Author: roovari

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಯಕ್ಷಗಾನ ಹಿಮ್ಮೇಳ ತಜ್ಞ, ಯಕ್ಷಗಾನಶಾಸ್ತ್ರ ಪಠ್ಯಗಳ ಕೃತಿಕಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಖ್ಯಾತ ಗುರು ದಿ. ಬಿ. ಗೋಪಾಲಕೃಷ್ಣ ಕುರುಪ್ ಇವರಿಗೆ ‘ನುಡಿ ನಮನ -ಯಕ್ಷ ನಮನ’ ಕಾರ್ಯಕ್ರಮವು ದಿನಾಂಕ 05 ಏಪ್ರಿಲ್ 2025ರಂದು ಮಧ್ಯಾಹ್ನ ಘಂಟೆ 2.00ಕ್ಕೆ ಮಂಗಳೂರು ವಿ. ವಿ. ಯ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ನಡೆಯಲಿದೆ. ವಿ. ವಿ. ಕುಲಸಚಿವ ಕೆ. ರಾಜುಮೊಗವೀರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ, ವಿದ್ವಾಂಸ ಡಾ. ರಾಘವ ನಂಬಿಯಾರ್, ಹಾವೇರಿ ಜಾನಪದ ವಿ. ವಿ. ಇದರ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ, ವಿಶ್ರಾಂತ ಪ್ರಾಧ್ಯಾಪಕ ಡಾ. ಪ್ರಭಾಕರ ಶಿಶಿಲ ಮೊದಲಾದವರು ಭಾಗವಹಿಸಿ ನುಡಿನಮನ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗೋಪಾಲಕೃಷ್ಣ ಕುರುಪ್ ಅವರ ಶಿಷ್ಯವೃಂದದಿಂದ ‘ಯಕ್ಷ ನಮನ:’ ಪೂರ್ವ…

Read More

ಮಂಗಳೂರು : ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಶ್ರಯದಲ್ಲಿ ವಿಶ್ವಕರ್ಮ ಕಲಾ ಪರಿಷತ್ ಆಯೋಜಿಸಿದ ‘ಸಮರ್ಪಣಂ ಕಲೋತ್ಸವ – 2025′ ದಿನಾಂಕ 03 ಏಪ್ರಿಲ್ 2025ರ ಗುರುವಾರದಂದು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಮಾತನಾಡಿ “ವ್ಯಕ್ತಿಯು ತನ್ನ ಕೃತಿ ಹಾಗೂ ಕಾರ್ಯಗಳಿಂದ ಅಮರನಾಗುತ್ತಾನೆ. ಮೇರು ವಿದ್ವಾಂಸರಾದ ಡಾ. ಜಿ. ಜ್ಞಾನಾನಂದ ಅವರು 75ಕ್ಕೂ ಅಧಿಕ ಕೃತಿಗಳ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆ ಕೃತಿಗಳನ್ನು ಓದುವ ಮನಸ್ಸು ನಮ್ಮದಾಗಬೇಕು” ಎಂದು ಅಭಿಪ್ರಾಯಪಟ್ಟರು. ಕರಾವಳಿಯ ವಿಶ್ವಬ್ರಾಹ್ಮಣ ಶಿಲ್ಪಿಗಳು, ಕಲಾವಿದರು, ಕುಶಲಕರ್ಮಿಗಳ ಪರವಾಗಿ ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ಶಿಲಾಶಾಸ್ತ್ರಜ್ಞ ಪ್ರಾಚೀನ ವಿಶ್ವಬ್ರಾಹ್ಮಣ ಪರಂಪರೆಯ ಸಮರ್ಥ ರಾಯಭಾರಿ, ಸಂಶೋಧಕ, ಲೇಖಕ ಮೇರು ವಿದ್ವಾಂಸ ಡಾ. ಜಿ. ಜ್ಞಾನಾನಂದ ಅವರಿಗೆ ‘ಭೌವನ ವಿಶ್ವಕರ್ಮ ಕಲಾ ಪ್ರಶಸ್ತಿ’ ನೀಡಿ ಗೌರವಾಭಿನಂದನೆ ಸಲ್ಲಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಡಾ. ಜಿ. ಜ್ಞಾನಾನಂದ ಮಾತನಾಡಿ “ವಿಶ್ವಕರ್ಮನ…

Read More

ವಿಜಯನಗರ: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್, ಸಾಹಿತಿ ಕುಂ. ವೀರಭದ್ರಪ್ಪ ಹಾಗೂ ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶ್ ಕುಮಾರ್ ಇವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ‘ನಾಡೋಜ’ ಗೌರವ ಪದವಿಗೆ ಆಯ್ಕೆಮಾಡಲಾಗಿದೆ. ದಿನಾಂಕ 04 ಏಪ್ರಿಲ್ 2025ರ ಸಂಜೆ ನಡೆಯುವ 33ನೇ ‘ನುಡಿಹಬ್ಬ’ದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ನಾಡೋಜ ಪದವಿ ಪ್ರದಾನ ಮಾಡಲಿದ್ದಾರೆ. 198 ವಿದ್ಯಾರ್ಥಿಗಳಿಗೆ ಪಿ. ಎಚ್‌. ಡಿ. ಪದವಿ ಪ್ರದಾನ ಮಾಡಲಿದ್ದಾರೆ. ತುಮಕೂರು ವಿ. ವಿ. ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಎ. ಎಚ್. ಇವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹಂಪಿ ವಿ. ವಿ. ಕುಲಪತಿ ಡಾ. ಡಿ. ವಿ. ಪರಮಶಿವಮೂರ್ತಿ ತಿಳಿಸಿದರು.

Read More

ಮಂಗಳೂರು : ಮಂಗಳೂರಿನ ಸನಾತನ ನಾಟ್ಯಾಲಯದ ವತಿಯಿಂದ ‘ಸನಾತನ ನೃತ್ಯ ಪ್ರೇರಣಾ’ ಮತ್ತು ಭರತನಾಟ್ಯ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರ ಬಾನುವಾರ ಸಂಜೆ ಘಂಟೆ 6.00 ರಿಂದ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವ ವಿದ್ಯಾಲಯ ನಡೆಸಿದ 2024ನೇ ಸಾಲಿನ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಾದ ಸಿಂಚನಾ ಎಸ್. ಕುಲಾಲ್, ವಿಜಿತಾ ಕೆ. ಶೆಟ್ಟಿ, ವೈಷ್ಣವಿ ತಂತ್ರಿ, ಜಾಹ್ನವಿ ಎಸ್. ಶೇಖರ್, ಧೃತಿ ಆರ್. ಶೇರಿಗಾರ್, ಸಂಹಿತಾ ಕೊಂಚಾಡಿ, ಸ್ನೇಹ ಪೂಜಾರಿ ಮತ್ತು ಶಾರ್ವರಿ ವಿ. ಮಯ್ಯ ಇವರನ್ನು ಅಭಿನಂದಿಸಲಾಗುವುದು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ. ಎಲ್. ಧರ್ಮ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ಮತ್ತು ನೃತ್ಯ ಭಾರತಿ ಕದ್ರಿಯ ಕರ್ನಾಟಕ ಕಲಾಶ್ರೀ ವಿದುಷಿ…

Read More

ಅಂಕೋಲಾ : ಕರ್ನಾಟಕ ಸಂಘ (ರಿ.) ಅಂಕೋಲಾ ಆಯೋಜಿಸುವ ಶ್ರೀದೇವಿ ಕೆರೆಮನೆ ಇವರ ಪಾಶ್ಚಾತ್ಯ ಲೇಖಕಿಯರ ಆಶಯ, ಚಿಂತನೆ ಮತ್ತು ಗ್ರಹಿಕೆಯ ‘ಎಲ್ಲೆಗಳ ಮೀರಿ’ ಹಾಗೂ ಸಮಕಾಲೀನ ಪ್ರಬಂಧ ಬರಹಗಳ ‘ಕಡಲು ಕಾನನದ ನಡುವೆ’ ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 06 ಏಪ್ರಿಲ್ 2025ರಂದು ಸಂಜೆ ಘಂಟೆ 4-00ಕ್ಕೆ ಅಂಕೋಲಾದ ಕನ್ನಡ ಭವನದಲ್ಲಿ ನಡೆಯಲಿದೆ. ಕರ್ನಾಟಕ ಸಂಘ ಅಂಕೋಲಾ ಇದರ ಗೌರವಾಧ್ಯಕ್ಷ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಕೆ. ವಿ. ನಾಯಕ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕರಾವಳಿ ಮುಂಜಾವು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಶ್ರೀ ಗಂಗಾಧರ ಹಿರೇಗುತ್ತಿ ಉದ್ಘಾಟಿಸಲಿದ್ದು, ಕಾರವಾರದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷರಾದ ಡಾ. ಎಂ. ಮಂಜುನಾಥ ಬಮ್ಮನಕಟ್ಟಿ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಅಂಕೋಲಾದ ಕೆ. ಎಲ್. ಇ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿನಾಯಕ ಹೆಗಡೆ ಪುಸ್ತಕ ಪರಿಚಯಿಸಲಿದ್ದು, ಅಂಕೋಲಾದ ಕರ್ನಾಟಕ ಸಂಘ ಇದರ ಅಧ್ಯಕ್ಷರಾದ ಶ್ರೀ ಮಹಾಂತೇಶ ರೇವಡಿ ಉಪಸ್ಥಿತರಿರುವರು.

Read More

ಕಲಾಗ್ರಾಮದ ವಠಾರದಲ್ಲಿ ಅದೇನು ಕಾರಣವೋ ಸೆಗಣಿ, ಗಂಜಳದ ಅರ್ಥಾತ್ ಜಾನುವಾರು ಕೊಟ್ಟಿಗೆಯ ವಾಸನೆ ಪ್ರಸ್ತುತ ಅರೆಹೊಳೆ – ಕಲಾಭೀ ನಾಟಕೋತ್ಸವದ ಉದ್ದಕ್ಕೂ ಬರುತ್ತಲೇ ಇತ್ತು. ಇಂದು ಅದರ ಕಾರಣವೇ ರಂಗದ ಮೇಲೇ ಬಂದಂತೆ, ಪಕ್ಕಾ ಬೀದಿ ಕಸದ್ದೇ ರೂಪ ಹೊತ್ತಿತ್ತು ರಂಗಮಂಚ. ನಾಟಕ ಇಟಾಲಿಯನ್ ಲೇಖಕ ದಾರಿಯೋ ಪೋನ ಕೃತಿಯ, ಪ್ರಕಾಶ್ ಗರುಡರ ಕನ್ನಡ ರೂಪಾಂತರ – ಬೆತ್ತಲಾಟ. ವಿನ್ಯಾಸ ಮತ್ತು ನಿರ್ದೇಶನ – ರೋಹಿತ್ ಎಸ್. ಬೈಕಾಡಿ, ಪ್ರಸ್ತುತಿ ಬ್ರಹ್ಮಾವರದ ಮಂದಾರ (ರಿ.) ಮುನ್ನೆಲೆಯ ಕಸದ ಕುಪ್ಪೆಗೆ ಹೊಂದುವಂತೆ ನಗರದ ಹಿಂಭಿತ್ತಿಯನ್ನೇ ರಂಗ ಹೊತ್ತಿತ್ತು. ಅದಕ್ಕೆ ದೇಶ, ಕಾಲ ಮತ್ತು ಜೀವ ತುಂಬಿದವರು ಬಿಗಿಲೂದುವ ಬೀಟ್ ಪೋಲಿಸ್, ಮರಸಿನಾಟದಲ್ಲಿರುವ ಸೂಳೆ, ಸೈಕಲ್ ಸಂಚಾರದಲ್ಲಿರುವ ಹೂಗಾರ, ಕಸಗುಡಿಸುವವರು ಮತ್ತು ರಾಯಭಾರಿ. ಅವರ ಸಹಜ ಕಲಾಪಗಳು ಕೊಡುವ ಸಾಮಾಜಿಕ ಚಿತ್ರಣದಲ್ಲಿ ಹಣಿಕುವ ಅಸಾಂಗತ್ಯವೇ ನಾಟಕದ ಸತ್ವ. ಬೀದಿ ಕಸಗುಡಿಸುವವರ ಸಂವಾದದಲ್ಲಿ ಯೋಗ, ಆತ್ಮ, ಪ್ಲೇಟೋ ಬರುತ್ತಾರೆ, ಬ್ರಹ್ಮತ್ವದ ಜಿಜ್ಞಾಸೆ ನಡೆಯುತ್ತದೆ. ತದ್ವಿರುದ್ಧವಾಗಿ ಅಧಿಕಾರ…

Read More

ಪುತ್ತೂರು : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಆಯೋಜಿಸಿದ ರಾಜ್ಯಮಟ್ಟದ ಅಂತರ್ಕಾಲೇಜು ಸಾಂಸ್ಕೃತಿಕ ಉತ್ಸವದಲ್ಲಿ ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಬೆಂಗಳೂರಿನ ಗ್ಲೋಬಲ್ ಅಕಾಡಮಿ ಆಫ್ ಟೆಕ್ನಾಲಜಿಯಲ್ಲಿ ನಡೆದ ‘ಇಂಟರ್ಯಾಕ್ಸ್-2025’ ಸ್ಪರ್ಧೆಯಲ್ಲಿ ಕಾಲೇಜಿನ ಭೂಮಿಕಾ ಕಲಾ ಸಂಘ ತಂಡವು ತನ್ನ ಅಪೂರ್ವ ಪ್ರತಿಭೆಯನ್ನು ಪ್ರದರ್ಶಿಸಿ ವಿಶೇಷ ಸಾಧನೆಯನ್ನು ಮಾಡಿದೆ. ಸುಮಾರು 100ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳ ಕಲಾ ತಂಡಗಳು ಭಾಗವಹಿಸಿದ್ದು, ಕಾಲೇಜಿನಿಂದ 34 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವ್ಯಂಗ್ಯಚಿತ್ರ ವಿಭಾಗದಲ್ಲಿ ದ್ವಿತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಮನ್ನಿತ್ ಗೌಡ ಇವರು ಚಿನ್ನದ ಪದಕ, ಸ್ವರ ವಾದ್ಯ ಸ್ಪರ್ಧೆಯಲ್ಲಿ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ತನ್ಮಯಿ ಉಪ್ಪಂಗಳ ಇವರು ಚಿನ್ನದ ಪದಕ ಹಾಗೂ ಶಾಸ್ತ್ರೀಯ ಸಂಗೀತ ಹಾಡುಗಾರಿಕಾ ವಿಭಾಗದಲ್ಲಿ ದ್ವಿತೀಯ ವರ್ಷದ ಎ. ಐ. ಎಂ. ಎಲ್. ವಿಭಾಗದ ಕಾರ್ತಿಕ ಶ್ಯಾಮ ಇವರು ಕಂಚಿನ…

Read More

ಬೆಂಗಳೂರು : ಕನ್ನಡ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ನಡೆಸಿ, ವೈಜ್ಞಾನಿಕ ದೃಷ್ಟಿಕೋನವನ್ನು ರೂಢಿಸಿಕೊಂಡು ಬಂದಿದ್ದ ಡಾ. ಪಿ. ವಿ. ನಾರಾಯಣ ಇವರು ವಿಶಿಷ್ಟ ಸಾಹಿತಿ, ಪ್ರಾಧ್ಯಾಪಕ ಮತ್ತು ಕನ್ನಡಪರ ಹೋರಾಟಗಾರರು. ಕನ್ನಡದ ಹಿರಿಮೆಯನ್ನು ಕಾಪಾಡಲು ನಿರಂತರವಾಗಿ ಶ್ರಮಿಸಿದ ಇವರ ಅಗಲುವಿಕೆಯಿಂದ ಕನ್ನಡ ವಿದ್ವತ್ ಲೋಕಕ್ಕೆ ಅಪಾರ ಹಾನಿಯಾಗಿದೆಯೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ. ಇವರು ದಿನಾಂಕ 03 ಏಪ್ರಿಲ್ 2025 ರಂದು ನಿಧನರಾದ ಡಾ. ಪಿ. ವಿ. ನಾರಾಯಣ ಅವರ ಜಯನಗರದ ಸ್ವಗೃಹಕ್ಕೆ ಭೇಟಿ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಗೌರವವನ್ನು ಸಲ್ಲಿಸಿದರು. ಪಿ. ವಿ. ನಾರಾಯಣರು 1942ರ ಡಿಸೆಂಬರ್ 18ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪಿ. ವೆಂಕಪ್ಪಯ್ಯ ತಾಯಿ ನರಸಮ್ಮ. ಪ್ರಾರಂಭಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ನಡೆಸಿದ ಇವರು, ತುಮಕೂರಿನ ಸರಕಾರಿ ಕಾಲೇಜಿನಿಂದ ಬಿ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ ಪಡೆದರು. “ವಚನ ಸಾಹಿತ್ಯ: ಒಂದು…

Read More

ಮಂಗಳೂರು: ವೃತ್ತಿಯಲ್ಲಿ ನ್ಯಾಯವಾದಿಯಾಗಿ ‘ದೇವಕಿತನಯ’ ಎಂಬ ಹೆಸರಿನಿಂದ ಹರಿದಾಸರಾಗಿ ಖ್ಯಾತರಾದ ಮಹಾಬಲ ಶೆಟ್ಟಿ ಕೂಡ್ಲು ಅವರಿಗೆ 80 ವರ್ಷ ತುಂಬಿದ ಸಂದರ್ಭದಲ್ಲಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಂಪಾದಕತ್ವದಲ್ಲಿ ‘ಮಹಾಪರ್ವ’ ಎಂಬ ಅಭಿನಂದನಾ ಸಂಪುಟ ಪ್ರಕಟವಾಗಿದೆ. ವಿಕಾಸ್ ಎಜುಕೇಶನ್ ಟ್ರಸ್ಟ್ ಇದರ ವತಿಯಿಂದ ಕಲ್ಲೂರು ನಾಗೇಶ್ ಅವರ ಆಕೃತಿ ಪಿಂಟ್ಸ್ ಮುದ್ರಿಸಿರುವ ಗ್ರಂಥದ ಲೋಕರ್ಪಣಾ ಸಮಾರಂಭವು ದಿನಾಂಕ 04 ಎಪ್ರಿಲ್ 2025ರ ಶುಕ್ರವಾರ ಪೂರ್ವಾಹ್ನ ಗಂ.11:30ಕ್ಕೆ ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆಯಲಿದೆ. ಹರಿಕಥಾ ಪರಿಷತ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಂಟಿಯಾಗಿ ಆಯೋಜಿಸುವ ಈ ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಹಾಗೂ ಮಾಜಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಕೃತಿ ಲೋಕಾರ್ಪಣೆ ಮಾಡುವರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿರುವರು. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್…

Read More

ಸುರತ್ಕಲ್ : ಸ್ಪರ್ಶ ಕಲಾವಿದರು ಸುರತ್ಕಲ್ ಮತ್ತು ಕಲಾಬ್ಧಿ ಲಲಿತ ಕಲಾ ಅಧ್ಯಯನ ಕೇಂದ್ರ ಗೋವಿಂದ ದಾಸ ಕಾಲೇಜು ಸುರತ್ಕಲ್ ಇವರ ಸಹಯೋಗದೊಂದಿಗೆ ‘ರಂಗ ಸಂಭ್ರಮ 2025’ ಸರಣಿ 3ರ ಕಾರ್ಯಕ್ರಮವನ್ನು ದಿನಾಂಕ 13 ಏಪ್ರಿಲ್ 2025ರಂದು ಸುರತ್ಕಲ್ ಗೋವಿಂದ ದಾಸ ಕಾಲೇಜು ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜೆ 5-00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಸ್ಪರ್ಶ ಕಲಾ ತಂಡದ ನವರಸ ಕಲಾವಿದರು ಸುರತ್ಕಲ್ ಇವರಿಂದ ವಿನೋದ್ ಶೆಟ್ಟಿ ಕೃಷ್ಣಾಪುರ ಇವರ ನಿರ್ದೇಶನದಲ್ಲಿ ‘ಎನ್ನಂದಿನ’ ತುಳು ಕುತೂಹಲಕಾರಿ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

Read More