Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರಿಚಯ ಲೇಖನ – ನಾ ಕಂಡಂತೆ ಕವಿ ಸಾಹಿತಿಗಳು – ಶ್ರೀಮತಿ ಅನುಪಮಾ ಸುಲಾಖೆ
    Article

    ಪರಿಚಯ ಲೇಖನ – ನಾ ಕಂಡಂತೆ ಕವಿ ಸಾಹಿತಿಗಳು – ಶ್ರೀಮತಿ ಅನುಪಮಾ ಸುಲಾಖೆ

    November 13, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಶ್ರೀಮತಿ ಅನುಪಮಾ ಸುಲಾಖೆ ಇವರು ಶಿವಮೊಗ್ಗ ನಗರದ ಬಾಲಚಂದ್ರ ರಾವ್ ನಾಜರೆ ಮತ್ತು ಗಾಯತ್ರಿ ನಾಜರೆ ದಂಪತಿಯ ಸುಪುತ್ರಿ. ಶಿವಮೊಗ್ಗದ ಮಕ್ಕಳ ವಿದ್ಯಾ ಸಂಸ್ಥೆ ಮತ್ತು ಕಸ್ತೂರಿ ಬಾ ಕಾಲೇಜಿನಲ್ಲಿ ಪಿಯುಸಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ. ವೃತ್ತಿಯಿಂದ ಗೃಹೋದ್ಯಮಿಯೂ ಆಗಿದ್ದು, ಓದು, ಬರಹ, ಗಾಯನ, ಯೋಗ, ಕರಕುಶಲತೆಯನ್ನು ಪ್ರವೃತ್ತಿಯಾಗಿ ಉಳಿಸಿಕೊಂಡಿರುವ ಇವರು ದೈನಂದಿನ ಸುಭಾಷಿತ ರಚನೆಯಲ್ಲಿ ಸಿದ್ಧಹಸ್ತರು.
    ಈವರೆಗೆ ಸುಮಾರು 1340 ಸುಭಾಷಿತ ರಚನೆ ಮಾಡಿದ್ದಾರೆ. ಜೊತೆಗೆ ಅಂತರ್ಜಾಲದ ಇನ್ನಿತರ ಸಾಹಿತ್ಯಿಕ ಬಳಗಗಳಲ್ಲಿ ಪ್ರತಿದಿನ ಹಂಚಿಕೊಳ್ಳುತ್ತಿದ್ದಾರೆ. ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ದಿನಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸಪತ್ರಿಕೆಗಳಲ್ಲಿ ಹಾಗೂ ಪ್ರಜಾವಾಣಿ, ಬೆಂಗಳೂರು ವಾಯ್ಸ್, ಪಿಸುಮಾತು, ಜನನಾಡಿ, ಜನ ಮಿಡಿತ, ಸ್ತ್ರೀ ಜಾಗೃತಿ, ದಿ ಜರ್ನಿ ಆಫ್ ಸೊಸೈಟಿ, ಹಂಪಿ ಟೈಮ್ಸ್, ಬಳ್ಳಾರಿ ಬೆಳಗಾಯಿತು, ಕಸ್ತೂರಿ ಪ್ರಭೆ, ಇಂದು ಸಂಜೆ, ನಾಡಿನ ಸಮಾಚಾರ, ಪ್ರತಿನಿಧಿ, ಮಾಳವಿ ಪತ್ರಿಕೆ, ಟೈಮ್ಸ್ ಆಫ್ ಕರ್ನಾಟಕ, ಮಾನಿನಿ ಪತ್ರಿಕೆಗಳಲ್ಲಿ ಇವರ ಲೇಖನ ಕವಿತೆಗಳು ಪ್ರಕಟವಾಗಿವೆ.
    ಇವರು ರಚಿಸಿದ ‘ಚಿತ್ರ ಚೈತ್ರ’ ಕವನ ಸಂಕಲನವು 2023ರಲ್ಲಿ ಲೋಕಾರ್ಪಣೆಯಾಗಿದೆ. 1) ಲೇಖನಗಳು ಸಂಗ್ರಹ, 2) 1,000 : ಸುಭಾಷಿತ ಮಾಲಿಕೆ, 3) ಕವನ ಸಂಕಲನ ಎಂಬ ಮೂರು ಕೃತಿಗಳು ಅಚ್ಚಿನ ಮನೆಯಲ್ಲಿ ಇವೆ. ಇವರು ಮೈಸೂರು ದಸರಾ-2023, ಹಂಪಿ ಉತ್ಸವ 2023, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಮಟ್ಟ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಮಟ್ಟ, ಚುಟುಕು ಹನಿಗವನ ತಾಲೂಕು ಮತ್ತು ಜಿಲ್ಲಾ ಮಟ್ಟ, ಗೋವಿಂದ ಪೈ ಕಾವ್ಯ ಸ್ಪರ್ಧೆ, ಕರ್ನಾಟಕ ಸಂಘ ಶಿವಮೊಗ್ಗ ಕಾವ್ಯ ಸ್ಪರ್ಧೆ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮತದಾನ ಜಾಗೃತಿ ಅಭಿಯಾನದಲ್ಲಿ ಆಯ್ಕೆಯಾಗಿ ಮತ್ತು ಕವನ ವಾಚನ ಮಾಡಿದ್ದಾರೆ.
    ರಾಷ್ಟ್ರೋತ್ಥಾನ ಪರಿಷತ್ ಕಾರ್ಯಕ್ರಮದಲ್ಲಿ ಉಪನ್ಯಾಸ, ವೃದ್ಧಾಶ್ರಮದಲ್ಲಿ ಚಿಂತನೆ ಉಪನ್ಯಾಸ, ಮಕ್ಕಳ ಸಾಹಿತ್ಯ ಪರಿಷತ್ತಿನಲ್ಲಿ ಜಾಗೃತಿ ಉಪನ್ಯಾಸ, ಕಾಲೇಜು ವಿದ್ಯಾರ್ಥಿನಿಯರಿಗೆ ಜಾಗೃತಿ ಉಪನ್ಯಾಸ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಭಾಗವಹಿಸಿರುತ್ತಾರೆ. ಇವರು “ಮಲೆನಾಡ ಮಾತೆ” ರಾಜ್ಯ ಪ್ರಶಸ್ತಿ ರಚಿತ ಮಹಿಳಾ ಸಮಾಜ ಚಿಕ್ಕಮಗಳೂರು, “ಕರವೇ ರಾಜ್ಯೋತ್ಸವ ಪ್ರಶಸ್ತಿ” ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು. “ಗಾನಸಿರಿ ಕೋಗಿಲೆ ಪ್ರಶಸ್ತಿ” ರಾಜ್ಯ ಸಿರಿಗನ್ನಡ ಮಹಿಳಾ ವೇದಿಕೆ, ಪ್ರಜಾವಾಣಿ ಜಿಲ್ಲಾ ಮಟ್ಟದ ಅಮೃತ ಮಹೋತ್ಸವ ಆಯ್ಕೆ ಮತ್ತು ಸನ್ಮಾನ, “ಮಿಸಸ್ ಹಂಪಿ” ಪ್ರಶಸ್ತಿ ರೋಟರಿ ಸಂಸ್ಥೆ ಹೊಸಪೇಟೆ, ಕವಿ ವಿಭೂಷಣ ಪ್ರಶಸ್ತಿ ರಾಜ್ಯ ಮತ್ತು ಜಿಲ್ಲಾ ಮಟ್ಟ ಬೆಳಗಾವಿ, ಇನ್ನಿತರ ಸಂಘ, ಸಂಸ್ಥೆ, ಪ್ರತಿಷ್ಠಾನಗಳಿಂದ ಗೌರವಗಳಿಗೆ ಭಾಜನರಾಗಿದ್ದಾರೆ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವಿಜಯನಗರ ಉಪಾಧ್ಯಕ್ಷೆಯಾಗಿ ಮತ್ತು ಮಕ್ಕಳ ಸಾಹಿತ್ಯ ಪರಿಷತ್ತು ಹೊಸಪೇಟೆಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
    ಇವರು ಇಂದಿನ ಸಾಹಿತ್ಯಾಸಕ್ತರಿಗೆ “ಇಂದಿರುವ ಅಂತರ್ಜಾಲ ವ್ಯವಸ್ಥೆಯಿಂದಾಗಿ ಸಾಹಿತ್ಯದ ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಹೆಚ್ಚು ಕಡಿಮೆ ಅಂತರ್ಜಾಲ ಕವಿಗಳು ಹೆಚ್ಚಾಗಿದ್ದು ಪುಸ್ತಕ ರೂಪದಲ್ಲಿ ಬರವಣಿಗೆಯನ್ನು ಸಂಗ್ರಹಿಸಿಡುವ ವ್ಯವಸ್ಥೆ ಮರೆಯಾಗುತ್ತಾ ಬರುತ್ತಿದೆ. ಆದ್ದರಿಂದ ಪುಸ್ತಕ ಎನ್ನುವ ಆತ್ಮೀಯ ಸ್ನೇಹಿತನನ್ನು ಕೈಯಲ್ಲಿ ಹಿಡಿದು ಓದುವ, ಬಗಲಲ್ಲಿ ಹಿಡಿದು ಓಡಾಡುವ ಸಂಸ್ಕೃತಿ ಹೆಚ್ಚಾಗಲಿ ಎಂದು ಆಶಿಸುತ್ತೇನೆ” ಎಂದು ಕಿವಿಮಾತು ಹೇಳುತ್ತಾರೆ.
    ಉದ್ಯಮಿ ಅನಿಲ್ ಕುಮಾರ್ ಸುಲಾಖೆ (ಪತಿ), ಹಿರಿಯ ಪುತ್ರ ಅಮಿತ್ ಸುಲಾಖೆ ಮತ್ತು ದ್ವಿತೀಯ ಪುತ್ರ ಅಕ್ಷಯ್ ಸುಲಾಖೆ ಇವರೊಡನೆ ಹೊಸಪೇಟೆ ವಿಜಯನಗರ ಜಿಲ್ಲೆಯಲ್ಲಿ ಪ್ರಸ್ತುತ ವಾಸವಾಗಿದ್ದಾರೆ. ಇವರ ಮುಂದಿನ ಬದುಕು ಬರಹಗಳು ಇನ್ನಷ್ಟೂ ಉನ್ನತಿಗೇರಿ ಜನಜನಿತರಾಗಲಿ ಎಂದು ಹಾರೈಸೋಣ.
    ಲೇಖಕರು
    ಎಂದೆಂದಿಗೂ ಸಾಹಿತ್ಯ ಸೇವಾಕಾಂಕ್ಷಿ
    ವೈಲೇಶ ಪಿ.ಎಸ್., ಬೋಯಿಕೇರಿ, ವಿರಾಜಪೇಟೆ, ಕೊಡಗು. 88614 05738

    Share. Facebook Twitter Pinterest LinkedIn Tumblr WhatsApp Email
    Previous Articleಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ‘ರಂಗ ಕಾರ್ತಿಕ ನಾಟಕೋತ್ಸವ’ | ನವೆಂಬರ್ 16ರಿಂದ 18
    Next Article ಉದ್ಘಾಟನೆಗೊಂಡ  ಯಕ್ಷಾಂಗಣ ನುಡಿಹಬ್ಬ ತಾಳಮದ್ದಳೆ ಸಪ್ತಾಹ – 2024
    roovari

    Add Comment Cancel Reply


    Related Posts

    ಭಾಗವತ ಶ್ರೇಷ್ಠ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ 2025’ ಪ್ರದಾನ

    May 29, 2025

    ಪುಸ್ತಕ ವಿಮರ್ಶೆ | ಡಾ. ಮೋಹನ ಕುಂಟಾರ್ ಇವರ ‘ಪುರಾಣ ಕಥಾಕೋಶ’

    May 28, 2025

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.