Author: roovari

ಮಂಗಳೂರು : ಸಂಕೇತ ಮಂಗಳೂರು ಮತ್ತು ಸಿಂಗಾರ ಸುರತ್ಕಲ್ ಸಹಯೋಗದಲ್ಲಿ ಮಾಧವ ತಿಂಗಳಾಯ ಜನ್ಮ ದಿನದ ನೆನಪು ಕಾರ್ಯಕ್ರಮ ದಿನಾಂಕ 03 ಜುಲೈ 2025ರಂದು ಮಂಗಳೂರಿನ ಹೊಯಿಗೆಬಜಾರಿನಲ್ಲಿರುವ ಇಂದಿರಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾದ ತಾರನಾಥ ಗಟ್ಟಿ ಮಾತನಾಡಿ “ಜನಸಾಮಾನ್ಯರಿಗೆ ಸಾಮಾಜಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಟಕ ಕಲೆಯನ್ನು ಪರಿಣಾಮಕಾರಿಯಾಗಿ ಬಳಸಿದ ಮಾಧವ ತಿಂಗಳಾಯರು ತುಳುನಾಡಿನ ಮೊದಲ ನಾಟಕಗಾರರಾಗಿದ್ದಾರೆ. ಅವರ ‘ಜನಮರ್ಲ್’ ನಾಟಕವು ತುಳು ಭಾಷೆಯ ಮೊದಲ ಪ್ರಕಟಿತ ನಾಟಕವಾಗಿದ್ದು ಐತಿಹಾಸಿಕ ಮಹತ್ವವನ್ನು ಹೊಂದಿದೆ. ಯುವ ಜನತೆ ಯಲ್ಲಿ ತುಳು ಸಾಹಿತ್ಯದ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತುಳುನಾಡಿನ ಹಿರಿಯ ಸಾಧಕರನ್ನು ನೆನಪಿಸುವ ಕಾರ್ಯಕ್ರಮ ನಿರಂತರವಾಗಿ ಮಾಡಬೇಕು” ಎಂದರು. ಸಾಹಿತಿ ಪ್ರೇಮಚಂದ್ರ ಕೆ. ತಿಂಗಳಾಯ ಮಾತನಾಡಿ “ಹಿರಿಯ ಸಮಾಜ ಸುಧಾರಕ ಮೋಹನಪ್ಪ ತಿಂಗಳಾಯ, ಕೃಷ್ಣಪ್ಪ ತಿಂಗಳಾಯ ಮತ್ತು ಮಾಧವ ತಿಂಗಳಾಯರು ಶ್ರೀ ಜ್ಞಾನೋದಯ ಸಮಾಜದ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಮಾಡಿದ ಕಾರ್ಯಗಳು ಅನನ್ಯವಾದವುಗಳು”…

Read More

ಬೆಂಗಳೂರು : ರಾಮಕೃಷ್ಣ ಮಠ, ಬುಲ್ ಟೆಂಪುಲ್ ರಸ್ತೆ, ಬಸವನಗುಡಿ ಬೆಂಗಳೂರು ಇವರು ಪ್ರಸ್ತುತ ಪಡಿಸುವ ‘ರಾಮಕೃಷ್ಣ ಸಂಗೀತ ಸೌರಭ’ ಕಾರ್ಯಕ್ರಮವನ್ನು ದಿನಾಂಕ 11, 12 ಮತ್ತು 13 ಜುಲೈ 2025ರಂದು ಪ್ರತಿ ದಿನ ಸಂಜೆ 6-00 ಗಂಟೆಗೆ ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ದಿನಾಂಕ 11 ಜುಲೈ 2025ರಂದು ಪಂಡಿತ್ ವೆಂಕಟೇಶ್ ಕುಮಾರ ಇವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನಕ್ಕೆ ಪಂಡಿತ್ ರಘುನಾಥ ನಾಕೋಡ್ ಇವರು ತಬಲಾ ಮತ್ತು ಪಂಡಿತ್ ವ್ಯಾಸಮೂರ್ತಿ ಕಟ್ಟಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ದಿನಾಂಕ 12 ಜುಲೈ 2025ರಂದು ವಿದ್ವಾನ್ ಡಿ. ಬಾಲಕೃಷ್ಣ ಇವರ ಕರ್ಣಾಟಕ ಸಂಗೀತ ವೀಣಾ ವಾದನಕ್ಕೆ ವಿದ್ವಾನ್ ವಿ. ವಂಶಿಧರ ಕೊಳಲು, ವಿದ್ವಾನ್ ಬಿ.ಎಸ್. ಪ್ರಶಾಂತ ಮೃದಂಗಂ ಹಾಗೂ ವಿದ್ವಾನ್ ಶಮಿತ್ ಗೌಡ ಘಟಂನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 13 ಜುಲೈ 2025ರಂದು ಕುಮಾರ್ ಮೋದಕ ಮತ್ತು ವೃಂದದವರಿಂದ ಗಾಯನ, ಕುಮಾರ್ ಪ್ರದ್ಯುಮ್ನ ಕರ್ಪೂರ್ ತಬಲಾ ಸೋಲೋ ಮತ್ತು…

Read More

ಸುರತ್ಕಲ್ : ಸುರತ್ಕಲ್ ಇಲ್ಲಿನ ಗೋವಿಂದದಾಸ ಕಾಲೇಜಿನ ಪಿ. ಯು. ಸಿ. ವಿಭಾಗದ ವತಿಯಿಂದ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 05 ಜುಲೈ 2025ನೇ ಶನಿವಾರದಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ “ಮರಕ್ಕೆ ಬೇರಿನಲ್ಲಿ ಆ ಜೀವ ಶಕ್ತಿ ಹೇಗೋ ಹಾಗೆಯೇ ಮನುಷ್ಯರ ಧನಾತ್ಮಕ ಆಲೋಚನಾ ಶಕ್ತಿಯಲ್ಲಿ ಜೀವಶಕ್ತಿ ಇದೆ. ಸಮುದ್ರದ ಆಳದಲ್ಲಿ ಮುತ್ತುರತ್ನಗಳಿರುವಂತೆ ಸುಪ್ತ ಮನಸ್ಸಿನಲ್ಲಿ ಅದಮ್ಯ ಶಕ್ತಿ ಇದೆ. ಅದನ್ನರಿತು ಉತ್ಸಾಹ ತುಂಬಿದ ಜೀವನದೊಂದಿಗೆ ಸಾಹಿತ್ಯಾಭಿರುಚಿಯನ್ನು ಬೆಳೆಸಿರಿ. ಓದುವ ಹವ್ಯಾಸದೊಂದಿಗೆ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ, ಶ್ರೇಯಸ್ಸಾಗಲಿ” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀ ಪಿ. ಮಾತನಾಡಿ “ಸಾಹಿತ್ಯ-ಬದುಕಿನ ಉಸಿರು, ಅದ್ದರಿಂದ ಕವಿ ಹೃದಯವುಳ್ಳ ವಿದ್ಯಾರ್ಥಿಗಳೇ, ತಮ್ಮ ಬರವಣಿಗೆಯನ್ನು ಸಾಹಿತ್ಯ ಸಂಘದ ಮೂಲಕ ಪ್ರಾರಂಭಿಸಿ ಯಶಸ್ಸನ್ನು ಗಳಿಸಿ” ಎಂದು ನುಡಿದರು. ಉಪಪ್ರಾಂಶುಪಾಲೆ ಸುನೀತಾ ಕೆ., ವಿದ್ಯಾರ್ಥಿ ಕ್ಷೇಮಪಾಲ ವೆಂಕಟರಮಣ, ಸಾಹಿತ್ಯ ಸಂಘಸ ಸಂಯೋಜಕಿ ಜಯಂತಿ ಅಮೀನ್, ವಿದ್ಯಾರ್ಥಿನಿ ಕಾರ್ಯದರ್ಶಿ ಶರಣ್ಯ…

Read More

ನಗರಗಳ ಧಾವಂತದಿಂದ ದೂರವಿರುವ ಪುಟ್ಟ ಮಲೆನಾಡಿನ ಆ ಹಳ್ಳಿಯಲ್ಲಿ ಇರುವುದು ಕೇವಲ ಕೆಲವು ಮನೆಗಳು. ಜನಸಂಖ್ಯೆ ವಿರಳವಾದರೂ, ಇಲ್ಲಿನ ಜನರ ಸಾಂಸ್ಕೃತಿಕ ಚಟುವಟಿಕೆಗಳತ್ತ ಮನಸ್ಸು ಯಾವಾಗಲೂ ಹರಿಯುತ್ತಿರುವುದು ವಿಶಿಷ್ಟವಾಗಿದೆ. ಕೃಷಿಯೇ ಜೀವಾವಲಂಬನೆಯಾದ ಈ ಹಳ್ಳಿಯ ಜನರಿಗೆ ಯಕ್ಷಗಾನವೆಂದರೆ ಅತೀವಾಸಕ್ತಿ. ಅದಿಲ್ಲದ ಬದುಕನ್ನು ಊಹಿಸಲು ಸಾಧ್ಯವಿಲ್ಲವೆಂದರೆ ಅತಿಶಯವಲ್ಲ. ಇಂತಹ ಮನಸ್ಥಿತಿಯಲ್ಲಿ ಮಲೆನಾಡಿಗೆ ಅನ್ವಯವಾಗಿ ವರ್ಷದಲ್ಲಿ ನಾಲ್ಕು ತಿಂಗಳುಗಳ ಕಾಲ ಸುರಿಯುವ ನಿರಂತರ ಮಳೆ, ಇವರನ್ನು ಪ್ರೀತಿಯ ಕಲಾ ಚಟುವಟಿಗಳಿಂದ ದೂರ ಇಡುತ್ತದೆ. ಆ ಸಮಯದಲ್ಲಿ ಪರ್ಯಾಯವಾಗಿ ಮನೆಯಲ್ಲಿ ನಡೆಸಬಹುದಾದ ಕಲಾ ಚಟುವಟಿಕೆಗಳತ್ತ ಇವರ ಮುಖವಾಗುವುದು ಸಹಜ. ಈ ಹಿನ್ನಲೆಯಲ್ಲಿ ಯಕ್ಷಗಾನದ ಇನ್ನೊಂದು ಶಾಖೆಯಾದ ತಾಳಮದ್ದಲೆ ಮನೆಯೊಳಗಡೆ ಕಥಾಶ್ರವಣ ರೂಪದಲ್ಲಿ ಆರಂಭವಾಗಿರಬಹುದು ಎಂದು ಊಹಿಸಬಹುದು. ಅದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮದಲ್ಲಿ ಇರುವ ಐತುಮನೆ ಪುಟ್ಟ ಕುಟುಂಬ. ಇಲ್ಲಿ ನಡೆಯುವ ಮನೆಯ ತಾಳಮದ್ದಲೆಗೆ ಭವ್ಯ ಇತಿಹಾಸವಿದೆ. ಹಲವು ದಶಕಗಳನ್ನು ದಾಟಿ ಈ ತಾಳಮದ್ದಲೆಯು ಸುಮಾರು ಎರಡು ಶತಮಾನಗಳಿಂದ ಪ್ರತಿ ವರ್ಷ ಆಷಾಢ…

Read More

ಮಡಿಕೇರಿ : ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಮೂಕೊಂಡ ನಿತಿನ್ ಕುಶಾಲಪ್ಪ ಇವರನ್ನು ಕೊಡಗು ಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಸಾಲು ಮರದ ತಿಮ್ಮಕ್ಕ ಪಾರ್ಕ್ ಸಮೀಪದ ಖಾಸಗಿ ಕೆಫೆ ಸಭಾಂಗಣದಲ್ಲಿ ದಿನಾಂಕ 04 ಜುಲೈ 2025ರಂದು ನಡೆದ ಕಾರ್ಯಕ್ರಮದಲ್ಲಿ ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ಎಂ.ಎ. ರುಬೀನಾ ಹಾಗೂ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮೂಕೊಂಡ ನಿತಿನ್ ಕುಶಾಲಪ್ಪ ಅವರು, “ಮಕ್ಕಳಿಗಾಗಿ ದಕ್ಷಿಣ ಜನಪದ ಕತೆಗಳ ಕುರಿತು ಬರೆದ ಪಫಿನ್ ಬುಕ್ಸ್ ಪ್ರಕಟಿತ “ನೌತ್ ಇಂಡಿಯನ್ ಮಿಥ್ಸ್ ಅಂಡ್ ಫೇಬಲ್ಸ್ ರಿಟೋಲ್ಡ್’ ಇಂಗ್ಲೀಷ್ ಕೃತಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ. ಕರ್ನಾಟಕದಿಂದ ಮೂರು ಹೆಸರು ಬಂದಿದ್ದು, ಕನ್ನಡ ಸಾಹಿತ್ಯದಲ್ಲಿ ಇಬ್ಬರು ಹಾಗೂ ಇಂಗ್ಲೀಷ್ ಸಾಹಿತ್ಯದಲ್ಲಿ ತನಗೆ ಲಭಿಸಿರುವುದಾಗಿ ತಿಳಿಸಿದರು.…

Read More

ದಿನಾಂಕ 22.6. 2025 ಭಾನುವಾರದಂದು ಉಡುಪಿಯ ಎಂ.ಜಿ.ಎಂ.ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗ ಧನ ಸಂಸ್ಥೆಯ 36ನೆಯ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು. ತದನಂತರ ರಾಗ ಧನ ಸಂಸ್ಥೆಯು ಹಮ್ಮಿಕೊಂಡಿರುವ ರಾಗರತ್ನಮಾಲಿಕೆ ಸಂಗೀತ ಸರಣಿಯ 38ನೆಯ ಕಾರ್ಯಕ್ರಮ ನಡೆಯಿತು. ಪ್ರಧಾನ ಕಛೇರಿಯ ಪೂರ್ವದಲ್ಲಿ ಶ್ರೀಮತಿ ಶ್ರುತಿ ಗುರುಪ್ರಸಾದ್ ಅವರು “ಪೂರ್ಣಮದ: ಪೂರ್ಣಮಿದಂ” ಪ್ರಾರ್ಥನೆಯನ್ನು ‘ಭಟಿಯಾರ್ ಹಾಗೂ ಕಲಾವತಿ’ ರಾಗಗಳಲ್ಲಿ ಅತ್ಯಂತ ಮಧುರವಾಗಿ ಹಾಡಿ ಮುಂದಿನ ಗಾಯನಕ್ಕೆ ಶುಭ ಕೋರಿದರು. ಕಛೇರಿಯನ್ನು ನೀಡಿದವರು ಚೆನ್ನೈನ ಶ್ರೀ ವಿವೇಕ್ ಸದಾಶಿವಂ. ನಗುಮುಖ, ಗತ್ತಿನಿಂದ ಕೂಡಿದ ಅಂತೆಯೇ ಮೂರು ಕಾಲಗಳಲ್ಲಿ ಸಂಚರಿಸಬಲ್ಲ ಶಾರೀರ. ಉತ್ತಮವಾದ ಧ್ವನಿ ಸಂಸ್ಕಾರ! ಹಿಂದಿನ ಪರಂಪರೆಯ ಕೊಡುಗೆಗಳನ್ನು ಹಾಗೆಯೇ ಸಾಂಪ್ರದಾಯಿಕ ಶೈಲಿಯಲ್ಲಿ ಸರಳವಾಗಿ ನೀಡಲಾದ ಕಾರ್ಯಕ್ರಮ ಇದಾಗಿತ್ತು. ಭೈರವಿ ಅಟ್ಟತಾಳ ವರ್ಣದೊಂದಿಗೆ ಗಂಭೀರವಾಗಿ ಪ್ರಾರಂಭಗೊಂಡ ಕಛೇರಿ ಕೊನೆಯವರೆಗೂ ಅದೇ ಬಿಗುತನವನ್ನು ಕಾದುಕೊಂಡಿತು. ಸೌರಾಷ್ಟ್ರ( ಎನ್ನಾಡು) ಸಾಮ( ಅನ್ನಪೂರ್ಣೆ)ಧವಳಾಂಬರಿ (ಶೃಂಗಾರಮಿರ) ಕುಂತಲವರಾಳಿ (ಭೋಗಿಂದ್ರಶಾಹಿನಂ) ಬೃಂದಾವನಿ (ಬೃಂದಾವನವೇ ಮಂದಿರ) ರಾಗಗಳ ಪ್ರಸ್ತುತಿಗಳು ಗಾಯಕರ ಮನೋಧರ್ಮವನ್ನು ಬಿಂಬಿಸುವ…

Read More

124 ಪುಟಗಳ ಈ ಕೃತಿಯಲ್ಲಿ ಮೂರು ಪ್ರತಿಭೆಗಳು ಮುಪ್ಪುರಿಗೊಂಡಿವೆ : 1. ಮಲೆಯಾಳದ ಸುಪ್ರಸಿದ್ಧ ಕಥೆಗಾರ ಎಂ. ಮುಕುಂದನ್, 2. ತಮ್ಮ ಚಲನಚಿತ್ರ ನಿರ್ದೇಶನ, ಪತ್ರಿಕೋದ್ಯಮ ಮತ್ತು ಬರಹಗಳ ಮೂಲಕ ಸಾಕಷ್ಟು ಪ್ರಸಿದ್ಧಿಗೆ ಬಂದ ಇ.ಎಂ.ಅಶ್ರಫ್, 3. ಇಪ್ಪತ್ತಕ್ಕೂ ಹೆಚ್ಚು ಮಲೆಯಾಳದ ಒಳ್ಳೆಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕೆ. ಪ್ರಭಾಕರನ್. ‘ಯಮುನಾ ನದಿಯ ತೀರಗಳಲ್ಲಿ’ ಎಂಬ ಈ ಕೃತಿ ಎಂ. ಮುಕುಂದನ್ ಇವರು ಕೆಲವೊಮ್ಮೆ ತಮ್ಮ ಬಿಡುಬೀಸಾದ ನಿರೂಪಣಾ ಶೈಲಿಯಿಂದ ಓದುಗರನ್ನು ಕೆರಳಿಸಿದ ಕಾದಂಬರಿಗಳಲ್ಲಿ ಪ್ರಸ್ತಾಪಿಸಲ್ಪಟ್ಟ ವಿಚಾರಗಳ ಬಗ್ಗೆ ಇದೆ. ಇಲ್ಲಿ ಮುಖ್ಯವಾಗಿ ಚರ್ಚಿಸಲ್ಪಟ್ಟ ಕೆಲವು ಕೃತಿಗಳು ಕನ್ನಡಕ್ಕೆ ಬಂದಿಲ್ಲದಿರುವುದು ಒಂದು ಸಣ್ಣ ಕೊರತೆಯೆನ್ನಿಸಿದರೂ ಈಗಾಗಲೇ ಕನ್ನಡಕ್ಕೆ ಬಂದಿರುವ ಅವರ ಕಾದಂಬರಿಗಳಾದ ‘ಮಯ್ಯಳಿ ನದಿಯ ತೀರದಲ್ಲಿ’, ‘ದೇವರ ವಿಕರಾಳಗಳು’ ಮತ್ತು ಅನೇಕ ಸಣ್ಣ ಕಥೆಗಳ ಮೂಲಕ ಅವರು ಕನ್ನಡದ ಓದುಗರಿಗೆ ಸಾಕಷ್ಟು ಪರಿಚಿತರಾಗಿದ್ದಾರೆ ಅನ್ನುವ ಸಮಾಧಾನವೂ ಇದೆ. ಅಶ್ರಫ್ ಒಳ್ಳೆಯ ಸೃಜನಶೀಲ ಚಿಂತಕರು. ತಮ್ಮ ಸಿನಿಮಾಗಳಿಗೆ ಸ್ವತಃ ಅವರೇ ಚಿತ್ರಕಥೆಗಳನ್ನು ಬರೆಯುತ್ತಾರೆ.…

Read More

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ʼಕಾವ್ಯಾಂ ವ್ಹಾಳೊ-4ʼ ಶೀರ್ಷಿಕೆಯಡಿ ಕವಿಗೋಷ್ಟಿಯು ದಿನಾಂಕ 05 ಜುಲೈ 2025ರಂದು ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮದ ಮೊದಲು ಹಿರಿಯ ಬರಹಗಾರರಾದ ಶ್ರೀ ಎಡ್ವಿನ್ ನೆಟ್ಟೊ (ಎಡಿ ನೆಟ್ಟೊ)ರವರು ಅಸ್ವಸ್ಥರಿರುವ ಕಾರಣ, ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಅರುಣ್ ಜಿ. ಶೇಟ್ ಮಾತನಾಡಿ “ವಿವಿಧ ಪ್ರಕಾರಗಳಿರುವ ಕೊಂಕಣಿ ಭಾಷೆಯು, ವಿವಿಧ ವೈವಿಧ್ಯತೆಗಳನ್ನು ಹೊಂದಿದೆ. ಅಕಾಡೆಮಿಯ ಪ್ರಶಸ್ತಿ ಗಳಿಸುವುದು ಜೀವನದ ಅತೀ ದೊಡ್ಡ ಸಾಧನೆ. ಅಕಾಡೆಮಿಯು ಸ್ವಂತ ಕಟ್ಟಡವನ್ನು ಹೊಂದಲಿ ಎಂದು ಆಶಿಸುತ್ತೇನೆ” ಎಂದರು. ಪ್ರಮುಖ ಭಾಷಣಕಾರರಾದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ವೆಂಕಟೇಶ್ ನಾಯಕ್ ಇವರು ಸಾಹಿತ್ಯ, ಕವಿತೆ ಹಾಗೂ ಅಕಾಡೆಮಿ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀಮತಿ ಫೆಲ್ಸಿ ಲೋಬೊ, ದೆರೆಬೈಲ್ ಇವರ…

Read More

ಬೆಳಗಾವಿ : ರಂಗಸಂಪದ ಇದರ ಆಶ್ರಯದಲ್ಲಿ ಕೋನವಾಳ ಬೀದಿಯ ಲೋಕಮಾನ್ಯ ರಂಗಮಂದಿರದಲ್ಲಿ ದಿನಾಂಕ 05 ಜುಲೈ 2025ರಂದು ಪ್ರದರ್ಶನಗೊಂಡ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಜನಮನಸೂರೆಗೊಂಡಿತು. ಚಲನಚಿತ್ರಗಳಲ್ಲಿ ಅಭಿನಯಿಸಿ, ನಾಡಿನ ಜನರ ಮನ ಗೆದ್ದಿರುವ ಉಮಾಶ್ರೀ ನಾಟಕದಲ್ಲಿ ಶರ್ಮಿಷ್ಠೆಯಾಗಿ ಕಾಣಿಸಿಕೊಂಡು ಅದ್ಭುತ ಅಭಿನಯ ನೀಡಿದರು. ಮೂಲ ಮರಾಠಿಯ ವಿ.ಸ. ಖಾಂಡೇಕರ ಇವರ ‘ಯಯಾತಿ’ ಕಾದಂಬರಿಯನ್ನು ಕನ್ನಡಕ್ಕೆ ವಿ.ಎಂ. ಇನಾಮದಾರ ಅನುವಾದಿಸಿದ್ದಾರೆ. ಇದೇ ಆಧಾರದ ಮೇಲೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ ಕಾರ್ನಾಡ ರಚಿಸಿರುವ ‘ಯಯಾತಿ’ ನಾಟಕದಲ್ಲಿ ಬರುವ ಒಂದು ಪ್ರಮುಖ ಪಾತ್ರವೇ ‘ಶರ್ಮಿಷ್ಠೆ’. ಇವಳು ಒಬ್ಬಳು ರಾಜಕುಮಾರಿಯಾಗಿದ್ದರೂ ದೇವಯಾನಿ ಹತ್ತಿರ ಆಳಾಗಿ ದುಡಿದು ಬದುಕುವ ಪ್ರಸಂಗ ಬಂದಾಗ ಅವಳ ಮನಸ್ಸಿನಲ್ಲಿ ಆಗುವ ತಳಮಳ, ಹೆಣ್ಣಾಗಿ ಅನುಭವಿಸುವ ನೋವುಗಳು ಈ ನಾಟಕದ ಕಥಾ ವಸ್ತು. ಉಮಾಶ್ರೀಯವರು ತಮ್ಮ ಅದ್ಭುತ ಹಾವ, ಭಾವ, ಅಭಿನಯದಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ಏಕವ್ಯಕ್ತಿಯ ರಂಗ ಪ್ರಯೋಗಗಳು ಅಪರೂಪವಾಗುತ್ತಿರುವ ಇಂದಿನ ದಿನಗಳಲ್ಲಿ ಕರ್ನಾಟಕದ ಉದಯೋನ್ಮುಖ ನಾಟಕಕಾರರಾದ ಬೇಲೂರು…

Read More

ಸುಳ್ಯ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ ಮಂಗಳೂರು ವತಿಯಿಂದ ಯಕ್ಷಗಾನ ಶಿಕ್ಷಣ ಅಭಿಯಾನ ‘ಯಕ್ಷಧ್ರುವ- ಯಕ್ಷ ಶಿಕ್ಷಣ’ ಕಾರ್ಯಕ್ರಮವು ದಿನಾಂಕ 30 ಜೂನ್ 2025ರಂದು ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆಗೊಂಡಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಮಂಡೆಕೋಲು ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವಾರ ಯಕ್ಷಗಾನ ತರಬೇತಿ ನಡೆಯಲಿದೆ. ಹಿರಿಯ ಯಕ್ಷಗಾನ ಕಲಾವಿದ ಅಪ್ಪಯ್ಯ‌ ಮಣಿಯಾಣಿ ಅಕ್ಕಪ್ಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು. ಮಂಡೆಕೋಲು ಶಾಲಾ‌ ಎಸ್‌.ಡಿ.ಎಂ.ಸಿ. ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಯಕ್ಷಧ್ರುವ ಪಟ್ಲ ಫೌಂಡೇಷನ್‌ ಟ್ರಸ್ಟಿನ ಪುತ್ತೂರು ತಾಲೂಕು ಸಂಚಾಲಕ ಪ್ರಶಾಂತ ರೈ, ಸುಳ್ಯ ತಾಲೂಕು ಅಧ್ಯಕ್ಷ ಪ್ರೀತಂ ರೈ, ಯಕ್ಷಗಾನ ಗುರು ಯೋಗೀಶ್ ಶರ್ಮ, ಭಜನಾ ಪರಿಷತ್ ಅಜ್ಜಾವರ ವಲಯ ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಿನುತ ಪಾತಿಕಲ್ಲು, ಗ್ರಾಮ‌ ಪಂಚಾಯತ್ ಸದಸ್ಯೆ, ಪ್ರಶಾಂತಿ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳ ಅತ್ಯಾಡಿ ವೇದಿಕೆಯಲ್ಲಿ…

Read More