Author: roovari

ಮುಲ್ಕಿ : ಕಿಲ್ಪಾಡಿಯ ಆದಿ ಕಿಲ್ಲಾಡಿ ಬಬ್ಬುಸ್ವಾಮಿ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಮತ್ತು ದ.ಕ. ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕದ ಜಂಟಿ ಆಶ್ರಯದಲ್ಲಿ ಕವಿ ಹಾಗೂ ಲೇಖಕ ಶಂಕರ್ ಪಡಂಗ ಕಿಲ್ಪಾಡಿಯವರ ‘ಕಾಣೆಯಾದಳು ಹುಡುಗಿ ಹಗಲುಗನಸಿನಲ್ಲಿ’ ಕವನ ಸಂಕಲನ ಬಿಡುಗಡೆ ಹಾಗೂ ಕವಿಗೋಷ್ಠಿಯು ದಿನಾಂಕ 08 ಫೆಬ್ರವರಿ 2026ರಂದು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ನಡಿಕುದ್ರು ವಹಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಮಕ್ಕಳಲ್ಲಿ ಮೊಬೈಲ್ ಬಂದ ನಂತರ ಓದುವ ಹವ್ಯಾಸ ಕಡಿಮೆಯಾಗಿದೆ, ಕನ್ನಡಮ್ಮನ ಸೇವೆ ಮಾಡುವ ಮೂಲಕ ಮಾತೃಭಾಷೆಗೆ ಪ್ರೋತ್ಸಾಹ ನೀಡಬೇಕು ಕನ್ನಡ ಉಳಿಸಿ ಬೆಳೆಸಬೇಕು” ಎಂದರು. ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶ್ರೀಕಾಂತ ಭಟ್ ಪರೆಂಕಿಲ ಆಶೀರ್ವಚನ ನೀಡಿದರು. ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್…

Read More

ಮಂಗಳೂರು : ಶ್ರೀ ನಂದನೇಶ್ವರ ಯಕ್ಷಗಾನ ಮಂಡಳಿ ಇದರ ವತಿಯಿಂದ ದಿನಾಂಕ 08 ಫೆಬ್ರವರಿ 2026ರಂದು ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ‘ಯಕ್ಷ ಪರಮೇಶ’ ಎಂಬ ಪುಸ್ತಕ ಬಿಡುಗಡೆಗೊಂಡಿತು. ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಪುನರೂರು ಇವರು ಬಿಡುಗಡೆಗೊಳಿಸಿ ಮಾತನಾಡಿ “ಇಂದು ಎಷ್ಟೋ ಕಲಾವಿದರು ಅಸಾಮಾನ್ಯ ಪ್ರತಿಭೆಯಿದ್ದರೂ ಮಾಸಿ ಹೋಗುತ್ತಿದ್ದಾರೆ. ಅವರ ಸಾಧನೆ, ವಿಭಿನ್ನ ದೃಷ್ಟಿಯ ವೇಷಗಾರಿಕೆ, ಕಲಾ ವಲಯಕ್ಕೆ ಅವರದ್ದೇ ಆದ ಕೊಡುಗೆಗಳು ಗುರುತಿಸಲ್ಪಡಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಅದಕ್ಕೆ ಅನೇಕ ಆಯಾಮಗಳಿವೆ. ರವಿಯವರು ಅಳಿದ ಶ್ರೇಷ್ಠ ಕಲಾವಿದ ಸವ್ಯಸಾಚಿ ಪಿ.ವಿ. ಪರಮೇಶರ ಜೀವನಗಾಥೆಯನ್ನು ಪುಸ್ತಕದ ದಾಖಲೆಯಲ್ಲಿ ಮೂಡಿಸಿದ್ದಾರೆ. ವಾಸುದೇವ ಐತಾಳರ ಆರ್ಥಿಕ ಬೆಂಬಲದಿಂದ ಪ್ರಕಟಗೊಂಡ ಈ ಪುಸ್ತಕದಂತೆಯೇ ಎಲೆಮರೆಯ ಕಲಾವಿದರ ಕೃತಿಗಳೂ ಬರಲಿ” ಎಂದು ಹೇಳಿದರು. ಡಾ. ಎಂ. ಪ್ರಭಾಕರ ಜೋಷಿಯವರು “ಕಲಾ ವಲಯದಲ್ಲಿ ಪರಮೇಶರಿಗಿದ್ದ ಕೌಶಲತೆಯು ಅದ್ಭುತವಾದುದು. ಯಕ್ಷ ರಂಗದ ಪರಿಪೂರ್ಣ ಪರಿಚಯ, ಪ್ರಸಾದನಾ ವೇಗ, ಪೇಟಗಳ ರಚನೆ, ಬೇರೆ ಬೇರೆ ರಂಗಗಳ ದುಡಿಮೆ – ಎಲ್ಲವೂ ಮಿಳಿತವಾಗಿದ್ದ…

Read More

ಮಂಗಳೂರು : ನೃತ್ಯಾಭ್ಯಾಸೀ ಮಕ್ಕಳಲ್ಲಿ ಭಾರತೀಯ ಕಲೆಗಳಲ್ಲಿರುವ ಪರಸ್ಪರ ಸಂಬಂಧವನ್ನು ಪರಿಚಯಿಸುತ್ತಾ, ಸಮಕಾಲೀನವಾದ ಹತ್ತನೇ ಹಾಗೂ ಪದವಿ ಪೂರ್ವ ತರಗತಿಗಳ ಪಬ್ಲಿಕ್ ಪರೀಕ್ಷೆಗಳ ಸುತ್ತಮುತ್ತಲಿನ ವಿಚಾರಗಳನ್ನು ಕತೆ-ಕೇಳುವಿಕೆ ಹಾಗೂ ಸಂಭಾಷಣೆಗಳ ಮೂಲಕ ಚರ್ಚಿಸುವ ಅಪೂರ್ವ ಗೊಂಬೆಯಾಟ ಕಾರ್ಯಕ್ರಮವು ಮಂಗಳೂರಿನ ಹಿಂದಿ ಪ್ರಚಾರ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾದನೃತ್ಯ ಕಲಾಶಾಲೆಯಲ್ಲಿ ದಿನಾಂಕ 07 ಫೆಬ್ರವರಿ 2026ರ ಸಂಜೆ ನಡೆಯಿತು. ಡಾ. ಭ್ರಮರಿ ಶಿವಪ್ರಕಾಶರ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನು ಘನ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಮಕ್ಕಳ ಶಿಕ್ಷಣದಲ್ಲಿ ಅಪಾರ ಆಸಕ್ತಿ ಹೊಂದಿದ್ದು ಸೃಜನಾತ್ಮಕವಾಗಿ ಗೊಂಬೆಯಾಟದ ಮೂಲಕ ಕತೆ ಹೇಳುವುದರಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿರುವ ಶ್ರೀಮತಿ ಉಜ್ವಲಾ ಕೃಷ್ಣರಾಜ್ ತನ್ನ ಗೊಂಬೆ ಲಲಿತಜ್ಜಿಯ ಕೈಯಿಂದ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭಗೈದರು. ನಾದನೃತ್ಯದ ಹತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಶುಕೀ ರಾವ್, ಮಹಾಲಕ್ಷ್ಮೀ ಶೆಣೈ, ಶಿವಾನಿ, ವರ್ಣಿಕಾ ಆಚಾರ್ಯ, ಚಿನ್ಮಯೀ ಕೋಟ್ಯಾನ್, ಪ್ರಾಪ್ತ ಶೆಟ್ಟಿ ಹಾಗೂ ಸಮನ್ವಿತಾ ಪಿ.ಎಸ್. ಇವರುಗಳು ಹಿರಿಯ ವಾಗ್ಗೇಯಕಾರ ಊತ್ತುಕ್ಕಾಡು…

Read More

ಮೈಸೂರು : ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ (ರಿ.) ಆಯೋಜಿಸುವ ‘ನೆನಪಿನಂಗಳ’ ರಂಗಭೂಮಿಯ ನೆನ್ನೆ ನಾಳೆಗಳ ನಡುವೆ 2ನೇ ಸಂವಾದ ಕಾರ್ಯಕ್ರಮವನ್ನು ದಿನಾಂಕ 14 ಫೆಬ್ರವರಿ 2026ರಂದು ಸಂಜೆ 5-00 ಗಂಟೆಗೆ ಮೈಸೂರು ರಂಗಾಯಣದ ‘ಶ್ರೀರಂಗ’ದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂಗಳದಲ್ಲಿ ಹಿರಿಯ ರಂಗಕರ್ಮಿ ಶ್ರೀಮತಿ ಹರಿಪ್ರಸಾದ್ ಇವರು ಭಾಗವಹಿಸಲಿದ್ದಾರೆ.

Read More

ಉಪ್ಪಿನಂಗಡಿ : ಕಾಂಚನ ಲಕ್ಷ್ಮೀ ನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸಂಗೀತ ರತ್ನ ವಿ. ಕಾಂಚನ ವೆಂಕಟಸುಬ್ರಹ್ಮಣ್ಯಂ ಇವರ 105ನೇ ಜನ್ಮವರ್ಷ ಮಹೋತ್ಸವ ಹಾಗೂ 72ನೇ ವರ್ಷದ ‘ಕಾಂಚನೋತ್ಸವ-2026’ ಇದರ ಸಮಾರೋಪ ಸಮಾರಂಭವು ದಿನಾಂಕ 07 ಫೆಬ್ರವರಿ 2026ರಂದು ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ “ಪ್ರೀತಿ, ವಿಶ್ವಾಸ, ಸಂಸ್ಕೃತಿ, ಸಂಸ್ಕಾರದೊಂದಿಗೆ ಸಂಗೀತ ಮತ್ತು ದೇವತಾರಾಧನೆಯನ್ನು ಕಾಂಚನ ಕುಟುಂಬ ಮೈಗೂಡಿಸಿಕೊಂಡಿದೆ. ಸಂಗೀತಕ್ಕಾಗಿ ಈ ಕುಟುಂಬ ಎಲ್ಲವನ್ನೂ ಧಾರೆ ಎರೆದಿದೆ. ಹೀಗಾಗಿ ಕಾಂಚನ ಎಂಬ ಪುಟ್ಟ ಹಳ್ಳಿ ಇಂದು ದೇಶದಾದ್ಯಂತ ಪರಿಚಿತವಾಗಿದೆ” ಎಂದು ಹೇಳಿದರು. ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಮಾತನಾಡಿ, “ದೇಶದ ಶ್ರೇಷ್ಠ ಪೀಟೀಲು ವಾದಕ ಎಲ್. ಸುಬಹ್ಮಣ್ಯಂ ಅವರಂತೆ ಆಗಬಹುದಾದ ನೂರಾರು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಅವರಿಗೆ ಪ್ರೇರಣೆ, ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ನಾವುಗಳು ಕಾಂಚನ ಕುಟುಂಬದ ಸಂಗೀತ ಪರಂಪರೆಯನ್ನು ಉಳಿಸಿಕೊಳ್ಳಲು ಕೈಜೋಡಿಸಬೇಕಾಗಿದೆ” ಎಂದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಿ…

Read More

ಮೈಸೂರು : ಕಲಾಮಂದಿರದಲ್ಲಿ ಆಯಾಮ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಆಯೋಜಿಸಲಾದ ‘ಆಯಾಮೋತ್ಸವ – ಸಂಗೀತ, ನೃತ್ಯ, ನಾಟಕಗಳ ಉತ್ಸವ’ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 08 ಫೆಬ್ರವರಿ 2026ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕಾಳಚನ್ನೇಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. “ಆಯಾಮ ಸಂಸ್ಥೆಯ ಸ್ಥಾಪಕಿ ಹಾಗೂ ನಿರ್ದೇಶಕಿ ಡಾ. ಶಾಂಭವಿ ಸ್ವಾಮಿ ಇವರು ಹಲವು ವರ್ಷಗಳಿಂದ ಆಯಾಮ ಸಂಸ್ಥೆಯ ಮೂಲಕ ಗ್ರಾಮೀಣ ಹಾಗೂ ನಗರ ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತವನ್ನು ಕಲಿಸುವ ಮೂಲಕ ಸಂಗೀತ, ನಾಟಕ, ನೃತ್ಯಗಳ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಬೆಳೆಸುವಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಆಯಾಮ ಸಂಸ್ಥೆ ಶ್ಲಾಘನೀಯ ಕಾರ್ಯ ಮಾಡುತ್ತಿದೆ” ಎಂದು ಪ್ರೊ. ಕಾಳಚನ್ನೇಗೌಡ ಅವರು ಪ್ರಶಂಸಿಸಿದರು. ಮಾನವ ಜೀವನದ ಬೆಳವಣಿಗೆಯನ್ನು ವಿವರಿಸಿದ ಅವರು, ಮನುಷ್ಯ ಅಲೆಮಾರಿಯಾಗಿ ಬದುಕುತ್ತಿದ್ದ ಕಾಲದಿಂದ ನೆಲೆ ನಿಂತು ಕೃಷಿ ಕಲಿತ ನಂತರ ಕಲೆ,…

Read More

ಮಡಿಕೇರಿ : ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಬೆಸೂರು ಸರಕಾರಿ ಪ್ರೌಢಶಾಲೆಯಲ್ಲಿ ದಿನಾಂಕ 07 ಫೆಬ್ರವರಿ 2026ರಂದು ಸಂಪಾಜೆ ಸಣ್ಣಯ್ಯ ಪಟೇಲ್ ಮತ್ತು ದಿವಂಗತ ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ “ಜಗತ್ತಿನಲ್ಲಿ ಮನುಷ್ಯ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ, ಮನುಷ್ಯರು ಜಂಟಿಯಾಗಿ ಅಥವಾ ಗುಂಪಾಗಿ ಬದುಕುವುದರಲ್ಲಿ ಸುಖ ಸಂತೋಷ ಇದೆ. ಅದನ್ನು ಜನಪದರು ಸಾಬೀತು ಮಾಡಿದ್ದರು. ಜನಪದ ಜಗತ್ತು ಎನ್ನುವುದು ಒಂದು ಅದ್ಭುತ, ವೈಶಿಷ್ಟ್ಯಮಯ, ಸುಂದರ ಜಗತ್ತು. ನಮ್ಮ ನಿಮ್ಮ ಹಿರಿಯರೇ ಜನಪದರು, ಆದರೆ ನಾವು ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗದೆ ಆ ಸುಖವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಹಿರಿಯರು ಪಾಠಶಾಲೆಯಲ್ಲಿ ಓದಿದವರಲ್ಲ ಆದರೆ ಬದುಕಿನ ಜೀವನೋತ್ಸಾಹದಲ್ಲಿ ಎಲ್ಲಾ ಅನುಭವದ ಪಾಠವನ್ನು ಪಡೆದವರು. ಜನಪದರ ಅನುಭವ ಮತ್ತು ಸಹಜ ಸ್ಪೂರ್ತಿಯಿಂದ ಹೊರಹೊಮ್ಮಿದ ಅನೇಕ ನುಡಿಮುತ್ತುಗಳು, ಗಾದೆ, ಹಾಡು, ಒಗಟು, ಕಥೆ, ಆಚರಣೆ ಇವೆಲ್ಲವೂ…

Read More

ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಆಶ್ರಯದಲ್ಲಿ ಜೆ.ಎಸ್.ಎಸ್.ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿನಾಂಕ 05 ಫೆಬ್ರುವರಿ 2026ರಂದು ಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ವಿಜಯಪುರ ಜಿಲ್ಲಾ ಗಮಕ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಬಿ.ಎಂ. ಪಾಟೀಲರು ಕಾರ್ಯಕ್ರಮವನ್ನು ಸಂಘಟಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ವೇದಿಕೆಯ ಮೇಲೆ ಶ್ರೀ ಬಿ.ಎಂ. ಪಾಟೀಲ್, ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಭಾರತೀಬಾಯಿ ಖಾಸನೀಸ್, ಗಮಕಿ ಶ್ರೀಮತಿ ಶಾಂತಾ ಕೌತಾಳ್, ವ್ಯಾಖ್ಯಾನಕಾರರಾದ ಕಲ್ಯಾಣರಾವ್ ದೇಶಪಾಂಡೆ, ಸಾಹಿತಿ ವಿ.ಡಿ. ಐಹೊಳ್ಳಿ ಉಪಸ್ಥಿತರಿದ್ದರು. ಶ್ರೀ ವಿ.ಡಿ. ಐಹೊಳ್ಳಿಯವರು ಕುಮಾರವ್ಯಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟನಾ ಪರ ಭಾಷಣ ಮಾಡಿದರು. ಆಮೇಲೆ ಬಿ.ಎಂ. ಪಾಟೀಲರು ಕರ್ನಾಟಕ ಗಮಕ ಕಲಾ ಪರಿಷತ್ತು ನಡೆದು ಬಂದ ಬಗೆಯನ್ನು ವಿವರಿಸಿದರು. ಶ್ರೀ ಭೀಮಾಶಂಕರ್ ಇವರು ‘ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ’ ಎಂಬ ಪ್ರಾರ್ಥನಾ ಗೀತೆ ಹಾಡಿದರು. ನಂತರ ನಡೆದ ಗಮಕ ಕಾರ್ಯಕ್ರಮದಲ್ಲಿ…

Read More

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯ‌ರ್ ಎಜ್ಯುಕೇಶನ್ ಮಣಿಪಾಲ ಮತ್ತು ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಸಮಿತಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸ್ತುತ ವರ್ಷದಿಂದ ಕೊಡಲ್ಪಡುವ ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 13 ಫೆಬ್ರವರಿ 2026ರ ಶುಕ್ರವಾರದಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದ ಸಭಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಯನ್ನು ಪ್ರಸಿದ್ಧ ಕನ್ನಡ ಕವಿ, ಕಥೆಗಾರ, ವಿಮರ್ಶಕರಾದ ಶ್ರೀ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರದಾನ ಮಾಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಬಿ.ಎ. ವಿವೇಕ ರೈ ಇವರು ವಹಿಸಲಿದ್ದು, ಪ್ರಶಸ್ತಿಯನ್ನು ಮಾಹೆ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್. ಬಲ್ಲಾಳ್ ಪ್ರದಾನ ಮಾಡಲಿರುವರು. ಪ್ರಶಸ್ತಿ ಪುರಸ್ಕೃತರ ಕುರಿತು ವಿಶ್ರಾಂತ ಪ್ರಾಧ್ಯಾಪಕರು, ಹಿರಿಯ ಸಾಹಿತಿಗಳೂ ಆದ ಡಾ. ನಾ. ದಾಮೋದರ ಶೆಟ್ಟಿ ಅಭಿನಂದನಾ ಭಾಷಣ ಮಾಡಲಿದ್ದು, ಪ್ರೊ. ಎಸ್.ವಿ. ಪರಮೇಶ್ವರ ಭಟ್ಟರ ಸುಪುತ್ರರಾದ ಎಸ್.ಪಿ. ರಾಮಚಂದ್ರ, ಎಂ.ಜಿ.ಎಂ. ಕಾಲೇಜಿನ…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 07 ಫೆಬ್ರವರಿ 2026ರಂದು ‘ಕಾವ್ಯಾಂ ವ್ಹಾಳೊ-11’ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಿತು. ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಪ್ರಾಸ್ತಾವಿಕವಾಗಿ ಮಾತಾನಾಡಿ, ‘ಕಾವ್ಯಾಂ ವ್ಹಾಳೊ’ ಎಂಬ ಕಾರ್ಯಕ್ರಮವು ಕಳೆದ ವರ್ಷ ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಧರ್ಭದಲ್ಲಿ ಮಹಿಳೆಯರಿಗಾಗಿ ಪ್ರಾರಂಭಿಸಿ, ಇಂದು ಕಾವ್ಯಾಂ ವ್ಹಾಳೊ ಇದರ 11ನೇ ಆವೃತ್ತಿಗೆ ತಲುಪಿದೆ ಎಂದು ಹರುಷ ವ್ಯಕ್ತಪಡಿಸಿ, ಕರ್ನಾಟಕ ಸರ್ಕಾರವು ಕೊಂಕಣಿ ಸಮುದಾಯಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ ಕೊಂಕಣಿ ಭಾಷೆಯ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕಳೆದ ಎಪ್ರಿಲ್ ತಿಂಗಳಿನಿಂದ ಆರಂಭವಾದ ಕಾವ್ಯಾಂ- ವ್ಹಾಳೊ ಕವಿಗೋಷ್ಟಿಗಳಲ್ಲಿ ಕೊಂಕಣಿ ಕವಿಗಳು ಪ್ರಸ್ತುತ ಪಡಿಸಿದ ಕವಿತೆಗಳ ಸಂಗ್ರಹ ‘ಕಾವ್ಯಾಂ- ವ್ಹಾಳೊ’ ಭಾಗ-1 ಈ ಪುಸ್ತಕವನ್ನು ಮುದ್ರಿಸಿ, ಬಿಡುಗಡೆಗೊಳಿಸಲು ಸಂತೋಷಪಡುತ್ತಿದೆ” ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು. 2025 ಎಪ್ರಿಲ್ ತಿಂಗಳಿನಿಂದ…

Read More