Author: roovari

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 27-05-2024ರಂದು ನಡೆಯಿತು. ಕನ್ನಡ ಭಾಷೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕ ಫಲಕಗಳಲ್ಲಿ ಕನ್ನಡ ಪ್ರಮುಖ ಸ್ಥಾನದಲ್ಲಿರಬೇಕು ಮತ್ತು ಶೇಕಡ 60ರಷ್ಟು ಭಾಗ ಕನ್ನಡದಲ್ಲಿ ಇರಬೇಕು ಎಂದು ಆದೇಶ ಹೊರಡಿಸಿರುವ ಕರ್ನಾಟಕ ಸರ್ಕಾರಕ್ಕೂ ಅದನ್ನು ಕೊಡಗು ಜಿಲ್ಲೆಯಲ್ಲಿ ಅಳವಡಿಸಲು ಆದೇಶಿಸಿರುವ ಜಿಲ್ಲಾಧಿಕಾರಿ ವೆಂಕಟರಾಜಾರವರನ್ನು ಅಭಿನಂದಿಸಿ ಪತ್ರ ಬರೆಯುವಂತೆ ಈ ಸಭೆಯಲ್ಲಿ ತೀರ್ಮಾನಿಸಲಾಯಿತು. ಪರಿಷತ್ತಿನ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಚುನಾವಣೆ ಮತ್ತು ಶಾಲೆಗಳಿಗೆ ರಜದ ಕಾರಣ ಉಳಿದು ಹೋಗಿರುವ ದತ್ತಿ ಕಾರ್ಯಕ್ರಮವನ್ನು ಮುಂದಿನ ತಿಂಗಳು 15ರ ಒಳಗಾಗಿ ಮಾಡಬೇಕು. ಅಲ್ಲದೇ 2024-25ರ ನೂತನ ದತ್ತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಿದೆ. ಎಲ್ಲಾ ಜಿಲ್ಲಾ ತಾಲೂಕು ಮತ್ತು ಹೋಬಳಿ ಸಮಿತಿಗಳು ಜವಾಬ್ದಾರಿ ತೆಗೆದುಕೊಂಡು ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮನವಿ ಮಾಡಿದರು. ಕನ್ನಡ…

Read More

ಹಲವು ದಶಕಗಳ ಕಾಲ ಕನ್ನಡ ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾರಾಯಣ ಕಂಗಿಲರು ಓಯಸಿಸ್ (ಕಥಾಸಂಕಲನ), ಮತ್ತೇನೆಂದರೆ (ಕವನ ಸಂಕಲನ), ಶಬ್ದ ಮತ್ತು ನೂಪುರ (ಕಾದಂಬರಿ), ಅವರೋಹಣ, ಹೇ ರಕ್ಷಕ, ಗಾಂಧಿ ಪಥ (ನಾಟಕಗಳು), ಮರದ ಮರ್ಮರ (ಮಕ್ಕಳ ನಾಟಕ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ಇದುವರೆಗೆ ಬರೆದ ಕತೆಗಳನ್ನು ಒಟ್ಟಿಗೆ ಸೇರಿಸಿ ಪ್ರಕಟಿಸಿದ ಮಹತ್ವದ ಕಥಾಸಂಕಲನವೇ ‘ಉತ್ತರಾಪಥ’. ಇಲ್ಲಿರುವ ಹದಿನೈದು ಕತೆಗಳ ಪೈಕಿ ಕೆಲವು ರಚನೆಗಳು ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವೆನಿಸುತ್ತವೆ. ನಾರಾಯಣ ಕಂಗಿಲರು ತಮ್ಮ ಬರವಣಿಗೆಯನ್ನು ಆರಂಭಿಸುವ ವೇಳೆಗೆ ಕನ್ನಡ ಸಾಹಿತ್ಯದಲ್ಲಿ ನವ್ಯಮಾರ್ಗವು ತನ್ನ ಪ್ರಭಾವವನ್ನು ಬೀರತೊಡಗಿತ್ತು. ಅಂತರಂಗದ ಬಗೆಯೊಳಗನು ತೆರೆದು ನೋಡುವ ಕ್ರಮ ಆರಂಭಗೊಂಡಿತ್ತು. ಅಂತರಂಗವನ್ನು ಹೊಕ್ಕು ನೋಡುವ ಪರಿಯನ್ನು ನವ್ಯಮಾರ್ಗದಿಂದ ಪಡೆದುಕೊಂಡ ಲೇಖಕರು ಕತೆಯ ಒಳಹೊರಗುಗಳ ಮುಖಾಮುಖಿಯನ್ನು ತಮ್ಮದೇ ರೀತಿಯಲ್ಲಿ ಆಭಿವ್ಯಕ್ತಿಸಿದ್ದಾರೆ. ಈ ಸಂಕಲನದ ಪ್ರಾತಿನಿಧಿಕ ಕತೆಯಾದ ‘ಉತ್ತರಾಪಥ’ವು ಸಂಕೀರ್ಣವಾಗಿದ್ದು, ಮನು ಎಂಬ ಯುವಕನು ಅನುಭವಿಸುವ ನೋವು, ಏಕಾಕಿತನ ಮತ್ತು ಯಾತನೆಗಳನ್ನು ಒಳಗೊಂಡಿದೆ. ಈ ವಸ್ತುವಿಗೆ ವೈಯಕ್ತಿಕ…

Read More

ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಈ ವರ್ಷದಿಂದ ಕೊಡಲಾರಂಭಿಸಿರುವ ‘ಸುನಂದಾ ಬೆಳಗಾಂವಕರ ಕಾದಂಬರಿ ಪ್ರಶಸ್ತಿ’ಗೆ ಡಾ. ನಾ. ಮೊಗಸಾಲೆಯವರ ‘ಭಾರತ ಕಥಾ’ ಕಾದಂಬರಿಯು ಆಯ್ಕೆಯಾಗಿದೆ. ಈ ಪ್ರಶಸ್ತಿಯು ಒಂದು ಸಾಂಕೇತಿಕ ಮೊತ್ತ, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಡಾ. ಸುಭಾಷ್ ಪಟ್ಟಾಜೆ ಮತ್ತು ಕುಮಾರಿ ಭವ್ಯ ಭಟ್ ತೀರ್ಪುಗಾರರಾಗಿದ್ದ ಈ ಪ್ರಶಸ್ತಿಯ ಆಯ್ಕೆಗೆ ಮೂವತ್ತಕ್ಕೂ ಅಧಿಕ ಕಾದಂಬರಿಗಳು ಬಂದಿದ್ದವು. ಈ ಪ್ರಶಸ್ತಿಗೆ ಲೇಖಕರು, ಪ್ರಕಾಶಕರು ಮತ್ತು ಓದುಗರಿಂದ ಕಾದಂಬರಿಗಳನ್ನು ಆಹ್ವಾನಿಸಲಾಗಿತ್ತು. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಓದುಗರಿಂದ ಕಾದಂಬರಿಗಳನ್ನು ಆಹ್ವಾನಿಸುವ ಮೂಲಕ ಸಾಹಿತ್ಯ ಗಂಗಾ ಸಂಸ್ಥೆಯು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಪ್ರಶಸ್ತಿಯ ಮತ್ತೊಂದು ವಿಶೇಷವೆಂದರೆ ‘ಭಾರತ ಕಥಾ’ ಕಾದಂಬರಿಯನ್ನು ಲೇಖಕರಾಗಲೀ, ಪ್ರಕಾಶಕರಾಗಲೀ ಕಳುಹಿಸಿರಲಿಲ್ಲ, ಓದುಗರೇ ಕಳುಹಿಸಿದ್ದರು. ಕನ್ನಡದ ಮುಖ್ಯ ಲೇಖಕಿಯರಲ್ಲೊಬ್ಬರಾದ ದಿ. ಸುನಂದಾ ಬೆಳಗಾಂವಕರ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಚೊಚ್ಚಲ ಪ್ರಶಸ್ತಿಗೆ ಕನ್ನಡದ ಮಹತ್ವದ ಲೇಖಕರಾದ ಡಾ. ನಾ. ಮೊಗಸಾಲೆಯವರ ‘ಭಾರತ ಕಥಾ’ ಆಯ್ಕೆಯಾಗಿದೆ.…

Read More

ಹುಬ್ಬಳ್ಳಿ : ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ 2024ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಗೆ ಕನ್ನಡದ ಕವಿ ಮತ್ತು ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಮತ್ತು ಐವತ್ತರ ಒಳಗಿರುವ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು, ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ.10,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ. ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಇ-ಮೇಲ್ ಮೂಲಕ ಕಳಿಸುವುದಕ್ಕಿಂತ ಡಿಟಿಪಿ ಮಾಡಿದ ಅಥವಾ ಕೈಯಲ್ಲಿ ಬರೆದ ಹಸ್ತಪ್ರತಿ ಕಳಿಸಿಕೊಡಬೇಕು. ಹಸ್ತಪ್ರತಿ ಕಳುಹಿಸಲು ಕೊನೆಯ ದಿನಾಂಕ 30-06-2024 ಆಗಿರುತ್ತದೆ. ಹಸ್ತಪ್ರತಿಯನ್ನು ಕಳುಹಿಸಬೇಕಾದ ವಿಳಾಸ : ಸುನಂದಾ ಪ್ರಕಾಶ ಕಡಮೆ, ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-2024, ನಂ.90, ‘ನಾಗಸುಧೆ ಜಗಲಿ’, 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ- 580031, ದೂರವಾಣಿ ಸಂಖ್ಯೆ : 9380613683 ಅಥವಾ 9845779387.

Read More

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಗುರಿಕ್ಕಾನದ ಸುಂದರ ರೈ ಹಾಗೂ ಗುಲಾಬಿ ರೈ ಇವರ ಮಗನಾಗಿ 1.06.1984ರಂದು ಮನೋಹರ್ ರೈ ಬೆಳ್ಳಾರೆ ಅವರ ಜನನ. ಪದ್ಮನಾಭ ಪೂಜಾರಿ ಇವರ ನಾಟ್ಯ ಗುರುಗಳು, ಸುಣ್ಣoಬಳ ವಿಶ್ವೇಶ್ವರ ಭಟ್ ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಇವರ ಅರ್ಥಗಾರಿಕೆ ಗುರುಗಳು. ತಂದೆ ಹಾಗೂ ತಾಯಿ ಬೆಳ್ಳಾರೆಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಕಥೆಯ ಸಾರಾಂಶ ಕೇಳಿಕೊಂಡು ಪದ್ಯ ನೋಡಿಕೊಂಡು ಅರ್ಥಗಾರಿಕೆ ತಿಳಿದುಕೊಂಡು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಬೆಳ್ಳಾರೆ. ನಳ ದಮಯಂತಿ, ಸತ್ಯ ಹರಿಶ್ಚಂದ್ರ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ದಮಯಂತಿ, ಮಾನಿಷಾದದ ಸೀತೆ, ಅಂಬೆ, ಯಶೋಮತಿ, ವಸ್ತ್ರಾಪಹಾರ ದ್ರೌಪದಿ, ದೇವಿ ಇತ್ಯಾದಿ ಇವರ ನೆಚ್ಚಿನ ವೇಷಗಳು. ಯಕ್ಷಗಾನದ ಇಂದಿನ ಸ್ಥಿತಿ ಗತಿ:- ಯಕ್ಷಗಾನದ ಇಂದಿನ ಸ್ಥಿತಿ ಒಳ್ಳೆಯ ರೀತಿಯಲ್ಲಿ ಇದೆ. ಕಾಲಮಿತಿ ಆದ ಕಾರಣ ಕಲಾವಿದರು ಸಿಗುತ್ತಾರೆ. ಯಾಕಂದ್ರೆ ತಂದೆ ತಾಯಂದಿರು ಮಕ್ಕಳಿಗೆ ಒಳ್ಳೆ…

Read More

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಯಡಾಡಿ, ಮತ್ಯಾಡಿ ಗ್ರಾಮದ ಶ್ರೀಮತಿ ಚೆನ್ನು ಹಾಗೂ ದೇವ ದಂಪತಿಯರ ಮಗನಾಗಿ 01.06.1975ರಂದು ವೆಂಕಟೇಶ್ ಗುಡ್ಡೆಯಂಗಡಿ ಅವರ ಜನನ. ಸುಬ್ರಾಯ ಮಲ್ಯ ಹಳ್ಳಾಡಿ (1 ವರ್ಷ 1992), ಪ್ರಸಾದ್ ಕುಮಾರ್ ಮೊಗೆಬೆಟ್ಟು (2016 ರಿಂದ) ಇವರ ಯಕ್ಷಗಾನ ಗುರುಗಳು. ಬಾಲ್ಯದಿಂದಲೂ ಯಕ್ಷಗಾನದ ಮೇಲೆ ಪ್ರೀತಿ. ಗಣಪತಿ ಪೂಜೆಗೂ ಮುನ್ನ ಯಕ್ಷಗಾನಕ್ಕೆ ಹಾಜರಿ. ಯಕ್ಷಗಾನದಲ್ಲಿ ವೇಷ ಮಾಡಬೇಕು ಎನ್ನುವುದಕ್ಕೆ ನನಗೆ ನಾನೇ ಪ್ರೇರಣೆ; ಕಾರಣ ಬಡತನ. ನಾನು ಚೆಂದವಾಗಿ ಯಕ್ಷಗಾನ ಪದ ಹೇಳುವುದನ್ನು ಕೇಳಿ ನನ್ನ ಪ್ರೀತಿಯ ಗುರುಗಳಾದ ಸರ್ವೋತ್ತಮ ಹೆಗ್ಡೆ ಕೊಳ್ಕೆಬೈಲ್ ಇವರು ದ್ರೌಪದಿ ಪ್ರತಾಪದ ಬಲರಾಮನ ವೇಷ ಕೊಟ್ಟರು. ಅದರಲ್ಲಿನ ಯಶಸ್ಸಿನಿಂದ ಸುಬ್ರಾಯ ಮಲ್ಯರು ನನ್ನನ್ನು ಬಲರಾಮ ಎಂದೇ ಕರೆಯುತ್ತಿದ್ದರು. ಈಗ ದಕ್ಷ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ತುಂಬಾ ಪ್ರೇರಣೆ ಕೊಡುತ್ತಿದ್ದಾರೆ, ಅಲ್ಲದೇ ಮಕ್ಕಳಾದ ಹರ್ಷಿತ್ ಹಾಗೂ ಸುಮಂತ್ ಇಬ್ಬರೂ ನನ್ನಂತೆ ಯಕ್ಷಗಾನದಲ್ಲಿ ಭಾಗವಹಿಸುತ್ತಿದ್ದಾರೆ. ನಾವೆಲ್ಲರೂ ಹವ್ಯಾಸಿ ಯಕ್ಷಗಾನ ಕಲಾವಿದರು. ಮಕ್ಕಳೂ ಉತ್ತಮ…

Read More

ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳ ಮದ್ದಳೆ ಕಾರ್ಯಕ್ರಮದ ಆರನೇ ದಿನದ ಕಾರ್ಯಕ್ರಮವು ದಿನಾಂಕ 30-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂಸ್ಕಾರ ಭಾರತಿಯ ರಾಜ್ಯಾಧ್ಯಕ್ಷ ಹಾಗೂ ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಶೆಟ್ಟಿ ಮಾತನಾಡಿ “ನಮ್ಮ ದೇಶೀಯ ಕಲೆಗಳೆಲ್ಲವೂ ವಿಶ್ವಖ್ಯಾತಿಯನ್ನು ಪಡೆದಿವೆ. ಯಕ್ಷಗಾನ, ಭಾರತನಾಟ್ಯ ಯಾವುದೇ ಇರಲಿ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ ಎಂಬುದರಲ್ಲಿ ನಮಗೆ ಹೆಮ್ಮೆ ಇದೆ. ಯಾರನ್ನೂ ಕಲೆ ಬಿಟ್ಟಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬನೂ ಪ್ರತಿಭಾನ್ವಿತನಾಗಿರುತ್ತಾನೆ. ಅವಕಾಶ ಹಾಗೂ ಸಂದರ್ಭ ಒದಗಿದಾಗ ಆತನಲ್ಲಿನ ಸುಪ್ತ ಪ್ರತಿಭೆ ಅನಾವರಣಗೊಳಿಸುತ್ತದೆ. ಇಂತಹಾ ಕಲಾರಾಧನೆಯನ್ನು ಯಾರು ಮಾಡುತ್ತಾರೋ ಅವರನ್ನು ಬೆಂಬಲಿಸಿ ಆಧರಿಸುವುದರ ಅಗತ್ಯ ಇದೆ.” ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವೇಷಧಾರಿ ಹಾಗೂ ಪ್ರಸಾದನ ಕಲಾವಿದರಾದ ಕೋಳ್ಯೂರು ಪ್ರಶಾಂತ್ ಇವರನ್ನು ಗೌರವಿಸಲಾಯಿತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ…

Read More

ಮಂಗಳೂರು : ಸಾಹಿತ್ಯ ಅಕಾಡೆಮಿ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ ಹಾಗೂ ಕವಿತಾ ಟ್ರಸ್ಟ್ ವತಿಯಿಂದ ಇಲ್ಲಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಕವಿಸಂಧಿ’ ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮವು ದಿನಾಂಕ 26-05-2024ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಖ್ಯಾತ ಕೊಂಕಣಿ ಕವಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನೀಲ್ಬಾ ಖಂಡೇಕರ್ “ನನ್ನಲ್ಲಿ ಬರವಣಿಗೆಯ ಪ್ರತಿಭೆ ಇತ್ತು. ಈ ಪ್ರತಿಭೆಯ ಜೊತೆಗೆ ನಾನು ಜೀವನದ ಸತ್ಯಗಳನ್ನು ಅರಿತು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಾಗ ನನ್ನ ಬರವಣಿಗೆಯನ್ನು ಸಾಹಿತ್ಯಾಸಕ್ತರು ಗುರುತಿಸಲು ಆರಂಭಿಸಿದರು. ನನ್ನಲ್ಲಿದ್ದ ಓದುವಿಕೆಯ ಅಭ್ಯಾಸವು ನನಗೆ ಪ್ರಪಂಚದ ಆಗುಹೋಗುಗಳ ಬಗ್ಗೆ ಮಾಹಿತಿಯನ್ನು ನೀಡಿತು. ಇದರ ಫಲವಾಗಿ ನನ್ನ ಕೃತಿಗಳಲ್ಲಿ ಚಾರಿತ್ರಿಕ ಘಟನೆಗಳನ್ನು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಪ್ರತಿಬಿಂಬಿಸಲು ಸಾಧ್ಯವಾಯಿತು. ಈ ಪ್ರಕಾರ ನಾನು ಸಮಾಜದ ಆಗುಹೋಗುಗಳ ಒಳಿತು ಮತ್ತು ದೋಷಗಳನ್ನು ಓದುಗರ ಮುಂದೆ ತಲುಪಿಸಲು ಮುಂದಾದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದಾಗ, ಪ್ರಗತಿಪರ ಚಿಂತನೆ ಮತ್ತು…

Read More

ಮಂಗಳೂರು : ಮಂಗಳೂರಿನ ಕೋಡಿಕಲ್ಲಿನ ಸರಯೂ ಮಕ್ಕಳ ಮೇಳದ ‘ಸರಯೂ ಸಪ್ತಾಹ-2024’ ಸಾಧಕ ಸನ್ಮಾನ, ಬಯಲಾಟಗಳು ಮತ್ತು ಮಹಿಳಾ ತಾಳಮದ್ದಳೆ ಕಾರ್ಯಕ್ರಮದ ಐದನೇ ದಿನದ ಕಾರ್ಯಕ್ರಮವು ದಿನಾಂಕ 29-05-2024ರಂದು ಮಂಗಳೂರಿನ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು. ಕಾರ್ಯಕ್ರಯಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ “ಯಕ್ಷಗಾನವು ಒಂದು ಆರಾಧನಾ ಕಲೆ. ಕಟೀಲು ತಾಯಿ ಯಕ್ಷ ಕಲಾರಾಧಕಿ. ಹಾಗಾಗಿಯೋ ಏನೋ ಎಷ್ಟೋ ಮಂದಿಗೆ ಸೇವೆಯಾಟ ದೊರಕಲು ವಿಳಂಬವಾಗುತ್ತದೆ. ಅಂತಹಾ ಆರಾಧನಾ ಕಲೆಯನ್ನು ಕಲಾವಿದರು ಆರಾಧಿಸುವುದು ಮಾತ್ರವಲ್ಲ: ತಮ್ಮಲ್ಲಿ ಆವಾಹಿಸಿಕೊಳ್ಳಬೇಕು. ಇದನ್ನು ಯುವ ಪೀಳಿಗೆ ರೂಢಿಸಿಕೊಂಡರೆ ಈ ಕಲೆಗೆ ನಿರಂತರ ಬೆಳವಣಿಗೆ ಇರುತ್ತದೆ” ಎಂದರು. ಇದೇ ಸಂದರ್ಭದಲ್ಲಿ ಕಟೀಲು ಮೇಳದ ಹಾಸ್ಯಗಾರರಾದ ಮಹಾಬಲೇಶ್ವರ ಭಟ್ ಭಾಗಮಂಡಲ ಇವರಿಗೆ ‘ಯಕ್ಷಸರಯೂ’ ಬಿರುದುನೀಡಿ ಸನ್ಮಾನಿಸಲಾಯಿತು. ವೇದ ಮೂರ್ತಿ ಕೆ. ನರಸಿಂಹ ತಂತ್ರಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸೌಮ್ಯ ಪುರುಷೋತ್ತಮ್ ಸನ್ಮಾನ ಪತ್ರ ವಾಚಿಸಿದರು. ಯಕ್ಷ ಗುರುಗಳಾದ ಪಿ. ವಿ.…

Read More

ಮುಡಿಪು : ಬೆಂಗಳೂರಿನ ಕಥಾಬಿಂದು ಪ್ರಕಾಶನದ ‘ಸಾಹಿತ್ಯ ಸಂಭ್ರಮ 2024’ ಕಾರ್ಯಕ್ರಮವು ಮಂಗಳೂರಿನ ಶ್ರೀ ಭಾರತೀ ಶಾಲೆ ಮುಡಿಪು ಇದರ ಸಭಾಂಗಣದಲ್ಲಿ ದಿನಾಂಕ 26-05-2024ರಂದು ನಡೆಯಿತು. ಪಿ.ವಿ. ಪ್ರದೀಪ್ ಕುಮಾರ್ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಅವರು ವಹಿಸಿದ್ದರು. ಯುಗಪುರುಷ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪ ಉದ್ಘಾಟಿಸಿದರು. ಹಿರಿಯ ಸಾಹಿತಿ ಶ್ರೀಮತಿ ಬಿ. ಸತ್ಯವತಿ ಎಸ್. ಭಟ್ ಐದು ಪುಸ್ತಕಗಳ ಲೋಕಾರ್ಪಣೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಗೋವಿಂದದಾಸ ಕಾಲೇಜು ಸುರತ್ಕಲ್ ಇಲ್ಲಿನ ಪ್ರಾಂಶುಪಾಲರಾದ ಪ್ರೊಫೆಸರ್ ಪಿ. ಕೃಷ್ಣಮೂರ್ತಿ, ಲೆಕ್ಕಪತ್ರ ಪರಿಶೋಧಕ ಎನ್. ಸುಬ್ರಾಯ ಭಟ್ ಮಂಗಳೂರು, ಪತ್ರಕರ್ತ ಶ್ರೀ ಜಯಾನಂದ ಪೆರಾಜೆ, ಶ್ರೀ ಭಾರತಿ ಶಾಲೆಯ ಸಂಚಾಲಕ ಕೊಡಕ್ಕಲ್ಲು ಸುಬ್ರಮಣ್ಯ ಭಟ್, ಸಿಂಡಿಕೇಟ್ ಬ್ಯಾಂಕಿನ ಮಾಜಿ ವ್ಯವಸ್ಥಾಪಕರಾದ ಮೈಸೂರಿನ ಅನಂತ ಎಂ. ತಮ್ಮಣ್ಕರ್, ಸಾಹಿತ್ಯ ಪ್ರವರ್ತಕ ಡಾ. ಕೊಳ್ಚಪ್ಪೆ ಗೋವಿಂದ ಭಟ್,…

Read More