Author: roovari

ಉಡುಪಿ : ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ.) ಬೆಂಗಳೂರು ಇವರ ವತಿಯಿಂದ ಹಾಗೂ ಪರ್ಯಾಯ ಶ್ರೀ ಪುತ್ತಿಗೆ ಮಠ ಮತ್ತು ಎಂ.ಜಿ.ಎಂ. ಕಾಲೇಜಿನ ಸಾಂಗತ್ಯದಲ್ಲಿ ‘ಬನ್ನಂಜೆ ಉಡುಪಿ ನಮನ’ ಕಾರ್ಯಕ್ರಮವನ್ನು ದಿನಾಂಕ 03 ಆಗಸ್ಟ್ 2025ರಂದು ಬೆಳಗ್ಗೆ 8-00 ಗಂಟೆಗೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 8-00 ಗಂಟೆಗೆ ಬನ್ನಂಜೆಯವರ ಮೂಡುಬೆಟ್ಟಿನ ಮೂಲ ಮನೆಯಲ್ಲಿ ಪ್ರಾರ್ಥನೆ, ಆದಿ ಉಡುಪಿ ಶಾಲೆಯಿಂದ ನಡೆಯುವ ಮೆರವಣಿಗೆಗೆ ನಾಡೋಜ ಪ್ರೊ. ಕೆ.ಪಿ. ರಾವ್ ಇವರು ಚಾಲನೆ ನೀಡಲಿದ್ದಾರೆ. 9-20 ಗಂಟೆಗೆ ಬನ್ನಂಜೆಯವರ ಕೃತಿ ಆಧಾರಿತ ಯಕ್ಷಗಾನ ಪ್ರಸ್ತುತಿ ನಡೆಯಲಿದೆ. 10-00 ಗಂಟೆಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ವೇದವ್ಯಾಸಾಚಾರ್ಯ ಶ್ರೀಶಾನಂದರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ಹಿರಿಯ ಸಾಹಿತಿ ಶ್ರೀಮತಿ ವೈದೇಹಿಯವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. 11-45, 2-00ಮತ್ತು 3-45 ಗಂಟೆಗೆ ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿ ಇವರಿಂದ ಬನ್ನಂಜೆಯವರ ಕವಿತೆಗಳ ಹಾಡು ಪ್ರಸ್ತುತಗೊಳ್ಳಲಿದೆ. 12-00 ಗಂಟೆಗೆ ನಡೆಯುವ…

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆ (ರಿ.) ಮಂಗಳೂರು ಇವರ ವತಿಯಿಂದ ಆಟಿದ ಗೇನ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 03 ಆಗಸ್ಟ್ 2025ರಂದು ಬೆಳಿಗ್ಗೆ 09-30 ಗಂಟೆಗೆ ಮಂಗಳೂರಿನ ಉರ್ವಸ್ಟೋರ್ ತುಳು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಮಳೆಗಾಲದಲ್ಲಿ ತುಳುನಾಡು’ ಎಂಬ ವಿಷಯದ ಬಗ್ಗೆ ಮೂರು ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದ್ದು, ನೋಂದಾವಣೆ ಯನ್ನು ದಿನಾಂಕ 03 ಆಗಸ್ಟ್ 2025ರಂದು ಬೆಳಿಗ್ಗೆ 9-00 ಗಂಟೆಯವರೆಗೆ ಮಾತ್ರ ಮಾಡಲಾಗುವುದು. ಸ್ಪರ್ಧೆಯ ನಿಯಮಗಳು : • ಸ್ಪರ್ಧೆಗೆ ಭಾಗವಹಿಸುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಶಾಲಾ ಗುರುತಿನ ಚೀಟಿಯನ್ನು ಖಡ್ಡಾಯವಾಗಿ ತರತಕ್ಕದ್ದು. • ಸ್ಪರ್ಧೆಯು ಆಗೋಸ್ಟ್ 03ರಂದು ಭಾನುವಾರ ಬೆಳಿಗ್ಗೆ 9-30 ಗಂಟೆಗೆ ಸರಿಯಾಗಿ ಆರಂಭಗೊಳ್ಳಲಿರುವುದು. ಸ್ಪರ್ಧಾಳುಗಳು 30 ನಿಮಿಷಕ್ಕಿಂತ ಮುಂಚಿತವಾಗಿಯೇ ಸ್ಪರ್ಧಾಸ್ಥಳದಲ್ಲಿ ಇರತಕ್ಕದ್ದು. • A3 ಅಳತೆಯ ಡ್ರಾಯಿಂಗ್ ಶೀಟನ್ನು ಸಂಘಟಕರೇ ಒದಗಿಸುತ್ತಾರೆ. ಸ್ಪರ್ಧೆಗೆ ಬೇಕಾದ ಇತರ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು. • ಸ್ಪರ್ಧೆಗೆ 2-00…

Read More

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 27 ಜುಲೈ 2025ರ ಆದಿತ್ಯವಾರದಂದು ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ನಡೆಯಿತು. ಈ ಶಿಬಿರವನ್ನು ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ಗುರುಗಳಾದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರು ದೀಪ ದೀಪಬೆಳಗುವ ಮೂಲಕ ಉದ್ಘಾಟಿಸಿ “ಪ್ರಾತಃಸ್ಮರಣೀಯರಾದ ಶ್ರೀ ನೆಡ್ಲೆ ನರಸಿಂಹ ಭಟ್ ಇವರು ನಮಗೆಲ್ಲ ಗುರು ಸಮಾನರು. ಅವರು ಚೆಂಡೆ ಮದ್ದಲೆ ಬಾರಿಸುವ ವಿಧಾನವೇ ಬಹಳ ಸೊಗಸು. ಸಾಹಿತ್ಯ, ಲಯ, ಘಾತಪೆಟ್ಟುಗಳ, ಹುಸಿಪೆಟ್ಟುಗಳ ವ್ಯತ್ಯಾಸದೊಂದಿಗೆ ಸ್ಪಷ್ಟತೆಯಿಂದ, ಮಹಿಷಾಸುರಾದಿ ಬಣ್ಣದ ವೇಷಗಳ ನಡೆಗಳನ್ನು ಬಾರಿಸುವ ವಿಧಾನ ಬಹಳ ಅಂದವಾದವು. ಅವರ ಸಂಸ್ಕರಣೆಯೊಂದಿಗೆ ಯಕ್ಷಗಾನ ಹಿಮ್ಮೇಳ ಕಲಾವಿದರ ಶಿಬಿರ ಆಯೋಜನೆಯು ಅರ್ಥಪೂರ್ಣ” ಎಂದರು. ಹಿರಿಯ ಹಿಮ್ಮೇಳ ವಾದಕರಾದ ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಯಕ್ಷಗಾನ ಕ್ಷೇತ್ರದ ಮಹಾಪೋಷಕ ಶ್ರೀ ಟಿ. ಶ್ಯಾಮ ಭಟ್, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಕರ್ನಾಟಕ ಸರಕಾರ ಇವರು ಮುಖ್ಯ ಅತಿಥಿಯಾಗಿದ್ದು ಕಾರ್ಯಕ್ರಮಕ್ಕೆ…

Read More

ಧರ್ಮಸ್ಥಳ : ಆಶಾಡ ಶ್ರಾವಣ ಮಾಸದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಐವತ್ನಾಲ್ಕನೆಯ ವರ್ಷದ ಪುರಾಣ ಕಾವ್ಯ ವಾಚನ- ಪ್ರವಚನ ಆರಂಭಗೊಂಡಿದ್ದು, ದಿನಾಂಕ 26 ಜುಲೈ 2025ರಂದು ಕುಮಾರವ್ಯಾಸ ಭಾರತದ ದ್ರೌಪದಿಯ ಪಾತ್ರದ ಕುರಿತು ಮಧೂರು ವಿಷ್ಣು ಪ್ರಸಾದ ಕಲ್ಲುರಾಯ ಇವರ ವಾಚನ ಮತ್ತು ಪ್ರೊಫೆಸರ್ ಮಧೂರು ಮೋಹನ ಕಲ್ಲೂರಾಯ ಇವರಿಂದ ವ್ಯಾಖ್ಯಾನವು, ಧರ್ಮಸ್ಥಳದ ಶ್ರೀ ಮಂಜುನಾಥನ ಸನ್ನಿಧಿಯ ಎದುರಿನ ಪುರಾಣ ಪ್ರವಚನ ಮಂಟಪದಲ್ಲಿ ನಡೆಯಿತು. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಹರಸಿದರು.

Read More

ಬೆಂಗಳೂರು : ರಂಗಪಯಣ (ರಿ.) 16ನೇ ವರ್ಷದ ಸಂಭ್ರಮದ ಪ್ರಯುಕ್ತ ಅರ್ಪಿಸುವ ‘ಫೂಲನ್ ದೇವಿ’ ನಾಟಕ ಪ್ರದರ್ಶನವನ್ನು ದಿನಾಂಕ 31 ಜುಲೈ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಸಮುಚ್ಚಯ ಭವನ ಕಲಾಗ್ರಾಮದಲ್ಲಿ ಆಯೋಜಿಸಲಾಗಿದೆ. ಈ ನಾಟಕವನ್ನು ರಾಜಗುರು ಹೊಸಕೋಟೆ ಇವರು ರಂಗವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 99641 40723 ಮತ್ತು 88847 64509 ಸಂಖ್ಯೆಯನ್ನು ಸಂಪರ್ಕಿಸಿರಿ.

Read More

ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಆಟಿ ಕಾರ್ಯಕ್ರಮವು ದಿನಾಂಕ 27 ಜುಲೈ 2025ರಂದು ಬಲ್ಲಾಳ್ ಭಾಗ್ ನಲ್ಲಿರುವ ‘ಪತ್ತುಮುಡಿ’ ಸಭಾಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಗಡಿಕಾರ ಗೋಳಿದಡಿ ಗುತ್ತು ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿಯವರು “ತುಳುವನ್ನು ಆಡುಭಾಷೆಯನ್ನಾಗಿಸಿಕೊಂಡು, ಬಳಕೆ ಮಾಡಿದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ತುಳುವಿನ ಅಂದ ಚೆಂದ ಅರ್ಥವಾಗಲು ಸಾಧ್ಯ. ಅಳಿದೇ ಹೋಗುವ ಬಳಕೆಯಾಗದೆ ಇರುವ ಶಬ್ದಗಳಿಗೆ ಬೆಲೆ ಬಂದು ಪ್ರಭೆಯಿಂದ ಬೆಳಗಬೇಕಾದರೆ ಇಂತಹ ಸಂಘಟನೆಗಳಿಂದ ಮಾತ್ರ ಸಾಧ್ಯ. ದಿ. ದಾಮೋದರ ನಿಸರ್ಗರ ಕನಸ್ಸನ್ನು ನಿಜವಾಗಿಸುವ ಪ್ರಯತ್ನದಲ್ಲಿ ಈ ತುಳುಕೂಟ ಹೋರಾಡುತ್ತಿದೆ. ತುಳುವಿನ ವಿಷಯಕ್ಕೆ ಬಂದಾಗ ನಾವೆಲ್ಲರೂ ಕೈಜೋಡಿಸೋಣ. ಈ ವಿಷಯದಲ್ಲಿ ನನ್ನ ಸಹಿತ ಪ್ರತೀಯೋರ್ವನೂ ಹೋರಾಡಲೇಬೇಕು” ಎಂದು ತುಳುವರಿಗೆ ಕರೆಯಿತ್ತರು. ಸುಮನಾ ರೆಸಿಡೆನ್ಸಿಯ ಮ್ಹಾಲಕಿ ಹಾಗೂ ಮಹಿಳಾ ಮುಂದಾಳು ಶ್ರೀಮತಿ ಸುಮಲತಾ ಎನ್. ಸುವರ್ಣರು “ಇಂದು ತುಳುಕೂಟವನ್ನು ಮುನ್ನಡೆಸುವಲ್ಲಿ ಹೇಮಾ ದಾಮೋದರ ನಿಸರ್ಗರು ಹೊಣೆ…

Read More

ಬೆಂಗಳೂರು : ಅಭಿನಯ ತರಂಗ ನಾಟಕ ಶಾಲೆ ಇದರ ವತಿಯಿಂದ ಒಡನಾಡಿ ಬಂಧು ಸಿ.ಜಿ.ಕೆ. -75 ಮಾಸದ ನೆನಪು ಸರಣಿ ನಾಟಕೋತ್ಸವ ಕಾರ್ಯಕ್ರಮವನ್ನು ದಿನಾಂಕ 30 ಜುಲೈ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನ ನಯನ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ‘ಎರಡು ಕತೆಗಳು .. ಮತ್ತೊಂದು’ ವೀಣಾ ಶಾಂತೇಶ್ವರರ ‘ಕೊನೆಯ ದಾರಿ’ ಹಾಗೂ ವೈದೇಹಿಯವರ ‘ಸಲ್ಮಾ ಮತ್ತು ಸುರಭಿ’ ಮಂಜು ಬಡಿಗೇರ್ ಇವರ ನಿರ್ದೇಶನದಲ್ಲಿ ಹಾಗೂ ಕೊರಡ್ಕಲ್ ಶ್ರೀ ನಿವಾಸರಾವ್ ರವರ ‘ಧನಿಯರ ಸತ್ಯನಾರಾಯಣ’ ಸಚಿನ್ ಭದ್ರಾವತಿ ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಸಿ.ಜಿ.ಕೆ. -75 ಕಿರು ನಾಟಕಗಳ ಉತ್ಸವ ಸಮಿತಿ, ನಾಟಕ ಬೆಂಗ್ಳೂರು ಮತ್ತು ಹವ್ಯಾಸಿ ರಂಗ ತಂಡಗಳು ಈ ಕಾರ್ಯಕ್ರಮದಲ್ಲಿ ಸಹಕರಿಸಲಿದ್ದಾರೆ.

Read More

ಬ್ರಹ್ಮಾವರ : ಯಕ್ಷಶಿಕ್ಷಣ ಪ್ರತಿಷ್ಠಾನ ಉಡುಪಿ ಇದರ ವತಿಯಿಂದ ಬ್ರಹ್ಮಾವರದ ನಿರ್ಮಲ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯ ಉದ್ಘಾಟನೆಯು ದಿನಾಂಕ 26 ಜುಲೈ 2025ರಂದು ನೆರವೇರಿತು. ಶಾಲೆಯ ಪ್ರಾಂಶುಪಾಲರಾದ ರೆವೆರೆಂಡ್ ಫಾದರ್ ಮಥಿಯಾಸ್ ಡಯಾಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಯಕ್ಷಶಿಕ್ಷಣ ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್, ಹಿರಿಯ ಪತ್ರಕರ್ತರಾದ ಚಿತ್ತೂರು ಪ್ರಭಾಕರ್ ಆಚಾರ್ಯ, ಯಕ್ಷಗಾನ ಗುರುಗಳಾದ ಶರತ್ ರಾಜ್ ಆರೂರು ಹಾಗೂ ಯಕ್ಷಗಾನ ಉಸ್ತುವಾರಿ ಶಿಕ್ಷಕಿ ಶ್ರೀಮತಿ ಅನುರಾಧ ಉಪಸ್ಥಿತರಿದ್ದರು.

Read More

ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ.) ಕುಕ್ಕುದಕಟ್ಟೆ, ಪರ್ಕಳ ಇದರ ವೇದಿಕೆಯಲ್ಲಿ ದಿನಾಂಕ 01 ಆಗಸ್ಟ್ 2025ರ ಶುಕ್ರವಾರದಂದು ಸಂಜೆ 4-00 ಗಂಟೆಗೆ ಗಡಿನಾಡಿನ ಧೀರೆ ದಿ. ಪ್ರೇಮ ಕೆ. ಭಟ್ ತೊಟ್ಟೆತ್ತೋಡಿ ಇವರ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಮಂಗಳಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ. ಗಣಪತಿ ಭಟ್, ಶ್ರೀ ರಾಜಾರಾಮ ರಾವ್ ಮೀಯಪದವು, ಕ.ಸಾ.ಪ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶನಾರಾಯಣ ಭಾಗವಹಿಸಲಿದ್ದಾರೆ. ಕವಯತ್ರಿ ಶ್ರೀಮತಿ ಪ್ರಮೀಳಾ ಚುಳ್ಳಿಕ್ಕಾನ ‘ಅಮ್ಮ ಕವನ ವಾಚನ’ ಹಾಗೂ ಮಕ್ಕಳ ತಜ್ಞರಾದ ಡಾ. ಮಹೇಶ್ ಎಂ.ಎಸ್. ಕವನ ಗಾಯನ ನಡೆಸಿಕೊಡಲಿದ್ದಾರೆ. ನಂತರ ಸಂಸ್ಮರಣಾ ಸಂಗೀತ ಕಛೇರಿಯನ್ನು 5-00 ಗಂಟೆಗೆ ಮೈಸೂರಿನ ವಿದ್ವಾನ್ ಎನ್.ಆರ್. ಪ್ರಶಾಂತ್ ನಡೆಸಿಕೊಡಲಿದ್ದು, ಇವರಿಗೆ ವಯಲಿನ್ ನಲ್ಲಿ ತನ್ಮಯಿ ಉಪ್ಪಂಗಳ ಹಾಗೂ ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಕರಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ಉಮಾಶಂಕರಿ ತಿಳಿಸಿರುತ್ತಾರೆ.

Read More

ತಾಯಿ, ಅಜ್ಜಿ ಮತ್ತು ಮುತ್ತಜ್ಜಿಯರ ಅನುಭವಗಳು ಕಿರಿಯರ ಪಾಲಿಗೆ ದಾರಿದೀಪಗಳಾಗಿವೆ. ಅವುಗಳು ಬರಹದ ರೂಪಕ್ಕೆ ಇಳಿದರೆ ಅಮೂಲ್ಯ ನಿಧಿಗಳಾಗುತ್ತವೆ ಎಂಬುದಕ್ಕೆ ಸುನಂದಾ ಬೆಳಗಾಂವಕರರ ‘ಕೈತುತ್ತು’ ಎಂಬ ಲಲಿತಪ್ರಬಂಧಗಳ ಸಂಕಲನವು ಸಾಕ್ಷಿಯಾಗಿದೆ. ಈ ಶೀರ್ಷಿಕೆಯು ಅಜ್ಜಿಯ ಜೀವನಾನುಭವಗಳ ಪಾಠದ ಸವಿಯನ್ನು ಉಣಿಸುತ್ತದೆ. ಇಲ್ಲಿನ ಪ್ರಬಂಧಗಳು ಲೇಖಕಿಯ ಕುಟುಂಬದ ಇತಿಹಾಸವಾಗಿದೆ. ಅಜ್ಜಿಯನ್ನು ಕೇಂದ್ರವಾಗಿಟ್ಟುಕೊಂಡ ಪ್ರಬಂಧಗಳು ಕಾವ್ಯದ ಭಾವತೀವ್ರತೆ, ಪ್ರಬಂಧದ ಲಾಲಿತ್ಯಗಳನ್ನು ಮೈಗೂಡಿಸಿಕೊಂಡು ಸಣ್ಣಕತೆಗಳಂತೆ ಓದಿಸಿಕೊಂಡು ಹೋಗುತ್ತವೆ. ಅಜ್ಜಿ ಎನ್ನುವ ಪದವು ಪ್ರೀತಿ ವಾತ್ಸಲ್ಯಗಳ ಸಂಕೇತವಾಗಿದೆ. ಅವರು ಮೊಮ್ಮಕ್ಕಳನ್ನು ವಿಪರೀತ ಪ್ರೀತಿಸುತ್ತಾರೆ. ಆದರೆ ‘ಅಂತಿಂಥವಳಲ್ಲ ಈ ಅಜ್ಜಿ’ ಎಂಬ ಪ್ರಬಂಧವು ರೂಢಿಗೆ ವಿರುದ್ಧವಾಗಿದೆ. ಹೆಣ್ಣನ್ನು ಗಂಡಿನ ಅಧೀನವಾಗಿ ನೋಡುತ್ತಿದ್ದ ಕಾಲದಲ್ಲಿ, ಗಂಡನನ್ನು ದೇವರೆಂದುಕೊಂಡು ಭಯಭಕ್ತಿಯಿಂದ ಬಾಳಬೇಕಾಗಿದ್ದ ಪುರುಷ ಪ್ರಧಾನ ವ್ಯವಸ್ಥೆಯ ಆ ದಿನಗಳಲ್ಲಿ ಅಜ್ಜನ ಅಧೀನವಾಗಿ ಬಾಳದೆ ಅಜ್ಜನಿಂದ ‘ಸರಕಾರ’, ‘ಬಾಯವರ’, ‘ವಿಕ್ಟೋರಿಯ ಮಹಾರಾಣಿ’ ಎಂದು ಕರೆಸಿಕೊಂಡು ಸರಸಮಯ ದಾಂಪತ್ಯವನ್ನು ನಡೆಸುತ್ತಿದ್ದ ಅಜ್ಜಿಯು ಎಲ್ಲ ಅರ್ಥದಲ್ಲೂ ಅಜ್ಜನ ಸಹಧರ್ಮಿಣಿಯಾಗಿ ಬಾಳುತ್ತಿದ್ದರು. “ನುಡಿದರೆ ಅನುಭವ ಅರಳಿದಂತೆ. ಕೆರಳಿದರೆ…

Read More