Author: roovari

ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸಿರುವ ಡಾ. ವಿಜಯಶ್ರೀ ಸಬರದ ಇವರು 1957 ಫೆಬ್ರವರಿ 01ರಂದು ಬೀದರ್ ನಲ್ಲಿ ಗುಣವಂತ ರಾವ್ ಪಾಟೀಲ್ ಮತ್ತು ಸಂಗಮ್ಮನವರ ಪುತ್ರಿಯಾಗಿ ಜನಿಸಿದರು. ಕನ್ನಡದ ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಮಹಿಳಾ ಶೋಷಣೆಯ ಬಗ್ಗೆ ತಮ್ಮ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯಾಭಿಮಾನಿಗಳ ಚಿತ್ತದಲ್ಲಿ ಹೊಸದೊಂದು ಆಯಾಮ ಸೃಷ್ಟಿಸಿದ್ದಾರೆ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್ ನಲ್ಲಿ ಪಡೆದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ‘ಅನುಪಮಾ ನಿರಂಜನರ ಕಾದಂಬರಿಗಳು – ಒಂದು ಅಧ್ಯಯನ’ ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದರು. ಬೀದರಿನ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರವಾಚಕರಾಗಿ ಕಾರ್ಯ ನಿರ್ವಹಿಸಿದರು. ಸದ್ಯ ಇವರು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾಗಿ…

Read More

ಧಾರವಾಡ : ವರಕವಿ ಡಾ. ದ.ರಾ. ಬೇಂದ್ರೆಯವರ 129ನೆಯ ಜನ್ಮದಿನವಾದ ದಿನಾಂಕ 31 ಜನವರಿ 2025ರಂದು ಧಾರವಾಡದ ಕಡಪಾ ಮೈದಾನದಲ್ಲಿ ಇರುವ ಪುತ್ಥಳಿಗೆ (ಪುತ್ಥಳಿಯ ಕೆಳಗೆ ಅವರ ಚಿತಾಭಸ್ಮ ತುಂಬಿದ ಕಲಶವೂ ಇದೆ) ಧಾರವಾಡದ ಸಾಧನಕೇರಿ ಮತ್ತು ಬೇಂದ್ರೆ ಅಭಿಮಾನಿ ಬಳಗದ ವತಿಯಿಂದ ಮಾಲಾರ್ಪಣೆ ಮಾಡಿ ನುಡಿ ನಮನದ ಮೂಲಕ ಗೌರವ ಸಲ್ಲಿಸಲಾಯಿತು. ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ, ಧಾರವಾಡ ಮಹಾನಗರಪಾಲಿಕೆ ಸದಸ್ಯ ಸುರೇಶ ಬೇದ್ರೆ, ಶಂಕರ ಕುಂಬಿ, ಡಾ. ಹ.ವೆಂ. ಕಾಖಂಡಿಕಿ, ಮಲ್ಲಿಕಾರ್ಜುನ ಹಿರೇಮಠ ಮತ್ತು ರಾಜೀವ ಪಾಟೀಲ ಕುಲಕರ್ಣಿ ಮುಂತಾದವರು ಮಾತನಾಡಿ ಕೇವಲ ಧಾರವಾಡಕಷ್ಟೇ ಅಲ್ಲ, ಈ ನಾಡು, ಈ ರಾಷ್ಟ್ರ, ಹೊರ ರಾಷ್ಟ್ರಗಳೂ ಸೇರಿದಂತೆ ‘ವಿಶ್ವಕವಿ’ ಎನಿಸಿಕೊಂಡ ವರಕವಿಯ ಇಲ್ಲಿಯ ಪುತ್ಥಳಿ ತೀರ ಚಿಕ್ಕದಾಗಿದ್ದು, ಧಾರವಾಡದ ಸಾಂಸ್ಕೃತಿಕ ರಂಗದ ಮೇರು ವ್ಯಕ್ತಿ, ಭಾವಗೀತೆಗಳ ಚಕ್ರವರ್ತಿಗೆ ಸೂಕ್ತ ಸ್ಮಾರಕವಾಗುವಂತೆ ಮೂರ್ತಿಯನ್ನು ಇನ್ನಷ್ಟು ಎತ್ತರಗೊಳಿಸಿ ಈ ಪವಿತ್ರ ಸ್ಥಳವನ್ನು ಸೌಂದರ್ಯೀಕರಣಗೊಳಿಸಿ ಇಂತಹ ಜಾಗೆ ಆಕ್ರಮಿಸಿಕೊಂಡ ಅನೇಕ ಕಟೌಟ ಮತ್ತು ಬೋರ್ಡುಗಳನ್ನು…

Read More

ಲಿಂಗ ವ್ಯತ್ಯಾಸದ ಹೆಸರಿನಲ್ಲಿ ಸಮಾಜವು ಅನ್ಯಾಯ, ತಾರತಮ್ಯ ಹಾಗೂ ಅಸಮಾನ ಅವಕಾಶಗಳ ನೆಲೆವೀಡು ಆಗಬಾರದು ಅನ್ನುವುದು ಸ್ತ್ರೀವಾದಿ ಹೋರಾಟದ ಮುಖ್ಯ ಉದ್ದೇಶ. ಈ ಅಸಮಾನತೆಯ ಬೇರುಗಳನ್ನು ಕಿತ್ತೊಗೆದು ಹೊಸದೊಂದು ವ್ಯವಸ್ಥೆಯನ್ನು ಹುಟ್ಟು ಹಾಕುವ ಉದ್ದೇಶವನ್ನಿಟ್ಟುಕೊಂಡು ಕಳೆದ ಶತಮಾನದಿಂದೀಚೆಗೆ ಜಗತ್ತಿನ ಎಲ್ಲ ಮೂಲೆಗಳಲ್ಲೂ ಹೋರಾಟಗಳು ನಡೆದಿವೆ. ಸ್ತ್ರೀಪುರುಷರಾದಿಯಾಗಿ ಅನೇಕರು ಈ ಬಗ್ಗೆ ಚಿಂತನೆಗಳನ್ನು ಮಾಡಿದ್ದಾರೆ. ಲೇಖನಗಳನ್ನು ಬರೆದಿದ್ದಾರೆ. ಚರ್ಚೆಗಳನ್ನು ನಡೆಸಿದ್ದಾರೆ. ಇವುಗಳ ಹೊರತಾಗಿ ನಮ್ಮ ಜನಪದರು ಹೋರಾಟದ ಯಾವ ಅರಿವೂ ಇಲ್ಲದೆಯೇ ರಚಿಸಿದ ಮೌಖಿಕ ಸಾಹಿತ್ಯಗಳನ್ನೂ ಬೆಳಕಿಗೆ ತರುವ ಪ್ರಯತ್ನಗಳಾಗಿವೆ. ಅಲ್ಲದೆ ಸ್ತ್ರೀಯರಿಗೆ ಪ್ರಾಮುಖ್ಯ ಕೊಟ್ಟಿದ್ದ ಮಾತೃಮೂಲೀಯ ಪದ್ಧತಿಯ ಬಗ್ಗೆ ಮರು ಚಿಂತನೆಗಳಾಗಿವೆ. ಪಾಶ್ಚಾತ್ಯರಲ್ಲಿ ಆರಂಭವಾದ ಸ್ತ್ರೀವಾದಿ ಚಳುವಳಿಯು ಭಾರತದಲ್ಲೂ ತನ್ನ ನೆಲೆಗಳನ್ನು ಸ್ಥಾಪಿಸಿಕೊಂಡಾಗ ಸ್ತ್ರೀಯರ ಪರವಾಗಿ ದೇಶದಲ್ಲಿ ಒಂದು ಹೊಸ ಜಾಗೃತಿಯ ಅಲೆಯುಂಟಾದದ್ದು ಇಂದು ಇತಿಹಾಸ. ಇದರ ಪರಿಣಾಮವಾಗಿ ಸ್ತ್ರೀಯರ ಪರವಾಗಿ ಅವರ ರಕ್ಷಣೆಗೋಸ್ಕರ ಕಾನೂನುಗಳು ಹುಟ್ಟಿಕೊಂಡವು. ಅವರಿಗೆ ಹತ್ತಾರು ಬಗೆಯಲ್ಲಿ ಸೌಕರ್ಯ-ಸವಲತ್ತುಗಳಿಗಾಗಿ ಸರಕಾರವು ಅವಕಾಶಗಳನ್ನು ರೂಪಿಸಿತು. ಅವುಗಳ ಸದ್ವಿನಿಯೋಗಗಳ ಜತೆಗೇ…

Read More

ಕಾಸರಗೋಡು : ಕಾಸರಗೋಡು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದಲ್ಲಿ ದಿನಾಂಕ 02 ಫೆಬ್ರವರಿ 2025 ರಂದು ಅಪರಾಹ್ನ 1-00 ಗಂಟೆಗೆ ಕನ್ನಡ ಪುಸ್ತಕ ಪ್ರಾಧಿಕಾರದ ಬಹುನಿರೀಕ್ಷಿತ ‘ಮನೆಗೊಂದು ಗ್ರಂಥಾಲಯ’ ಲಕ್ಷ ಗ್ರಂಥಾಲಯಗಳ ಯೋಜನೆಯ ಪ್ರಚಾರ ಹಾಗೂ ಕರಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಗಡಿನಾಡು ಕಾಸರಗೋಡಿನಲ್ಲಿ ಈ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರದ ಅಧ್ಯಕ್ಷರಾದ ಡಾ. ಮಾನಸ ಇವರು ಕನ್ನಡ ಭವನ ಮತ್ತು ಕಾಸರಗೋಡಿನ ವಿವಿಧ ಸಂಸ್ಥೆಗಳನ್ನು ಸಂಪರ್ಕಿಸುವ ಉದ್ದೇಶವನ್ನು ಇಟ್ಟುಕೊಂಡು ಹಮ್ಮಿಕೊಂಡಿದ್ದಾರೆ. ಪ್ರಾಧಿಕಾರ ಅಧ್ಯಕ್ಷರಾದ ಡಾ. ಮಾನಸ ಲಕ್ಷ ಗ್ರಂಥಾಲಯ ಯೋಜನೆ, ಮನೆಗೊಂದು ಗ್ರಂಥಾಲಯ ರೂಪು ರೇಷೆ ವಿವರಿಸಲಿದ್ದಾರೆ, ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗೆ ಪುಸ್ತಕ ನೀಡಿ ಗಡಿನಾಡು ಕಾಸರಗೋಡಿನಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅಥಿತಿಯಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ,…

Read More

ರಂಗಭೂಮಿ ಉಡುಪಿಯ ವಾರ್ಷಿಕ ನಾಟಕ ಸ್ಪರ್ಧೆ, ಕರ್ನಾಟಕದ ಹಳೆಯ ಮತ್ತು ಇಂದಿಗೂ ಯಶಸ್ಸಿಯಾಗಿ ಮುನ್ನಡೆಯುತ್ತಿರುವ ಒಂದು ವಿದ್ಯಮಾನ. ಬಹುಶಃ ಸಾಂಪ್ರದಾಯಿಕ ಅಥವ ಪರದೆ ನಾಟಕಗಳ ಕಾಲದಿಂದ ಆರಂಭಗೊಂಡು ಮುಂದುವರಿಯುತ್ತ ಆಧುನಿಕ ರಂಗಭೂಮಿಯ ಇಂದಿನವರೆಗೂ ಸತತ ಆರ್ಕಷಣೆಯನ್ನು ಉಳಿಸಿಕೊಂಡಿರುವ ಸ್ಪರ್ಧೆ, ಸಹಜವಾಗಿ ಒಂದಿಷ್ಟು ಏರಿಳಿತಗಳ ನಡುವೆಯೂ. ಈ ನಿಟ್ಟಿನಲ್ಲಿ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಾಟಕಗಳೆಂದರೆ ಅವುಗಳಿಗೆ ಒಂದು ಹಂತದ ವಿಶೇಷ ಸ್ಥಾನಮಾನ ಇದ್ದೇ ಇದೆ, ನೀರ್ದಿಷ್ಟ ಮಾನದಂಡಗಳ ಜತೆಗೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರು ರಂಗರಥ ಟ್ರಸ್ಟಿನ ‘ಧರ್ಮನಟಿ’ ನಾಟಕ ಪೌರಾಣಿಕ ಮತ್ತು ಐತಿಹಾಸಿಕ ನೆಲೆಗಳೊಂದಿಗೆ ಆಧುನಿಕ ರಂಗಭೂಮಿ ಆಧಾರಿತ ಪ್ರಯೋಗದ ಮೂಲಕ, ಆಧುನಿಕ ಜೀವನದ ಅದರಲ್ಲೂ ವೈವಾಹಿಕ ಬದುಕಿನ ಹಲವು ಮಜಲುಗಳನ್ನು ತೆರೆದಿಟ್ಟಿದೆ ಹೆಚ್ಚು ಕಡಿಮೆ ಉತ್ತಮ ಎನ್ನಬಹುದಾದ ರೀತಿಯಲ್ಲಿ. ರಾಜಮನೆತನ ಅವುಗಳ ನೀತಿ ನಿಯಮ ಕಟ್ಟುಪಾಡುಗಳ ಆಧಾರದ ಅರಮನೆಯೊಳಗಿನ ಜೀವನದ ವಿಭಿನ್ನ ಮುಖಗಳು, ಸಮಾಜದ ಬಡತನ, ಗಂಡು ಹೆಣ್ಣಿನ ಪ್ರೇಮ,…

Read More

ಕುಂದಾಪುರ : ಎಂ. ಎಂ. ಹೆಗ್ಡೆ ಪ್ರತಿಷ್ಠಾನ ಕುಂದಾಪುರ ಕೊಡಮಾಡುವ 2025ರ ಸಾಲಿನ ಎಂ. ಎಂ. ಹೆಗ್ಡೆ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಕಲಾವಿದರಾದ ಶ್ರೀ ಶ್ರೀನಿವಾಸ ದೇವಾಡಿಗ ಇವರು ಆಯ್ಕೆಯಾಗಿರುತ್ತಾರೆ. ಈ ಪ್ರಶಸ್ತಿಯು ರೂ 10,000/- ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ದಿನಾಂಕ 08 ಫೆಬ್ರವರಿ 2025 ರಂದು ನಡೆಯಲಿರುವ ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ವಾರ್ಷಿಕೋತ್ಸವದಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ. ಕುಂದಾಪುರ ತಾಲೂಕಿನ ನಾಗೂರಿನ ಕಬ್ಬಾಗಿಲಲ್ಲಿ ಶ್ರೀ ತಮ್ಮ ದೇವಾಡಿಗ ಮತ್ತು ಶ್ರೀಮತಿ ಕಾವೇರಿ ದೇವಾಡಿಗ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀನಿವಾಸ ದೇವಾಡಿಗ ಬಾಲ್ಯದಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಚಂಡೆ ಮದ್ದಲೆಯ ನಾದಕ್ಕೆ ಮನಸೋತು ಅಲ್ಲಿಂದಲೇ ತಮ್ಮನ್ನು ಯಕ್ಷಗಾನದಲ್ಲಿ ತೊಡಗಿಸಿಕೊಂಡರು. ಉಡುಪಿ ಯಕ್ಷಗಾನ ಕೇಂದ್ರದಲ್ಲಿ 1982ರಲ್ಲಿ ಕೋಟ ಶಿವರಾಮ ಕಾರಂತರ ನೇತೃತ್ವದಲ್ಲಿ ಹೇರಂಜಾಲು ವೆಂಕಟರಮಣ ಗಾಣಿಗರ ಮಾರ್ಗದರ್ಶನದಲ್ಲಿ ಯಕ್ಷಗಾನದ ಹೆಜ್ಜೆ ಅಭ್ಯಾಸ ಮಾಡಿ, ಯಶಸ್ಸನ್ನು ಸಾಧಿಸಿ ಅಪ್ರತಿಮ ಛಲಗಾರನಾಗಿ…

Read More

ಕೋಟ : ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ-6 ಕಾರ್ಯಕ್ರಮದ ಅಂಗವಾಗಿ ‘ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ’, ‘ಹಂದೆ ಉಡುಪ ಪ್ರಶಸ್ತಿ ಪ್ರದಾನ’ ಸಮಾರಂಭವು ದಿನಾಂಕ 31 ಜನವರಿ 2025 ರಂದು ಕೋಟ ಪಟೇಲರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಮಾತನಾಡಿ “ಇಂದಿನ ಕಾಲ ಘಟ್ಟದಲ್ಲಿ ಯುವ ಜನತೆ ಕಲೆ ಸಾಹಿತ್ಯದತ್ತ ಆಸಕ್ತಿವಹಿಸಬೇಕಾದ ಅಗತ್ಯವಿದೆ. ಮಕ್ಕಳಲ್ಲಿ ಬಿತ್ತಿದ ಬೀಜ ಮುಂದೆ ಒಳ್ಳೆಯ ಬೆಳೆಯಾಗಿ ಬೆಳೆಯಲಿದೆ. ಸಾಲಿಗ್ರಾಮ ಮಕ್ಕಳ ಮೇಳ ಸುಮಾರು ಐವತ್ತು ವರ್ಷಗಳಿಂದ ಕೋಟ ಪರಿಸರದ ಮಕ್ಕಳಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿರುವುದು ಅಭಿನಂದನೀಯ. ಈ ಎರಡು ದಿನಗಳ ಕಲೋತ್ಸವ ಯಶಸ್ವಿಯಾಗಲಿ” ಎಂದು ಶುಭಯಹಾರೈಸಿದರು. ರಾಷ್ಟ್ರೀಯ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರಿಗೆ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಲ್ಲೋರ್ವರಾದ ಎಚ್. ಶ್ರೀಧರ ಹಂದೆಯವರ ಹೆಸರಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಕ್ಕಳ ಮೇಳದ ಅಧ್ಯಕ್ಷರಾದ ಬಲರಾಮ ಕಲ್ಕೂರ ಇವರ ಅಧ್ಯಕ್ಷತೆಯಲ್ಲಿ…

Read More

ಮಂಗಳೂರು : ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತವನ್ನು ಯುವ ಜನತೆಯಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ಸಂಸ್ಥೆಯು ದಿನಾಂಕ 08 ಮತ್ತು 09 ಫೆಬ್ರವರಿ 2025ರಂದು ‘ಯುವ ಮಹೋತ್ಸವ 2025’ವನ್ನು ಆಯೋಜಿಸಿದೆ. ಈ ಯುವ ಮಹೋತ್ಸವದಲ್ಲಿ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆ ಹಾಗೂ ವಿಜೇತರಿಗೆ ಪುರಸ್ಕಾರ ಸಮಾರಂಭವನ್ನು ಮಂಗಳೂರಿನ ಡಾನ್ ಭಾಸ್ಕೋ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಇದೊಂದು ರಾಷ್ಟ್ರಮಟ್ಟದ ಸ್ಪರ್ಧೆಯಾಗಿದ್ದು, ಕೊನೆಯ ಸುತ್ತಿನಲ್ಲಿ 18ರಿಂದ 30 ವರ್ಷದೊಳಗಿನ 24 ಯುವ ಸಂಗೀತಗಾರರು ಭಾಗವಹಿಸುತ್ತಿದ್ದಾರೆ. ನೋಂದಾಯಿತ ಸ್ಪರ್ಧಿಗಳನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಿ ಕೊನೆಯ ಸುತ್ತಿನ ಸ್ಪರ್ಧೆಗೆ 24 ಮಂದಿ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ವಾದ್ಯ ವಾದನ (ತಬ್ಲಾ ಮತ್ತು ಪಕವಾಜ್ ಹೊರತುಪಡಿಸಿ) ಹಾಗೂ ಹಾಡುಗಾರಿಕೆ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ಇದ್ದು, ಪ್ರಥಮ ಸ್ಥಾನಿಗೆ ರೂ.60,000/-, ದ್ವಿತೀಯ ಸ್ಥಾನಿಗೆ ರೂ.40,000/- ಹಾಗೂ ತೃತೀಯ ಸ್ಥಾನಿಗೆ ರೂ.20,000/- ನಗದು ಬಹುಮಾನ ನೀಡಲಾಗುವುದು. ಇದಲ್ಲದೆ ಪ್ರಥಮ ಸ್ಥಾನ ವಿಜೇತರಿಗೆ ಸ್ವರ ಭಾರತಿ ಬಿರುದು ಪ್ರದಾನ ಮಾಡಲಾಗುವುದು. ಅಂತಾರಾಷ್ಟ್ರೀಯ ಮಟ್ಟದ…

Read More

ನಂಜನಗೂಡು : ನಂಜನಗೂಡಿನ ಶಂಕರ ಮಠದಲ್ಲಿ ಶ್ರೀ ಗುರುಚರಿತ್ರೆ ಪಾರಾಯಣ ಸಪ್ತಾಹ ದಿನಾಂಕ 02 ಫೆಬ್ರವರಿ 2025 ರಿಂದ 09 ಫೆಬ್ರವರಿ 2025ರ ವರೆಗೆ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ. ದಿನಾಂಕ 02 ಫೆಬ್ರವರಿಯಂದು ವಿದ್ವಾನ್ ನಾಗಚೇತನ್ ಇವರಿಂದ ‘ಶ್ರೀ ಮದ್ವಾಲ್ಮೀಕಿ ರಾಮಾಯಣ’ದ ಸಂಗೀತ ಪ್ರವಚನ ನಡೆಯಲಿದ್ದು, ಫೆಬ್ರವರಿ 3 ರಂದು ವಿದ್ವಾನ್ ಎಂ. ಎಸ್. ದೀಪಕ್ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಲಿದೆ. ಫೆಬ್ರವರಿ 4ರಂದು ವಿದುಷಿ ಶ್ರೀಮತಿ ರಕ್ಷಿತಾ ವಿಕ್ರಂ ಸಿಂಹ ಇವರಿಂದ ತಂಜಾವೂರಿನ ಶೈಲಿಯ ಭರತನಾಟ್ಯ ನಡೆಯಲಿದ್ದು, ಫೆಬ್ರವರಿ 5ರಂದು ಕುಮಾರಿ ಅಮೃತವರ್ಷಿಣಿ ಭಾರ್ಗವ ಹಾಗೂ ವಿಶ್ವೇಶ್ವರ ಭಾರ್ಗವ ಇವರಿಂದ ಹಾಡುಗಾರಿಕೆ, ಫೆಬ್ರವರಿ 6ರಂದು ಕುಮಾರಿ ಎಮ್. ಎಸ್. ಕೀರ್ತನ ಇವರಿಂದ ಹಾಡುಗಾರಿಕೆ, ಫೆಬ್ರವರಿ 07 ರಂದು ವಿದ್ವಾನ್ ಶ್ರೀ ರಾಮಶಾಸ್ತ್ರೀ ಮತ್ತು ತಂಡದವರಿಂದ ಹಾಡುಗಾರಿಕೆ ಹಾಗೂ ದಿನಾಂಕ 08 ಫೆಬ್ರವರಿ 2025ರಂದು ವಿದ್ವಾನ್ ಅಂಬಾಪ್ರಸಾದ್ ಇವರಿಂದ ವಯಲಿನ್ ವಾದನ ನಡೆಯಲಿದೆ.

Read More

ಉಡುಪಿ : ರಾಗ ಧನ ಉಡುಪಿ (ರಿ) ಇವರು ನಡೆಸುವ 37ನೆಯ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿಗಳ ಸಂಗೀತೋತ್ಸವವನ್ನು ದಿನಾಂಕ 07, 08 ಮತ್ತು 09 ಫೆಬ್ರವರಿ 2025ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ದಿನಾಂಕ 07 ಫೆಬ್ರವರಿ 2025 ಶುಕ್ರವಾರ ಸಂಜೆ 5-00 ಗಂಟೆಗೆ ಖ್ಯಾತ ನಾಗಸ್ವರ ವಿದ್ವಾಂಸರ ಶ್ರೀ ನಾಗೇಶ್ ಬಪ್ಪನಾಡು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ, ಎಂ.ಜಿ.ಎಂ. ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ವಿದ್ವಾನ್ ಯು. ರಾಘವೇಂದ್ರ ರಾವ್ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಡಾ. ಶ್ರೀಕಿರಣ ಹೆಬ್ಬಾರ್ ವಹಿಸಲಿದ್ದಾರೆ. ಭಾಷಾ ವಿಜ್ಞಾನಾದಿ ನಾನಾ ಕ್ಷೇತ್ರಗಳ ವಿದ್ವಾಂಸರೂ, ಸಂಗೀತ ಪ್ರಿಯರೂ ಆದ ಡಾ. ಸುಶೀಲಾ ಉಪಾಧ್ಯಾಯ ಇವರ ಸಂಸ್ಮರಣೆಯಲ್ಲಿ ಇವರ ಪತಿ ಡಾಕ್ಟರ್ ಯು.ಪಿ. ಉಪಾಧ್ಯಾಯ ಇವರು ಸ್ಥಾಪಿಸಿದ ‘ರಾಗ ಧನ ಪಲ್ಲವಿ’ ಪ್ರಶಸ್ತಿಯನ್ನು ಸ್ಥಳೀಯ ಪ್ರತಿಭಾವಂತ…

Read More