Subscribe to Updates
Get the latest creative news from FooBar about art, design and business.
Author: roovari
ಮಂಗಳೂರು : ವಿಪ್ರ ಸಮಾಗಮ ವೇದಿಕೆಯು ಆಯೋಜಿಸಿದ ‘ಕರ್ನಾಟಕ ಶಾಸ್ತ್ರೀಯ ಕಲೋತ್ಸವ’ ಕಾರ್ಯಕ್ರಮವು ದಿನಾಂಕ 19-05-2024 ರಂದು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಗಾನ ಮಾಧುರ್ಯ ಕಾರ್ಯಕ್ರಮ ನೀಡಿದ ಸಾನ್ವಿ ರಾವ್ ಪಿ. ಮತ್ತು ಭರತನಾಟ್ಯ ಕಾರ್ಯಕ್ರಮ ನೀಡಿದ ದೀಪಾ ಪ್ರವೀಣ್ ಭಟ್ ಅವರನ್ನು ಸಮ್ಮಾನಿಸಲಾಯಿತು. ಇವರಿಗೆ ವಯಲಿನ್ನಲ್ಲಿ ಧನಶ್ರೀ ಶಬರಾಯ ಮತ್ತು ಮೃದಂಗದಲ್ಲಿ ಟಿ. ಆರ್. ಹರಿಕೃಷ್ಣ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ. ಬಿ. ಪುರಾಣಿಕ್, ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ, ಸಿ. ಇ. ಓ. ಸಮೀರ್ ಪುರಾಣಿಕ್, ಟ್ರಸ್ಟೀ ಸುಧಾಕರ ರಾವ್ ಪೇಜಾವರ, ಎ. ಡಿ. ಬಿ. ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ ರಾವ್ ಪೇಜಾವರ, ಸುಬ್ರಹ್ಮಣ್ಯ ರಾವ್ ಪಿ., ಶ್ರುತಿ ಸುಬ್ರಹ್ಮಣ್ಯ ರಾವ್, ಜನಾರ್ದನ ರಾವ್ ಪಿ., ಮಾಲತಿ ಜನಾರ್ದನ್, ರಮಾನಾಥ ಮಾರ್ಕೆಟಿಂಗ್ ನ ಪ್ರವೀಣ್ ಭಟ್, ರಂಜನಿ ಭಟ್, ಕಾತ್ಯಾಯಿನಿ ರಾವ್, ವಾಣಿ…
ಪುತ್ತೂರು : ಪುತ್ತೂರಿನ ಹಾರಾಡಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕ ಹಾಗೂ ಸಾಹಿತಿ ಜನಾರ್ದನ ದುರ್ಗ ಇವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣಾ ಸಮಾರಂಭವು ದಿನಾಂಕ 27-05-2024ರಂದು ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಿವೃತ್ತ ಪ್ರಾಂಶುಪಾಲರಾದ ಫ್ರೊಫೆಸರ್ ಝೇವಿಯರ್ ಡಿ’ಸೋಜ ಮಾತನಾಡಿ ‘ಕಾಲೇಜು ಹಂತದಲ್ಲಿಯೆ ನಾಯಕತ್ವದ ಛಾಪು ಮೂಡಿಸಿದ್ದ ಜನಾರ್ದನರು ಅಹಂ ಇಲ್ಲದ ವಿನಯವುಳ್ಳ ವ್ಯಕ್ತಿತ್ವ, ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ’ ಎಂದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕೃತಿಯನ್ನು ಪರಿಚಯಿಸಿ ಮಾತನಾಡಿದ ಡಾ. ವರದರಾಜ್ ಚಂದ್ರಗಿರಿ “ಶಾಂತೇಶ್ವರನ ವಚನಗಳು ಸಮಾಜದ ಓರೆಕೋರೆಗಳನ್ನು ತಿದ್ದುವ, ಆತ್ಮವಿಮರ್ಶೆಗೆ ಹಚ್ಚುವ ಮೂಲಕ ಮನುಜ ಈ ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಂತೆ ಸಹಜ ಜೀವನ ನಡೆಸದೆ ಪ್ರಕೃತಿಯನ್ನು ತನ್ನಂಕೆಗೆ ಇಡುವ ದುಷ್ಪ್ರವೃತ್ತಿಯ ಪರಿಣಾಮಗಳನ್ನು ತೆರೆದಿಡುತ್ತವೆ. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಕೃತ ಆಯ್ಕೆಯಾದಾಗಲೇ ಅದು ಗೆದ್ದಾಗಿದೆ’ ಎಂದರು. ಅಂತಿಮವಾಗಿ ಈ ಕೃತಿಯು, ಗುರಿಯೇ ಇಲ್ಲದೆ ಬದುಕುವ ಯುವ ಜನಾಂಗ, ಪ್ರಚಾರ ಪ್ರಸಿದ್ಧಿಗಳೇ ಯಶಸ್ಸೆಂಬ…
ಉಡುಪಿ : ಯಕ್ಷಗಾನ ಕಲಾರಂಗ (ರಿ.) ಮತ್ತು ಇನ್ ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ ಮೆಂಟ್, ಟ್ರೈನಿಂಗ್ ಮತ್ತು ರಿಸರ್ಚ್ ಸೆಂಟರ್ (ಐ.ವೈ.ಸಿ.) ಇದರ ವತಿಯಿಂದ ‘ಯಕ್ಷಗಾನ ಕಲಾವಿದರ ವಾರ್ಷಿಕ ಸಮಾವೇಶ 2024’ವು ದಿನಾಂಕ 31-05-2024ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಬೆಳಗ್ಗೆ 10-00 ಗಂಟೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯ ಇವರಿಂದ ಸಮಾವೇಶ ಉದ್ಘಾಟನೆಗೊಳ್ಳಲಿದೆ. ತುಮಕೂರು ಜಿಲ್ಲೆಯ ತಿಪಟೂರು ಇಲ್ಲಿರುವ ಶ್ರೀ ಕಲ್ಲೇಶ್ವರ ಯಕ್ಷಗಾನ ಮಂಡಳಿಯವರಿಂದ ‘ಶ್ರೀದೇವಿ ಮಹಾತ್ಮೆ’ ಮೂಡಲಪಾಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಪೂರ್ವಾಹ್ನ 12-00 ಗಂಟೆಗೆ ‘ಯುಟ್ಯೂಬ್ ದಾಖಲೀಕರಣ/ನೇರಪ್ರಸಾರ : ಪೂರಕವೆ? ಮಾರಕವೆ?’ ಎಂಬ ವಿಷಯದ ಬಗ್ಗೆ ಕಲಾವಿದರ ಅನುಭವ ಅಭಿವ್ಯಕ್ತಿ ಸಂವಾದ ಹಾಗೂ ಅಪರಾಹ್ನ 2-30 ಗಂಟೆಗೆ ಸಮಾವೇಶ ಸಮಾರೋಪ ನಡೆಯಲಿದೆ.
ಮಂಗಳೂರು : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಆಶ್ರಯದಲ್ಲಿ ಅಡ್ಯಾರ್ನ ಅಡ್ಯಾರ್ ಗಾರ್ಡನ್ನಲ್ಲಿ ‘ಯಕ್ಷಧ್ರುವ ಪಟ್ಲ ಸಂಭ್ರಮ 2024’ವು ದಿನಾಂಕ 26-05-2024ರಂದು ನಡೆಯಿತು. ಇದರ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ದೇಶ-ವಿದೇಶಗಳಲ್ಲಿ 40 ಘಟಕಗಳನ್ನು ಹೊಂದಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯಕ್ಷಗಾನ ಕಲಾವಿದರಿಗಾಗಿ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಯಾವ ಕಲೆಗೂ ಇಲ್ಲದ ಸಂಘಟನೆ ಶಕ್ತಿ ಯಕ್ಷಗಾನಕ್ಕೆ ಸಿಕ್ಕಿದೆ. ಒಂಭತ್ತನೆ ವರ್ಷದ ಸಂಭ್ರಮದಲ್ಲಿರುವ ಟ್ರಸ್ಟ್ ಅಶಕ್ತ ಕಲಾವಿದರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯ. ಟ್ರಸ್ಟಿನ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ” ಎಂದು ಹೇಳಿದರು. ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ವೆಂಕಟ್ರಮಣ ಆಸ್ರಣ್ಣ “ಪರೋಪಕಾರಕ್ಕೆ ಎಲ್ಲರ ಸಹಕಾರ ಇರುತ್ತದೆ ಎಂಬುದಕ್ಕೆ ಪಟ್ಲ ಟ್ರಸ್ಟ್ ಉದಾಹರಣೆಯಾಗಿದೆ. ಟ್ರಸ್ಟ್ ಮೂಲಕ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ ರೂಪಿಸಿರುವುದು ಸ್ತುತ್ಯರ್ಹ” ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟ್ರಸ್ಟ್ ಗೌರವಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ “ಸಂಕಷ್ಟದಲ್ಲಿ…
ಮಂಗಳೂರು : ಅಮೃತ ಪ್ರಕಾಶ ಪತ್ರಿಕೆ ಮಂಗಳೂರು ಮತ್ತು ಸರೋಜಿನಿ ಮಧುಸೂದನ ಕುಶೆ ಶಾಲೆ ಅತ್ತಾವರ ಸಾರಥ್ಯದಲ್ಲಿ ‘ಸಾಹಿತ್ಯ ಅಭಿರುಚಿ’ 101ನೇ ಕಾರ್ಯಕ್ರಮವನ್ನು ದಿನಾಂಕ 01-06-2024ರಂದು 11-00 ಗಂಟೆಗೆ ಅತ್ತಾವರದ ಸರೋಜಿನಿ ಮಧುಸೂದನ ಕುಶೆ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಉದ್ಘಾಟಿಸಲಿದ್ದು, ಸರೋಜಿನಿ ಮಧುಸೂದನ ಕುಶೆ ಶಾಲೆಯ ಪ್ರಾಂಶುಪಾಲರಾದ ಬಿಂದುಸಾರ ಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿರುವರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ ಉಜಿರೆ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸುರತ್ಕಲ್ಲಿನ ಗೋವಿಂದದಾಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೃಷ್ಣ ಮೂರ್ತಿ, ಸಾಹಿತಿ ವಿಮರ್ಶಕರು ನಿವೃತ್ತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ, ಸೈಂಟ್ ಆನ್ಸ್ ಡಿ.ಎಡ್. ಕಾಲೇಜಿನ ಗೌರವ ಉಪನ್ಯಾಸಕರಾದ ವ. ಉಮೇಶ್ ಕಾರಂತ, ನಿವೃತ್ತ ಉಪನ್ಯಾಸಕರಾದ ವಸಂತ ಶೆಟ್ಟಿ, ವೈದ್ಯನಾಥ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ರಾವ್…
ಮೋಹನ ಕುಂಟಾರ್ ಅವರ ‘ಲೋಕಾಂತದ ಕಾವು’ ಉತ್ತಮ ಕವಿತೆಗಳ ಸುಂದರ ಗುಚ್ಛ. ಇಲ್ಲಿ ಕೆಲವನ್ನು ರಾಗಬದ್ಧವಾಗಿ ಹಾಡಬಹುದಾದರೆ ಮತ್ತೆ ಕೆಲವನ್ನು ಭಾವಬದ್ಧವಾಗಿ ಓದಬಹುದು. ಇವುಗಳ ಹೃದ್ಯವಾದ ಭಾವ ಸಾಮರಸ್ಯದಲ್ಲಿ ನವ್ಯ-ನವೋದಯಗಳ ಕಲ್ಪನೆಯೇ ಒಮ್ಮೆ ಮರೆತುಹೋಗುತ್ತದೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುವ ಕವಿತೆಗಳ ಒಳನೋಟ-ಹೊರನೋಟಗಳಲ್ಲಿ ಮುಚ್ಚುಮರೆ, ಸಂದಿಗ್ಧತೆ ಮತ್ತು ಕ್ಲಿಷ್ಟತೆಗಳಿಲ್ಲ. ಸರಳ ಅಭಿವ್ಯಕ್ತಿಯೇ ಇಲ್ಲಿನ ಕವಿತೆಗಳ ವೈಶಿಷ್ಟ್ಯ. ‘ಕವಿ-ಕವಿತೆ’ ಎಂಬ ರಚನೆಯು ಕವಿತೆಯ ನಿರ್ವಚನದ ಕುರಿತು ಜಿಜ್ಞಾಸೆಯನ್ನು ನಡೆಸಿದರೆ ಆಟದಲ್ಲಿ ಕೂಟದಲ್ಲಿ ಬೇಟದಲ್ಲಿ ನೋಟದಲ್ಲಿ ಹೊಸೆದ ಭಾವದಾಟದಲ್ಲಿ ಮೆರೆಯುತ್ತಿತ್ತು ಕವಿತೆ ಲೋಕಾಂತದ ಕಾವಿನಲ್ಲಿ ಏಕಾಂತದ ಧ್ಯಾನದಲ್ಲಿ ಭಾವ ಭಾರದೊಜ್ಜೆಯಲ್ಲಿ ತಿಣುಕುತ್ತಿತ್ತು ಕವಿತೆ (ಕವಿತೆಯ ಹುಟ್ಟು) ಎಂಬ ಸಾಲುಗಳು ಬಿ.ಎಂ. ಶ್ರೀಯವರ ಲಯವನ್ನು ಅನುಸರಿಸಿವೆ. ಪಂಜೆಯವರ ‘ತೆಂಕಣಗಾಳಿಯಾಟ’ವನ್ನು ನೆನಪಿಸುವ ‘ಸುಂಟರಗಾಳಿ’ಯು ಪ್ರಾಕೃತಿಕ ವಿದ್ಯಮಾನದ ಒಂದು ಕ್ಷಣವನ್ನು ಸೆರೆಹಿಡಿದರೆ ‘ಕವಿಶೈಲದಲ್ಲಿ ಬೆಳಗು’ ಕುವೆಂಪು ಅವರ ಶೈಲಿಯನ್ನು ನೆನಪಿಸುತ್ತದೆ. ‘ಕೇರಳ’ವು ಸಾಕ್ಷರರ ನಾಡೊಂದರ ವಸ್ತುಸ್ಥಿತಿಯ ಇನ್ನೊಂದು ಮಗ್ಗುಲನ್ನು ವಿವರಿಸುವುದರೊಂದಿಗೆ ರಾಜ್ಯದ ಸಾಮಾಜಿಕ ವ್ಯವಸ್ಥೆಯನ್ನು ಲೇವಡಿ ಮಾಡುತ್ತದೆ. ಮಡಿಪಂಚೆಯುಟ್ಟು…
ಉಡುಪಿ : ಬೆಂಗಳೂರಿನ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಇದರ ವತಿಯಿಂದ ‘ಸಾಹಿತ್ಯ ಸಹವಾಸ’ ದಿ. ಪ್ರೊ. ಯು.ಆರ್. ಅನಂತಮೂರ್ತಿಯವರ ವಿಡಿಯೊ ಸಾಹಿತ್ಯಿಕ ಉಪನ್ಯಾಸ ಸರಣಿಯ ಬಿಡುಗಡೆ ಹಾಗೂ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ದಿನಾಂಕ 01-06-2024ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಬೆಳಗ್ಗೆ ಗಂಟೆ 9-30ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತಿಗಳು ಮತ್ತು ಚಿಂತಕರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ವಿಡಿಯೊ ಸರಣಿ ಬಿಡುಗಡೆ ಮಾಡಲಿದ್ದಾರೆ. ಕಾರಂತರ ಸಾಧನೆಯ ಅವಲೋಕನದಲ್ಲಿ ಪ್ರೊ. ಕೆ. ಚಿನ್ನಪ್ಪ ಗೌಡ ಇವರಿಂದ ‘ಕಾರಂತರ ಕುರಿತಾದ ಅನಂತಮೂರ್ತಿಯವರ ಉಪನ್ಯಾಸಕ್ಕೆ ಪ್ರತಿಸ್ಪಂದನೆ’, ಗಂಟೆ 11-00ರಿಂದ ಕಾರಂತಸೃಷ್ಟಿಯ ಹಲವು ಮುಖಗಳು ಎಂಬ ವಿಷಯದಲ್ಲಿ ಗೋಷ್ಠಿ, ಗಂಟೆ 12-20ಕ್ಕೆ ಉಡುಪಿಯ ಇಂದ್ರಾಳಿ ಯಕ್ಷಗಾನ ಕೇಂದ್ರದವರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ ಗಂಟೆ 2-00ರಿಂದ ‘ಕಾರಂತರು ಮತ್ತು ಅಡಿಗರ ಜೊತೆಗಿನ ಒಡನಾಟದ ನೆನಪುಗಳು’, ‘ಅಡಿಗರು ಮತ್ತು ನವ್ಯ ಕಾವ್ಯ : ಇಂದಿನ ಅನುಸಂಧಾನ’ದಲ್ಲಿ ಅಡಿಗರ ಕುರಿತಾದ ಅನಂತಮೂರ್ತಿಯವರ ಉಪನ್ಯಾಸಕ್ಕೆ ಪ್ರತಿಸ್ಪಂದನೆ…
ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನ ಸುಜಾತ ಎಲ್ ಶೆಟ್ಟಿ ಹಾಗೂ ಲೀಲಾಧರ್ ಬಿ ಶೆಟ್ಟಿ ಕಟ್ಲ ಇವರ ಮಗಳಾಗಿ 28.03.2000ರಂದು ಬಿಂದಿಯಾ ಶೆಟ್ಟಿ ಅವರ ಜನನ. ಪ್ರಸ್ತುತ CA ವ್ಯಾಸಂಗ ಮಾಡುತ್ತಿದ್ದಾರೆ. ವಿದುಷಿ ಪ್ರತಿಮಾ ಶ್ರೀಧರ್ ಇವರ ಭರತನಾಟ್ಯ ಗುರುಗಳು ಹಾಗೂ ಶ್ರೀಯುತ ರಾಕೇಶ್ ರೈ ಅಡ್ಕ ಇವರ ಯಕ್ಷಗಾನ ಗುರುಗಳು. ಗುರುಗಳ ಮಾರ್ಗದರ್ಶನ ಹಾಗೂ ಅನುಭವಿ ಕಲಾವಿದರ ಸಲಹೆ ಪಡೆದುಕೊಂಡು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಬಿಂದಿಯಾ ಶೆಟ್ಟಿ. ಮಾನಿಷಾದ, ಶ್ರೀನಿವಾಸ ಕಲ್ಯಾಣ, ಸುದರ್ಶನ ವಿಜಯ, ಶಶಿಪ್ರಭಾ ಪರಿಣಯ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು. ಸೀತೆ, ಶ್ರೀದೇವಿ, ಪದ್ಮಾವತಿ, ಶ್ರೀ ಕೃಷ್ಣ, ಲಕ್ಷ್ಮೀ ಇತ್ಯಾದಿ ಇವರ ನೆಚ್ಚಿನ ವೇಷಗಳು. ರಾಕೇಶ್ ರೈ ಅಡ್ಕ ಅವರ ಸನಾತನ ಯಕ್ಷಾಲಯ, ಪೂರ್ಣಿಮಾ ಯತೀಶ್ ರೈ ಅವರ ಶ್ರೀ ಮಹಾ ಗಣಪತಿ ಮಹಿಳಾ ಯಕ್ಷಗಾನ ಮಂಡಳಿ ಸುರತ್ಕಲ್ ಹಾಗೂ ಹಲವಾರು ಹವ್ಯಾಸಿ ಹಾಗೂ ವೃತ್ತಿ ಪರ…
ಮಣೂರು: ಮಣೂರು ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇಗುಲದ 2ನೇ ವರ್ಷದ ಪ್ರತಿಷ್ಠಾ ವರ್ದಂತಿ ಕಾರ್ಯಕ್ರಮದ ಅಂಗವಾಗಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ‘ಸಿನ್ಸ್ 1999 ಶ್ವೇತಯಾನ’ದ 30ನೆಯ ಕಾರ್ಯಕ್ರಮವಾಗಿ ಮಕ್ಕಳ ‘ಯುಗಳ ಸಂವಾದ’ವು ದಿನಾಂಕ 29-05-2024 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಭಾಗವತರಾದ ಹರೀಶ್ ಕಾವಡಿ ಮಾತನಾಡಿ “ಸಾಂಸ್ಕೃತಿಕ ಲೋಕದ ಭವಿಷ್ಯದ ರೂವಾರಿಗಳು ತೆಕ್ಕಟ್ಟೆ ಸಂಸ್ಥೆಯಲ್ಲಿ ದಿನದಿನವೂ ವೃದ್ಧಿಗೊಳ್ಳುತ್ತಿದ್ದಾರೆ. ಯಕ್ಷಕಲೆಯಲ್ಲಿನ ವಿವಿಧ ಆಯಾಮಗಳಲ್ಲಿ ಕರಗತಗೊಂಡಿರುವ ಯಶಸ್ವಿ ಸಂಸ್ಥೆಯ ಪುಟಾಣಿಗಳು ಕರಾವಳಿ ಭಾಗದಲ್ಲಿ ಮನೆ ಮಾತಾಗಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣುತ್ತದೆ. ರಂಗ ಒದಗುತ್ತಾ ಹೋದಾಗ ಮಕ್ಕಳಲ್ಲಿನ ಕಲೆ ಪ್ರಬುದ್ಧಗೊಳ್ಳುತ್ತದೆ. ಹಲವಾರು ರಂಗದಲ್ಲಿ ಮಿಂಚುತ್ತಾ ಕಳೆಕಟ್ಟುವ ಮಕ್ಕಳು ಕಲಾ ವಲಯದಲ್ಲಿ ಸೈ ಎನಿಸಿಕೊಂಡಿರುವುದಂತೂ ನಿಜ.” ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ರಘುರಾಮ ಶೆಟ್ಟಿಯವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಅತಿಥಿಗಳಾಗಿ ವಿಜಯ್ ಶೆಟ್ಟಿ, ಸುರೇಶ್, ಚಂಡೆಯ ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು. ಲಂಕಾದಹನದ ಹನುಮಂತ-ಲಂಕಿಣಿ, ದ್ರೌಪದಿ ಪ್ರತಾಪದ ದ್ರೌಪದಿ-ಅರ್ಜುನ, ಕೃಷ್ಣಾರ್ಜುನದ…
ಬೆಂಗಳೂರು : ಬೆಂಗಳೂರಿನ ‘ಅಂತರಂಗ’ ಪ್ರಸ್ತುತಪಡಿಸುವ ನೂತನ ನಾಟಕ ‘ಕಾಯುವ ಕಾಯಕ’ವು ದಿನಾಂಕ 05-06-2024 ರಂದು ಬೆಂಗಳೂರಿನ ರಂಗ ಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ಖ್ಯಾತ ಹನಿಗವನ ಕವಿ ಹೆಚ್. ಡುಂಡಿರಾಜ್ ವಿರಚಿತ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಖ್ಯಾತ ನಿರ್ದೇಶಕಿ ಅರ್ಚನಾ ಶ್ಯಾಮ್ ನಿರ್ವಹಿಸಿದ್ದಾರೆ. ನಾಟಕವು ಕಾಯುವಿಕೆಯೆಂಬ ಪರಿಕಲ್ಪನೆಯಲ್ಲಿ ನಿರೀಕ್ಷೆ, ಹುಡುಕಾಟ, ಸಂಬಂಧಗಳ ಸಂಕೀರ್ಣತೆ, ಮನಸಿನ ತೊಳಲಾಟ, ಅಸಹಾಯಕತೆ ಇವೆಲ್ಲವುಗಳನ್ನು ಒಳಗೊಂಡಿದೆ. ವೀಕ್ಷಕರು ‘ಬುಕ್ ಮೈ ಶೋ’ ನಲ್ಲಿ ಆನ್ಲೈನ್ ಬುಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಂಕಲ್ ಶ್ಯಾಮ್- 98809 14509 ಮತ್ತು ಮುರಳೀಧರ್ – 99869 11321 ಇವರನ್ನು ಸಂಪರ್ಕಿಸಬಹುದು.