Author: roovari

ಮಂಗಳೂರು : ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ರಾಜ್ಯಮಟ್ಟದ ‘ಮುಸ್ಲಿಂ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ರೂ.10,000/- ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ. ಮುಸ್ಲಿಂ ಬರಹಗಾರರು ಕನ್ನಡದಲ್ಲಿ ಪ್ರಕಟವಾದ 2024ನೇ ಸಾಲಿನ ಕೃತಿಯ ನಾಲ್ಕು ಪ್ರತಿಗಳನ್ನು ದಿನಾಂಕ 30 ಸೆಪ್ಟೆಂಬರ್ 2025ರ ಒಳಗೆ ಕಳುಹಿಸಬೇಕು. ಅನುವಾದಿತ ಕೃತಿಗಳನ್ನು ಪರಿಗಣಿಸುವುದಿಲ್ಲ ಎಂದು ಸಂಘದ ಅಧ್ಯಕ್ಷ ಉಮರ್ ಯು.ಎಚ್. ತಿಳಿಸಿದ್ದಾರೆ. ಕೃತಿ ಕಳುಹಿಸಬೇಕಾದ ವಿಳಾಸ : ಸಂಚಾಲಕರು, ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಮುಸ್ಲಿಂ ಲೇಖಕರ ಸಂಘ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು -575001. ಹೆಚ್ಚಿನ ಮಾಹಿತಿಗೆ 9845054191, 0824-2410358 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಬೆಂಗಳೂರು : ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಕಾರ್ಯಾಚರಿಸುತ್ತಿರುವ ನೃತ್ಯಸಂಗಮ ಕಲಾಸಂಸ್ಥೆಯ ಹದಿನೈದನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 07 ಸೆಪ್ಟೆಂಬರ್ 2025ರಂದು ಸಿ.ಎಮ್.ಆರ್.ಐ.ಟಿ. ಕಾಲೇಜಿನ ಸಭಾಂಗಣದಲ್ಲಿ ಗಣ್ಯರ ಸಮ್ಮುಖ ನಡೆಯಿತು. ನೃತ್ಯಸಂಗಮ ಕಲಾಸಂಸ್ಥೆಯ ನಿರ್ದೇಶಕಿ ವಿದುಷಿ ಸ್ನೇಹಲತಾ ಪ್ರಕಾಶ್ ಅವರ ಸಂಯೋಜನೆಯಲ್ಲಿ ಸುಮಾರು 100ಕ್ಕೂ ಮಿಕ್ಕಿ ವಿದ್ಯಾರ್ಥಿನಿಯರು ಶಾಸ್ತ್ರೀಯ ಭರತನಾಟ್ಯದ ಆಕರ್ಷಕ ನೃತ್ಯಬಂಧಗಳನ್ನು ಪ್ರದರ್ಶಿಸಿದರು. ಇವುಗಳೊಂದಿಗೆ ಸಂಸ್ಥೆಯ ಹದಿನೈದನೇ ವಾರ್ಷಿಕೋತ್ಸವವನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ನಾಡಿನ ಖ್ಯಾತ ರಂಗನಿರ್ದೇಶಕ ಕೀರ್ತಿಶೇಷ ಉದ್ಯಾವರ ಮಾಧವ ಆಚಾರ್ಯರ ನಿರ್ದೇಶನದ ಸಮೂಹ ಕಲಾಲಾಂಛನದ ‘ಕಾಡು ನಾಡು ಕಡಲಿನ ನಡುವೆ ಶಬರಿಗಾಯಿತು ಶ್ರೀ ರಾಮ ದರ್ಶನ’ ಎಂಬ ನೃತ್ಯನಾಟಕವನ್ನು ನಿರ್ಮಿಸಲಾಗಿತ್ತು. ವಿದುಷಿ ಸ್ನೇಹಲತಾ ಅವರ ಸುಮಾರು 25 ಸೀನಿಯರ/ವಿದ್ವತ್ ಹಂತದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಂಗಳೂರಿನ ನಾದನೃತ್ಯ ಕಲಾಸಂಸ್ಥೆಯ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶರು ಒಂದು ತಿಂಗಳ ಅವಧಿಯಲ್ಲಿ ರಂಗತರಬೇತಿ ನೀಡಿ ಈ ನೃತ್ಯನಾಟಕವನ್ನು ಸಂಯೋಜಿಸಿದ್ದರು. ನೃತ್ಯನಾಟಕದ ರಂಗಕೃತಿಯನ್ನು ರಂಗನಿರ್ದೇಶಕ ಉದ್ಯಾವರ ಮಾಧವ ಆಚಾರ್ಯರೇ ವಿನೂತನವಾಗಿ ಪರಿಕಲ್ಪಿಸಿ…

Read More

ಮೈಸೂರು : ಕರ್ನಾಟಕದ ಪ್ರಸಿದ್ಧ ಧಾರವಾಡ ಘರಾನೆಯ ಏಳನೇ ತಲೆಮಾರಿನ ಕಲಾವಿದರಾದ ಡಾ. ಮೊಹಸಿನ್‌ ಖಾನ್ ರವರಿಗೆ ಈ ಬಾರಿ ದಸರಾ ಮುಖ್ಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡುವ ಗೌರವ ಸಂದಿದೆ. ಅವರಿಗೆ ಸಿಕ್ಕ ಈ ಅವಕಾಶಕ್ಕೂ, ಮೈಸೂರು ಆಸ್ಥಾನಕ್ಕೂ ಮತ್ತು ಕರ್ನಾಟಕಕ್ಕೆ ಸಿತಾರ್‌ ವಾದ್ಯದ ಪರಿಚಯಕ್ಕೂ ವಿಶೇಷವಾದ ಸಂಬಂಧವಿದೆ ಮೈಸೂರು ಆಸ್ಥಾನ 1911ರ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮೈಸೂರನ್ನು ಆಳುತ್ತಿದ್ದ ಕಾಲ. ಸ್ವತಃ ವೀಣಾವಾದಕರಾಗಿದ್ದ ಅವರು ಕಲಾ ಪೋಷಕರೂ ಆಗಿದ್ದರು. ತಮ್ಮ ಆಸ್ಥಾನದಲ್ಲಿ ಅನೇಕ ಸಂಗೀತ ವಿದ್ವಾಂಸರಿಗೂ ಆಶ್ರಯ ನೀಡಿದ್ದರು. ಅದರಲ್ಲಿ ವೀಣೆ ಶೇಷಣ್ಣನವರೂ ಒಬ್ಬರು. ದೇಶದ ಶ್ರೇಷ್ಥ ಸಂಗೀತಗಾರರನ್ನು ತಮ್ಮ ಆಸ್ಥಾನಕ್ಕೆ ಕರೆಸಿ ದರ್ಬಾರಿನಲ್ಲಿ ಸಂಗೀತ ಕಛೇರಿಯನ್ನು ನಡೆಸುತ್ತಿದ್ದರು. ಹೀಗಿರುವಾಗ, ಉಸ್ತಾದ್‌ ರಹಿಮತ್‌ ಖಾನರ ಕೀರ್ತಿ ಪೂನಾದ ಸಾಂಗ್ಲಿ, ಕೊಲ್ಹಾಪುರ, ಇಚರಕರಂಜಿ ದಾಟಿ ಮೈಸೂರಿನವರೆಗೂ ಹಬ್ಬಿತು. ಇವರ ಸಿತಾರ್ ವಾದನದ ಬಗ್ಗೆ ಕೇಳಿದ ನಾಲ್ವಡಿ ಕೃಷ್ಣರಾಜ ಒಡೆಯರು, ದರ್ಬಾರಿನಲ್ಲಿ ಕಛೇರಿ ನಡೆಸಲು ಅವರಿಗೆ ಆಮಂತ್ರಣವನ್ನು ನೀಡಿದರು. ಕಛೇರಿ ಮುಗಿದಾಗ…

Read More

ಬೆಂಗಳೂರು : ಹವ್ಯಾಸಿ ಯಕ್ಷಗಾನ ರಂಗಭೂಮಿಯಲ್ಲಿ ತನ್ನದೇ ಆದ ಸಾಧನೆಯನ್ನು ಮಾಡಿರುವ ಯಕ್ಷಸಿಂಚನ ಟ್ರಸ್ಟ್ (ರಿ), ಬೆಂಗಳೂರು ಇವರು 16ನೇ ವರುಷದ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 21 ಸೆಪ್ಟೆಂಬರ್ 2024ನೇ ಭಾನುವಾರ ಮಧ್ಯಾಹ್ನ 3-00 ಗಂಟೆಗೆ ‘ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವ’ವನ್ನು ಬೆಂಗಳೂರಿನ ಬಸವನಗುಡಿ ವರ್ಲ್ಡ್ ಕಲ್ಚರ್ ಬಿ.ಪಿ. ವಾಡಿಯಾ ಹಾಲ್ ನಲ್ಲಿ ಆಯೋಜಿಸಿದ್ದಾರೆ. ಇದೇ ಸಂದರ್ಭದಲ್ಲಿ ಖ್ಯಾತ ಹಿರಿಯ ಯಕ್ಷಗುರು ಹಾಗೂ ಮದ್ದಲೆ ವಾದಕರಾದ ಮಂಜುನಾಥ ಪ್ರಭು ಇವರಿಗೆ 2025ನೇ ಸಾಲಿನ ‘ಸಾರ್ಥಕ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಮಧ್ಯಾಹ್ನ 3-00 ಗಂಟೆಗೆ ಬೆಂಗಳೂರಿನ ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರಿಂದ ಪಾರ್ತಿಸುಬ್ಬ ರಚಿತ ‘ರಾಮ –ಪರಶುರಾಮ’ ಮತ್ತು 5-00 ಗಂಟೆಗೆ ಯಕ್ಷಸಿಂಚನ ತಂಡದ ಕಲಾವಿದರಿಂದ ದಿನಕರ ಪಚ್ಚನಾಡಿ ರಚಿತ ‘ತರಣಿಸೇನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

Read More

ಮೈಸೂರು : ಮೈಸೂರು ದಸರಾ ಪ್ರಯುಕ್ತ ದಿನಾಂಕ 22 ಸೆಪ್ಟೆಂಬರ್ 2025ರಿಂದ ಕನ್ನಡ ಪುಸ್ತಕಗಳ ಪ್ರದರ್ಶನ, ರಿಯಾಯಿತಿ ಮಾರಾಟ ಮೇಳ ಪ್ರಾರಂಭವಾಗಲಿದೆ. ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ದಿನಾಂಕ 22 ಸೆಪ್ಟೆಂಬರ್ 2025ರಿಂದ 01 ಅಕ್ಟೋಬರ್ 2025ರವರೆಗೆ ಬೆಳಿಗ್ಗೆ 10-00ರಿಂದ ರಾತ್ರಿ 8-30 ಗಂಟೆವರೆಗೆ ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ರಿಯಾಯಿತಿ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರು ದಿನಾಂಕ 22 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 10-30 ಗಂಟೆಗೆ ಚಾಮುಂಡಿಬೆಟ್ಟದಲ್ಲಿ ನಡೆಯುವ ನಾಡ ಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ, ಪ್ರಾಧಿಕಾರದಿಂದ ಪ್ರಕಟಿಸಿರುವ ಹಾಗೂ ಶಿವಾನಂದ ವಿರಚಿತ ಬಾನು ಮುಷ್ತಾಕ್ ಅವರ ಬದುಕು-ಬರಹ ಕುರಿತ ‘ಬುಕರ್‌ ಬಾನು’ ಪುಸ್ತಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದು, ಸಂಜೆ 5-00 ಗಂಟೆಗೆ ಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ಎಸ್. ತಂಗಡಗಿ ಉದ್ಘಾಟಿಸುವರು. ಮೇಳದ ಮೊದಲು ‘ಪುಸ್ತಕ ರಥ’ವು…

Read More

ನಂದಳಿಕೆ : ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಕಾರ್ಕಳ ತಾಲೂಕು ಇದರ ವತಿಯಿಂದ ಹಮ್ಮಿಕೊಂಡ ‘ತಾಳಮದ್ದಳೆ ಜ್ಞಾನಯಜ್ಞ’ ಶತಕೋತ್ತರ ಕಾರ್ಯಕ್ರಮವನ್ನು ದಿನಾಂಕ 21, 23, 26 ಸೆಪ್ಟೆಂಬರ್ ಮತ್ತು 02 ಅಕ್ಟೋಬರ್ 2025ರಂದು ಆಯೋಜಿಸಲಾಗಿದೆ. ದಿನಾಂಕ 21 ಸೆಪ್ಟೆಂಬರ್ 2025ರಂದು ಬೆಳಿಗ್ಗೆ 9-30 ಗಂಟೆಗೆ ಮೂಡುಬಿದಿರೆ ಪ್ರೀತಮ್ ಗಾರ್ಡನ್ ಇಲ್ಲಿ ‘ಶ್ರೀ ಕೃಷ್ಣ ಸಂಧಾನ’, ದಿನಾಂಕ 23 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ನಿಟ್ಟೆ ಕೆಮ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಸುಧಾಮ ಚರಿತ್ರೆ’, ದಿನಾಂಕ 26 ಸೆಪ್ಟೆಂಬರ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ರಾವಣಾಂತರಂಗ’ ಮತ್ತು ದಿನಾಂಕ 02 ಅಕ್ಟೋಬರ್ 2025ರಂದು ಬೆಳಿಗ್ಗೆ 10-00 ಗಂಟೆಗೆ ವಾಮದಪದವು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಕರ್ಣ ಪರ್ವ’ ಪ್ರಸಂಗದ ತಾಳಮದ್ದಳೆ ನಡೆಯಲಿದೆ.

Read More

‘ಮುಂಬೈ ಯಕ್ಷಗಾನ ರಂಗಭೂಮಿ’ ಇದು ಡಾ. ವೈ.ವಿ. ಮಧುಸೂದನ್ ರಾವ್ ಅವರ ಸಂಶೋಧನ ಮಹಾಪ್ರಬಂಧ. ಮುಂಬೈ ಒಂದು ದೈತ್ಯ ನಗರ. ಇದು ನಮ್ಮ ದೇಶದ ಬಹು ದೊಡ್ಡ ಸಾಂಸ್ಕೃತಿಕ ಕೇಂದ್ರವೂ ಅಹುದು. ಈ ಮಾಯಾ ನಗರಿಯಲ್ಲಿ ಕರ್ನಾಟಕ ಮೂಲದ ಯಕ್ಷಗಾನ ಕಲೆ ಇಟ್ಟ ಹೆಜ್ಜೆ ಹಾಗೂ ಅದು ತೊಟ್ಟ ರೂಪದ ಸಮಗ್ರ ಚಿತ್ರಣ ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ದಾಖಲಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರಿರುವ ಪ್ರದೇಶವೆಂದರೆ ಅದು ಮುಂಬಯಿ. ಇಂದಿಗೂ ಮುಂಬಯಿ ಸುತ್ತ ಮುತ್ತ ಸುಮಾರು ಇಪ್ಪತ್ತೈದು ಲಕ್ಷ ತುಳು-ಕನ್ನಡಿಗರು ನೆಲೆಸಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವುದು ಉಲ್ಲೇಖನೀಯ ಅಂಶ. ಮುಂಬಯಿಯಲ್ಲಿ ಇರುವಷ್ಟು ಸಂಘ ಸಂಸ್ಥೆಗಳು ಜಗತ್ತಿನ ಬೇರೆ ಎಲ್ಲಿಯೂ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಯಕ್ಷಗಾನ ಕಲೆಯ ಬಲವರ್ಧನೆಗೆ ಹೊರನಾಡಾದ ಮುಂಬಯಿ ಬಹು ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇಲ್ಲಿನ ಯಕ್ಷಗಾನ ರಂಗಭೂಮಿಗೆ ಹತ್ತಿರ ಹತ್ತಿರ ಒಂದು ಶತಮಾನದ ಇತಿಹಾಸವಿದೆ. 1880ರ ಹೊತ್ತಿಗೆ ಕರ್ಕಿ…

Read More

ಬೆಂಗಳೂರು: ಪ್ರಸಿದ್ಧ ಸಂಶೋಧಕ, ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಇವರು ದಿನಾಂಕ 17 ಸೆಪ್ಟೆಂಬರ್ 2025 ರ ರಾತ್ರಿ ಬೆಂಗಳೂರಿನ ಮಗಳ ಮನೆಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ. 1937ರ ಏಪ್ರಿಲ್ 9ರಂದು ಜನಿಸಿದ ವಸಂತ ಮಾಧವ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕೆನರಾದ ರಾಜಕೀಯ ಇತಿಹಾಸ : 1565-1763 ಎಂಬ ವಿಷಯದ ಮೇಲೆ ಮಹಾಪ್ರಬಂಧ ರಚಿಸಿ ಪಿಎಚ್.ಡಿ. ಪದವಿಗೂ ಪಾತ್ರರಾದರು. ಮುಲ್ಕಿಯ ವಿಜಯಾ ಕಾಲೇಜಿನಲ್ಲಿ 32 ವರ್ಷಗಳ ಕಾಲ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿದ್ದರು.

Read More

ಉಳ್ಳಾಲ : ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ತಿನ ವತಿಯಿಂದ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿಯು ಮತ್ತು ಭಾವೈಕ್ಯತಾ ಸಾಹಿತ್ಯ ರತ್ನ ಮತ್ತು ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಸೆಪ್ಟೆಂಬರ್ 2025ರಂದು ದೇರಳಕಟ್ಟೆಯ ಅಲ್ ಸಲಾಮ ಸಭಾಂಗಣದಲ್ಲಿ ನಡೆಯಿತು. ಹಿರಿಯ ಕವಿಗಳಾದ ಪತ್ರಕರ್ತ ಜಯಾನಂದ ಪೆರಾಜೆ, ಶಿಕ್ಷಕಿ ಡಾ. ಶಾಂತ ಪುತ್ತೂರು, ವೈದ್ಯ ಡಾ. ಸುರೇಶ ನೆಗಳಗುಳಿ, ಹಾ.ಮ. ಸತೀಶ, ವಿರಾಜ್ ಅಡೂರು, ಮಲ್ಲಿಕಾ ಜೆ. ರೈ, ಪ್ಲಾವಿಯ ಅಲ್ಬುಕರ್ಕ್, ಬಶೀರ್ ಅಹ್ಮದ್ ಬಂಟ್ವಾಳ, ಸಹನಾ ಕಾಂತಬೈಲು, ರತ್ನಾ ಕೆ. ತಲಂಜೇರಿ ಇವರಿಗೆ ‘ಭಾವೈಕ್ಯತಾ ಸಾಹಿತ್ಯ ರತ್ನ ಪ್ರಶಸ್ತಿ’ ಮತ್ತು ಸಮಾಜ ಸೇವಕರಾದ ಡಾ. ರವಿ ಕಕ್ಯಪದವು, ಡಾ. ಹರ್ಷ ಕುಮಾರ್ ರೈ, ಕೆ.ಟಿ ರಾಜೇಂದ್ರ ಹೊಳ್ಳ ಕಲ್ಲಡ್ಕ, ಅಬ್ದುಲ್ ರಹಿಮಾನ್ ಸಂಕೇಶ್ ಇವರಿಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಡಾ. ಯು.ಟಿ. ಇಫ್ತಿಖಾರ್ ಅಲಿಯವರಿಗೆ ‘ಶಿಕ್ಷಣ ರತ್ನ ಪ್ರಶಸ್ತಿ’, ಭಾವೈಕ್ಯತಾ ಪರಿಷತ್ತಿನ ಪ್ರಧಾನ…

Read More

ಆಧುನಿಕತೆಯ ವೇಗದಡಿ ಬದಲುಗೊಳ್ಳುವ ನಾಗರೀಕತೆ, ವೈಜ್ಞಾನಿಕ ಚಿಂತನೆಯತ್ತ ಚಿತ್ತವರಿಸುತ್ತಿದಿಯೇ..? ಅಥವಾ ನಂಬಿಕೆಗಳ ಆಚರಣೆಗಳಲ್ಲಿ ಒಂದಿಷ್ಟು ಮೌಡ್ಯತೆ-ಕಂದಾಚಾರಗಳನ್ನು ತೊಳೆದು ಸುಧಾರಿಸುತ್ತಿದಿಯೇ..? ಅಥವಾ ಬದಲಾಗದ ಕಟ್ಟುಪಾಡುಗಳಲ್ಲಿ ಮೌಡ್ಯಗಳನ್ನು ಅನುಸರಿಸುವ ಬದುಕುಗಳು ಹಾಗೆಯೇ ಉಳಿದುಕೊಂಡಿದಿಯೇ..? ಎಂಬುದರ ಸಂಗತಿಗಳತ್ತ ಅಧ್ಯಯಿಸಿದಾಗ, ವಿಮರ್ಶಿಸಿದಾಗ ಈ ಮೇಲಿನ ಮೂರು ಸಂಗತಿಗಳು ಈ ಒಟ್ಟು ಸಮಾಜದಲ್ಲಿ ಇದ್ದೇ ಇದೆ, ಆದರೆ ಸಾಂವಿಧಾನಿಕ ಪ್ರಶ್ನೆಗಳು ಎಲ್ಲೆಲ್ಲಿ ದನಿಯಾಗಿದಿಯೋ.. ಅಲ್ಲಲ್ಲಿ ಇಂತಹ ಆಚರಣೆಗಳಲ್ಲಿನ ಮೌಡ್ಯ ಮತ್ತು ಕಂದಾಚಾರಗಳು ದೂರ ಸರಿದು ನಾಗರೀಕತೆಯ ಸಾಂಗತ್ಯ ಬಯಸಿದೆ ಎನ್ನುವುದು ಅಷ್ಟೆ ಸತ್ಯವಾಗಿದೆ. ಹೀಗಾಗಿ ಯಾವುದೇ ಆಚರಣೆಗಳಿಗೆ ವಿರೋಧವಿಲ್ಲ ಅದರೊಳಗಿನ ಮೌಡ್ಯತೆಗಳಿಗೆ ವಿರೋಧವಿದೆ ಎನ್ನುವ ಬಹುತೇಕ ಸಮಾಜಮುಖಿ ದನಿಗಳು ಪ್ರತಿಧ್ವನಿಸುತ್ತಲೇ ಇರುವ ಅಗತ್ಯತೆ ಇದೆ. ಅಷ್ಟಕ್ಕೂ ಮೌಡ್ಯತೆ ಎನ್ನುವುದು ಹಿಂದೂ ಧಾರ್ಮಿಕತೆಯಲ್ಲಿ ಮಾತ್ರ ಇದೆ, ಅನ್ಯ ಧರ್ಮಗಳಲ್ಲಿ ಇಲ್ಲ ಎನ್ನುವುದು ತರ್ಕವಲ್ಲ, ಒಂದೆಡೆ ಮಾತ್ರ ಬೊಟ್ಟು ಮಾಡಿ ತೋರಿಸುವುದು ಕೂಡ ಸಮಂಜಸವಾದುದ್ದಲ್ಲ?, ಹೀಗೆ ಒಂದೆಡೆ ಮಾತ್ರ ತೋರು ಬೆರಳು ಬಿತ್ತುವುದಕ್ಕೆ ಶುರುವಾದರೆ ಅಲ್ಲಿನ ಕೃಷಿಯಲ್ಲಿ ಏಕತಾಭಿಪ್ರಾಯ ಬೆಳೆವುದು ಅಸಾಧ್ಯ.…

Read More