Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ಕಥಾಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಸಂಸ್ಥೆಯ 18ನೇ ವಾರ್ಷಿಕ ಸಂಭ್ರಮಾಚರಣೆಯ ನಿಮಿತ್ತವಾಗಿ ‘ಸಾಹಿತ್ಯೋತ್ಸವ’ ಕಾರ್ಯಕ್ರಮ ಅದ್ದೂರಿಯಾಗಿ ದಿನಾಂಕ 26 ಅಕ್ಟೋಬರ್ 2025ರಂದು ಮಂಗಳೂರಿನ ಹೊರವಲಯದ ದೇರಳಕಟ್ಟೆಯಲ್ಲಿರುವ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ದಿನಪೂರ್ತಿ ನಡೆದು ಸಂಪನ್ನವಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ವಿದ್ಯಾರತ್ನ ಸಂಸ್ಥೆಯ ಸ್ಥಾಪಕರಾದ ಶ್ರೀ ರವೀಂದ್ರ ಶೆಟ್ಟಿ ಉಳಿದೊಟ್ಟು, ಯುಗಪುರುಷ ಮಾಸಿಕದ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪ, ಸಿನಿಮಾ ನಟ ಮತ್ತು ನಿರ್ಮಾಪಕರಾದ ಸತೀಶ್ ಎನ್. ಬಂಗೇರ, ಡಾ. ದೇವಪ್ಪ ಇವರು ಅತಿಥಿಗಳಾಗಿ ಭಾಗವಹಿಸಿದರು. ಪೂರ್ವಾಹ್ನ 10-00 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ಅನಿತಾ ಶೆಣೈ, ಸುಲೋಚನಾ ನವೀನ್, ಸುಭಾಷಿಣಿ ಮತ್ತು ರೇಖಾ ಸುದೇಶ್ ಇವರ ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ಕಾದಂಬರಿಗಾರರಾದ ಪಿ.ವಿ. ಪ್ರದೀಪ್ ಕುಮಾರ್ ಇವರು ಪ್ರಸ್ತಾವನೆ ಮಾಡಿದರು. ಈ ಸಂದರ್ಭದಲ್ಲಿ 17…
ಧಾರವಾಡ : ಉತ್ತರ ಕರ್ನಾಟಕ ಲೇಖಕಿಯರ ಸಂಘ ಹುಬ್ಬಳ್ಳಿ ಧಾರವಾಡ ಇವರ ವತಿಯಿಂದ ‘ಕಾರ್ತೀಕ ದೀಪ’ ನೂತನ ಪದಾಧಿಕಾರಿಗಳ ಪ್ರಥಮ ಕಾರ್ಯಕ್ರಮವು ದಿನಾಂಕ 26 ಅಕ್ಟೋಬರ್ 2025ರಂದು ಧಾರವಾಡದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು. ಹುಬ್ಬಳ್ಳಿ ಧಾರವಾಡದ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಶ್ರೀಮತಿ ರೂಪಾ ಜೋಶಿ ಇವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಪ್ರಾಧ್ಯಾಪಕರಾದ ಡಾ. ಸ್ನೇಹಾ ಭೂಸನೂರು ಇವರು ನಿರ್ವಹಿಸಿದರು. ಸಂಘದ ಸದಸ್ಯೆಯರಿಂದ ದೀಪಗಳ ಕುರಿತಾದ ಭಾವಗೀತೆಗಳ ಗಾಯನ ಪ್ರಸ್ತುತಗೊಂಡಿತು. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಶ್ರೀಮತಿ ಸಂಕಮ್ಮಾ ಸಂಕಣ್ಣವರ್, ಸಾಮಾಜಿಕ ಕ್ಷೇತ್ರದ ಶ್ರೀಮತಿ ಶಾರದಾ ದಾಬಡೆ ಮತ್ತು ರಂಗಭೂಮಿ ಕ್ಷೇತ್ರದ ಶ್ರೀಮತಿ ಕ್ಷಮಾ ಹೊಸಕೇರಿ ಇವರುಗಳನ್ನು ಲೂಸಿ ಸಾಲ್ಡಾನಾ ಅವರ ದತ್ತಿ ಕಾರ್ಯಕ್ರಮದ ಪ್ರಯುಕ್ತ ಸನ್ಮಾನಿಸಲಾಯಿತು.
ಪೆರಿಯ : ಬೇಕಲ್ ಗೋಕುಲಂ ಗೋಶಾಲೆಯಲ್ಲಿ ನಡೆಯುತ್ತಿರುವ ಐದನೇ ದೀಪಾವಳಿ ಸಂಗೀತೋತ್ಸವದ ದಿನಾಂಕ 27 ಅಕ್ಟೋಬರ್ 2025ರ ಎಂಟನೇ ದಿನದಂದು, ಮೊದಲ ಸಂಗೀತ ಕಚೇರಿಯಲ್ಲಿ ವೈ.ಜಿ. ಶ್ರೀಲತಾ ನಿಕ್ಷಿತ್ ಇವರ ವೀಣಾವಾದನವು ಪ್ರೇಕ್ಷಕರ ಹೃದಯವನ್ನು ಸೂರೆಗೊಳಿಸುವಂತಿತ್ತು. ಗೋಶಾಲೆಯ ಸಂಸ್ಥಾಪಕ ವಿಷ್ಣು ಹೆಬ್ಬಾರ್ ಇವರ ಕಾಪಿ ರಾಗದಲ್ಲಿ ದಶರಥ ನಂದನ ಕೃತಿಯನ್ನು ವೀಣೆಯಲ್ಲಿ ನುಡಿಸಲಾಯಿತು. ವಾಚಸ್ಪತಿ ರಾಗದಲ್ಲಿ ಪರಾತ್ಪರ ಪರಮೇಶ್ವರ ಕೃತಿಯನ್ನು ವಿವರವಾಗಿ ನುಡಿಸಲಾಯಿತು. ಷಣ್ಮುಗಪ್ರಿಯ ರಾಗದಲ್ಲಿ ಅರುಣ ಗಿರಿನಾಥ್ ಇವರ ತಿರುಪುಳಕೋಡೆಯೊಂದಿಗೆ ಸಂಗೀತ ಕಚೇರಿ ಕೊನೆಗೊಂಡಿತು. ಮೃದಂಗದಲ್ಲಿ ಪಾಲಕ್ಕಾಡ್ ಜಯಕೃಷ್ಣನ್ ಮತ್ತು ಘಟದಲ್ಲಿ ರೋಹಿತ್ ಪ್ರಸಾದ್ ಕೂಡ ಸುಮಧುರ ಪ್ರದರ್ಶನ ನೀಡಿದರು. ಪಟ್ಟಾಭಿರಾಮ ಪಂಡಿತ್ ಇವರ ಸಂಗೀತ ಕಚೇರಿಯಲ್ಲಿ, ಹಿಂದೋಳ ರಾಗದಲ್ಲಿ ವಿಷ್ಣು ಹೆಬ್ಬಾರ್ ರಚಿಸಿದ ರಾಧಾರಮಣ ಗೀತೆಯನ್ನು ಹಾಡಿದರು. ಚೆನ್ನೈನ ಅರ್ಜುನ್ ಸಾಂಬಶಿವನ್ ಮತ್ತು ನಾರಾಯಣನ್ ಸಹೋದರರಿಂದ ಕೀಬೋರ್ಡ್ ಸಂಗೀತ ಕಚೇರಿ, ಹೇಮಂತ್ ಹೇರಂಬ ಸಹೋದರರಿಂದ ಕೊಳಲು ವಾದನ ಕಚೇರಿ ಮತ್ತು ಭಾರತ ರತ್ನ ಎಂ.ಎಸ್. ಸುಬ್ಬಲಕ್ಷ್ಮಿಯವರ ಮೊಮ್ಮಕ್ಕಳಾದ ಐಶ್ವರ್ಯ…
ಬೆಂಗಳೂರು : ಕಳೆದ ನಾಲ್ಕುವರೆ ದಶಕಗಳಿಂದ ಗುಣಾತ್ಮಕ ಯಕ್ಷಗಾನ ಪ್ರದರ್ಶನ, ಪ್ರಾತ್ಯಕ್ಷಿಕೆ, ಕಮ್ಮಟ, ತಾಳಮದ್ದಳೆ, ಯಕ್ಷಗಾನ ಉತ್ಸವ, ಗಾನ ವೈಭವ, ಪುಸ್ತಕ ಬಿಡುಗಡೆ, ನಿರಂತರ ಯಕ್ಷಗಾನ ತರಬೇತಿ ಹೀಗೆ ಸದಾ ಚಟುವಟಿಕೆಯಿಂದಿರುವ ಕೆ. ಮೋಹನ್ ನಿರ್ದೇಶನದ ಬೆಂಗಳೂರಿನ ಯಕ್ಷದೇಗುಲ ತಂಡದವರಿಂದ ಮೊದಲ ಬಾರಿಗೆ ಇಸ್ರೇಲಿನಲ್ಲಿ ದಿನಾಂಕ 02ರಿಂದ 04 ನವೆಂಬರ್ 2025ರ ತನಕ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ತಿನ ಆಶ್ರಯದಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನವು ಇಸ್ರೇಲ್ನ ಆಶ್ಕೆಲೋನ್, ಪೆಟಾಕ್ಟಿಕ್ವಾ ನಗರದಲ್ಲಿ ‘ಕಂಸವಧೆ’, ‘ಅಭಿಮನ್ಯು ಕಾಳಗ’ ಮತ್ತು ಯಕ್ಷದೇಗುಲ ಪರಿಕಲ್ಪನೆಯ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದೆ. ಕಲಾವಿದರಾಗಿ ಕೆ. ಮೋಹನ್, ಸುದರ್ಶನ ಉರಾಳ, ಸುಜಯೀಂದ್ರ ಹಂದೆ, ಉದಯ ಹೆಗಡೆ ಕಡಬಾಳ, ಲಂಬೋದರ ಹೆಗಡೆ, ಪ್ರಿಯಾಂಕ ಕೆ. ಮೋಹನ್, ದಿನೇಶ್ ಕನ್ನಾರ್, ಸುದೀಪ ಉರಾಳ, ದೇವರಾಜ್ ಕರಬ, ವಿಶ್ವನಾಥ ಉರಾಳ, ಶ್ರೀರಾಮ ಹೆಬ್ಬಾರ್ ಮತ್ತು ಶ್ರೀವಿದ್ಯಾರವರು ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.
ಮಂಗಳೂರು : ಕೊಂಕಣಿಯ ಏಕ ಮಾತ್ರ ರೆಪರ್ಟರಿ ಕಲಾಕುಲ್ ಇದರ 2024-25ನೇ ಸಾಲಿನ ರಂಗಭೂಮಿ ಡಿಪ್ಲೊಮಾ ಪದವಿ ಪ್ರದಾನ ಕಾರ್ಯಕ್ರಮವು ಶಕ್ತಿನಗರದ ಕಲಾಂಗಣದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ನಡೆಯಿತು. ಮುಖ್ಯ ಅತಿಥಿ ಸರಕಾರಿ ಪ್ರ.ದ. ಮಹಿಳಾ ಕಾಲೇಜು ಪುತ್ತೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಝೇವಿಯರ್ ಡಿಸೋಜ ಇವರು ಏಳು ಜನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ʻʻರಂಗಭೂಮಿ ಒಂದು ಶೈಕ್ಷಣಿಕ ಮಾಧ್ಯಮ. ಸೃಜನಾತ್ಮಕತೆ ಮತ್ತು ಶಿಸ್ತು ಇಲ್ಲಿ ಅಗತ್ಯ. ಜನರನ್ನು ಪರಿಣಾಮಕಾರಿಯಾಗಿ ತಲುಪುವ ಈ ಮಾಧ್ಯಮಕ್ಕೆ ನಿರ್ದೇಶಕ ಸ್ಪಷ್ಟ ರೂಪುರೇಷೆ ನೀಡಬಲ್ಲ. ನಾವು ಚೌಕಟ್ಟಿನ ಹೊರಗೆ ಯೋಚಿಸಿದರೆ ಹೊಸ ಸಾಧ್ಯತೆಗಳ ಹೊಳಹು, ಹೊಸತನದ ಸೆಳಹು ಬರಲಿದೆ. ಇಂದಿನ ದಿನಗಳಲ್ಲಿ ಕೆಲ ಯುವಜನರು ಬಾರ್ ಪಬ್ಬ್ ಗಳಲ್ಲಿ, ಮೊಬೈಲಲ್ಲಿ ವ್ಯಸ್ತರಾಗಿರುವ ಸಂದರ್ಭದಲ್ಲಿ ನೀವು ನಾಟಕವನ್ನು ಆಯ್ಕೆ ಮಾಡಿ ಒಂದು ವರ್ಷ ಕಲಿತಿದ್ದೀರಿ. ನಿಮಗೆ ಒಳಿತಾಗಲಿ” ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ವಿದ್ಯಾಥಿಗಳನ್ನು ಅಭಿನಂದಿಸಿ,…
ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರಾಘವೇಂದ್ರ ಯುವಕ ಮಂಡಲದ ಸಹಯೋಗದಲ್ಲಿ ‘ತುಳು ವಿಚಾರಗೋಷ್ಠಿ ಮತ್ತು ತುಳು ಕವಿಗೋಷ್ಠಿ’ ಕಾರ್ಯಕ್ರಮವು ದಿನಾಂಕ 18 ಅಕ್ಟೋಬರ್ 2025ರಂದು ಮೂಡುಪೆರಾರದ ಮಿತ್ತಕೊಲಪಿಲದಲ್ಲಿರುವ ರಾಘವೇಂದ್ರ ಭಜನಾ ಮಂದಿರದ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾದ ಅಕ್ಷಯ ಆರ್.ಶೆಟ್ಟಿ ಪೆರಾರ ಮಾತನಾಡಿ “ಊರಿನ ಸಮಸ್ತ ಜನತೆಯನ್ನು ಒಟ್ಟು ಸೇರಿಸಿ, ಒಗ್ಗಟ್ಟಿನ ಸಂದೇಶ ಸಾರುವಲ್ಲಿ ಯುವಕ ಮಂಡಲಗಳು ಪ್ರಮುಖ ಪಾತ್ರವಹಿಸುತ್ತವೆ. ತುಳು ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯನ್ನು ಆಯೋಜಿಸುವ ಮೂಲಕ ತುಳು ಭಾಷೆಯ ಬಗ್ಗೆ ರಾಘವೇಂದ್ರ ಭಜನಾ ಮಂದಿರ ಎಷ್ಟು ಅಭಿಮಾನವನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ. ಭಾಷೆಯ ಕುರಿತು ವಿವಿಧ ಕಾರ್ಯಕ್ರಮಗಳು ನಡೆಯಬೇಕು. ಈ ನಿಟ್ಟಿನಲ್ಲಿ ಶ್ರೀ ರಾಘವೇಂದ್ರ ಯುವಕ ಮಂಡಲದ ಕಾರ್ಯ ಶ್ಲಾಘನೀಯ” ಎಂದರು. ಶುಭಾಸಂಶನೆಗೈದ ಕ್ಷೇತ್ರ ಪೆರಾರದ ಬಲವಾಂಡಿ ದೈವದ ಮುಕ್ಕಾಲ್ಡಿ ಬಾಲಕೃಷ್ಣ ಶೆಟ್ಟಿ ಅಳಿಕೆಗುತ್ತು ಮಾತನಾಡಿ “ಸಾಹಿತ್ಯ ವಿಚಾರಗೋಷ್ಠಿ, ಕವಿಗೋಷ್ಠಿಯತ್ತ ಮಕ್ಕಳು ಸೇರಿದಂತೆ ಯುವ ಸಮೂಹ ಹೆಚ್ಚಿನ…
ಕಾಸರಗೋಡಿನಲ್ಲಿ ಹೆರಿಗೆ ಮಾಡಿಸುವ ಪ್ರಥಮ ವೈದ್ಯೆಯಾಗಿ ಮಹಿಳಾಸಂಘ, ಮಹಿಳಾ ಸಮ್ಮೇಳನಗಳಂತಹ ಸಂಘಟನಾ ಕಾರ್ಯಗಳಲ್ಲಿ ನಾಯಕತ್ವ ವಹಿಸಿ ಎರಡು ಬಾರಿ ಪರಿಷತ್ತಿನ ಅಧ್ಯಕ್ಷೆಯಾಗಿ ಕನ್ನಡದ ಕೆಲಸಗಳಿಗೆ ಮಾರ್ಗದರ್ಶನ ಕೊಟ್ಟರೆಂದು ಡಾ. ಲಲಿತಾ ಎಸ್ ಎನ್. ಭಟ್ಟರ ನೆನಪು ಮಾಡಿಕೊಂಡ ಕಾಸರಗೋಡು ಚಿನ್ನಾ, ” ಈ ತರಹ ಕಾರ್ಯಕ್ರಮ ಎಲ್ಲಿ ಯಾಕೆ ಹೇಗೆ ಆಚರಿಸಿಯೇವು? ಎಷ್ಟು ಕಾಲ? ಯಾರೊಂದಿಗೆ? ಯಾರು ಬಂದಾರು? ” ಎಂದು ಸಂದೇಹ ಮುಂದಿಟ್ಟರು.ಅವರು ಡಾ. ಲಲಿತಾ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ್ದಕ್ಕೆ ಅಧ್ಯಕ್ಷತೆ ವಹಿಸಿದ್ದ ಕ ಸಾ ಪ ಕಾಸರಗೋಡು ಗಡಿನಾಡ ಘಟಕಾಧ್ಯಕ್ಷ ಡಾl ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅವರ ಸಮಜಾಯಿಷಿ ಗಮನಾರ್ಹವಾಗಿತ್ತು- ” ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಪರಿಷತ್ತು ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಕೆಲವು ಕೇಂದ್ರದ ಆದೇಶದಂತೆ ಇರುತ್ತವೆ. ಉದಾಹರಣೆಗೆ ಸರ್ ಎಂ ಬಿಶ್ವೇಶ್ವರಯ್ಯ, ನಾಲ್ಕನೇ ಕೃಷ್ಣರಾಜ ಒಡೆಯರ್ ಮುಂತಾದವರ ಜೊತೆಗೆ ಕೈಯಾರ ಕಿಞ್ಞಣ್ಣ ರೈ, ಮಂಜೇಶ್ವರ ಗೋವಿಂದ ಪೈಗಳು, ಕುಣಿಕುಳ್ಳಾಯರು, ಕಳ್ಳಿಗೆ ಮುಂತಾದವರು. ನಮ್ಮ…
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಸಂಸ್ಥೆಯ ಕೂಳೂರು ಕ್ಯಾಂಪಸ್ನಲ್ಲಿ ‘ತುಳು ಸಾಹಿತ್ಯ, ಸಾಂಸ್ಕೃ ತಿಕ ಬದುಕು’ ಎಂಬ ವಿಷಯದ ಬಗ್ಗೆ ಒಂದು ದಿನದ ವಿಚಾರ ಮಂಥನ ಕಾರ್ಯಕ್ರಮವು ದಿನಾಂಕ 29 ಅಕ್ಟೋಬರ್ 2025ರಂದು ನಡೆಯಲಿದೆ. ಬೆಳಿಗ್ಗೆ ಘಂಟೆ 9.30ಕ್ಕೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಜೀವನ್ ರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತು ಸಂಗ್ರಹಾಲಯದ ಅಧ್ಯಕ್ಷರಾದ ಡಾ. ತುಕುರಾಮ ಪೂಜಾರಿ ದಿಕ್ಸೂಚಿ ಭಾಷಣ ಮಾಡುವರು. ಯೆನೆಪೋಯ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಸಾದ್ ಕೆ., ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ಶರೀನಾ ಪಿ., ನಾರಾಯಣ ಸುಕುಮಾರ್ ಎ., ಭಾಷಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಾಲಿನಿ ಸಿಕ್ವೇರ ಭಾಗವಹಿಸುವರು. ಪ್ರಥಮ ಗೋಷ್ಠಿಯಲ್ಲಿ ‘ತುಳು ಕವಿತೆ ಮತ್ತು ಮಹಾಕಾವ್ಯ’ ವಿಷಯದ ಬಗ್ಗೆ…
ವಿಶಿಷ್ಟ ಶೀರ್ಷಿಕೆಯನ್ನು ಹೊತ್ತ ಕೃತಿ ಖ್ಯಾತ ಲೇಖಕ ಕೆ. ಸತ್ಯನಾರಾಯಣ ಇವರ ‘ನೆದರ್ ಲ್ಯಾಂಡ್ಸ್ ಬಾಣಂತನ’. ವಿದೇಶಗಳಿಗೆ ಪ್ರವಾಸ ಹೋಗಿ ಅಲ್ಲಿ ನೋಡಿದ ಮತ್ತು ಅನುಭವಿಸಿದ ಭೌತಿಕ ಮತ್ತು ಸಾಂಸ್ಕತಿಕ ವೈಶಿಷ್ಟ್ಯಗಳನ್ನು ಕುರಿತು ಬರೆಯುವ ಪ್ರವಾಸ ಕಥನಗಳಿಗಿಂತ ಪೂರ್ತಿ ಭಿನ್ನವಾಗಿರುವ ಈ ಕೃತಿ ಯೂರೋಪಿನ ಒಂದು ಪುಟ್ಟ ದೇಶವಾದ ನೆದರ್ ಲ್ಯಾಂಡಿನ ಕುರಿತಾಗಿ ಇದೆ. ಅಲ್ಲಿನ ಜನಜೀವನ ಶೈಲಿ, ಶಿಕ್ಷಣ, ರಾಜಕೀಯ ಮತ್ತು ಸಾಂಸ್ಕೃತಿಕ ಬದುಕುಗಳ ಒಳನೋಟವನ್ನು ನೀಡುವುದು ಲೇಖಕರ ಮುಖ್ಯ ಕಾಳಜಿ. ತೃತೀಯ ಜಗತ್ತಿನ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಮೂಲೆಗುಂಪು ಮಾಡಲ್ಪಟ್ಟ ಈ ದೇಶದ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಹಲವಾರು ಮಹತ್ವದ ವಿಚಾರಗಳನ್ನು ಅವರು ಇಲ್ಲಿ ಸ್ಪರ್ಶಿಸಿರುವುದು ಗಮನಿಸಬೇಕಾದ ಅಂಶ. ತಮ್ಮ ಮೂರು ವಿದೇಶಿ ಪ್ರವಾಸಗಳಲ್ಲಿ ಗಮನಕ್ಕೆ ಬಂದ ವಿಚಾರಗಳ ಬಗ್ಗೆ ಹೇಳುತ್ತ ಲೇಖಕರು ತಾವು ನೆದರ್ ಲ್ಯಾಂಡಿನಲ್ಲಿರುವ ಮಗಳ ಮನೆಗೆ ಮೂರು ಬಾರಿ ಬೇರೆ ಬೇರೆ ಸಂದರ್ಭಗಳಲ್ಲಿ ಹೋದ ವಿಚಾರದಿಂದ ಆರಂಭಿಸುತ್ತಾರೆ. ಮೊದಲಬಾರಿ ಹೋಗಿದ್ದು ಅವರ ಮಗಳು-ಅಳಿಯ ನೆದರ್…
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಪಂಜ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 16 ನವೆಂಬರ್ 2025ರಂದು ನಡೆಯಲಿದೆ. ಸಮ್ಮೇಳನದ ಅಂಗವಾಗಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ಸಾರ್ವಜನಿಕರಿಗೆ ಪ್ರಬಂಧ ಮತ್ತು ಕಥಾ ಸ್ಪರ್ಧೆ ನಡೆಯಲಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ‘ನಾನು ಓದಿದ ಪುಸ್ತಕ’ ಎಂಬ ವಿಷಯದಲ್ಲಿ ‘ಪ್ರಬಂಧ ಹಾಗೂ ಸ್ವರಚಿತ ಕಥೆ’ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಎ4 ಅಳತೆಯ ಕಾಗದದಲ್ಲಿ ಎರಡು ಪುಟಗಳಿಗೆ ಮೀರದಂತೆ ಬರೆದು ದಿನಾಂಕ 02 ನವೆಂಬರ್ 2025ರ ಒಳಗೆ ತಲುಪುವಂತೆ ಕಳುಹಿಸಬೇಕು. ಒಬ್ಬರು ಎರಡೂ ವಿಭಾಗಗಳಲ್ಲಿ ಭಾಗವಹಿಸಬಹುದು. ಪ್ರತಿ ವಿಭಾಗದಲ್ಲಿ ಮೂರು ಬಹುಮಾನಗಳು ಹಾಗೂ ಉತ್ತಮ ಬರಹಗಾರರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ಬರಹಗಳು ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. ಬರಹಗಳನ್ನು ಯೋಗಿಶ್ ಹೊಸೊಳಿಕೆ, ವಳಲಂಬೆ, ಗುತ್ತಿಗಾರು ಗ್ರಾಮ ಮತ್ತು ಅಂಚೆ, ಸುಳ್ಯ ತಾಲೂಕು – 574218, ದೂರವಾಣಿ : 94495…