಿಗೆ ಸಮಂಜಸವಾದ
    ಉತ್ತರವನ್ನು ನೀಡುತ್ತಿದ್ದದ್ದು ಬಹಳ ಮನೋಹರವಾಗಿತ್ತು.
    ದುರ್ಯೋಧನನು ತನು ಹಠವನ್ನೇ ಕಡೆಯವರೆಗೆ ಸಾಧಿಸಿದರೂ ಪಂಚಭೂತಗಳಲ್ಲಿ ಸಕಲಜೀವವೂ ಲೀನವಾಗಿ ಹೋಗುವ ಅಂತಿಮಸತ್ಯವನ್ನು ಬಹಳ ಸರಳವಾದ ವಾಕ್ಯಗಳಲ್ಲಿ ಮನಮುಟ್ಟುವಂತ ಹೇಳಿ ಕೊನೆಗೆ ತಾನು ವಿರೋಧಭಕ್ತಿಯ ಮಾರ್ಗವಾಗಿ ಕೃಷ್ಣನ ಪದತಲವನ್ನೇ ಸೇರುವವನೆಂದಾಗ ಅವನ ಖಳನಾಯಕತ್ವವು ಕರಗಿಹೋಗಿ ಸಾಭಿಕರ ಕಣ್ಣಂಚುಗಳು ತೇವವಾಗುವಂತಾಯಿತು.
    ದೇವಿದಾಸಕವಿಯ ‘ಕೃಷ್ಣ ಸಂಧಾನ’ ಪ್ರಸಂಗದಿಂದ ಆಯ್ದ ಪದ್ಯಗಳನ್ನು ಪೊಲ್ಯರು ನಡುನಡುವೆ ಹಾಡುತ್ತಿದ್ದರೆ ಸೊಗಸಾದ ಶಾವಿಗೆಯ ಪಾಯಸದಲ್ಲಿ ಹದವಾಗಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿಗಳು ಮಧ್ಯ ಮಧ್ಯ ಬಾಯಿಗೆಸಿಕ್ಕಿ ಸವಿಯಾಗುವಂತೆ ಆಗುತಿತ್ತು.
    ಪೊಲ್ಯರದು ಆದ್ಭುತವಾದ ಸಿರಿ ಕಂಠ, ಅವರ ಭಾಗವತಿಕೆ ಹಾಗೂ ಇತರರ ಸಂಭಾಷಣೆಗಳು ಸಮೀಕರಣಗೊಂಡು ಏಕಭಾವದಿಂದ ಪ್ರಕಟವಾದಾಗ ಅದೆಷ್ಟು ಬಾರಿ ರಂಗ ತಾಲೀಮನ್ನು ನಡೆಸಿ ಈ ಪ್ರಸ್ತುತಿಯನ್ನು ನೀಡುತ್ತಿರುವರೋ ಎಂದೆನ್ನಿಸುತಿತ್ತು . ಆದರೆ ಅರ್ಥಧಾರಿಗಳಿಬ್ಬರೂ ಭೇಟಿಯಾದದ್ದೇ ಅಂದಿನ ಮುಂಜಾನೆ ಎಂದು ತಿಳಿದಾಗ ಉಂಟಾದ ಬೆರಗಿಗೆ
    ಪಾರವೇ ಇಲ್ಲ.

    ಈ ಕಾಯಯಕ್ರಮದಂದ ತಿಳಿದು ಬಂದ ಇನ್ನೊಂದು ಸತ್ಯವೆಂದರೆ ಯಕ್ಷಗಾನ ಕವಿಗಳು ತಮ್ಮ ಅಮೂಲ್ಯವಾದ ಬರವಣಿಗೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿರುವರೆಂಬುದು. ಆದರೆ ಅವರಿಗೆ ಸಲ್ಲಬೇಕಾದಷ್ಟು ಮನ್ನಣೆ ಸಂದಿಲ್ಲವೆಂಬ ವಿಷಾದವೂ ಉಂಟಾಯಿತು.

    ಕುಮಾರವ್ಯಾಸನ ನಾಂದಿಪದ್ಯದಿಂದ ಕಾರ್ಯಕ್ರಮವು ಪ್ರಾರಂಭವಾದಾಗ ನಿಜಕ್ಕೂ ಕಲಿಯುಗ ದ್ವಾಪರವಾಯಿತು. ಪ್ರಸಂಗದ ಆರಂಭಕ್ಕೆ ಮುನ್ನ ಕಲಾವಿದರು ಪರಸ್ಪರರನ್ನು ಭಕ್ತಿ ಗೌರವಾಗಳಿಂದ ಅಭಿವಾದಿಸಿಕೊಂಡು ಪಕ್ಕ ವಾದ್ಯಗಳಿಗೂ ನಮಸ್ಕರಿಸಿದಾಗ ಮನರಂಜನೆಯ ಕಲೆಯು ಕೂಡ ಭಗವದುಪಾಸನೆಯ ಒಂದು ಮಾರ್ಗವೇ ಎನ್ನುವ ನಮ್ಮ ಹಿರಿಯರ ಸಂಸ್ಕಾರದ ಔನ್ನತ್ಯವನ್ನು ಮನಗಂಡು ಗೌರವದಿಂದ ತಲೆಬಾಗುವಂತಾಯಿತು. ಇನ್ನೂ ಮುಂದೆ ಮುಂಬಯಿಯಲ್ಲಿ ನಡೆವ ತಾಳಮದ್ದಳೆಗಳಿಗೆ ಗೈರುಹಾಜರಾಗುವ ಸಾಧ್ಯವೇ ಇಲ್ಲವೆನ್ನುವ ನಿರ್ಧಾರವನ್ನು ಮನಸ್ಸಿನಲ್ಲಿ ಈ ಪ್ರಸಂಗವು ಮೂಡಿಸಿದೆಯೆಂಬಲ್ಲಿ ಅದರ ಯಶಸ್ಸು ಸ್ವಯಂವೇದ್ಯಂ
    ಈ ಕಾಯಯಕ್ರಮವನ್ನು ಆಗಗೊಳಿಸಿದ ಎಲ್ಲರಿಗೂ ಹೃತ್ಪೂರ್ವಕವಾದ ಅಭಿನಂದನೆಗಳು.

    –  ಡಾ. ಉಮಾ ರಾಮರಾವ್ 

    article kannada yakshagana
    Share. Facebook Twitter Pinterest LinkedIn Tumblr WhatsApp Email
    Previous Article‘ಕಥಾ ಕಮ್ಮಟ ಕಾರ್ಯಾಗಾರ’ ಆನ್ ಲೈನ್ ಕಾರ್ಯಕ್ರಮ | 09 ಫೆಬ್ರವರಿ
    Next Article ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಉದ್ಘಾಟನಾ ಸಮಾರಂಭ | ಫೆಬ್ರವರಿ 02
    roovari

    Add Comment Cancel Reply


    Related Posts

    ಶಿರಸಿಯ ರಂಗಧಾಮದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ | ಜೂನ್ 01

    May 31, 2025

    ಕಟೇಲಿನಲ್ಲಿ ಮುಂಬೈನ ಭ್ರಾಮರಿ ಯಕ್ಷನೃತ್ಯ ಕಲಾನಿಲಯದ ವಾರ್ಷಿಕೋತ್ಸವ

    May 30, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘#36 ಸತಿ ಸಾವಿತ್ರಿ ನಿವಾಸ’ ಕನ್ನಡ ನಾಟಕ ಪ್ರದರ್ಶನ | ಜೂನ್ 01

    May 30, 2025

    ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ‘ಬೀಚಿ ರಸಾಯನ’ | ಮೇ 30

    May 29, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.